ಅಷ್ಟದಿಕ್ಕುಗಳಿಗೆ ಕಾಯಕಲ್ಪ ಹೇಗೆ?


Team Udayavani, Nov 27, 2017, 12:48 PM IST

27-29.jpg

 ಪದೇ ಪದೇ ಜನರ ಬೇಸರ. ತಳಮಳ ಇತ್ಯಾದಿಗಳು ಸದಾ ಜೀವಂತ. ಮನೆಯ ವಾಸ್ತು. ವಿಚಾರಗಳು ಸೂಕ್ತವಾಗಿ ಇರದಿರುವುದರಿಂದಲೇ ( ತೊಂದರೆಗಳು ಎದ್ದೇಳುತ್ತಿವೆ  ಎಂಬುದರಿಂದಾಗಿ ಜನರು ಚಿಂತಿತರಾಗಿಯೇ ಇರುತ್ತಾರೆ)ಕಷ್ಟ ಬಂದಿದೆ ಎಂಬುದಾಗಿ ಜನ ಗ್ರಹಿಸಿರುತ್ತಾರೆ. ವಾಸ್ತು ವಿಚಾರದಿಂದ ತೊಂದರೆ ಬರುವುದು ಸತ್ಯ. ಆದರೆ ಅವಸರದ ನಿರ್ಣಯಗಳು ತಪ್ಪು. ಮನೆಯ ದೋಷಗಳಿಂದಲೂ ತೊಂದರೆಗಳು ಎದುರಾಗಬಹುದು. ಆದರೆ ಜಾತಕದ ಗ್ರಹಗಳು ಯಾವ ಪ್ರಾರಬ್ಧಗಳನ್ನು ನಿರ್ಮಿಸಿವೆ ಎಂಬುದನ್ನೂ ಗ್ರಹಿಸಬೇಕು. ಸೂಕ್ತ ಜ್ಯೋತಿಷಿಯು ನಾಮ ನಕ್ಷತ್ರ, ಕಟ್ಟಡ ಅಥವಾ ಸೈಟು, ಮನೆ, ಸೌಧಗಳಿಗೆ ಯಜಮಾನತ್ವ ಪಡೆದ, ಸದ್ಯ ನಡೆಯತ್ತಿರುವ ದಶಾ ಭುಕ್ತಿಗಳನ್ನು ಚೆನ್ನಾಗಿ ವಿಶ್ಲೇಷಿಸಿ ಗುರುತಿಸಬಲ್ಲ. ಗ್ರಹಗಳು ವಿಷಮ ಸ್ಥಿತಿಯಲ್ಲಿರುವಾಗ ವಾಸ್ತು ದೋಷವನ್ನಷ್ಟೇ ಪರಿಶೀಲಿಸಿದರೆ ಚೆನ್ನಾಗಿರದು. ದಶಾಕಾಲ, ಭುಕ್ತಿ ಕಾಲಗಳು ಚೆನ್ನಾಗಿದ್ದರೆ ವಾಸ್ತು ದೋಷಗಳನ್ನು ಸುಲಭವಾಗಿ ಪರಿಹರಿಸಬಹುದು. ನವಗ್ರಹ ರಜತ ಧಾತು ಎಂಬು ಪುಟ್ಟ ನಿಕ್ಷೇಪವನ್ನು ಸ್ವರ ಶುದ್ಧಿಯಿಂದ ( ಮನೆಯ ಯಜಮಾನ, ಇಲ್ಲಾ ಯಜಮಾನನ ಪತ್ನಿ, ತಪ್ಪಿದರೆ ಮಕ್ಕಳು, ಓದಿದರೆ ಅದ್ಬುತವಾದುದನ್ನು ಸೃಷ್ಟಿಸಬಹುದು. ಇದನ್ನು ಸೂಕ್ತ ಗುರು ಮುಖೇನವಾಗಿ ಓದಲು (ಗುರು ನೀಡುವ ದೀಕ್ಷೆಯ ವಿಚಾರ ಕೆಲವು ಸಾಲುಗಳ ಮೂಲ ಬೀಜಾಕ್ಷರ ಮಂತ್ರವಿರುತ್ತದೆ) ನಿಯುಕ್ತಗೊಂಡರೆ ಆದಂತೂ ಅದ್ಬುತ ಪರಿಣಾಮ ನೀಡುವಲ್ಲಿ ಹಿಂದೆ ಬೀಳದು. 

