ಸಾಲ ಪಡೆದು ಸತಾಯಿಸುವಂತಿಲ್ಲ…
Team Udayavani, Mar 15, 2021, 6:45 PM IST
ಸಾಂದರ್ಭಿಕ ಚಿತ್ರ
ಸಾಲ ವಸೂಲಾತಿ ಮಾಡಲು ಮತ್ತು ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸರ್ಕಾರವು, ವಸೂಲಾತಿ ನ್ಯಾಯ ಮಂಡಳಿಯನ್ನು( debt recovery tribunal & DRT) ಸ್ಥಾಪಿಸಿದೆ. 1993 ರಲ್ಲಿ Recovery of Debts Bankruptcy Act ಅಡಿಯಲ್ಲಿ ರಚನೆಯಾದ ಈ ನ್ಯಾಯಮಂಡಳಿ, ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಬರಬೇಕಾದ ಸಾಲವನ್ನು ತ್ವರಿತವಾಗಿ ವಸೂಲು ಮಾಡಲು ನಿಯಮ ರೂಪಿಸುತ್ತದೆ.
ಈ ನ್ಯಾಯ ಮಂಡ ಳಿಯ ಕಾರ್ಯ ವೈಖರಿ ಸಾಮಾನ್ಯನ್ಯಾಯಾಲಯಗಳಿಗಿಂತ ಭಿನ್ನವಾಗಿದ್ದು, ಪ್ರಕರಣಗಳ ವಿಚಾರಣೆ ಬೇಗ ಮುಗಿಯುತ್ತದೆ. ಸಾಲ ಬಾಕಿ 20 ಲಕ್ಷಮತ್ತು ಹೆಚ್ಚು ಇದ್ದರೆ ಮಾತ್ರ ಪ್ರಕರಣಗಳನ್ನು ಇಲ್ಲಿ ದಾಖಲಿಸಿಬಹುದು. ಈ ನ್ಯಾಯ ಮಂಡಳಿಯಲ್ಲಿ ತೀರ್ಪು ನೀಡಲು 180 ದಿನಗಳ ಗರಿಷ್ಠ ಸಮಯಾವಕಾಶ ಇರುತ್ತದೆ. ಸದ್ಯ ದೇಶದಲ್ಲಿ 43 ಬ್ಯಾಂಕ್ ಸಾಲ ವಸೂಲಾತಿ ಮಂಡಳಿಗಳು ಮತ್ತು 5 ಬ್ಯಾಂಕ್ ಸಾಲವಸೂಲಾತಿ ಮೇಲ್ಮನವಿ ಮಂಡಳಿಗಳು ಇವೆ. ಸಾಲ ಮರು ಪಾವತಿಯನ್ನು ಮುಂದೂಡಲು ಯಾವುದಾದರೂ ನೆವ ಹುಡುಕುವ ಸಾಲಗಾರರು, ನಾಯಮಂಡಳಿಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದ್ದರು. ಆಗ ಸಾಲ ವಸೂಲಾತಿ ಪ್ರಕ್ರಿಯೆ ವಿಳಂಬವಾಗಿ, ನ್ಯಾಯಮಂಡಳಿ ಸ್ಥಾಪನೆಯ ಉದ್ದೇಶ ಈಡೇರುತ್ತಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸುಪ್ರೀಮ್ ಕೋರ್ಟ್, ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಯಂತ್ರಿಸಲು ಮುಂದಾಗಿದೆ. ಇತ್ತೀಚಿನ ಒಂದು ಪ್ರಕರಣದಲ್ಲಿ, ಸಾಲಗಾರರು ಅಪೆಲೆಟ್ ಟ್ರಿಬ್ಯೂನಲ್ ಗೆಮೇಲ್ಮನವಿ ಸಲ್ಲಿಸುವ ಮೊದಲು ಬಾಕಿ ಇರುವ ಸಾಲದ ಮೊತ್ತವನ್ನು ಠೇವಣಿ ಇಡಬೇಕು ಮತ್ತು ಈ ಷರತ್ತನ್ನುಕೈಬಿಡಲು ಸಾದ್ಯವಿಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು,ಸಾಲ ಮರುಪಾತಿಸದೇ ಬ್ಯಾಂಕುಗಳನ್ನು ಸತಾಯಿಸುವಮತ್ತು ವೃಥಾ ಕಾಲಹರಣ ಮಾಡುವ ಸಾಲಗಾರರ ಕುಟಿಲತನಕ್ಕೆ ಬ್ರೇಕ್ ಹಾಕಿದೆ.
ಸಾಲಗಾರರು ಈಗ ಸಾಲ ಮರುಪಾವತಿಸಬೇಕು ಅಥವಾಆ ಮೊತ್ತವನ್ನು ಠೇವಣಿ ಇಟ್ಟು ಮೇಲ್ಮನವಿ ಸಲ್ಲಿಸಬೇಕು. ಬಹುತೇಕ ಸಂದರ್ಭದಲ್ಲಿ ಅವರು ಮೇಲ್ಮನವಿ ಸಲ್ಲಿಸದೇ ಸಾಲ ಮರು ಪಾವತಿಸುವ ಸಾಧ್ಯತೆ ಹೆಚ್ಚು. ನ್ಯಾಯಾಲಯದಕಾರ್ಯ ವೈಖರಿಯನ್ನು ದುರುಪಯೋಗ ಮಾಡಿ ಕೊಂಡು ಬ್ಯಾಂಕುಗಳನ್ನು ಸತಾಯಿಸುತ್ತಿದ್ದ ಸಾಲಗಾರಿಗೆ ಈ ತೀರ್ಪು ಮಾರ್ಮಿಕ ಪೆಟ್ಟು ಎನ್ನಬಹುದು.
– ರಮಾನಂದ ಶರ್ಮಾ