ಅಣಬೆಯಿಂದ ಆದಾಯ


Team Udayavani, Mar 2, 2020, 4:15 AM IST

mushroom-business

ಕೃಷಿ ಕೆಲಸಗಳಲ್ಲಿ ಮಹಿಳೆಯರ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ. ಅದರೆ, ತಾವೇ ಮುಂದೆ ನಿಂತು ಕೃಷಿಯಲ್ಲಿ ತೊಡಗುವ ಮಹಿಳೆಯರು ಅಪರೂಪ. ಈ ಸಾಲಿಗೆ ಸೇರ್ಪಡೆಗೊಳ್ಳುತ್ತಾರೆ ಗಂಗಾವತಿಯ ರೈತ ಮಹಿಳೆ ವಾಣಿಶ್ರೀ. ಅಣಬೆ ಕೃಷಿಯಲ್ಲಿ ತೊಡಗಿರುವ ಅವರು ಸ್ನಾತಕೋತ್ತರ ಪದವೀಧರೆ ಎನ್ನುವುದು ಇನ್ನೊಂದು ಅಚ್ಚರಿ.

ದೂರದರ್ಶನ, ದಿನಪತ್ರಿಕೆಗಳ ಮೂಲಕ ಅಣಬೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ವಾಣಿಶ್ರೀಯವರು ಪತಿ ವೀರೇಶ್‌ರೊಂದಿಗೆ ಚರ್ಚಿಸಿ, ಸಮೀಪದ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದರು. ಅಲ್ಲಿನ ಅಧಿಕಾರಿಗಳ ಸಲಹೆಯಂತೆ ಕೊಪ್ಪಳದ ಹುಲಿಗಿಯಲ್ಲಿ ಅಣಬೆ ಬೇಸಾಯ ತರಬೇತಿ ಪಡೆದುಕೊಂಡರು. ತಮ್ಮ 60×40 ಚದರ ಅಡಿ ಜಾಗದಲ್ಲಿ ಸುಮಾರು 3 ಲಕ್ಷ ವೆಚ್ಚದಲ್ಲಿ ಕತ್ತಲೆ ಕೋಣೆ ಮತ್ತು ಬೆಳಕಿನ ಕೋಣೆಗಳುಳ್ಳ ವುಡನ್‌ ಶೆಡ್‌ ನಿರ್ಮಿಸಿಕೊಂಡು. ಹುಲ್ಲು ಕತ್ತರಿಸುವ ಯಂತ್ರ, ಹಸಿರು ನೆರಳಿನ ಪರದೆ, ನೀರು ಸಿಂಪಡಣೆಗೆ ಬೇಕಾದ ಸಲಕರಣೆಗಳನ್ನು ಕೊಂಡುಕೊಂಡು, ಶೆಡ್‌ನ‌ಲ್ಲಿಯೇ ನೀರಿನ ತೊಟ್ಟಿ ನಿರ್ಮಿಸಿಕೊಂಡರು. ಇಂದು ಒಣಹುಲ್ಲನ್ನು ಬಳಸಿಕೊಂಡು ರಾಸಾಯನಿಕ ಮುಕ್ತ ಅಣಬೆಯನ್ನು ಬೆಳೆಯುತ್ತಿದ್ದಾರೆ.

ಕೃಷಿ ವಿಧಾನ
ಒಂದೊಂದು ಇಂಚಿನಷ್ಟು ಅಳತೆಯ ನೆಲ್ಲು ಹುಲ್ಲನ್ನು ಕತ್ತರಿಸಿಕೊಂಡು, ಫಾರ್ಮಾಲಿನ್‌ ಹಾಗೂ ಕಾರ್ಬನ್‌ಡೈಜಿನ್‌ ಮಿಶ್ರಿತ ನೀರಿನಲ್ಲಿ ಕನಿಷ್ಠ 12 ಗಂಟೆಗಳವರೆಗೂ ನೆನೆಸಿಡುತ್ತಾರೆ. ತದನಂತರ ನೀರನ್ನೆಲ್ಲಾ ಬಸಿದು, ಇನ್ನೂ ಸ್ವಲ್ಪ ತೇವಾಂಶ ಇರುವಂತೆಯೇ 18- 20 ಇಂಚಿನಷ್ಟು ಉದ್ದದ ಪಾಲಿಥೀನ್‌ ಕವರಿನ ಚೀಲಗಳಲ್ಲಿ ಒಂದು ಇಂಚು ಹುಲ್ಲು, ತದನಂತರ ಅಣಬೆ ಬೀಜಗಳನ್ನು ಹಾಕಲಾಗುತ್ತದೆ. ಅದೇ ರೀತಿ ಪ್ರತಿ ಚೀಲಗಳಲ್ಲಿಯೂ ಮೂರರಿಂದ ನಾಲ್ಕು ಲೇಯರ್‌ಗಳನ್ನು ಮಾಡುತ್ತಾರೆ. ಕೊನೆಗೆ ಚೀಲವ‌ನ್ನು ಮುಚ್ಚಿ, ಗಾಳಿಗಾಗಿ ಸಣ್ಣ ಸಣ್ಣ ಕಿಂಡಿಗಳನ್ನು ಮಾಡಿ ಸುಮಾರು 30 ರಿಂದ 32 ಡಿಗ್ರಿ ಉಷ್ಣಾಂಶವಿರುವ ಹಸಿರು ಪರದೆಯುಳ್ಳ ಕತ್ತಲೆಯ ಕೋಣೆಯಲ್ಲಿಡುತ್ತಾರೆ. ಹೀಗೆ ಮಾಡಿಟ್ಟ ದಿನಾಂಕವನ್ನು ಗುರುತು ಮಾಡಿಟ್ಟುಕೊಳ್ಳುತ್ತಾರೆ. ಹದಿನೈದರಿಂದ ಇಪ್ಪತ್ತು ದಿನಗಳೊಳಗೆ ಫಾರ್ಮಲಿನ್‌ನಿಂದಾಗಿ ಹುಲ್ಲಿನ ಭಾಗವೆಲ್ಲಾ ಬಿಳಿಯಾಗಿರುತ್ತದೆ. ತದನಂತರ ಬೀಜ ಬಿತ್ತನೆಯಾಗಿರುವ ಪಾಲಿಥೀನ್‌ ಕವರಿನ ಚೀಲಗಳನ್ನು ಬೆಳಕಿನ ಕೋಣೆಗೆ ಸ್ಥಳಾಂತರಿಸುತ್ತಾರೆ. ಇಲ್ಲಿಂದ ದಿನಂಪ್ರತಿ ಮೂರು ಬಾರಿಯಂತೆ ನೀರನ್ನು ಸಿಂಪಡಿಸಬೇಕಾಗುತ್ತದೆ. ಇದಾಗಿ ನಾಲ್ಕೇ ದಿನಕ್ಕೆ ಅಣಬೆಯು ಕಟಾವಿಗೆ ಸಿದ್ಧವಾಗುತ್ತದೆ. ಆರಂಭಿಕ ಹಂತದಲ್ಲಿ ಮಾತ್ರ ಒಂದು ತಿಂಗಳಷ್ಟು ಸಮಯ ತೆಗೆದುಕೊಳ್ಳುತ್ತದೆಯಾದರೂ ನಂತರದ ಹಂತದಲ್ಲಿ ವಾರಕ್ಕೊಮ್ಮೆ ಕನಿಷ್ಠ ಮೂರು ಬಾರಿ ಫ‌ಸಲು ದೊರೆಯುತ್ತದೆ.

