ಹೋಟೆಲ್‌ ಹೆಸರು ಮೂರ್ತಿ, ಊರ್‌ ತುಂಬಾ ಕೀರ್ತಿ!


Team Udayavani, Apr 8, 2019, 10:20 AM IST

hotel

ಮೂರ್ತಿ ಹೋಟೆಲ್‌ ಫೇಮಸ್‌ ಆಗಲು ಕಾರಣ ಅಲ್ಲಿ ಸಿಗುತ್ತಿದ್ದ ತಟ್ಟೆ ಇಡ್ಲಿ, ತುಪ್ಪ ಹಾಗೂ ಕಾಯಿ ಚಟ್ನಿ. ಹೋಟೆಲ್‌ನ ಗಂಧಗಾಳಿಯೇ ಗೊತ್ತಿಲ್ಲದ ಮೂರ್ತಿಯ ಬದುಕು ರೂಪಿಸಿದ್ದು ರಾಮನಗರದಲ್ಲಿ ಕೆಲಸಕ್ಕೆ ಇದ್ದಹೋಟೆಲ್‌. ಇಲ್ಲಿ ಮಾಡುತ್ತಿದ್ದ ಇಡ್ಲಿ, ತುಪ್ಪ, ಹುಣಸೆಹಣ್ಣಿನ ಚಿತ್ರಾನ್ನ, ಚಿಕ್ಕನಾಯಕನಹಳ್ಳಿಯ ಜನರಿಗೂ ಇಷ್ಟವಾಯಿತು. ಇದರೊಂದಿಗೆ ಮೂರ್ತಿಯವರ ಜೀವನವೂ ಸುಧಾರಿಸಿತು.

ತಾಲೂಕುಗಳಲ್ಲಿ ಈಗಲೂ ಕೆಲವು ಹೋಟೆಲ್‌ಗ‌ಳು ಕಡಿಮೆ ದರದಲ್ಲಿಉತ್ತಮ ತಿಂಡಿ, ಊಟ ಒದಗಿಸುತ್ತಾ, ಹಳ್ಳಿ ಜನರ ಹಸಿವು ನೀಗಿಸುತ್ತಿವೆ. ಕೆಲವರಿಗೆ ಈ ಹೋಟೆಲ್‌ ಗಳಲ್ಲಿ ತಿಂದ್ರೇನೇ ಸಮಾಧಾನ. ಅಂತಹ ಹೋಟೆಲೊಂದು ಚಿಕ್ಕನಾಯಕನಹಳ್ಳಿಯಲ್ಲಿದೆ. ಹೇಳ್ಳೋಕೆ ತಾಲೂಕು ಕೇಂದ್ರವಾದ್ರೂ ನೋಡೋಕೆ ಹಳ್ಳಿಯಂತೆ ಇರುವ ಚಿಕ್ಕನಾಯಕನಹಳ್ಳಿಯಲ್ಲಿ “ಮೂರ್ತಿ ಹೋಟೆಲ್‌’ ಹೆಸರುವಾಸಿ. ನೋಡೋಕೆ ಮನೆಯಂತೆ ಕಾಣುವ ಈ ಹೋಟೆಲ್‌ಗೆ ಯಾವುದೇ ನಾಮಫ‌ಲಕವಿಲ್ಲ. ಮಾಲೀಕನ ಹೆಸರೇ ಈ ಹೋಟೆಲಿನ ಐಡೆಂಟಿಟಿ
ಕಾರ್ಡು.

