ಜೀವನಕ್ಕೆ ಕಸುವು ತುಂಬುವ “ಕುಸುಬೆ’


Team Udayavani, Jul 8, 2019, 5:02 AM IST

n-2

ಇತ್ತೀಚೆಗೆ ಕುಸುಬೆ ಬೆಳೆಯುವವರ ಸಂಖ್ಯೆ ಕಡಿಮೆಯಾಗ್ತಿದೆ. ಇದಕ್ಕೆ ಪ್ರಮುಖ ಕಾರಣ: ಒಕ್ಕಲು ಸಮಸ್ಯೆ. ಮುಳ್ಳು ತುಂಬಿದ ಈ ಬೆಳೆಯೊಂದಿಗೆ ಅದರೊಂದಿಗೆ ವ್ಯವಹರಿಸುವುದು ನಮ್ಮ ಹೈಬ್ರಿಡ್‌ ರೈತರಿಗೆ ಕಷ್ಟದ ಕೆಲಸ. ಆದರೆ ಇದನ್ನರಿತ ಕೃಷಿ ವಿಜ್ಞಾನಿಗಳು, ಇಂಥವರಿಗೆಂದೇ ಮುಳ್ಳೇ ಇರದ ಕುಸುಬೆ ಕಂಡುಹಿಡಿದರು. ಇದನ್ನು ಸಂಶೋಧನೆ ಮಾಡಿ ತುಂಬಾ ವರ್ಷವಾಯಿತಾದರೂ ಪ್ರಚಾರದ ಕೊರತೆ ಹಾಗೂ ಬೀಜಗಳು ಸಿಗದಿರುವಿಕೆಯಿಂದಾಗಿ ಮುಳ್ಳಿರದ ಕುಸುಬೆ ಬೆಳೆ, ಇನ್ನೂ ಅಂದುಕೊಂಡಷ್ಟು ಯಶಸ್ಸು ಕಂಡಿಲ್ಲ. ಇಷ್ಟಕ್ಕೂ ಈಗ ಮೊದಲಿನಂತೆ ರಾಶಿ ಮಾಡಲು ಕಷ್ಟಪಡಬೇಕಿಲ್ಲ, ಕಟಾವು ಮಾಡುವುದರ ಜೊತೆಗೆ ರಾಶಿ ಮಾಡುವ ಯಂತ್ರಗಳೂ ಬಂದಿರುವುದರಿಂದ, ರೈತರು ಈ ಎಣ್ಣೆ ಬೆಳೆ ಬೆಳೆಯಲು ಮನಸ್ಸು ಮಾಡಬೇಕಷ್ಟೆ.

ಕುಸುಬೆ ವಿಶೇಷವಾಗಿ ಉತ್ತರಕರ್ನಾಟಕದ ಆಳವಾದ ಕಪ್ಪುಮಣ್ಣಿಗೆ ಹೇಳಿ ಮಾಡಿಸಿದ ಬೆಳೆ. ಹಿಂಗಾರು ಮಳೆಯ ಸಂದರ್ಭದಲ್ಲಿ ಇದನ್ನು ಬೆಳೆಯುತ್ತಾರೆ. ನೀರಾವರಿ ಬಳಸಿಯೂ ಕುಸುಬೆ ಬೆಳೆಯಬಹುದಾದರೂ ರೋಗಗಳ ಕಾಟ ಜಾಸ್ತಿ. ಇನ್ನು ಮಸಾರಿ (ಕೆಂಪು) ಮಣ್ಣಿನಲ್ಲಿ ಇದು ಬೆಳೆಯಲು ಯೋಗ್ಯವಲ್ಲ. ಖಾಸಗಿ ಕಂಪನಿಯ ಬೀಜಗಳು ಸಿಗುತ್ತವಾದರೂ ರೈತ ಸಂಪರ್ಕ ಕೇಂದ್ರ ಅಥವಾ ಹುಲಕೋಟಿಯ ಕುಸುಬೆ ಸಂಶೋಧನಾ ಕೇಂದ್ರದಿಂದ ಬೀಜಗಳನ್ನು ಪಡೆಯುವುದು ಒಳ್ಳೆಯದು. ಕುಸುಬೆ ಹಾಗೂ ಸೂರ್ಯಕಾಂತಿ ಬೆಳೆಯುವ ಪದ್ಧತಿ ಒಂದೇ ಥರ, ಎರಡಡಿ ಸಾಲು ಬಿಟ್ಟು ಅಡಿಗೆ ಒಂದರಂತೆ ಬರುವ ಹಾಗೆ ಬೀಜ ಹಾಕಬೇಕು. ಹೊಲ ಫ‌ಲವತ್ತಾಗಿದ್ದರೆ ಸರಿ, ಇಲ್ಲವೆಂದರೆ ಬಿತ್ತನೆಗೂ ಮೊದಲು ಎಕರೆಗೆ ಎರಡು ಟ್ರ್ಯಾಕ್ಟರ್‌ ಕೊಟ್ಟಿಗೆ ಗೊಬ್ಬರ ಹಾಕಬೇಕು.

