ಜಿ ಮೇಲ್‌ ಸಿಂಪಲ್‌ ಟ್ರಿಕ್‌ಗಳು


Team Udayavani, Sep 30, 2019, 3:10 AM IST

gmail-simple

1. ಇಮೇಲ್‌ ಟೈಪ್‌ ಮಾಡಿ ಸೆಂಡ್‌ ಬಟನ್‌ ಒತ್ತಿದ ಮೇಲೆ ಮೇಲ್‌ ರವಾನೆಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಎಷ್ಟೋ ಸಲ, ಸೆಂಡ್‌ ಬಟನ್‌ ಒತ್ತಿದ ಮೇಲೆ ಮೇಲ್‌ನಲ್ಲಿ ಇರುವ ತಪ್ಪು ಅಥವಾ ಬರೆಯದೇ ಬಿಟ್ಟು ಹೋದ ಸಂಗತಿ ನೆನಪಿಗೆ ಬರುವುದುಂಟು. ಆ ಸಮಯದಲ್ಲಿ ಒಮ್ಮೆ ಕಳಿಸಿದ ಮೇಲನ್ನು ಹಿಂದಕ್ಕೆ ಪಡೆದುಕೊಳ್ಳುವಂತಿದ್ದರೆ ಚೆನ್ನಾಗಿತ್ತು ಎಂದನ್ನಿಸುವುದು ಸುಳ್ಳಲ್ಲ. ನಿಮಗೆ ಗೊತ್ತಾ? ಕಳಿಸಿದ ಮೇಲ್‌ಅನ್ನು ಹಿಂದಕ್ಕೆ ಪಡೆದುಕೊಳ್ಳುವಂಥ ಅವಕಾಶವನ್ನೂ ಜಿಮೇಲ್‌ ಬಳಕೆದಾರರಿಗೆ ಒದಗಿಸುತ್ತದೆ. ಇಮೇಲ್‌ ಕಳಿಸಿದ ತಕ್ಷಣ ಕೆಳಗಡೆ ಎಡದ ಕಡೆ ಚಿಕ್ಕ ಬಾಕ್ಸ್‌ನಲ್ಲಿ ಸೆಂಡಿಂಗ್‌ ಎಂಬ ಸಂದೇಶ ಮೂಡುತ್ತದೆ. ಅದರ ಪಕ್ಕದಲ್ಲೇ ಅನ್‌ ಡು(Undo) ಎಂಬ ಆಯ್ಕೆ ಇರುತ್ತದೆ. ಅದನ್ನು ಒತ್ತಿದರೆ ಮೇಲ್‌ ಹೋಗುವುದಿಲ್ಲ. ಅರ್ಧದಿಂದಲೇ ಹಿಂದಕ್ಕೆ ಬರುತ್ತದೆ. ಈ Undo ಆಯ್ಕೆ ಮೂಡುವುದು ಸೆಂಡ್‌ ಬಟನ್‌ ಒತ್ತಿದ ನಂತರದ 30 ಸೆಕೆಂಡುಗಳ ಕಾಲ ಮಾತ್ರ. 30 ಸೆಕೆಂಡು ಕಳೆದು ಹೋದರೆ ಆಯ್ಕೆ ಮಾಯವಾಗುತ್ತದೆ ಮತ್ತು ಇಮೇಲ್‌ ತಲುಪಬೇಕಾದವರಿಗೆ ತಲುಪಿರುತ್ತದೆ.

2. ಒಂದೇ ಬ್ರೌಸರ್‌ನಲ್ಲಿ ಬೇರೆ ಬೇರೆ ಟ್ಯಾಬ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಜಿಮೇಲ್‌ ಖಾತೆಗಳಿಗೆ ಲಾಗ್‌ ಇನ್‌ ಆಗಲು ಸಾಧ್ಯವಿಲ್ಲ. ಹಾಗೆ ಮಾಡಲು ಬಲಗಡೆ ಟಾಪ್‌ನಲ್ಲಿ ಅಕೌಂಟ್‌ ಪ್ರೌಫೈಲ್‌ ಪಿಕ್‌ ಕಾಣುವತ್ತ ಕ್ಲಿಕ್‌ ಮಾಡಿದರೆ ಆಯಾ ಖಾತೆಯ ಇಮೇಲ್‌ ಐಡಿಯನ್ನು ತೇರಿಸುವುದು. ಅಲ್ಲೇ ಕೆಳಗಡೆ ಆ್ಯಡ್‌ ಅಕೌಂಟ್‌ ಎಂಬ ಆಯ್ಕೆ ಇರುತ್ತದೆ. ಅದನ್ನು ಒತ್ತಿದರೆ ಹೊಸದೊಂದು ಟ್ಯಾಬ್‌ ತೆರೆದುಕೊಳ್ಳುತ್ತದೆ. ಅಲ್ಲಿ ಮತ್ತೂಂದು ಜಿಮೇಲ್‌ ಖಾತೆಯ ವಿವರಗಳನ್ನು ಟೈಪಿಸಿ ಲಾಗಿನ್‌ ಆಗಬಹುದು.

