ನೀವು ಮನೆ ಪಕ್ಕದ ಜಾಗ ಖರೀದಿ ಮಾಡುತ್ತಿದ್ದೀರಾ? ಸ್ವಲ್ಪ ನಿಲ್ಲಿ…


Team Udayavani, Feb 27, 2017, 2:32 PM IST

new-home.jpg

ನಮ್ಮ ದೈನಂದಿನ ಚಟುವಟಿಕೆಗಳು ವ್ಯವಹಾರಿಕ ಸಾಮಾಜಿಕ ಬದುಕಿನ ಸಂದರ್ಭಗಳು ಆಗಾಗ ಏನನ್ನಾದರೂ ಕೊಂಡುಕೊಳ್ಳುವ, ಮಾರುವ ವಿಚಾರದಲ್ಲಿ ದಿಢೀರಾದ ನಿರ್ಧಾರಗಳನ್ನು ತಳೆಯಲು ಒತ್ತಡ ತರುತ್ತಿರುತ್ತದೆ. ಆದರೆ ಮನ ಬಂದಂತೆ ಖರೀದಿಗೆ ಮುಂದಾಗಬಾರದು. ಯಾರೇ ಆಗಲಿ ತಮ್ಮ ನಿವೇಶನದ ದಕ್ಷಿಣದ ಅಥವಾ ಪಶ್ಚಿಮದ ಭಾಗಗಳನ್ನು ಖರೀದಿಸಲು ಮುಂದಾಗಬಾರದು. ಸಲೀಸಾಗಿ ಸಿಗುವುದೆಂದರೂ ಬೇಡ. ಇದು ನಾಶಕ್ಕೆ ದಾರಿ ಮಾಡಿಕೊಡುತ್ತದೆ. ಭೂಮಿಯ ವಿಚಾರವಾಗಿಯೂ  ಅಂಶವನ್ನು ಗಮನಿಸಬೇಕು. ಪೂರ್ವದ ಜಾಗೆಯೋ ಜಮೀನೋ ಆದರೆ ಖರೀದಿಯ ಮೂಲಕ ವಿಸ್ತರಿಸಿಕೊಳ್ಳಬಹುದು. ಎಷ್ಟು ಬೇಕಾದರೂ ಕೊಂಡು ಕೊಳ್ಳಬಹುದು. ಇಂಥ ಖರೀದಿಯಿಂದ ಸಂವರ್ಧನೆಗೆ ಅವಕಾಶ ಉತ್ತಮ. 

ಹೀಗೆ ಕೊಂಡುಕೊಳ್ಳುವಾಗ ಖರೀದಿಸುವವನ ಮನೆಗೆ ರ್ಪೂದಿಕ್ಕಿ ಭಾಗದ ಮುಂಬಾಗಿಲು ಆಗಿದ್ದರೆ ಇಂಥ ಮನೆಗೆ ಉತ್ತರದಲ್ಲಿರುವ ಜಾಗವನ್ನು ಮತ್ತೆ ಪರಿಶೀಲಿಸಬೇಕು. ಯಾಕೆಂದರೆ ಖರೀದಿ ಮಾಡುತ್ತಿರುವ ಜಾಗ ಖರೀದಿದಾರನ ಮನೆಯ ಸಮತಟ್ಟಿಗಿಂತ ಎತ್ತರವಾಗಿದ್ದರೆ ಖರೀದಿ ನಿಷಿದ್ಧ. ಇನ್ನು ಖರೀದಿಸುವವನ ನಿವೇಶನವು ಪೂರ್ವದ ಕಡೆಯಿಂದ ಈಶಾನ್ಯದ ಬೀದಿಯನ್ನು ಸಂದರ್ಶಿಸುತ್ತಿದ್ದರೆ ಉತ್ತರದ ಜಾಗ ಕೊಳ್ಳುವ ಸಮಯಕ್ಕೆ ಅದರದ್ದೇ ಆದ ಒಂದು ನಿಯಮವಿದೆ. ಪೂರ್ತಿ ನಿವೇಶನಕ್ಕೆ ಪೂರ್ವದ ಆಗ್ನೇಯ ಕಡಿತಕ್ಕೊಳಗಾಗಿದ್ದರೆ ಆ ಜಾಗವನ್ನು ಕೊಂಡುಕೊಳ್ಳಲೇ ಬಾರದು. ಇದು ಗಮನಾರ್ಹ ಅಂಶ. ಇದೇ ರೀತಿ ಖರೀದಿ ಮಾಡುವವನ ನಿವೇಶನ ಪಶ್ಚಿಮ ವಾಯುವ್ಯ ಬೀದಿಯ ಕಡೆ ನೋಟ ಪಡೆದಿದ್ದರೆ ಉತ್ತರದ ಜಾಗ ಕೊಳ್ಳುವಾಗ ಜಾಗ್ರತೆ ಬೇಕು. ಕೊಳ್ಳುವವನ ನಿವೇಶನಕ್ಕೆ ಈ ಉತ್ತರದ ಭಾಗ ಪಶ್ಚಿಮ ನೈರುತ್ಯವು ಕಡಿತಕ್ಕೊಳಗಾಗಿದ್ದರೆ ಖರೀದಿಯನ್ನು ಕೈಬಿಡುವುದು ಸರಿಯಾದ ನಿರ್ಧಾರ. 