ರಾಸಾಯನಿಕ ಗೊಬ್ಬರವನ್ನು ಒಂದೇ ಸಲಕ್ಕೆ ಹಾಕದೆ, ಉಳುಮೆ ಮಾಡಿದಾಗ ಒಮ್ಮೆ ಸ್ವಲ್ಪ ಸ್ವಲ್ಪವಾಗಿ ಕೊಡುವುದು ಒಳ್ಳೆಯದು. ಯೂರಿಯಾ, ಡಿ.ಎ.ಪಿ, ಪೊಟ್ಯಾಷ್‌, ಸೂಪರ್‌ ಫಾಸೆ#àಟ್‌ ಜೊತೆಗೆ ಎಕರೆಗೆ ಒಂದು ಕ್ವಿಂಟಾಲ್‌ ಜಿಪ್ಸಂಅನ್ನು ಕುಸುಬೆ ಬೆಳೆಗೆ ಕೊಡಬೇಕು. ಕಾಳುಗಳಲ್ಲಿ ಎಣ್ಣೆಯ ಅಂಶ ಹೆಚ್ಚಿ ಕಾಳು ತೂಕ ಬರಲು ಇದು ಅತ್ಯವಶ್ಯಕ. ಮೊಗ್ಗು ಬರುವ ಮೊದಲು ಕುಡಿಗಳನ್ನು ಚಿವುಟಿ ಹಾಕಿದರೆ ಹೆಚ್ಚು ಕವಲೊಡೆದು ಇಳುವರಿ ಹೆಚ್ಚುತ್ತದೆ. ಈ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ, ಬಿತ್ತನೆ ಸಮಯದಲ್ಲಿ ಮಳೆಯಾದರೆ ಸಾಕು, ಇಬ್ಬನಿ ಮೂಲಕವೇ ಬೇಕಾದಷ್ಟು ತಂಪಿನಾಂಶ ಹೀರಿಕೊಂಡು ಬೆಳೆಯುತ್ತದೆ. ರೋಗಗಳ ಕಾಟವೂ ತೀರಾ ಕಮ್ಮಿ.

ಕುಸುಬೆ ಎಣ್ಣೆಯಲ್ಲಿ ಕೆಟ್ಟ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ. ವಿಟಮಿನ್‌ “ಎ’ ಅಧಿಕ ಪ್ರಮಾಣದಲ್ಲಿರುವುದನ್ನು ತಜ್ಞರು ಸಂಶೋಧನೆಯಿಂದ ಪ್ರಮಾಣೀಕರಿಸಿದ್ದಾರೆ. ಕುಸುಬೆ ಎಣ್ಣೆಯನ್ನು ಈಚೆಗೆ ಹೃದ್ರೋಗಗಳಿಗೆ (ಕರೋನರಿ, ತ್ರಾಂಬೊಸಿಸ್‌, ಇತ್ಯಾದಿ) ನಡೆಸುವ ಚಿಕಿತ್ಸೆಯಲ್ಲೂ ಬಳಸುತ್ತಿದ್ದಾರೆ. ಕುಸುಬೆಯ ಹಿಂಡಿ ಒಂದು ಮುಖ್ಯ ಉತ್ಪನ್ನ, ಬೀಜದ ಸಿಪ್ಪೆ ತೆಗೆದು ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿಯನ್ನು ದನಗಳ ಮೇವಿಗೆ ಬಳಸುವರು. ಕುಸುಬೆಯಲ್ಲಿ ಸುಮಾರು 20%ರಿಂದ 30%ರಷ್ಟು ಎಣ್ಣೆ ಇರುತ್ತದೆ. ಅದನ್ನು ಮುಖ್ಯವಾಗಿ ಪದಾರ್ಥಗಳನ್ನು ಕರಿಯುವ ಖಾದ್ಯ ತೈಲವನ್ನಾಗಿ ಹಿಂದಿನಿಂದಲೂ ಬಳಸುತ್ತಾರೆ. ದೀಪಕ್ಕೂ ಉಪಯೋಗಿಸುತ್ತಿದ್ದಾರೆ. ಈಚೆಗೆ ಸಾಬೂನು ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಕೆಲವು ಕೇಶತೈಲಗಳ ತಯಾರಿಕೆಯಲ್ಲೂ ಬಳಸುವುದುಂಟು. ಮುಂದಿನ ದಿನಗಳಲ್ಲಿ ತಾಳೆ ಎಣ್ಣೆಗೆ ಪೈಪೋಟಿ ನೀಡಲು ಕುಸುಬೆ ಸಮರ್ಥವಾಗಲಿದೆ, ರೈತರು ಆಸ್ಥೆ ವಹಿಸಿ ಬೆಳೆಯಬೇಕಷ್ಟೆ.

-ಎಸ್‌.ಕೆ. ಪಾಟೀಲ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.