ಹೂವಿನಂಥ ಇಡ್ಲಿ ಜ್ಞಾನೇಶ್‌ ಹೋಟೆಲ್‌ ಸ್ಪೆಷಲ್‌


Team Udayavani, Feb 10, 2020, 1:30 PM IST

isiri-tdy-5

ಸಾಂಧರ್ಬಿಕ ಚಿತ್ರ

ಹಾಸನ- ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವವರು, ಕಡಿಮೆ ದರದಲ್ಲಿ ಒಳ್ಳೆ ಊಟ ಬೇಕು ಎಂದು ಅಪೇಕ್ಷಿಸಿದರೆ, ಇಲ್ಲಿದೆ ಒಂದು ಹೋಟೆಲ್‌ನ ಪರಿಚಯ. ಹಾಸನ- ಮೈಸೂರು ರಸ್ತೆಗೇ ಹೊಂದಿಕೊಂಡಂತೆ ಕೆ.ಆರ್‌.ನಗರದಲ್ಲಿ ಇರುವ ಈ ಹೋಟೆಲ್‌ನಲ್ಲಿ ಕಡಿಮೆ ದರದಲ್ಲಿ ಶುಚಿ ರುಚಿಯಾದ ತಿಂಡಿ- ಊಟ ಸಿಗುತ್ತೆ. ಅದುವೇ ಜ್ಞಾನೇಶ್‌ ಹೋಟೆಲ್‌.  ಈ ರಸ್ತೆಯಲ್ಲಿ ಪ್ರಯಾಣಿಸುವವರು ಈ ಹೋಟೆಲ್‌ ನೋಡಿರುತ್ತಾರೆ. 15ಕ್ಕೂ ಹೆಚ್ಚು ವರ್ಷಗಳಿಂದ ಈ ಹೋಟೆಲ್‌ ಇದ್ದು. ಸದ್ಯ ಈ ಹೋಟೆಲ್‌ನ ಮಾಲಿಕರು ವೈ. ಪಿ. ಮಹದೇವ.

ಗಿರಾಕಿಗಳನ್ನು ಕಾಪಾಡಿಕೊಳ್ಳಬೇಕು :  ಈ ಹಿಂದೆ, ಸಂತೆಯಲ್ಲಿ ಅಡುಗೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹದೇವ ಅವರಿಗೆ ಅಂಥ ಆದಾಯವೇನೂ ಬರುತ್ತಿರಲಿಲ್ಲ. ಮುಂದೆ ಕೆ.ಆರ್‌.ನಗರದ ಹೋಟೆಲ್ಲೊಂದರ ಮುಂದೆ, ಬಾಳೆಹಣ್ಣು ವ್ಯಾಪಾರದಲ್ಲಿ ತೊಡಗಿಕೊಂಡರು. ಅವರ ಸ್ನೇಹಿತರೇ ನಡೆಸುತ್ತಿದ್ದ ಹೋಟೆಲ್ಲದು. ಹೀಗಾಗಿ, ಅವರಿಗೆ ಸುತ್ತಮುತ್ತಲ ಜನರ ಅಭಿರುಚಿ ಮತ್ತು ಹೋಟೆಲ್‌ ವ್ಯಾಪಾರದ ಒಳಹೊರಗು ಗೊತ್ತಾಗಿಬಿಟ್ಟಿತು. ಅಲ್ಲಿಂದ ಮುಂದೆ ಮಹಾದೇವ ಅವರು ಹೋಟೆಲ್‌ ಒಂದನ್ನು ಕೊಂಡುಕೊಂಡರು. ಹಳೆಯ ಹೋಟೆಲ್‌ಗೆ “ಜ್ಞಾನೇಶ್‌’ ಎಂದು ಹೆಸರಿಟ್ಟು ಮುಂದುವರಿಸಿದರು. ವ್ಯಾಪಾರ ತಿಳಿದುಕೊಂಡಿದ್ದರಿಂದ ಗಿರಾಕಿಗಳನ್ನು ಕಾಪಾಡಿಕೊಳ್ಳುವುದು ಕಷ್ಟವೆನಿಸಲಿಲ್ಲ. ಅಲ್ಲದೆ, ಪತ್ನಿ ಪ್ರಮೋದಾ ಅವರ ಜೊತೆಯೂ ಇರುವುದರಿಂದ ಹೋಟೆಲ್‌ ಚೆನ್ನಾಗಿ ನಡೆಯುತ್ತಿದೆ.