ಕೋ-ಅಪರೇಟಿವ್‌ ಬ್ಯಾಂಕ್‌ನಲ್ಲಿ ತಾತ ಮಾಡಿದ್ದ 150 ರೂ. ಸಾಲ 750 ರೂ.ಗೆ ಬೆಳೆದು ಇದ್ದ ಮನೆ ಹರಾಜಿಗೆ ಬಂದಿತ್ತು. ಈ ಸಾಲ ತೀರಿಸಲು ನಾಲ್ಕನೇ ತರಗತಿಗೆ ಶಾಲೆ ಬಿಟ್ಟ ಮೂರ್ತಿ, ಹೆಂಚಿನ ಕಾರ್ಖಾನೆಯಲ್ಲಿ ಕೆಲಸಕ್ಕೆ
ಸೇರಿಕೊಂಡರು. ಆದರೆ, ಬರುತ್ತಿದ್ದ ಕೂಲಿ ಹಣ ಮನೆಗೆ ಸಾಕಾಗುತ್ತಿರಲಿಲ್ಲ. 12ನೇ ವಯಸ್ಸಿಗೆ ತಂದೆ, ತಾಯಿ ತೀರಿಕೊಂಡ ನಂತರ, ಮನೆಯನ್ನು ತೊರೆದ ಮೂರ್ತಿ ರಾಮನಗರದ ಲಿಂಗಾಯತರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿ ಅಡುಗೆ ಮಾಡುವುದನ್ನು ಚೆನ್ನಾಗಿ ಕಲಿತು ನಂತರ ಹೊಸದುರ್ಗ ತಾಲೂಕಿನ ಚೌಳುಕಟ್ಟೆಯಲ್ಲಿ ತಮ್ಮ ಸ್ನೇಹಿತರ ಸಹಕಾರದೊಂದಿಗೆ ಹೋಟೆಲ್‌ ಆರಂಭಿಸಿದ್ದರು. ಹೋಟೆಲ್‌ ಚೆನ್ನಾಗಿ ನಡೆಯಿತು. ಇಲ್ಲಿ ಬಂದ ಲಾಭದಲ್ಲಿ ತಾತನ ಸಾಲವನ್ನುತೀರಿಸಿದರು. ಆದರೆ, ಸ್ನೇಹಿತನೇ ಮಾಡಿದ ಮೋಸದಿಂದ ಅಲ್ಲಿಂದ ಹೋಟೆಲ್‌ ಖಾಲಿ ಮಾಡಿ ತಿಪಟೂರಿನ ಕೆ.ಜಿ.ಹಳ್ಳಿಯ ಭಾವಿ ಬಳಿ ಹೊಸದೊಂದು ಹೋಟೆಲ್‌ ಆರಂಭಿಸಿದ್ದರು. ಇಲ್ಲಿಯೂ ಹೋಟೆಲ್‌ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಯಾವುದೋ ಕುಂಟು ನೆಪ ಇಟ್ಟುಕೊಂಡು ಸ್ಥಳೀಯರೇ ಗಲಾಟೆ ಮಾಡಿ, ಅಲ್ಲಿಯೂ ತೆರವು ಮಾಡಿಸಿದರು. ನಂತರ ಸ್ವಸ್ಥಳ ಚಿಕ್ಕನಾಯಕನಹಳ್ಳಿಗೆ ಬಂದ ಮೂರ್ತಿ, ತನ್ನ ಪತ್ನಿ ದೊಡ್ಡಮ್ಮ ಅವರ ಸಹಕಾರದೊಂದಿಗೆ 1963ರಲ್ಲಿ ವೆಂಕಟೇಶ್ವರ ಕಾμ ಕ್ಲಬ್‌ ಎಂಬ ಹೆಸರಿನೊಂದಿಗೆ ಹೋಟೆಲ್‌ ಆರಂಭಿಸಿದ್ರು. ಹೋಟೆಲ್‌ ಕೆಲಸದಲ್ಲಿ ಮೂರ್ತಿಯವರಿಗೆ ಐವರು ಪುತ್ರಿಯರೂ ಸಾಥ್‌ ನೀಡುತ್ತಿದ್ದರು. ಈಗ ಮೂರ್ತಿ ಅವರ ಪುತ್ರ ನಾಗರಾಜ್‌ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.


