ಧಾನ್ಯ ದಾಸ್ತಾನು ಮತ್ತು ಕೀಟಬಾಧೆ ನಿಯಂತ್ರಣ


Team Udayavani, Oct 21, 2019, 4:00 AM IST

shutterstock_179614307

ಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಕೀಟಬಾಧೆ ಅಧಿಕವಾಗಿ ಭಾರಿ ನಷ್ಟ ಉಂಟಾಗಬಹುದು. “ಮುಂಜಾಗ್ರತೆ ವಹಿಸಿದ್ದೆವು. ಆದರೂ ಧಾನ್ಯಕ್ಕೆ ಹುಳು ಬಾಧೆ ತಗುಲಿದೆ’ ಈ ಮಾತನ್ನು ರೈತರು ಹೇಳುತ್ತಿರುತ್ತಾರೆ. ಅವರು ಮುಂಜಾಗ್ರತಾ ಕ್ರಮ ಅನುಸರಿಸಿದ್ದರೂ ಯಾವುದೋ ಒಂದು ಹಂತದಲ್ಲಿ ಎಡವುತ್ತಾರೆ. ಸಣ್ಣದೊಂದು ಪ್ರಮಾದದಿಂದಲೂ ಕೀಟಗಳ ಬಾಧೆ ವಿಪರೀತ. ದ್ವಿದಳ ಧಾನ್ಯಗಳ ಸಂಗ್ರಹಣೆಯಲ್ಲಿ ಹೆಚ್ಚು ಜಾಗರೂಕತೆ ಬೇಕು. ಏಕೆಂದರೆ ಚಿಪ್ಪಿನಹುಳು ಬಾಧೆ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.

ಚಿಪ್ಪಿನಹುಳುಗಳನ್ನು “ಬ್ರು ಬೆಡ್ಸ್‌’ ಎಂದು ಕರೆಯಲಾಗುತ್ತೆ. ಇವು ಚಿಕ್ಕದಾಗಿದ್ದು ದುಂಡು ಆಕಾರ ಹೊಂದಿರುತ್ತವೆ. ಕಾಯಿ ಅಥವಾ ಕಾಳುಗಳ ಮೇಲೆ ಮೊಟ್ಟೆ ಇಡುತ್ತವೆ. ಅಗಾಧ ಸಂಖ್ಯೆಯ ಮೊಟ್ಟೆಗಳಿಂದ ಹೊರಬರುವ ಹುಳುಗಳು ದ್ವಿದಳ ಧಾನ್ಯಗಳ ಕಾಯಿ ಅಥವಾ ಕಾಳಿನೊಳಗೆ ಸೇರಿಕೊಳ್ಳುತ್ತವೆ. ಧಾನ್ಯವನ್ನು ತಿನ್ನಲು ಪ್ರಾರಂಭಿಸುತ್ತವೆ. ಈ ಹುಳುಗಳು ಕೋಶಾವಸ್ಥೆ ತಲುಪಿ ಪೌಢಾವಸ್ಥೆಯಲ್ಲಿ ಕೀಟಗಳಾಗಿ ಮಾರ್ಪಾಡಾಗುತ್ತವೆ. ಆಗ ಕಾಳುಗಳಿಗೆ ರಂಧ್ರ ಕೊರೆದು ಹೊರಬರುತ್ತವೆ. ಮತ್ತೆ ಇವುಗಳಿಂದ ಮೊಟ್ಟೆ ಇಡುವ ಕ್ರಿಯೆ ನಡೆಯುತ್ತದೆ. ಇದರಿಂದಾಗಿ ಕೀಟಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