ಮುಖ್ಯವಾಗಿ ಕೊಂಡುಕೊಳ್ಳುವ ಖರೀದಿದಾರನ ಮನೆಯ ಈಶಾನ್ಯದ ಭಾಗ ಹಿಗ್ಗುವ ಹಾಗೇ ಜಾಗದ ಖರೀದಿ ಅವಕಾಶ ನೀಡಬೇಕು. ಹಾಗಿಲ್ಲದೆ ಹೋದರೆ ಒಳ್ಳೆಯ ದಿನಗಳನ್ನು ಕಾಣುವಂತೆ ವರ್ತಮಾನ ಉತ್ಕರ್ಷವನ್ನು ಪಡೆಯದು. ಪೂರ್ವದ ಭಾಗ ಖರೀದಿಸುವಾಗಲೂ ಖರೀದಿ ಮಾಡುವವನ ಮನೆಗಿಂತ ಖರೀದಿಗೊಳಪಡುವ ಜಾಗ ಎತ್ತರದಲ್ಲಿ ಇರಲೇಬಾರದು. ಹೀಗೆ ಕೊಳ್ಳುವ ಪೂರ್ವದ ಜಾಗ ಖರೀದಿಸುವವನ ಮನೆಯ ಈಶಾನ್ಯದ ಕೊನೆಯ ತನಕವೂ ಹರಡಿಕೊಂಡಿರಬೇಕು. ಇಲ್ಲದಿದ್ದರೆ ಕಷ್ಟವೇ. ಖರೀದಿಯ ಸಂದರ್ಭದಲ್ಲಿ ಕೊಡಲ್ಪಡುವ ಜಾಗ ಸಂತೋಷದಿಂದ ನೀಡುವಂತಿದ್ದರೆ ಉತ್ತಮವಾದದ್ದು. ಯಾವ ಸಂದರ್ಭದಲ್ಲೂ ಮುನಿಸಿಗೆ ಅಸಮಾಧಾನಕ್ಕೆ ಅವಕಾಶ ಒದಗಿ ಬರಬಾರದು.

