KTM ರೈಡ್‌ ಕರೋ…

125cc ಸೆಗ್ಮೆಂಟಿನ ರೇಸಿಂಗ್‌ ಬೈಕ್‌

Team Udayavani, Jul 15, 2019, 5:53 AM IST

ktm

ಕೆಟಿಎಂ ಎಂದರೆ ಸಾಕು ಯುವಕರ ಹೃದಯ ಬಡಿತ ಏರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಸೃಷ್ಟಿಸಿರುವ ಕೆಟಿಎಂ ಹೈ ಪರ್ಫಾಮೆನ್ಸ್‌ ಬೈಕ್‌ಗಳಿಗೆ ಪ್ರಸಿದ್ಧಿ. ಆದರೆ ಇದೀಗ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು 125 ಸಿಸಿ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. ಈಗಾಗಲೇ 125 ಸಿಸಿ ನೇಕೆಡ್‌ ಆವೃತ್ತಿ ಬಿಡುಗಡೆಯಾಗಿದ್ದು, ಉತ್ತಮ ಮಾರಾಟ ಪ್ರಗತಿಯನ್ನು ದಾಖಲಿಸಿದೆ. ಇದರ ಮುಂದುವರಿದ ಭಾಗವಾಗಿ ಫ‌ುಲ್‌ ಫೇರಿಂಗ್‌ ರೇಸಿಂಗ್‌ ಮಾದರಿಯ ಬೈಕ್‌ ಬಿಡುಗಡೆ ಮಾಡಿದೆ.

ಹೇಗಿದೆ ವಿನ್ಯಾಸ?
ಕೆಟಿಎಂನ ಆರ್‌ಸಿ 200 ಮತ್ತು ಆರ್‌ಸಿ 390 ಬೈಕ್‌ಗಳ ಮಾದರಿಯಲ್ಲೇ ಈ ಬೈಕ್‌ಅನ್ನೂ ವಿನ್ಯಾಸಗೊಳಿಸಲಾಗಿದೆ. ಹಗುರವಾದ ಬಾಡಿ, ಗಟ್ಟಿಮುಟ್ಟಾದ ಫ್ರೆàಂ, ಆಕರ್ಷಕ ಬಾಡಿ ಗ್ರಾಫಿಕ್ಸ್‌, ಮುಂಭಾಗದಲ್ಲಿ ಎರಡು ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ಗ್ಳು, ಹಿಂಭಾಗದಲ್ಲಿ ಎಲ್‌ಇಡಿ ಬ್ರೇಕ್‌ಲೈಟ್‌ಗಳು, ಡಿಜಿಟಲ್‌ ಸ್ಪೀಡೋಮೀಟರ್‌ ಹೊಂದಿದೆ. ಕ್ಲಿಪ್‌ ಹ್ಯಾಂಡಲ್‌ ಬಾರ್‌ಗಳಿದ್ದು, ಸವಾರರು ಆರಾಮದಾಯಕವಾಗಿ ಆಸೀನರಾಗುವಂತೆ ವಿನ್ಯಾಸ ರೂಪಿಸಲ್ಪಟ್ಟಿದೆ. 125 ಸಿಸಿ ಬೈಕ್‌ ಕೂಡ ರೇಸಿಂಗ್‌ ಡೈನಾಮಿಕ್ಸ್‌ ಹೊಂದಿದ್ದು, ವೇಗವನ್ನು ಬಯಸುವ ಸವಾರರಿಗೆ ಹಿಡಿಸುವಂತಿದೆ.

