ಜೀವಸಾರವನ್ನು ಬಳಸುವ ಬಗೆ


Team Udayavani, Aug 19, 2019, 5:00 AM IST

mannu1

ಸಸ್ಯಗಳು ಘನರೂಪದ ಗೊಬ್ಬರಕ್ಕಿಂತಲೂ ದ್ರವರೂಪದ ಗೊಬ್ಬರಗಳಿಗೆ ತ್ವರಿತವಾಗಿ ಸ್ಪಂದಿಸುತ್ತವೆ. ಇಂಥ ಗೊಬ್ಬರವನ್ನು ನಿಯಮಿತವಾಗಿ ಪೂರೈಸುವುದು ದುಬಾರಿ ಖರ್ಚಲ್ಲ. ಮುಖ್ಯವಾಗಿ ಇದು ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಪೂರಕ. ಹನಿ ನೀರಾವರಿ ವಿಧಾನದ ಮೂಲಕವೂ ನೀಡಬಹುದು. ಇದರಿಂದ ಗಿಡಗಳ ಬೆಳವಣಿಗೆ, ಹೂ, ಕಾಯಿ ಬಿಡುವ ಪ್ರಮಾಣ, ಗಾತ್ರ ಅತ್ಯುತ್ತಮವಾಗಿರುತ್ತದೆ. ಇವೆಲ್ಲದರ ಜೊತೆಗೆ ಕೀಟ- ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ತೋಟದ ವಿಸ್ತೀರ್ಣಕ್ಕೆ ತಕ್ಕಂತೆ ಜೀವಸಾರ ಅಥವಾ ಬಯೋಡೈಜೆಸ್ಟರ್‌ ಗಾತ್ರವನ್ನೂ ನಿರ್ಮಿಸಿಕೊಳ್ಳಬಹುದು. ತೋಟದಲ್ಲಿಯೇ ತುಸು ಎತ್ತರ ಇರುವ ಜಾಗದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಇದರಿಂದ ಜೀವಸಾರ ಹಾಯಿಸುವಿಕೆಯೂ ಸರಾಗವಾಗಿರುತ್ತದೆ. ಎರಡು ಎಕರೆ ತೋಟವಿದ್ದರೆ 8 ಅಡಿ ಅಗಲ, ನಾಲ್ಕು ಅಡಿ, ಉದ್ದ, ಮೂರಡಿ ಆಳ ಇರುವ ತೊಟ್ಟಿ ನಿರ್ಮಿಸಿಕೊಂಡರೂ ಸಾಕು. ಮಾರುಕಟ್ಟೆಯಲ್ಲಿ ಸಿದ್ಧ ಮಾದರಿ ಬಯೋಡೈಜೆಸ್ಟರ್‌ ತೊಟ್ಟಿಗಳು ಸಿಗುತ್ತಿವೆ. ಕೃಷಿಕರಿಗೆ ಯಾವುದು ಅನುಕೂಲ ಎನ್ನಿಸುತ್ತದೆಯೋ ಅದರ ಬಳಕೆ ಮಾಡಬಹುದು.

ತೊಟ್ಟಿಗೆ ಹಾನಿಕಾರಕವಲ್ಲದ ಯಾವುದೇ ಸಸ್ಯಗಳನ್ನಾದರೂ ಹಾಕಬಹುದು. ಲಕ್ಕಿ ಸೊಪ್ಪು, ಹೊಂಗೆ ಸೊಪ್ಪು, ಬೇವಿನ ಸೊಪ್ಪು, ಯಾವುದೇ ಥರದ ಹಿಂಡಿಗಳು, ರಾಸುಗಳ ಸೆಗಣಿ, ಆಡು- ಕುರಿಗಳ ಹಿಕ್ಕೆ, ಗಂಜಲ, ಮೀನಿನ ಗೊಬ್ಬರ ಹಾಕಿ ನೀರು ಹಾಯಿಸಬೇಕು. ಇವೆಲ್ಲ ಸಂಪೂರ್ಣವಾಗಿ ಕೊಳೆಯಲು 40ರಿಂದ 45 ದಿನ ಸಾಕು. ಈ ಅವಧಿಯಲ್ಲಿ ಆಗಾಗ ದೊಡ್ಡ ಕೋಲಿನಿಂದ ತೊಟ್ಟಿಯ ನೀರನ್ನು ಕದಡುತ್ತಿರಬೇಕು.
ತೊಟ್ಟಿಯ ತಳದಲ್ಲಿ ಜಾಲರಿ ಇರುವ ರಂಧ್ರ ನಿರ್ಮಿಸಿದ್ದರೆ ಅದರ ಮೂಲಕ ಕಸ ಕಡ್ಡಿಯಿಲ್ಲದ ಸಾರವನ್ನು ಹೊರಬಿಡಬಹುದು. ಬೆಳೆಗಳಿಗೆ ಜೀವಸಾರವನ್ನು ನೇರವಾಗಿ ಹಾಯಿಸಬಾರದು. ಒಂದು ಲೀಟರ್‌ ಜೀವಸಾರಕ್ಕೆ 9 ಅಥವಾ 10 ಲೀಟರ್‌ ಪ್ರಮಾಣದಲ್ಲಿ ನೀರು ಬೆರೆಸಬೇಕು. ಇದನ್ನು ಚೆನ್ನಾಗಿ ಕದಡಿ, ಅಗತ್ಯವಿದ್ದರೆ ಮತ್ತೂಮ್ಮೆ ಸೋಸಿ, ಹನಿ ನೀರಾವರಿ ವ್ಯವಸ್ಥೆ ಮುಖಾಂತರ ಬೆಳೆಗಳಿಗೆ ನೀಡಬಹುದು. ಜೀವಸಾರ ಪೂರ್ಣವಾಗಿ ಬಳಸಿಕೊಂಡ ನಂತರ ತೊಟ್ಟಿಯ ತಳದಲ್ಲಿ ಉಳಿಯುವ ಕಸವನ್ನು ಕಾಂಪೋಸ್ಟ್ ಗುಂಡಿ ಅಥವಾ ಎರೆಗೊಬ್ಬರದ ತೊಟ್ಟಿಗೆ ಹಾಕಬಹುದು.

– ಕುಮಾರ ರೈತ

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.