ರೇಸ್‌ಗೆ ಕಿಂಗ್‌ ಜಿಎಸ್‌ಎಕ್ಸ್‌ ಎಸ್‌750


Team Udayavani, Apr 30, 2018, 6:15 AM IST

SUZUKI-GSX-S750-2.jpg

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯನ್ನು ಬಹಳ ಸಲೀಸಾಗಿ ಆಕ್ರಮಿಸಿ ಮಾಡಿಕೊಂಡಿರುವ ಸುಜುಕಿ ಬ್ರಾಂಡ್‌ನ‌ ಅನೇಕ ಬೈಕ್‌ಗಳು ಯಶಸ್ಸು ಕಂಡಿವೆ. ಭಾರತದ ರಸ್ತೆ ಗುಣಮಟ್ಟ ಹಾಗೂ ಜನರ ಮನಸ್ಥಿತಿ ಅರಿತು ತನ್ನ ಪ್ರಾಡಕ್ಟ್ ಪರಿಚಯಿಸುವ ಜಾಣತನವನ್ನು ಜಪಾನ್‌ನ ಈ ಕಂಪನಿ ತೋರಿದೆ.

 “ಸುಜುಕಿ’ ಹೆಸರು ಕೇಳಿದಾಕ್ಷಣ ಕಣ್ಮುಂದೆ ನಿಲ್ಲುವುದು ಒಂದು ಕಾಲದಲ್ಲಿ ಅತಿ ಜನಪ್ರಿಯತೆ ಗಳಿಸಿಕೊಂಡಿದ್ದ 
“ಸಮರಾಯ್‌’. ಸುಜುಕಿ ಇದ್ದವನಿಗೆ ಲಡಕಿ ಒಲೀತಾಳೆ ಅನ್ನುವ ಮಾತೇ ಆಗ ಚಾಲ್ತಿಯಲ್ಲಿತ್ತು ! ಅಷ್ಟರ ಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿತ್ತು. ಆದರೆ ಕಾಲ ಉರುಳಿದಂತೆ ಜನರ ಟೇಸ್ಟ್‌ ಕೂಡ ಬದಲಾಗುತ್ತದಲ್ಲ. ಹಾಗಾಗಿ, ಆಯಾ ಕಾಲಘಟ್ಟಕ್ಕೆ ತಕ್ಕುದಾದ ಬದಲಾವಣೆ ಮಾಡಿಕೊಳ್ಳುತ್ತಲೇ, ಮಾರುಕಟ್ಟೆ ಗಟ್ಟಿಮಾಡಿಕೊಂಡಿರುವ ಜಪಾನ್‌ ಮೂಲದ ಸುಜುಕಿ, ಈಗ ಭಾರತದಲ್ಲಿ ಟಾಪ್‌ 5ನಲ್ಲೊಂದಾಗಿದೆ.

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯನ್ನು ಬಹಳ ಸಲೀಸಾಗಿ ಆಕ್ರಮಿಸಿ ಮಾಡಿಕೊಂಡಿರುವ ಸುಜುಕಿ ಬ್ರಾಂಡ್‌ನ‌ ಅನೇಕ ಬೈಕ್‌ಗಳು ಯಶಸ್ಸು ಕಂಡಿವೆ. ಭಾರತದ ರಸ್ತೆ ಗುಣಮಟ್ಟ ಹಾಗೂ ಜನರ ಮನಸ್ಥಿತಿ ಅರಿತು ತನ್ನ ಪ್ರಾಡಕ್ಟ್ ಪರಿಚಯಿಸುವ ಜಾಣತನವನ್ನು ಜಪಾನ್‌ನ ಈ ಕಂಪನಿ ತೋರಿದೆ. ಅದೇ ಕಾರಣಕ್ಕೇ ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ.

ಇದೀಗ ಜಿಎಸ್‌ಎಕ್ಸ್‌ ಸರಣಿಯ ಹೊಸ ಮಾಡೆಲ್‌ ಜಿಎಸ್‌ಎಕ್ಸ್‌-ಎಸ್‌750 ಹೊಸ ಮಾಡೆಲ್‌ ಬೈಕ್‌ ಪರಿಚಯಿಸಿದೆ. 2018ರ ಬಹುನಿರೀಕ್ಷಿತ ನ್ಪೋರ್ಟ್ಸ್ ಬೈಕ್‌ಗಳಲ್ಲಿ ಇದೂ ಒಂದಾಗಿದ್ದು, ಸಿಕೆಡಿ (ಕಂಪ್ಲೀಟಿ ನಾಕ್ಡ್ ಡೌನ್‌) ಯುನಿಟ್‌ಗಳಿಂದ ಭಾರತದ ರಸ್ತೆಗಿಳಿಯಲಿದೆ. ಹಯಾಬುಸಾದಂಥ ದುಬಾರಿ ಬೈಕ್‌ನ ಬಳಿಕ ಸಂಪೂರ್ಣವಾಗಿ ಭಾರತದಲ್ಲಿಯೇ ಉತ್ಪಾದನೆಗೊಳ್ಳುವ ಮತ್ತೂಂದು ಬೈಕ್‌ ಇದು ಎಂದು ಕಂಪನಿ ಹೇಳಿಕೊಂಡಿದೆ.

