ಕಾಸು ಕೊಡುವ ‘ಕೋಸು’


Team Udayavani, Sep 18, 2017, 1:30 PM IST

18-ISIRI-1.jpg

ಹೂ ಕೋಸಿನ ಪರಿಚಯವಿಲ್ಲದ ಜನರೇ ಇಲ್ಲ ಅನ್ನಬಹುದು. ಇದು  ರಾಜ್ಯದ ಸಾವಿರಾರು ರೈತರ ಪಾಲಿಗೆ ಕಾಸು ನೀಡುವ ತರಕಾರಿ. ಈ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರಷ್ಟೇ ಬೆಳೆಯುವತ್ತಾ ಒಲವು ತೋರಬಹುದಾಗಿದೆ. ಒಂಚೂರು ಅನುಭವದ ಕೊರತೆಯಾದರೂ ನಷ್ಟ ಕಟ್ಟಿಟ್ಟ ಬುತ್ತಿ.  ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಹುಬೇಡಿಕೆ  ಗಳಿಸಿರುವ ಕೋಸನ್ನು ಬೆಳೆದೇ ಸುಂದರ ಬದುಕನ್ನು ಕಟ್ಟಿಕೊಂಡ ಬ್ಯಾಟಪ್ಪ ಬಂಗಾರಪೇಟೆಯವರು ಕಥೆ ಕೇಳಿ. 

ಬ್ಯಾಟಪ್ಪ ಬಂಗಾರುಪೇಟೆ ತಾಲೂಕಿನ ಸಿದ್ದರಹಳ್ಳಿಯವರು.   ಇವರು ಒಂದು ಎಕರೆಯಲ್ಲಿ ಬೆಳೆದಿರುವ ಇಪ್ಪತ್ತು ಸಾವಿರ ಬುಡಗಳು ಪ್ರತಿ ವರ್ಷ ಒಂದೂವರೆ ಲಕ್ಷ ರೂಪಾಯಿ ಆದಾಯವನ್ನು ನೀಡುತ್ತಿವೆ. ಇವರ ನಾಟಿ ವಿಧಾನ ಇತರರಿಗಿಂತ ಭಿನ್ನ. ಉಳುಮೆ ಮಾಡಿ ನಂತರ ಗದ್ದೆಗೆ ಸಾವಯವ ಗೊಬ್ಬರವನ್ನು ಬೆರೆಸುತ್ತಾರೆ. ಒಂದು ವಾರಗಳ ಕಾಲ ಭೂಮಿಗೆ ಹನಿ ನೀರಾವರಿಯನ್ನು ನೀಡಿ ಭೂಮಿಯಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತಾರೆ. ನಂತರ, ಸಸಿಯೊಂದಕ್ಕೆ ಅರವತ್ತು ಪೈಸೆಯಂತೆ ನೀಡಿ ಪಕ್ಕದ ಬೆಳೆಗಾರನೋರ್ವ ಸೂಚಿಸಿದ ನರ್ಸರಿಯೊಂದರಿಂದ ಸ್ಥಳೀಯ ತಳಿಯ  ಖರೀದಿಸಿ ತಂದಿದ್ದಾರೆ. ಬೆಳಗ್ಗೆ ಬೇಗ ಎದ್ದು ಸೂರ್ಯನ ಕಿರಣ ಸೋಕುವ ಮುನ್ನ ಎರಡು ಅಡಿ ಅಂತರ ಬಿಟ್ಟು ಸಾಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಸಿಯಿಂದ ಸಸಿಗೆ ಒಂದು ಅಡಿ ಅಂತರ ಬಿಟ್ಟು ಜೂನ್‌ನಲ್ಲಿ ನಾಟಿ ಮಾಡಿದ್ದಾರೆ.