ಹೈ ಪರ್ಫಾಮೆನ್ಸ್‌ ಬೈಕ್‌
ಭಾರತದ ಮಾರುಕಟ್ಟೆಯಲ್ಲಿರುವ 125 ಸಿಸಿ ಬೈಕ್‌ಗಳಲ್ಲಿಯೇ ಅತ್ಯಧಿಕ ಸಾಮರ್ಥ್ಯ ಹೊಂದಿದ ಬೈಕ್‌ ಎಂಬ ಹೆಸರಿಗೆ ಪಾತ್ರವಾಗಿರುವ ಕೆಟಿಎಂ ಆರ್‌ಸಿ 125 14.5 ಎಚ್‌ಪಿ, 12 ಎನ್‌ಎಂನಷ್ಟು ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಆದ್ದರಿಂದ ಇದರ ಗರಿಷ್ಠ ವೇಗ ಗಂಟೆಗೆ ಸುಮಾರು 116-120 ಕಿ.ಮೀ.ನಷ್ಟು ಇದೆ. ಆರಂಭಿಕ ವೇಗವೂ ಇತರೆ 125 ಸಿಸಿ ಬೈಕ್‌ಗಳಿಗಿಂತ ದುಪ್ಪಟ್ಟಿದೆ. ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದಾಗಿದೆ. ಅಲ್ಲದೆ ಈ ಬೈಕ್‌ನಲ್ಲಿ ಕೆಟಿಎಂ ತನ್ನ ಸೈಲೆನ್ಸರ್‌ ಶಬ್ದವನ್ನು ತುಸು ಸುಧಾರಣೆ ಮಾಡಿದೆ. ಯಾವುದೇ ರೀತಿಯ ವೈಬ್ರೇಷನ್‌ ಅನ್ನು ಇದು ಉಂಟುಮಾಡುವುದಿಲ್ಲ. 100 ಕಿ.ಮೀ. ವೇಗವನ್ನು ದಾಟಿದಾಗ ಬೈಕ್‌ ತುಸು ಅಲುಗಾಡಿದಂತಾಗುತ್ತದೆ ಎನ್ನುವುದು ಇದನ್ನು ಪರೀಕ್ಷಿಸಿದವರ ಅನುಭವದ ಮಾತು. ಆದರೆ ಇದರಿಂದ ಹ್ಯಾಂಡಲ್‌ಬಾರ್‌ನ ನಿಯಂತ್ರಣದ ಮೇಲೆ ಯಾವುದೇ ಪರಿಣಾಮ ಗೋಚರಿಸುವುದಿಲ್ಲ. ಆದ್ದರಿಂದ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಬ್ರೇಕ್‌ ಮತ್ತು ಸಸ್ಪೆನÒನ್‌
ಬೈಕ್‌ ಎರಡು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು, ಸಿಂಗಲ್‌ ಚಾನೆಲ್‌ ಎಬಿಎಸ್‌ ಮಾತ್ರ ಇದೆ. ಅಪ್‌ಸೆçಡ್‌ ಆಂಡ್‌ ಡೌನ್‌ ಟೆಲಿಸ್ಕೋಪಿಕ್‌ ಶಾಕ್‌ಗಳಿರುವುದು ಇದರ ವಿಶೇಷತೆ. ಸ್ಟೀಲ್‌ ಸ್ಟ್ರೆಲಿಸ್‌ ಫ್ರೆàಮ್‌ಗಳನ್ನು ಹೊಂದಿದ್ದು, ಇದರಿಂದಾಗಿ ಸುಲಭ ನಿಯಂತ್ರಣ, ವೇಗ ಪಡೆದುಕೊಳ್ಳಲು ಮತ್ತು ಸುಗಮ ಚಾಲನೆಗೆ ನೆರವಾಗುವಂತೆ ಇದೆ. ಇದಕ್ಕೆ ಪೂರಕವಾಗಿ ಹಿಂಭಾಗದ ಮೋನೋ ಶಾಕ್‌ ಐದು ಹಂತಗಳಲ್ಲಿ ಅಡ್ಜಸ್ಟ್‌ ಮಾಡಿಕೊಳ್ಳುವಂತಿದೆ. ಸವಾರನ ಅನುಕೂಲತೆ ಅಥವಾ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಇಂದಿನ ಪೀಳಿಗೆಗಾಗಿ
ಕಡಿಮೆ ಬೆಲೆಯಲ್ಲಿ ಸಾಕಷ್ಟು ಪವರ್‌ ಉತ್ಪಾದಿಸಬಲ್ಲ, ವೇಗವನ್ನೂ ಉಳ್ಳ ರೇಸಿಂಗ್‌ ಮಾದರಿಯ ಬೈಕ್‌ ಬೇಕು ಎನ್ನುವವರಿಗೆ ಕೆಟಿಎಂ 125 ಉತ್ತಮ ಆಯ್ಕೆ. ಕಾಲೇಜು ಯುವಕರು ಈ ಬೈಕ್‌ಗಳ ದೊಡ್ಡ ಮಟ್ಟದ ಗ್ರಾಹಕರು. ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಬೈಕ್‌ ರೂಪಿಸಿದಂತಿದೆ. ಇದರ ಎಕ್ಸ್‌ ಶೋರೂಂ ಬೆಲೆ 1.47 ಲಕ್ಷ ರು. ಮಾರುಕಟ್ಟೆಯಲ್ಲಿ ಇದೇ ಸೆಗೆ¾ಂಟ್‌ನಲ್ಲಿ ಸಿಗುವ ಯಮಹಾದ ವೈಝಡ್‌ಎಫ್- ಆರ್‌15 ಬೈಕ್‌ ಕೆಟಿಎಂ 125ನ ಪ್ರತಿಸ್ಪರ್ಧಿ.

ತಾಂತ್ರಿಕತೆ
124.7 ಸಿಸಿ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌
14.5 ಎಚ್‌ಪಿ ಶಕ್ತಿ
12 ಎನ್‌ಎಂ ಟಾರ್ಕ್‌
6 ಸ್ಪೀಡ್‌ ಗೇರ್‌ ಬಾಕ್ಸ್‌
ಸಿಂಗಲ್‌ ಚಾನೆಲ್‌ ಎಬಿಎಸ್‌
154 ಕೆ.ಜಿ. ತೂಕ
9.5 ಲೀ. ಇಂಧನ ಟ್ಯಾಂಕ್‌

  • ಈಶ

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Hunsur: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.