3. ಜಿ ಮೇಲ್‌ ಇನ್‌ಬಾಕ್ಸ್‌ನಲ್ಲಿ ಮೇಲ್‌ಗ‌ಳ ಪಕ್ಕದಲ್ಲಿ ಸ್ಟಾರ್‌ ಇರುವುದನ್ನು ಗಮನಿಸಿದ್ದೀರಾ. ಅದರ ಮೇಲೆ ಕ್ಲಿಕ್‌ ಮಾಡಿದರೆ ಚಿನ್ನದ ಬಣ್ಣವನ್ನು ಪಡೆದುಕೊಳ್ಳುತ್ತದೆ. ಅದರ ಅರ್ಧ ಆ ಇಮೇಲ್‌ ಬಳಕೆದಾರರಿಗೆ ಬಹಳ ಮುಖ್ಯವಾದುದು ಎಂದು. ಇಮೇಲ್‌ ಅನ್ನು ಜಾಲಾಡುವ ಸಂದರ್ಭದಲ್ಲಿ ಸ್ಟಾರ್‌ ಇದ್ದರೆ ಹುಡುಕುವುದು ಸುಲಭವಾಗುತ್ತದೆ.

4. ನಮಗೆ ಬೇಕಾದ ಟೈಮಿಗೆ ಅಲಾರಮ್‌ ಹೊಡೆಯುವಂತೆ ಟೈಮ್‌ ಸೆಟ್‌ ಮಾಡುತ್ತೇವಲ್ಲ, ಅದೇ ರೀತಿ ಜಿ ಮೇಲ್‌ನಲ್ಲೂ “ಸ್ನೂಝ್’ ಎನ್ನುವ ಒಂದು ಸವಲತ್ತಿದೆ. ಯಾವುದೋ ಇಮೇಲ್‌ ನಿಮಗೆ ಈಗ ಮುಖ್ಯವಾಗಿದೆ ಎಂದಿಟ್ಟುಕೊಳ್ಳಿ. ಆದರೆ ಅದರ ಅಗತ್ಯ ನಿಮಗೆ ಬೀಳುವುದು ಒಂದು ವಾರದ ನಂತರ ಎಂದುಕೊಳ್ಳೋಣ. ಆದರೆ, ಆ ಒಂದು ವಾರದಲ್ಲಿ ಬೇರೆ ಬೇರೆ ಇಮೇಲ್‌ಗ‌ಳು ಇನ್‌ಬಾಕ್ಸ್‌ಗೆ ಬಂದು ಬೀಳುವುದರಿಂದ ಈ ಮುಖ್ಯವಾದ ಇಮೇಲ್‌ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಪರಿಹಾರವೇ ಸ್ನೂಝ್. ಅದನ್ನು ಬಳಸಿ ಆ ಇಮೇಲ್‌ ನಿರ್ದಿಷ್ಟ ದಿನದಂದು, ನಿರ್ದಿಷ್ಟ ಸಮಯದಲ್ಲಿ ಇನ್‌ಬಾಕ್ಸ್‌ನಲ್ಲಿ ಮೇಲ್ಗಡೆ ಮೂಡುವಂತೆ ಮಾಡಬಹುದು.

ಆ ಮುಖ್ಯವಾದ ಇಮೇಲ್‌ನ ಸಾಲಿನಲ್ಲೇ ಮೊದಲಿಗೆ ಒಂದು ಬಾಕ್ಸ್‌ ಇದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ರೈಟ್‌ ಮಾರ್ಕ್‌ ಬೀಳುತ್ತದೆ. ಅದರರ್ಥ ಆ ಇಮೇಲ್‌ ಸೆಲೆಕ್ಟ್ ಆಗಿದೆ ಎಂದು. ಟಿಕ್‌ ಮಾರ್ಕ್‌ ಬಿದ್ದ ಕೂಡಲೆ ಸರ್ಚ್‌ ಬಾಕ್ಸ್‌ ಕೆಳಗೆ ಒಂದಷ್ಟು ಆಯ್ಕೆಗಳು ಮೂಡುತ್ತವೆ. ಅವುಗಳಲ್ಲಿ ಗಡಿಯಾರದ ಚಿತ್ರವಿರುವ ಆಯ್ಕೆಯನ್ನು ಕ್ಲಿಕ್‌ ಮಾಡಿ. ತಕ್ಷಣ, ನಾಳೆ, ನಾಳಿದ್ದು, ಮುಂದಿನ ವಾರ… ಹೀಗೆ, ಒಂದಷ್ಟು ಆಯ್ಕೆಗಳನ್ನು ತೋರಿಸುತ್ತದೆ. ಇದ್ಯಾವುವೂ ಬೇಡವೆಂದರೆ ಕೆಳಗಡೆ ಬಳಕೆದಾರ ತನಗೆ ಬೇಕಾದ ದಿನ, ಸಮಯವನ್ನು ಎಂಟ್ರಿ ಮಾಡಬಹುದು. ಆ ಹೊತ್ತಿಗೆ ಆ ಇಮೇಲ್‌ ಇನ್‌ಬಾಕ್ಸ್‌ನಲ್ಲಿ ಮೇಲ್ಗಡೆ ಕಾಣಿಸಿಕೊಳ್ಳುತ್ತದೆ, ಅಲಾರಂ ಥರ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.