ಎರಡು ದಿನಕ್ಕೊಮ್ಮೆ ಎರಡು ಗಂಟೆಗಳ ಕಾಲ ಹನಿ ನೀರಾವರಿ ವಿಧಾನದ ಮೂಲಕ ಸಸಿಗಳಿಗೆ ನೀರುಣಿಸಿದ್ದಾರೆ. ತಿಂಗಳಿಗೆ ಒಂದು ಬಾರಿ ರಾಸಾಯನಿಕ ಗೊಬ್ಬರ  ನೀಡಿದರೆ, ವಾರದಲ್ಲೆರಡು ಬಾರಿ ಹನಿ ನೀರಾವರಿ ಪೈಪ್‌ ಮೂಲಕ ಸಾವಯವ ಗೊಬ್ಬರವನ್ನು ನೀಡಿದ್ದರಿಂದ ಪಕ್ಕದ ಗದ್ದೆಯಲ್ಲಿರುವ ಕೋಸಿಗಿಂತ ನಾಲ್ಕು ದಿನ ಮುಂಚಿತವಾಗಿಯೇ ಬೆಳೆ ಕೈಗೆ ಬಂದಿದೆ. ಹದಿನೈದು ದಿನದ ಕಾಯಿಯಿಂದ ಆರಂಭವಾಗಿ ಈ ಬೆಳೆ ಮಾರಾಟಕ್ಕೆ ಸಿದ್ಧವಾಗುವ ಎಪ್ಪತ್ತೆ„ದನೇ ದಿನದವರೆಗೂ ಕೋಸಿಗೆ ಕೀಟ, ಹುಳಗಳು ಬಾಧಿಸದಂತೆ ಜಾಗರೂಕತೆ ವಹಿಸಬೇಕಾದುದು ಇಲ್ಲಿ ಮುಖ್ಯ. ವಾರದಲ್ಲೊಂದು ಬಾರಿ ಕೀಟನಾಶಕ ಸಿಂಪಡಿಸುವ ಮೂಲಕ ಹಸಿರು ಹುಳದ ಬಾಧೆ  ಬೆಳೆಗೆ ತಾಗದಂತೆ ನೋಡಿಕೊಂಡಿದ್ದಾರೆ. ಎಲೆ ಮತ್ತು ಹೂವನ್ನು ಜೊತೆಗೇ ಕಟಾವು ಮಾಡಲಾಗುತ್ತದೆ. ಕಟಾವಾದ ನಂತರ ಹದಿನೈದು ದಿನಗಳವರೆಗೆ ಹೂವು ಹಾಳಾಗದಿರುವುದು ಇದರ ವಿಶೇಷ. ಒಂದು ಬುಡದಲ್ಲಿ ಒಂದೇ ಹೂವು ಬರುತ್ತದೆ.  ಒಂದೊಂದು ಕೋಸು ಒಂದರಿಂದ ಒಂದುವರೆ ಕೆ.ಜಿ. ತೂಗುತ್ತಿದ್ದು ಕೆ.ಜಿ.ಗೆ ಹದಿನೈದರಿಂದ ಇಪ್ಪತ್ತು ರೂ. ಬೆಲೆ ಇದೆ .  ಕೋಲಾರದ ವ್ಯಾಪಾರಿಗಳು ಗದ್ದೆಗೆ ಬಂದು ಖರೀದಿ ಮಾಡುತ್ತಾರೆ. ಒಂದು ಎಕರೆಯಲ್ಲಿ ನಾಟಿಗೆ ಎಲ್ಲಾ ಖರ್ಚು ಸೇರಿ ರೂ. 60 ಸಾವಿರ ಖರ್ಚು ತಗಲಿದರೆ ಇವರು ಅದರಿಂದ ಒಂದುವರೆ ಲಕ್ಷ ರೂ. ಆದಾಯವನ್ನು ಪಡೆಯುವ ಮೂಲಕ ಮಾದರಿ ಬೆಳೆಗಾರರೆನಿಸಿಕೊಂಡಿದ್ದಾರೆ. 

ಕೋಸು ತೆಗೆದ ನಂತರ ಕೊತ್ತಂಬರಿ, ಕ್ಯಾಬೇಜ್‌ ಹೀಗೆ ಋತುಗಳಿಗನುಗುಣವಾಗಿ ಬಹು ವಿಧದ ತರಕಾರಿಗಳನ್ನು ಬೆಳೆಯುವುದು ಇವರ ಜಾಣತನ. ಮಾಹಿತಿಗೆ- 8453649944. (ರಾತ್ರಿ 7ರಿಂದ 8 ಮಾತ್ರ) 

ಚಂದ್ರಹಾಸ ಚಾರ್ಮಾಡಿ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.