ಹೂವಿನಂಥ ಇಡ್ಲಿ :  ಗ್ರಾಹಕರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಇಲ್ಲಿನ ಹೂವಿನಂಥ ಇಡ್ಲಿ, ಸಾಂಬಾರ್‌, ದೋಸೆ ಗ್ರಾಹಕರನ್ನು ಮತ್ತೂಮ್ಮೆ ಹೋಟೆಲ್‌ಗೆ ಭೇಟಿ ಕೊಡುವಂತೆ ಮಾಡುತ್ತದೆ ಎನ್ನುವುದು ಗಿರಾಕಿಗಳ ಮಾತು. ಹೋಟೆಲ್‌ಗೆ ಬೇಕಾಗುವ ಮಸಾಲೆ ಮತ್ತಿತರ ಪದಾರ್ಥಗಳನ್ನು ತಮ್ಮ ಮನೆಯಲ್ಲೇ ಸಿದ್ಧಪಡಿಸುವುದರಿಂದ ರುಚಿ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಮಹದೇವ. ಅನುಭವಿ ಅಡುಗೆ ಭಟ್ಟರಲ್ಲದೆ, ಒಟ್ಟು, ಏಳು ಮಂದಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೋಟೆಲ್‌ ತಿಂಡಿ, ಊಟ ತಟ್ಟೆ ಇಡ್ಲಿ, ವಡೆ (2 ಇಡ್ಲಿ ಒಂದು ವಡೆ ಸೇರಿ 35 ರೂ.), ತರಕಾರಿ ಬಾತ್‌, ಬಿಸಿಬೇಳೆ ಬಾತ್‌, ಚಿತ್ರಾನ್ನ, ಮೊಸರನ್ನ (25 ರೂ.), ಸಾದಾ ದೋಸೆ (10 ರೂ.), ಮಸಾಲೆ ದೋಸೆ (30 ರೂ.), ಸ್ಪೆಷಲ್‌ ಖಾಲಿ ಅಥವಾ ಸೆಟ್‌ ಮಸಾಲೆ ದೋಸೆ (15 ರೂ). ಮಧ್ಯಾಹ್ನ 12ರ ನಂತರ ಮುದ್ದೆ ಊಟ, ಚಪಾತಿ ಊಟ ಸಿಗುತ್ತೆ. (50 ರೂ.), ಬರೀ ಅನ್ನ- ಸಾಂಬಾರು ತೆಗೆದುಕೊಂಡರೆ ಜೊತೆಗೆ ಹಪ್ಪಳ, ಉಪ್ಪಿನಕಾಯಿ, ಮಜ್ಜಿಗೆ ಕೊಡ್ತಾರೆ (30 ರೂ.). ಮುದ್ದೆ ಅಥವಾ ಚಪಾತಿ ಊಟ ತೆಗೆದುಕೊಂಡ್ರೆ ಬೇಳೆ ಸಾರು, ಅನ್ನ, ಕೋಸಂಬರಿ, ತಿಳಿ ಸಾರು, ಹಪ್ಪಳ, ಉಪ್ಪಿನಕಾಯಿ, ಎರಡು ತರದ ಪಲ್ಯ, ಮಜ್ಜಿಗೆ, ಮೊಸರು ಕೊಡ್ತಾರೆ. ಟೀ, ಕಾಫಿ ಸಿಗುತ್ತೆ (6 ರೂ.)

 

-ಭೋಗೇಶ ಆರ್‌. ಮೇಲುಕುಂಟೆ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.