ಹೆಸರು ಬದಲಾಯಿಸೋದು ಹೇಗೆ?

ಲಾ ಪಾಯಿಂಟ್

Team Udayavani, Aug 12, 2019, 5:00 AM IST

filler-law-point2-will-cancel

ಉತ್ತರ ಕರ್ನಾಟಕದವರಲ್ಲಿ ತಮ್ಮ ಮನೆತನದ ಹೆಸರಿನ ಬಗ್ಗೆ ತುಂಬಾ ಅಭಿಮಾನ. ಹೊರಗಿನ ಕೆಲವರಿಗೆ ಅದು ಚೋದ್ಯವೆನಿಸಿದರೂ, ಅವರು ಅದಕ್ಕೆ ಸೊಪ್ಪು ಹಾಕುವುದಿಲ್ಲ. ‘ತೆಂಗಿನಕಾಯಿ’, ‘ಮೆಣಸಿನಕಾಯಿ’, ‘ಉಳ್ಳಾಗಡ್ಡಿ’ ಇಂಥ ಹೆಸರುಗಳು ಕೆಲವರಿಗೆ ಕಚಗುಳಿ ಇಡುತ್ತವೆ. ಅಪ್ರಬುದ್ಧರಿಗೆ ಹೆದರಿ ಅವರು ಮನೆತನದ ಹೆಸರನ್ನು ತಮ್ಮ ಹೆಸರಿನಿಂದ ತೊಡೆಯಲು ಯೋಚಿಸುವುದೂ ಇಲ್ಲ. ಮಂಗಳೂರಿನ ‘ಭಟ್’ ಒಬ್ಬರು ಉತ್ತರ ಕರ್ನಾಟಕದವರೊಬ್ಬರನ್ನು ‘ಎಂಥದು ಮಾರಾಯ್ರೇ, ನಿಮ್ಮ ಹೆಸರುಗಳೆಲ್ಲಾ ತರಕಾರಿಮಯ’ ಎಂದು ಕೇಳಿದರಂತೆ. ಅದಕ್ಕೆ ಅವರು ‘ಹೌದ್ರೀಪಾ, ಆದರೆ ಆ ತರಕಾರಿ ಹೆಚ್ಚಿ ಅಡುಗೆ ಮಾಡೋ ಮಂದೀನ ನಮ್ಮ ಕಡೀ ಭಟ್ಟರು ಅಂತ ಕರೀತಾರಪಾ’ ಎಂದರಂತೆ!

ಎಲ್ಲರಿಗೂ ಇಂಥ ನಿರ್ಲಿಪ್ತತೆ ಇರುವುದಿಲ್ಲ. ಇಂಥ ನಿರ್ಲಿಪ್ತತೆ ಇರುವುದಿಲ್ಲ. ಅಂಥ ಮಂದಿ ತಮ್ಮದೇ ಆದ ಕಾರಣಕ್ಕಾಗಿ ಅಪ್ಪ, ಅಮ್ಮ ಇಟ್ಟ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಹನುಮಂತಯ್ಯ ಎಂಬ ಹಳೆಯ ಹೆಸರು ಅನಿಲ್ಕುಮಾರ್‌ ಎಂಬ ನವೀನತೆಯನ್ನು ಪಡೆಯುತ್ತದೆ.