ನಾಗರಾಜ್‌ ಕೂಡ ಎಲೆಕ್ಟ್ರಿಕಲ್‌ ಡಿಪ್ಲೋಮಾ ಮಾಡಿ ಬೆಂಗಳೂರಿನಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದರು. ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ ಕೆಲಸ ಬಿಟ್ಟು, ತಂದೆ ಕಟ್ಟಿಕೊಟ್ಟಿದ್ದ ಹೋಟೆಲ್‌ ಅನ್ನು
ಮುಂದುವರಿಸಿಕೊಂಡು ಅದೇ ರುಚಿ, ಅದೇ ತಿಂಡಿಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಜೀವನ ರೂಪಿಸಿದ ರಾಮನಗರ ಹೋಟೆಲ್‌ ಮೂರ್ತಿ ಹೋಟೆಲ್‌ ಫೇಮಸ್‌ ಆಗಲು ಕಾರಣ ಅಲ್ಲಿ ಸಿಗುತ್ತಿದ್ದ ತಟ್ಟೆ ಇಡ್ಲಿ, ತುಪ್ಪ ಹಾಗೂ ಕಾಯಿ ಚಟ್ನಿ. ಹೋಟೆಲ್‌ನ ಗಂಧಗಾಳಿಯೇ
ಗೊತ್ತಿಲ್ಲದ ಮೂರ್ತಿಯ ಬದುಕು ರೂಪಿಸಿದ್ದು ರಾಮನಗರದಲ್ಲಿ ಕೆಲಸಕ್ಕೆ ಇದ್ದ ಹೋಟೆಲ್‌. ಇಲ್ಲಿ ಮಾಡುತ್ತಿದ್ದ ಇಡ್ಲಿ, ತುಪ್ಪ, ಹುಣಸೆಹಣ್ಣಿನ ಚಿತ್ರಾನ್ನ ಚಿಕ್ಕನಾಯಕನಹಳ್ಳಿಯ ಜನರಿಗೂ ಇಷ್ಟವಾಯಿತು. ಇದರೊಂದಿಗೆ ಮೂರ್ತಿಯವರ ಜೀವನವೂ ಸುಧಾರಿಸಿತು. ವಿಶೇಷ ತಿಂಡಿ ಇಡ್ಲಿ, ಚಿತ್ರಾನ್ನ ಈ ಹೋಟೆಲ್‌ನ ವಿಶೇಷ ತಿಂಡಿ ಅಂದ್ರೆ ತಟ್ಟೆ ಇಡ್ಲಿ. ಇದರ ಜತೆ ಕೊಡುವ ತುಪ್ಪ, ಪಲ್ಯ, ತೆಂಗಿನಕಾಯಿ ಚಟ್ನಿ ಗ್ರಾಹಕರಿಗೆ ರುಚಿಸಿದೆ. ಇದರ ಜೊತೆ ಎರಡು ಬೋಂಡಾ ಹಾಕಿಕೊಂಡರೆ ದರ 40 ರೂ., 2 ಇಡ್ಲಿ ಆದ್ರೆ 25 ರೂ. ಮಾತ್ರ, ಇನ್ನು ಹುಣಿಸೆಹಣ್ಣು, ಮೆಂತ್ಯಾ ಹಾಕಿ ಮಾಡುವ ಚಿತ್ರಾನ್ನ, ಮನೆಯ ತಿಂಡಿಯನ್ನು ನೆನಪಿಸುತ್ತೆ. ಫ‌ಲಾವ್‌, ಪೂರಿ, ಬಜ್ಜಿ ಹೀಗೆ ಎರಡು ಮೂರು ಬಗೆಯ ತಿಂಡಿ ಇಲ್ಲಿ ಸಿಗುತ್ತದೆ. ಬೆಲೆ 30 ರೂ. (ಈರುಳ್ಳಿ ಬೋಂಡಾ ಸೇರಿ).

ಹೋಟೆಲ್‌ ಸಮಯ: ಬೆಳಗ್ಗೆ 7.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ. ರಜೆ ಇರುವುದಿಲ್ಲ.
ಹೋಟೆಲ್‌ ವಿಳಾಸ: ಬನಶಂಕರಿ ದೇವಸ್ಥಾನ ರಸ್ತೆ, ಸಿವಿಲ್‌ ಬಸ್‌ ನಿಲ್ದಾಣದ ಒಳಭಾಗ. ಚಿಕ್ಕನಾಯಕನಹಳ್ಳಿ ಪಟ್ಟಣ.

 ಭೋಗೇಶ ಆರ್‌.ಮೇಲುಕುಂಟ

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.