ಖರೀದಿ ಮಾಡಲ್ಪಟ್ಟ ಜಾಗ ಉಪಯೋಗಕ್ಕೆ ಕೂಡಲೇ ಸಿಗುವಂತೆ ಕಟ್ಟಡಗಳು ಎದ್ದೇಳುವಂತಾದರೆ ಉತ್ತಮ. ಇಲ್ಲದಿದ್ದರೆ ಕೊಂಡವನ ಜಾಗಕ್ಕೆ ಖರೀದಿಸಿಸಲ್ಪಟ್ಟ ಜಾಗ ಸೇರಿಕೊಂಡಾಗ ಅಖಂಡವಾಗಿ ಒಂದೇ ಆಗಿದ್ದು ಬಹಳ ಕಾಳ ಕೊಂಡವನ ಮೂಲ ಮನೆಗಿಂತ ಖರೀದಿಸಲ್ಪಟ್ಟ ಜಾಗ ತಗ್ಗಿನಲ್ಲಿ ಇರುವಂತಾಗಬಾರದು. ಕಟ್ಟಲ್ಪಟ್ಟಾಗಲೂ ಕಟ್ಟಿದ ಜಾಗವನ್ನು ಬಾಡಿಗೆಗೆ ಕೊಡುವುದಾದರೆ ಎತ್ತರದ ಭಾಗ ಮಾಲೀಕನಿಗೆ ಉಪಯೋಗಕ್ಕೆ ಸಿಗಬೇಕು. ತಗ್ಗಾದ ಜಾಗ ಬಾಡಿಗೆಯವನಿಗೆ ಸಿಗಬೇಕು. ಹೀಗೆ ಬಾಡಿಗೆಗೆ ತೆಗೆದುಕೊಂಡ ಜಾಗ ಯಾವುದಾದರೂ ಕಾರಣಕ್ಕೆ ಖಾಲಿ ಆದರೆ ಮನಸೋ ಇಚ್ಛೆ ಬಾಡಿಗೆ ದಾರರನ್ನು ಕಳೆದುಕೊಂಡ ಜಾಗ ಖಾಲಿ ಇರಬಾರದು. ಖಾಲಿ ಮಾಡುತ್ತಿರುವಂತೆಯೇ ಬೇರೊಬ್ಬ ಬಾಡಿಗೆದಾರ ಸಿಕ್ಕುವುದರಲ್ಲಿ ಕ್ಷೇಮವಿದೆ. ಯಾರೂ ಬರಲಿಲ್ಲವೆಂದರೆ ತಾವೆ ಖಾಲಿಯಾದ ಜಾಗದಲ್ಲಿ ಬೇರೊಬ್ಬರು ಬರುವವರೆಗೂ ವಾಸಿಸಬೇಕು. ಹೀಗೆ ಮಾಡದಿದ್ದರೆ ಮಾಲಿಕನಿಗೆ ತೊಂದರೆಗಳು ಉದ್ಭವಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. 

ಖಾಲಿಯಾದ ಬಾಡಿಗೆಗೆ ಇಟ್ಟ ಜಾಗ ಬಹಳ ಕಾಳ ಖಾಲಿ ಇದ್ದರೆ ಖಾಲಿಯಾದ ಆ ಜಾಗದ ಭಾರ ಮಾಲೀಕನ ನಿವೇಶನ ಮನೆಯ ಮೇಲೆ ಬಿದ್ದು ಕುಸಿತದ ಸೂಚನೆ ಕಂಡುಬರಲು ಸಾಧ್ಯ. ಒಟ್ಟಿನಲ್ಲಿ ಇರುವ ಮನೆಯ ಅಕ್ಕಪಕ್ಕದಲ್ಲಿ ಜಾಗ ಕಡಿಮೆ ಹಣಕ್ಕೆ ಸಿಗುತ್ತದೆ ಎಂದ ಮಾತ್ರಕ್ಕೆ ಖರೀದಿಸಿ ಬಿಡಬಾರದು. ಖರೀದಿಗೂ ವಿಲೇವಾರಿಗೂ ಸಾಧಕಬಾಧಕಗಳಿವೆ. ಅವನ್ನು  ನಿಯಂತ್ರಿಸಲು ತನ್ನದೇ ಆದ ನಿಯಮಗಳಿವೆ. 
ಮೊ: 8147824707

– ಅನಂತ ಶಾಸ್ತ್ರಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.