ಲಾಭದ ಲೆಕ್ಕಾಚಾರ
ಪಾಲಿಥೀನ್‌ ಬ್ಯಾಗ್‌ ಸಿದ್ಧಪಡಿಸುವುದು, ಹುಲ್ಲು ಕತ್ತರಿಸಿ ನೆನೆಸಿಡುವುದು, ಒಣಗಿಸಿ ಬೀಜ ಬಿತ್ತುವುದು, ನೀರು ಸಿಂಪಡಣೆ ಮುಂತಾದ ಸಣ್ಣ ಸಣ್ಣ ಕೆಲಸಗಳಿಗಾಗಿ ತಿಂಗಳಿಗೆ ಸುಮಾರು 5 ರಿಂದ 6 ಸಾವಿರಗಳಷ್ಟು ಖರ್ಚು ಬರುತ್ತದೆ. ದಿನಕ್ಕೆ ನಾಲ್ಕರಿಂದ ಆರು ಕಿಲೋಗಳಷ್ಟು ಆಯಿಸ್ಟರ್‌ ಮತ್ತು ಮಿಲ್ಕಿà ಅಣಬೆಯನ್ನು ಉತ್ಪಾದಿಸುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತೀ ಕಿಲೋಗೆ 300ರೂ. ದರ ಇದೆ. ಪ್ರತೀ ವಾರ ಕನಿಷ್ಠ 15,000 ರೂ.ಗಳಷ್ಟು ಆದಾಯ ದೊರೆಯುತ್ತಿದೆ. “ಇಲ್ಲೀವರೆಗೆ 1,500 ಕಿಲೋಗ್ರಾಂಗೂ ಅಧಿಕ ಆಯಿಸ್ಟರ್‌ ಅಣಬೆಯನ್ನು ಬೆಳೆದಿದ್ದೇನೆ. ಒಣಗಿದ ಅಣಬೆಗೂ ಒಳ್ಳೆಯ ಬೇಡಿಕೆಯಿದ್ದು ಪ್ರತೀ ಕಿಲೋಗೆ ಸುಮಾರು 1000 ರೂಗಳಷ್ಟು ಮಾರುಕಟ್ಟೆಯಿದೆ’ ಎನ್ನುತ್ತಾರೆ ವಾಣಿಶ್ರೀ.

ಪತಿ ಸಾಥ್‌
ವಾಣಿಶ್ರೀಯವರು ಬೆಳೆಯುತ್ತಿರುವ ಅಣಬೆ, ರಾಸಾಯನಿಕ ಮುಕ್ತವಾಗಿದೆ. ಪತಿ ವೀರೇಶ್‌ರವರು ಗಂಗಾವತಿ ಮತ್ತು ಹೊಸಪೇಟೆಯ ಹೋಟೆಲ್‌ಗ‌ಳಿಗೆ ಮತ್ತು ಅಣಬೆ ಖಾದ್ಯಪ್ರಿಯರ ಮನೆಬಾಗಿಲಿಗೆ ಅಣಬೆಯನ್ನು ತಲುಪಿಸುವ ಜವಾಬ್ದಾರಿಯನ್ನು ವಾಣಿಶ್ರೀಯವರ ಪತಿ ವೀರೇಶ್‌ ವಹಿಸಿಕೊಂಡಿದ್ದಾರೆ.

ಚಿತ್ರ-ಲೇಖನ: ಪ.ನಾ.ಹಳ್ಳಿ. ಹರೀಶ್‌ ಕುಮಾರ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.