ಗಿರ್ಮಿಟ್‌ ಜಾದೂ; ದಾಸನಕೊಪ್ಪದಲ್ಲಿ “ಖಾರಾ- ಮಂಡಕ್ಕಿ’ ರುಚಿ

ನಿತ್ಯ 120 ಪ್ಲೇಟ್‌ ಖಾಲಿ

Team Udayavani, Dec 23, 2019, 5:33 AM IST

wd-10

ಸ್ಥಳ: ಮಂಜುನಾಥ ಹೋಟೆಲ್‌, ದಾಸನಕೊಪ್ಪ ಗ್ರಾಮ, ಶಿರಸಿ
ಸಮಯ: ಬೆಳಗ್ಗೆ 8- ರಾತ್ರಿ 8
ವಾರದ ಎಲ್ಲಾ ದಿನ ತೆರೆದಿರುತ್ತದೆ

ಮಂಡಕ್ಕಿಯನ್ನು ಹಾಗೇ ತಿನ್ನಲೂ ತುಂಬಾ ರುಚಿ. ಅದರಲ್ಲೂ ರಾಣೆಬೆನ್ನೂರಿನಿಂದ ತರಿಸಿದ ಮಂಡಕ್ಕಿಗೆ ಹದವಾಗಿ ಖಾರ, ಸೇವು ಹಾಕಿ ಸಾಂಬಾರ ಮಿಕ್ಸ್‌ ಮಾಡಿ, ಅದರ ಮೇಲೊಂದು ಕರಿದ ಮೆಣಸಿನಕಾಯಿ ಇದ್ದರೆ ರುಚಿ ಸೂಪರ್‌! ಈ ಮಂಡಕ್ಕಿ ಖಾರದ ಸ್ವಾದಿಷ್ಟಕರ ರುಚಿ ನೋಡಲು ದಾಸನಕೊಪ್ಪಕ್ಕೆ ಬರಬೇಕು. ಶಿರಸಿಯಿಂದ ಹಾವೇರಿಗೆ ತೆರಳುವಾಗ, ಶಿರಸಿ ತಾಲೂಕಿನ ಗಡಿ ಅಂಚಿನಲ್ಲಿ ಸಿಗುವ ಊರೇ ದಾಸನಕೊಪ್ಪ. ಇಲ್ಲಿನ ಸಣ್ಣ ಪೇಟೆಯ “ಮಂಜುನಾಥ ಹೋಟೆಲ್‌’ನಲ್ಲಿ ಕೊಡುವ ಮಂಡಕ್ಕಿಯ ಗಿರ್ಮಿಟ್‌ನ ರುಚಿಯನ್ನು ಸವಿದವರೇ ಬಲ್ಲರು. ಇಲ್ಲಿನ ಮಂಡಕ್ಕಿ ಅಥವಾ ಅವಲಕ್ಕಿ ಬಳಸಿ ಮಾಡಿಕೊಡುವ ಖಾರ, ಕಳೆದ ಐದಾರು ದಶಕಗಳಿಂದಲೂ ಫೇಮಸ್‌. ಸುತ್ತಮುತ್ತಲಿನ ಊರುಗಳಲ್ಲಿ, ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಕೇಳಿಕೊಂಡು ಬಂದು ತಿಂದು ಹೋಗುತ್ತಾರೆ.

ತಂದೆಯಿಂದ ಪಡೆದ ಕೈರುಚಿ
ಈ ಖಾರಾ ಮಂಡಕ್ಕಿ ಸ್ಟಾಲ್‌ ಮಾಲೀಕ, ಅಂಜು ರಾಮಣ್ಣ ಇಳಿಗೇರ. ಈ ರುಚಿಕರ ತಿನಿಸು ತಯಾರಿಸುವುದನ್ನು ತಂದೆಯಿಂದ ಕಲಿತದ್ದು ಎನ್ನುತ್ತಾರೆ ಅವರು. ದಿನವೊಂದಕ್ಕೆ ನೂರು ಸೇರಿಗೂ ಅಧಿಕ ಮಂಡಕ್ಕಿಗೆ ರಾಮಣ್ಣನವರೇ ಜೀರಿಗೆ, ಸಾಸಿವೆ, ಉಳ್ಳಾಗಡ್ಡಿ, ಮೆಣಸು ಎಲ್ಲ ಸೇರಿಸಿ ಹದಗೊಳಿಸುತ್ತಾರೆ. ಹಾಗೆ, ಪಾತ್ರೆಯ ಬಡ್ಡೆಯಲ್ಲಿ ತಿರುಗಿಸಿ, ಅದು ಹಸಿಯಾಗದೇ ಇರಲು ಹಾಗೂ ಸ್ವಾದಿಷ್ಟವಾಗಿರಲು ಬಟಾಣಿ ಹುಡಿಯನ್ನೂ ಮಿಕ್ಸ್‌ ಮಾಡುತ್ತಾರೆ. ಈ ಗಿರ್ಮಿಟ್‌ ಮಂಡಕ್ಕಿ ಖಾರವನ್ನು ಸಂಜೆ ವೇಳೆಗೆ ತಿಂದರೆ ಹೆಚ್ಚು ಸೂಕ್ತ ಎನ್ನುವುದು ಇಲ್ಲಿನ ಗ್ರಾಹಕರ ಅಭಿಪ್ರಾಯ.

ಬೆಂಗಳೂರಿಗೂ ಪ್ರಯಾಣ ಬೆಳೆಸುತ್ತೆ
ದೂರದ ಕಾರವಾರ, ಸಾಗರ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ಬೆಂಗಳೂರಿಗೂ ಈ ಖಾರಾ ಮಂಡಕ್ಕಿ ರವಾನೆಯಾಗುತ್ತದೆ. ಒಂದು ಪ್ಲೇಟ್‌ ಮಂಡಕ್ಕಿಗೆ 15 ರೂ. ದರವಿದೆ. ನಿತ್ಯ ನೂರರಿಂದ ನೂರ ಇಪ್ಪತ್ತು ಪ್ಲೇಟ್‌ ಸೇಲ್‌ ಆಗುತ್ತದೆ. ವಾರದ ಎಲ್ಲಾ ದಿನವೂ ತೆರೆದಿರುತ್ತದೆ. ರಾಮಣ್ಣನವರಿಗೆ ಖಾರಾ ಮಂಡಕ್ಕಿ ಹೋಟೆಲು ಬದುಕು ಕಟ್ಟಿಕೊಟ್ಟಿದೆ. ಹಾವೇರಿಯಿಂದ ಶಿರಸಿಗೆ ಹೋಗುವ ಹಾದಿಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ, “ಮಂಜುನಾಥ ಹೋಟೆಲ್‌’ಗೆ ಭೇಟಿ ನೀಡಿ ಖಾರಾ ಮಂಡಕ್ಕಿ ರುಚಿ ಸವಿಯಲು ಮರೆಯದಿರಿ.

ಅಂಜು ಇಳಿಗೇರ. 9972325541

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.