ಜಿಎಸ್‌ಎಕ್ಸ್‌ ಸಾಗಿಬಂದ ದಾರಿ
ಲೈಟ್ಸ್‌ಗಳನ್ನು ಒಳಗೊಂಡ ರೇಸ್‌ ಬೈಕ್‌ಗಳೇ ಇಲ್ಲದ ದಿನದಲ್ಲಿ, ಅಂದರೆ 1984ರ ಸಾಲಿನಲ್ಲಿ ಸುಜುಕಿ ಕಂಪನಿ ಎರಡು ಹೆಡ್‌ಲೈಟ್‌ಗಳು  ಇರುವಂಥ ಜಿಎಸ್‌ಎಕ್ಸ್‌ ಸರಣಿಯ ರೇಸ್‌ ಬೈಕ್‌ಗಳನ್ನು ಪರಿಚಯಿಸಿತು. 1985ರಲ್ಲಿ ಮೊದಲ ಜನರೇಶನ್‌ ಬೈಕ್‌ ರಸ್ತೆಗಳಲ್ಲಿ ಧೂಳೆಬ್ಬಿಸಿದ ಬೆನ್ನಲ್ಲೇ, ಗ್ರಾಹಕನ ನಾಡಿಮಿಡಿತ ಅರಿತ ಸುಜುಕಿ 1988ರಲ್ಲಿ ಎರಡನೇ ಜನರೇಶನ್‌, 1992ರಲ್ಲಿ ಮೂರನೇ ಜನರೇಶನ್‌, 1994ರಲ್ಲಿ 4ನೇ, 1996ರಲ್ಲಿ 5ನೇ ಹಾಗೂ 2000ರಲ್ಲಿ 6ನೇ ಜನರೇಶನ್‌ ಮಾಡೆಲ್‌ಗ‌ಳನ್ನು ಪರಿಚಯಿಸಿತು. 2001ರಲ್ಲಿ ಜಿಎಸ್‌ಎಕ್ಸ್‌-ಆರ್‌ 1000 ಸಿಸಿ ಪರಿಚಯಿಸಿತು. ಇದಾದ ನಂತರ ಈ ಸರಣಿಯ ಯಾವುದೇ ಬೈಕ್‌ಗಳನ್ನು ಮತ್ತೆ ಪರಿಚಯಿಸಿರಲಿಲ್ಲ. 2017ರಲ್ಲಿ ಜಿಎಸ್‌ಎಕ್ಸ್‌-ಆರ್‌1000ಆರ್‌ ಹಾಗೂ ಜಿಎಸ್‌ಎಕ್ಸ್‌-ಆರ್‌125 ಮತ್ತು ಜಿಎಸ್‌ಎಕ್ಸ್‌-ಆರ್‌150 ಬೈಕ್‌ಗಳನ್ನು ಮಾರುಕಟ್ಟೆಗಿಳಿಸಿತು. ಇದೀಗ ಸಾಕಷ್ಟು ಬದಲಾವಣೆಯೊಂದಿಗೆ ಜಿಎಸ್‌ಎಕ್ಸ್‌-ಎಸ್‌750 ವೇರಿಯಂಟ್‌ನ ಬೈಕ್‌ ಅನ್ನು ಮಾರುಕಟ್ಟೆಗೆ ತಂದಿದೆ.   ಈಗಾಗಲೇ ಬುಕ್ಕಿಂಗ್‌ ಆರಂಭಗೊಂಡಿದ್ದು, ಮೇ ಮಧ್ಯಂತರದಲ್ಲಿ ಗ್ರಾಹಕರ ಕೈಸೇರಲಿವೆ.