 ನವಗ್ರಹ ರಜತ ಧಾತು ಬೆಳ್ಳಿಯಿಂದಲೂ ನಿರ್ಮಿಸಿಕೊಳ್ಳಬಹುದು  
ಮೂಲ ಮಂತ್ರಪಠಣ ಕಠಿಣ ಎಂದೆನಿಸಿದರೆ ಸಿದ್ಧಿ ಪೂರಕವಾದ ಬೆಳ್ಳಿ ವೃದ್ಧಿ ( ರಜತ ಸಂವರ್ಧಿನಿ) ಘಟಕವನ್ನು ಮನೆಯಲ್ಲಿ ಅಂತರ್ಗತ ಗೊಳಿಸಿಕೊಳ್ಳುವುದರಿಂದಲೂ ಸಂಪನ್ನಗೊಳಿಸಿಕೊಳ್ಳಬಹುದು. ಸೂಕ್ತವಾದ ದಿಕ್ಕಿನ ಶಕ್ತಿ ಅಲೆಯನ್ನು ಮನೆಯಲ್ಲಿ ಗ್ರಹಿಸಿ, ಶಕ್ತಿ ಅಲೆ ಸಂಚಯವಿರುವ ಕಡೆಯೇ ಸೂಕ್ತ ದಿನ (ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳನ್ನು ಮತುವರ್ಜಿಯಿಂದ ಗ್ರಹಿಸಿ ನಿರ್ಧರಿಸಬೇಕು) ಅಂತರ್ಗತಗೊಳಿಸಿಕೊಳ್ಳಬಹುದು. ಕೆಲವು ಸಿದ್ಧಿ ಶಕ್ತಿಯ ಚಲನಶೀಲತೆಯು, ಮನೆಯು ಕುಸಿಯುವ ಶಕ್ತಿಯ ದೌರ್ಬಲ್ಯದಿಂದ ಏಳ್ಗೆ ಹೊಂದದೇ ಇರುವಲ್ಲಿಂದ ಒಳಿತಿನ ದಿನಗಳತ್ತ ಮುಮ್ಮುಖಗೊಳ್ಳುವಂತೆ ದಾರಿಯನ್ನು ನಿರ್ಮಿಸಿ ಕೊಡುತ್ತದೆ. 

 ಅಷ್ಟದಿಕ್ಕುಗಳಿಗೆ ಕಾಯಕಲ್ಪ
 ಸುದೈವಕ್ಕೆ ಮನೆಯ ಎಲ್ಲಾ ದಿಕ್ಕುಗಳೂ ಘಾತಕ ಶಕ್ತಿ ಪಡೆದಿರಲಾರದು. ಪಡೆದಿದ್ದರೂ ಪರಿಹಾರೋಪಾಯ ಇದ್ದೇ ಇರುತ್ತದೆ. ಚತುರ್ವಿಧನಾದ ಗಣೇಶನ ಅಭಯ ಹಸ್ತ ಸಿಗಬೇಕು. ವಿರಾಗಿಗಳು, ಸಂಸಾರ ಬಂಧನ ವಿಮುಕ್ತರೂ ಆದ ಆತ್ರಯ ಸಿದ್ಧಿ ಮಹೋದಯರು ಪರಿಣಾಮಕಾರಿಯಾದ ಸಾತ್ವಿಕ ಶಕ್ತಿ ಪಡೆದಿರುತ್ತಾರೆ. ಈ ಆಧುನಿಕ ಯುಗದಲ್ಲೂ ಶಬ್ದ ನಾರಾಯಣಿ, ಸಿಂಧೂರ ಗೌರಿ, ಕ್ಷಿಪ್ರ ಧಾರಾ, ವೇದವಾ ಶಕ್ತಿ, ರುದ್ರನೀಲ, ವಜ್ರನೇತ್ರೆ, ನವಪಲ್ಲಿ, ಚೈತ್ರ ಚಿತ್ತೆಯರನ್ನು ಆರಾಧಿಸುವ ಅವಧೂತರು ಸಂಕಲ್ಪ ಶಕ್ತಿಯಿಂದಲೇ ಸವಕಳಿಹೊಂದಿದ ಶಕ್ತಿ ಮೂಲಗಳನ್ನು ಮನೆಯ ವಾಸ್ತು ವಾಹಿನಿಗೆ ತುಂಬ ಬಲ್ಲ ಶಕ್ತಿ ಹೊಂದಿದ್ದಾರೆ. ಆದರೆ ಉಪಾಸಕರನ್ನು, ಸಾತ್ವಿಕತೆಯೊಂದಿಗೆ ಆರಾಧನೆಯ ಮೂಲಕ ದೈವೀ ಅನುಗ್ರಹವನ್ನು ಪಡೆದವರು, ಅತ್ರಯ ತಂತ್ರ ಪರಂಪರೆಯ ವಿರಾಗಿಗಳನ್ನು ಅರಸಬೇಕು. ಹಿಮಾಲಯದ ತಪ್ಪಲುಗಳು, ಕಾಶಿ, ಹೃಷಿಕೇಶ, ಗಯಾ, ಮಥುರಾ, ಗಂಡಕಿ ನದಿ ತೀರಗಳಲ್ಲಿ ಅವಧೂತ ಪರಂಪರೆಯ ಜನ ಎಲೆ ಮರೆಯ ಕಾಯಿಗಳಂತೆ ಇದ್ದಾರೆ. ಸಾಲಸೋಲ ಮಾಡಿ ಸುಸ್ತಾದ ಉದ್ಯಮಿಗಳು, ರಾಜಕಾರಣಿಗಳು, ಸ್ವಯಂ ಉದ್ಯೋಶೀಲರು, ಆಯಾತ, ನಿರ್ಯಾತ ವಹಿವಾಟಿನ ಸಂಕೀರ್ಣಗಳಲ್ಲೂ ವಾಸ್ತು ದೋಷ ಜಡಗಟ್ಟಿರುತ್ತದೆ. ಇವುಗಳ ನಿವಾರಣೆಗಳನ್ನೂ ಸೂಕ್ತವಾದ ಅವಧೂತ ಶಕ್ತಿ ಯೋಗ ಸಂಪನ್ನರು ನೆರವೇರಿಸಿಕೊಡಬಲ್ಲರು. 

ಅನಂತಶಾಸ್ತ್ರಿ

ಟಾಪ್ ನ್ಯೂಸ್

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.