ಮನಿ ಮ್ಯಾನೇಜ್‌ಮೆಂಟ್‌ : ಸೈಟ್‌ ತಗೊಂಡ್ರಾ?


Team Udayavani, Dec 28, 2020, 7:42 PM IST

ಮನಿ ಮ್ಯಾನೇಜ್‌ಮೆಂಟ್‌ : ಸೈಟ್‌ ತಗೊಂಡ್ರಾ?

ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ, ದಾವಣಗೆರೆ ಅಥವಾ ಗುಲಬರ್ಗಾ.. ಇಂಥ ನಗರಗಳಲ್ಲಿ ಒಂದು ಸೈಟ್‌ ತಗೋಬೇಕು ಅನ್ನುವುದುಎಲ್ಲರ ಆಸೆ- ಕನಸು. ಕಾರಣವಿಷ್ಟೇ:

ನಮ್ಮದು ಅಂತ ಒಂದು ಸೈಟ್‌ ಇದ್ದರೆ, ಅಲ್ಲಿ ಒಂದು ಮನೆಕಟ್ಟಿಕೊಳ್ಳಬಹುದು. ಅಕಸ್ಮಾತ್‌    ಬದುಕಿನಲ್ಲಿ ಇದ್ದಕ್ಕಿದ್ದಂತೆದೊಡ್ಡ ಕಷ್ಟ ಬಂದರೆ, ಆಸೈಟ್‌ ಮಾರಿ, ಅದರಿಂದಸಿಗುವ ಹಣದನೆರವಿನಿಂದ ಕಷ್ಟವನ್ನುಎದುರಿಸಬಹುದು. ಈಕಾರಣದಿಂದಲೇ ಪ್ರತಿಯೊಬ್ಬರೂ, ಡಿಮ್ಯಾಂಡ್‌ ಇರುವಂಥಪ್ರದೇಶದಲ್ಲಿ ಒಂದು ಸೈಟ್‌ ತಗೊಳ್ಳಬೇಕು ಎಂದು ಆಸೆಪಡುತ್ತಾರೆ.

ಸೈಟ್‌ ತಗೋಬೇಕು ಸರಿ. ಅದಕ್ಕೆ ದುಡ್ಡು ಬೇಡವೇ? ಈಗ ಎಲ್ಲಾ ಊರುಗಳಲ್ಲೂ ಭೂಮಿಗೆ ಬಂಗಾರದ ಬೆಲೆ.ಹಾಗಾಗಿ, ಸೈಟ್‌ ಖರೀದಿ ಎಂಬುದು ಈಗಲಕ್ಷಗಳ ವ್ಯವಹಾರ. ಈ ಹಿಂದೆಲ್ಲಾಬೆಂಗಳೂರಿನಲ್ಲಿ ಮಾತ್ರ ಸೈಟ್‌ನ ಬೆಲೆ ಜಾಸ್ತಿ, ಉಳಿದ ನಗರಗಳಲ್ಲಿ ಕಮ್ಮಿ ಎಂಬಂಥ ಪರಿಸ್ಥಿತಿ ಇತ್ತು. ಆದರೆ, ಈಗ ಹಾಗಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಈಗ ಎಲ್ಲಾ ನಗರಗಳೂ ಅಭಿವೃದ್ಧಿ ಹೊಂದಿವೆ. ಎಲ್ಲಾ ನಗರಗಳಲ್ಲೂಮಾಲ್‌ಗ‌ಳು, ಸೂಪರ್‌ ಮಾರ್ಕೆಟ್‌ಗಳು, ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಿವೆ. ಈ ಕಾರಣದಿಂದ ಬೆಂಗಳೂರಿನಲ್ಲಿ ಒಂದು ಚದರ ಅಡಿಗೆ ಎಷ್ಟು ಬೆಲೆಇದೆಯೋ ಅಷ್ಟೇ ಬೆಲೆ ಉಳಿದ ನಗರಗಳಲ್ಲಿಕೂಡ ಇದೆ.ಬೆಲೆ ಜಾಸ್ತಿ ಅಂತ ತಗೊಳ್ಳದೆ ಇರಲು ಆಗುತ್ತಾ? ಸಾಲ ಮಾಡಿಯಾದ್ರೂ ಸರಿ, ಒಂದು ಸೈಟ್‌ ತಗೊಳ್ಳುವುದೇಸರಿ ಅನ್ನುವುದು ಹಲವರ ವಾದ.