ದಾಸ್ತಾನು ಮಾಡದಿದ್ದರೂ ತೊಂದರೆ
ದಾಸ್ತಾನು ಹಂತದಲ್ಲಿ ಈ ಕೀಟಗಳ ಹಾವಳಿ ತೀವ್ರವಾಗುತ್ತದೆ. ಸಾಮಾನ್ಯವಾಗಿ ಈ ಕೀಟಗಳು ದ್ವಿದಳ ಧಾನ್ಯಗಳು ಕೊಯಾಗುವ ಮೊದಲೇ ದಾಳಿ ಇಡುತ್ತವೆ. ಇವುಗಳ ಆಕ್ರಮಣಕ್ಕೆ ತುತ್ತಾದ ಧಾನ್ಯಗಳನ್ನು ಸಂಗ್ರಹಿಸುವುದರಿಂದ ಇವುಗಳ ಬೆಳವಣಿಗೆ ನಿರಾತಂಕವಾಗಿ ಸಾಗುತ್ತದೆ. ಇದಕ್ಕೆ ಕಾರಣ, ಕಳೆದ ಬಾರಿ ಉಪಯೋಗಿಸಿದ ಚೀಲಗಳು, ಕಣಜಗಳಲ್ಲಿ ಚಿಪ್ಪುಹುಳುಗಳು ಸುಪ್ತಾವಸ್ಥೆಯಲ್ಲಿರುವುದು. ಇವುಗಳಿರುವ ಚೀಲಗಳನ್ನು ಉಪಯೋಗಿಸಿದಾಗ ಮತ್ತೆ ಕೀಟಬಾಧೆ ಆರಂಭ. ಸಂಗ್ರಹಣೆಯಲ್ಲಿ ಉಂಟಾಗುವ ಇಂಥ ತೊಡಕಿನಿಂದಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದಲೇ ಬಹಳಷ್ಟು ಮಂದಿ ರೈತರು ಧಾನ್ಯ ದಾಸ್ತಾನು ಮಾಡಲು ಹೋಗುವುದಿಲ್ಲ. ಆಯಾ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಗೆ ಮಾರಿಬಿಡುತ್ತಾರೆ. ಮಾರುಕಟ್ಟೆಗೆ ಒಮ್ಮೆಲೇ ಧಾನ್ಯ ಹೆಚ್ಚಿನ ಪ್ರಮಾಣದಲ್ಲಿ ಹೋದಾಗ ಬೆಲೆಯೂ ಕಡಿಮೆ ನಿಗದಿ ಪಡಿಸಲಾಗುತ್ತದೆ. ಇದರಿಂದ ನಷ್ಟವಾಗುವುದು ರೈತರಿಗೇ.

ಬಿಸಿಲಿನಿಂದ ಸಹಾಯ
ಇಂಥ ಪರಿಸ್ಥಿತಿ ನಿವಾರಿಸುವುದು ಅಗತ್ಯ. ಇದಕ್ಕಾಗಿ ಸುರಕ್ಷಿತ ಸಂಗ್ರಹಣಾ ವ್ಯವಸ್ಥೆ ಮಾಡಿಕೊಳ್ಳಬೇಕು. ಧಾನ್ಯಗಳನ್ನು ಒಕ್ಕಣೆ ಮಾಡಿದ ತಕ್ಷಣವೇ ಅವುಗಳಲ್ಲಿರುವ ಕೀಟಗಳನ್ನು ನಾಶಗೊಳಿಸಬೇಕು. ಕಟಾವಾದ ತಕ್ಷಣ ಮೂಟೆ ಕಟ್ಟಿ ಇಟ್ಟರೆ ಕೀಟಗಳಿಗೆ ಅವಕಾಶ ಒದಗಿಸಿಕೊಟ್ಟಂತೆ. ಆದ್ದರಿಂದ ಧಾನ್ಯಗಳ ತೇವಾಂಶ ಕಡಿಮೆ ಮಾಡಲು ಬಿಸಿಲಿನಲ್ಲಿ ಒಣಗಿಸಬೇಕು. ಕನಿಷ್ಟ 5ರಿಂದ 6 ದಿನ ಒಣಗಿಸಿದರೆ ಕೀಟಗಳು, ಮೊಟ್ಟೆಗಳು ನಾಶವಾಗುತ್ತವೆ. ಸಿಮೆಂಟ್‌ನಿಂದ ಮಾಡಿದ ಕಣದಲ್ಲಿ ಒಣಗಿಸುವುದು ಸೂಕ್ತ. ಒಣಗಿದ ಹಂತದಲ್ಲಿ ಪ್ರತಿದಿನ ಸಂಜೆ ಧಾನ್ಯಗಳನ್ನು ಗಾಳಿ ಸೇರದಂತೆ ಲೋಹದ ಅಥವಾ ಪ್ಲಾಸ್ಟಿಕ್‌ನ ದೊಡ್ಡ ಬ್ಯಾರೆಲ್‌ಗ‌ಳಲ್ಲಿ ಸಂಗ್ರಹಿಸಬೇಕು.

ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಧಾನ್ಯಗಳನ್ನು ಮಾತ್ರ ಸಂಗ್ರಹಣೆ ಮಾಡಬೇಕು. ಧಾನ್ಯದ ಮೇಲೆ ಮರಳನ್ನು ತುಂಬಬೇಕು. ನಂತರ ಬ್ಯಾರೆಲ್‌ ಭದ್ರವಾಗಿ ಮುಚ್ಚಬೇಕು. ಈ ರೀತಿ ಮಾಡಿದಾಗ ಕೀಟಗಳು ಮರಳಿನ ಪದರ ಭೇದಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ.

– ಕುಮಾರ ರೈತ

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.