ಎಂಜಿನ್‌ ಪವರ್‌, ಸುರಕ್ಷತೆ
113ಬಿಎಚ್‌ಪಿ ಮತ್ತು 81ಎನ್‌ಎಂ ಟಾರ್ಕ್‌ ಉತ್ಪಾದನೆಯ 745ಸಿಸಿ ಸಾಮರ್ಥ್ಯದ ಬೈಕ್‌ ಇದಾಗಿದ್ದು, ಶರವೇಗದಲ್ಲಿ ಮುನ್ನುಗ್ಗಬಲ್ಲದು. 4ಸಿಲಿಂಡರ್‌ನ 46 ಮಿ.ಮೀ. ಸ್ಟ್ರೋಕ್‌ ಹೊಂದಿದೆ. ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ನ ಈ ಬೈಕ್‌ಗೆ 6 ಸ್ಪೀಡ್‌ ಗೇರ್‌ಬಾಕ್ಸ್‌ ನೀಡಲಾಗಿದೆ. ಗಂಟೆಗೆ ಗರಿಷ್ಠ 250 ಕಿ.ುà ವೇಗದಲ್ಲಿ ಚಲಿಸಬಲ್ಲದು. ಗರಿಷ್ಠ ವೇಗದ ಮಿತಿ ತಲುಪಬೇಕೆಂದರೆ ಸೂಕ್ತ, ಗುಣಮಟ್ಟದ ರಸ್ತೆ ಕೂಡ ಅಷ್ಟೇ ಮುಖ್ಯ. ಅಷ್ಟಕ್ಕೂ ಎಲ್ಲೆಂದರಲ್ಲಿ ಈ ಪ್ರಯತ್ನ ಬೇಡ. ಸುರಕ್ಷತೆ ದೃಷ್ಟಿಯಿಂದ ನೋಡುವುದಾದರೆ ಬಹುತೇಕ ಎಲ್ಲವೂ ಡಿಜಿಟಲ್‌.  ಮುಂಭಾಗದ  ವೀಲ್‌ಗ‌ಳು ಡಿಸ್ಕ್ ಬ್ರೇಕ್‌ನಿಂದ ಕೂಡಿವೆ. ಹಿಂಬದಿಯಲ್ಲಿ 240ಮಿ.ಮೀ. ಹಾಗೂ ಮುಂಭಾಗದಲ್ಲಿ 310ಮಿ.ಮೀ ಡಿಸ್ಕ್ ಡ್ರಮ್‌ ನೀಡಲಾಗಿದೆ. ಡ್ಯುಯಲ್‌ ಚಾನಲ್‌ ಎಬಿಎಸ್‌ ಹೊಂದಿದ್ದು, ರೋಡ್‌ಗ್ರಿಪ್‌ ಉತ್ತಮ. ಮೂರು ಹಂತದ ಟ್ರಾಕ್ಷನ್‌ ಕಂಟ್ರೋಲ್‌ ವ್ಯವಸ್ಥೆಯನ್ನೂ ಹೊಂದಿರುವುದು ಇನ್ನೊಂದು ವಿಶೇಷ.

ವಿನ್ಯಾಸ ಬದಲು
ಈ ಹಿಂದಿನ ಜಿಎಸ್‌ಎಕ್ಸ್‌ ಬೈಕ್‌ಗಳಿಗೆ ಹೋಲಿಸಿ ನೋಡಿದರೆ ಜಿಎಸ್‌ಎಕ್ಸ್‌-ಎಸ್‌750 ಬೈಕ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೆಡ್‌ಲ್ಯಾಂಪ್‌, ಸೀಟ್‌ ಸೇರಿದಂತೆ ಬೈಕ್‌ ಹೊಸ ವಿನ್ಯಾಸದಲ್ಲಿ ರೂಪುಗೊಂಡಿದೆ. ಕವಾಸಕಿ ಝಡ್‌900 ಬೈಕ್‌ಗೆ ಸಾಕಷ್ಟು ಸಾಮ್ಯತೆ ಇರುವಂತೆ ತೋರುತ್ತದೆ. ಬೈಕ್‌ನ ಮೈಲೇಜ್‌ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.

ಎಕ್ಸ್‌ ಶೋ ರೂಂ ಬೆಲೆ: 7.45 ಲಕ್ಷ ರೂ.

ಪ್ರಮುಖ ಅಂಶಗಳು
– ಇಂಧನ ಶೇಖರಣಾ ಸಾಮರ್ಥ್ಯ 16 ಲೀಟರ್‌
– 2125ಮಿ.ಮೀ. ಉದ್ದ, 785ಮಿ.ಮೀ. ಅಗಲ/ 1055ಮಿ.ಮೀ. ಎತ್ತರ
– ಕರ್ಬ್ ವೇಟ್‌ 213ಕೆಜಿ
– 135 ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌

– ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.