ಅಕಸ್ಮಾತ್‌ಸೈಟ್‌ ಖರೀದಿಗೆಂದು ಮಾಡಿದ ಸಾಲತೀರಿಸಲು ಆಗದೇ ಹೋದರೆ, ಅದೇ ಸೈಟ್‌ನ ಮಾರಿಬಿಟ್ಟರಾಯ್ತು. ಆಗಖಂಡಿತವಾಗಿಯೂ ನಾಲ್ಕು ಕಾಸು ಹೆಚ್ಚಾಗಿ ಸಿಕ್ಕೇ ಸಿಗುತ್ತದೆ ಎಂದೂ ಜನ ಹೇಳುವುದುಂಟು. ಇದು ಎಲ್ಲಾಸಂದರ್ಭದಲ್ಲಿಯೂ ನಿಜವಾಗುವುದಿಲ್ಲ.ಸೈಟ್‌ ತಗೊಳ್ಳಲೇಬೇಕು ಅನ್ನಿಸಿದರೆ,ನಾಲ್ಕು ಅಥವಾ ಐದು ವರ್ಷಗಳಲ್ಲಿ ಸಾಲು ಮುಗಿದುಬಿಡಬೇಕು, ಅಷ್ಟುಹಣವನ್ನು ಮಾತ್ರ ಸಾಲವಾಗಿಪಡೆಯಿರಿ. ಅದಕ್ಕೂ ಮೊದಲು ನೀವು ಕೆಲಸ ಮಾಡುತ್ತಿರುವ ಸಂಸ್ಥೆ ನಿಮ್ಮನ್ನು ನಾಲ್ಕು/ ಐದು ವರ್ಷ ಉಳಿಸಿಕೊಳ್ಳುತ್ತದಾ ಎಂದು ಯೋಚಿಸಿ. ಹೌದುಅನ್ನಿಸಿದರೆ ಮಾತ್ರ ಸಾಲ ಮಾಡಲು ಮುಂದಾಗಿ.

ಹೀಗೆ ಮಾಡುವ ಬದಲು ದೊಡ್ಡ ಸೈಟ್‌ ಖರೀದಿ ಆಸೆಗೆಬಿದ್ದು ಹೆಚ್ಚು ಮೊತ್ತದ ಸಾಲಮಾಡಿದರೆ, 8-10ವರ್ಷದವರೆಗೂ ಸಾಲತೀರಿಸುತ್ತಲೇ ಇರಬೇಕಾಗುತ್ತದೆ. ಈಅವಧಿಯಲ್ಲಿ ಅಕಸ್ಮಾತ್‌ ಆರೋಗ್ಯದಲ್ಲಿಏರುಪೇರಾದರೆ? ನೌಕರಿ ಕೈತಪ್ಪಿ ಹೋದರೆ?ಅಕಸ್ಮಾತ್‌ ಇನ್ಯಾವುದೋ ದೊಡ್ಡ ಕಷ್ಟಜೊತೆಯಾಗಿಬಿಟ್ಟರೆ…ಸೈಟ್‌ ಖರೀದಿಸಲು ಹೊರಟವರು, ಸಾಲದ ಅರ್ಜಿಗೆ ಸಹಿ ಹಾಕುವ ಮುನ್ನ ಇದನ್ನೆಲ್ಲಾ ಯೋಚಿಸಲೇಬೇಕು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.