ಹೆಸರು ತಿದ್ದುಪಡಿ


Team Udayavani, Aug 19, 2019, 5:00 AM IST

law-point3

ಹಳೆಯ ಹೆಸರು ಚೆನ್ನಾಗಿಲ್ಲ ಎಂದು ನಿರ್ಧರಿಸಿ, ಅದನ್ನು ಬದಲಿಸಲು ಗಟ್ಟಿ ಮನಸ್ಸು ಮಾಡಿ, ಕಡೆಗೊಮ್ಮೆ ಹೊಸ ಹೆಸರನ್ನು ಇಟ್ಟುಕೊಂಡ ಮೇಲೆ, ಈ ಕೆಳಕಂಡ ದಾಖಲೆಗಳಲ್ಲಿ ಹಳೆಯ ಹೆಸರಿಗೆ ಬದಲಾಗಿ ಹೊಸ ಹೆಸರಿನ ತಿದ್ದುಪಡಿಯನ್ನು ಕೂಡಲೇ ಮಾಡಿಸಬೇಕು.
1. ರಹದಾರಿ ಪತ್ರ (ಪಾಸ್‌ಪೋರ್ಟ್‌)
2. ಬ್ಯಾಂಕ್‌ ಖಾತೆಗಳು (ಸಾಲದ ಖಾತೆಯೂ ಸೇರಿದಂತೆ)
3. ಪಡಿತರ ಚೀಟಿ (ರೇಷನ್‌ ಕಾರ್ಡ್‌)
4. ವಾಹನ ಚಾಲನೆ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್‌) ಮತ್ತು ನೋಂದಣಿ ಪ್ರಮಾಣ ಪತ್ರ (ಆರ್‌.ಸಿ ಪುಸ್ತಕ)
5. ಮತದಾರರ ಪಟ್ಟಿ
6. ವಿಮಾ ಪಾಲಿಸಿಗಳು, ಭವಿಷ್ಯ ನಿಧಿ ಖಾತೆ ಹಾಗೂ ಸೇವಾ ದಾಖಲೆ (ಸರ್ವೀಸ್‌ ರಿಜಿಸ್ಟರ್‌)
7. ಷೇರುಗಳು, ಡಿಬೆಂಚರುಗಳು, ಯುನಿಟ್‌ಗಳು ಇತ್ಯಾದಿ
8. ಇತರ ಮುಖ್ಯವಾದ ದಾಖಲೆಗಳು

ಹೆಸರು ಬದಲಾಯಿಸುವುದಕ್ಕೆ ಮುಂಚೆಯೇ ನಿಮ್ಮಲ್ಲಿರುವ ಡಿಗ್ರಿ ಸರ್ಟಿಫಿಕೇಟುಗಳು, ಅಂಕಪಟ್ಟಿಗಳು, ಯೋಗ್ಯತಾ ಪತ್ರಗಳು, ಸನ್ನಡತೆಯ ಪ್ರಮಾಣ ಪತ್ರಗಳು, ಹಕ್ಕು ಪತ್ರಗಳು ಇತ್ಯಾದಿಗಳಲ್ಲಿ ಹೆಸರು ತಿದ್ದುಪಡಿ ಮಾಡಿಸಬೇಕಾದ ಅವಶ್ಯಕತೆ ಇಲ್ಲ. ಯಾರಾದರೂ ಈ ಮೇಲ್ಕಂಡ ದಾಖಲೆಗಳ ಬಗ್ಗೆ ಸಮಜಾಯಿಷಿ ಕೇಳಿದರೆ, ಆ ದಾಖಲೆ ಪತ್ರಗಳೊಂದಿಗೆ, ನೀವು ಹೆಸರು ಬದಲಾಯಿಸಿಕೊಂಡ ಪ್ರಮಾಣಿತ ಘೋಷಣೆಯ ಅಧಿಕೃತ ಪ್ರತಿಯೊಂದನ್ನು, ಲಗತ್ತಿಸಿದರೆ ಸಾಕು. ಇನ್ನುಮುಂದೆ ಪಡೆದುಕೊಳ್ಳುವ ಎಲ್ಲಾ ದಾಖಲೆಗಳನ್ನು ಮಾತ್ರ ನೀವು ಹೊಸ ಹೆಸರಿನಲ್ಲಿ ಪಡೆದುಕೊಳ್ಳಿ. ನಿಮ್ಮ ಹೊಸ ಹೆಸರಿನಲ್ಲಿ ಸಹಿ ಹಾಕುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡ ನಂತರವೇ ಹೆಸರು ಬದಲಾಯಿಸಿಕೊಳ್ಳಿ! ಇಲ್ಲದಿದ್ದರೆ, ನಿಮ್ಮ ಸಹಿಗಳಲ್ಲಿ ವ್ಯತ್ಯಾಸ ಕಂಡುಬಂದು, ನೀವು ತೊಂದರೆಗೆ ಒಳಗಾಗಬಹುದು. ಬ್ಯಾಂಕ್‌ ಖಾತೆಗಳ ಮಟ್ಟಿಗೆ ಹೇಳುವುದಾದರೆ, ಹಳೆಯ ಹೆಸರಿನ ಖಾತೆಗಳನ್ನು ಮುಚ್ಚಿ, ಹೊಸ ಹೆಸರಿನಲ್ಲಿ ಖಾತೆಗಳನ್ನು ತೆರೆದರೆ ಕಿರಿಕಿರಿ ಇರುವುದಿಲ್ಲ.