ಕೆಲವು ಪಂಗಡಗಳಲ್ಲಿ ಮನೆಗೆ ಬಂದ ಸೊಸೆಯ ಹೆಸರನ್ನು ಬದಲಾಯಿಸುತ್ತಾರೆ. ‘ಕೌಮುದಿ’, ‘ಇಂದು’ ಆಗುತ್ತಾಳೆ. ‘ಕಮಲ’, ‘ಜಲಜ’ ಆಗುತ್ತಾಳೆ. ‘ಹರಿಣಾಕ್ಷಿ’, ‘ಮೀನಾಕ್ಷಿ’ ಆಗುತ್ತಾಳೆ. ಕೆಲವೊಮ್ಮೆ ಮೊದಲನೆಯ ಹೆಸರು ಬದಲಾಯಿಸದಿದ್ದರೂ ಗಂಡನ ಮನೆತನದ ಹೆಸರನ್ನು ಕೊನೆಯಲ್ಲಿ ಸೇರಿಸಿಕೊಳ್ಳುತ್ತಾರೆ. ಪ್ರಭಾ ರಾವ್‌, ಪ್ರಭಾ ಮೆಹತಾ ಆಗಬಹುದು. ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇರುವ ಕೆಲವರು ತಮ್ಮ ಹೆಸರಿನ ಕಾಗುಣಿತವನ್ನೋ ಇಲ್ಲವೇ ಇಡೀ ಹೆಸರನ್ನೋ ಬದಲಾಯಿಸಿಕೊಳ್ಳಬಹುದು.

ಮತ ಪರಿವರ್ತನೆ ಹೊಂದಿದ ‘ರಾಮ’, ‘ರಹೀಮ’ನಾಗಿ, ‘ಜೇನ್‌’ ‘ಜಾನಕಿ’ ಆಗಿ ಬದಲಾಗುತ್ತಾರೆ. ಹೀಗೆ ಹತ್ತು ಹಲವಾರು ಕಾರಣಗಳಿಂದಾಗಿ ಬಹುಮಂದಿ ಹೆಸರು ಬದಲಾಯಿಸಿಕೊಳ್ಳುತ್ತಾರೆ. ಕಾರಣಗಳ ಪಟ್ಟಿ ಮಾಡಿದಷ್ಟೂ ಉದ್ದವಾಗುತ್ತದೆ. ಕಾರಣಗಳೇನೇ ಇರಲಿ, ಅವು ಗೌಣ. ಏಕೆಂದರೆ ನಮ್ಮ ದೇಶದಲ್ಲಿ ಹೆಸರು ಬದಲಾಯಿಸಿಕೊಳ್ಳಬೇಕೆಂದರೆ ಕಾನೂನಿನ ಯಾವುದೇ ನಿರ್ಬಂಧವೂ ಇಲ್ಲ, ಯಾರು ಬೇಕಾದರೂ, ಯಾವಾಗ ಬೇಕಾದರೂ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬಹುದು.

ಒಬ್ಬ ವ್ಯಕ್ತಿ ತನ್ನ ಹೆಸರನ್ನು ಬದಲಾಯಿಸಿಕೊಂಡರೆ ಅದರ ಪರಿಣಾಮ ಅವನೊಬ್ಬನ ಮೇಲೆ ಮಾತ್ರ ಆಗುವುದಿಲ್ಲ! ಅವನೊಂದಿಗೆ ಯಾವುದೇ ತೆರನಾದ ಸಂಬಂಧ ಹೊಂದಿರುವ, ಅಂದರೆ ಸಾಮಾಜಿಕ, ವ್ಯಾವಹಾರಿಕ, ಆರ್ಥಿಕ, ಇತ್ಯಾದಿ ಸಂಬಂಧಗಳನ್ನು ಇಟ್ಟುಕೊಂಡಿರುವ ಎಲ್ಲರಿಗೂ ಆಗುತ್ತದೆ. ಹೆಸರನ್ನು ಬದಲಾಯಿಸಿಕೊಳ್ಳಬೇಕೆಂದಿರುವವರು ಇದನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಈ ಕುರಿತು ಏನೇನು ತಿದ್ದುಪಡಿ ಮಾಡಬೇಕಾಗುತ್ತದೆ ಎನ್ನುವ ವಿವರ ಮುಂದಿನ ವಾರ…
-ಎಸ್‌.ಆರ್‌. ಗೌತಮ್‌(ಕೃಪೆ: ನವ ಕರ್ನಾಟಕ ಪ್ರಕಾಶನ)

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.