ಹೆಸರನ್ನು ಬದಲಾಯಿಸುವ ಕ್ರಮ ಹೇಗೆ?
ಸರ್ಕಾರಿ ನೌಕರ, ವೃತ್ತಿನಿರತ ವಕೀಲ, ಪ್ರೌಢಶಾಲೆಯ ವಿದ್ಯಾರ್ಥಿ ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಸಾಮಾನ್ಯ ಪೌರನೊಬ್ಬ ಹೆಸರು ಬದಲಾಯಿಸಲು ಯಾವ ಕಾನೂನೂ ಇಲ್ಲ. ಯಾವ ನಿಯಮಗಳೂ ಇಲ್ಲ. ವಿವಿಧ ವರ್ಗಗಳಿಗೆ ಅನ್ವಯವಾಗುವ ಕ್ರಮಗಳು ಹೀಗಿವೆ:
1. ಸಾಮಾನ್ಯ ಪೌರ
ನೀವು ಮಾಡಬೇಕಾದುದು ಇಷ್ಟು. ಇಪ್ಪತ್ತು ರು. ಛಾಪಾ ಕಾಗದವನ್ನು ನಿಮ್ಮ ಹಳೆಯ ಹೆಸರಿನಲ್ಲಿ ತೆಗೆದುಕೊಂಡು ಅದರಲ್ಲಿ ಪ್ರಮಾಣಿತ ಘೋಷಣೆಯನ್ನು ಬರೆದು, ಹಳೆಯ ಮತ್ತು ಹೊಸ ಹೆಸರಿನಲ್ಲಿ ಸಹಿಗಳನ್ನು ಮಾಡಿ, ವಕೀಲರೊಬ್ಬರಿಂದ ಗುರುತಿನ ಸಹಿ ಹಾಕಿಸಿ, ನೋಟರಿಯ ಮುಂದೆ ಪ್ರಮಾಣ ಮಾಡಬೇಕು (ನಿಮ್ಮ ಊರಿನಲ್ಲಿ ನೋಟರಿ ಇಲ್ಲದಿದ್ದರೆ ಮ್ಯಾಜಿಸ್ಟ್ರೇಟರ ಮುಂದೆ ಪ್ರಮಾಣ ಮಾಡಬೇಕು). ಅವರು ಆ ಪತ್ರಕ್ಕೆ ನೊಟೇರಿಯಲ್‌ ಸ್ಟಾಂಪ್‌, ಅವರ ಮೊಹರು ಹಾಗೂ ಸಹಿಯನ್ನು ಹಾಕುತ್ತಾರೆ. ಆ ಪತ್ರದ ಹತ್ತು ಹದಿನೈದು ಜೆರಾಕ್ಸ್‌ ಪ್ರತಿಗಳನ್ನು ಮಾಡಿಸಿ, ಆ ಪತ್ರಗಳೆಲ್ಲವಕ್ಕೂ ಅದೇ ನೋಟರಿಯ ಹತ್ತಿರ (ಅವರು ಸಿಗದಿದ್ದರೆ ಇನ್ನೊಬ್ಬರು ನೋಟರಿಯ ಹತ್ತಿರ) “ನಿಜಪ್ರತಿ’ ಎಂದು ಸಹಿ ಹಾಕಿಸಿಟ್ಟುಕೊಳ್ಳಿ. ಅವಶ್ಯಕತೆ ಬಿದ್ದಾಗ ಈ ನಕಲನ್ನು ಮಾತ್ರ ಕೊಡಿ. ಮೂಲ ಪತ್ರವನ್ನು ಫೈಲ್‌ ಮಾಡಿ ಇಟ್ಟುಕೊಳ್ಳಿ. ನೀವು ಮೈನರ್‌ ಆಗಿದ್ದರೆ ನಿಮ್ಮ ಪರವಾಗಿ ನಿಮ್ಮ ತಂದೆ/ ತಾಯಿ/ ಪೋಷಕರು ಹೆಸರು ಬದಲಾವಣೆ ಕುರಿತು ಸ್ಪಷ್ಟನೆ ನೀಡಬೇಕು.

-ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.