ಒಂದ್ ಮಸ್ಸಾಲೇ….!
Team Udayavani, Oct 30, 2017, 11:49 AM IST
ಚಿತ್ರದುರ್ಗಕ್ಕೆ ಹೋದವರು ಚನ್ನಗಿರಿ ಹೋಟೆಲಿನ ಮಸಾಲೆದೋಸೆ ತಿನ್ನದೇ ಮರಳಲಾರರು! ಇಡೀ ಚಿತ್ರದುರ್ಗಕ್ಕೆ ಹೆಸರಾಗಿರುವ ಹೋಟೆಲ್ ಇದು. ಸ್ವಾರಸ್ಯವೆಂದರೆ, ಕೃಷ್ಣಭವನ ಎಂಬ ಒರಿಜಿನಲ್ ಹೆಸರಿಗಿಂತ ಚನ್ನಗಿರಿ ಹೋಟೆಲ್ ಎಂಬ ಅಡ್ಡ ಹೆಸರೇ ಜನಪ್ರಿಯವಾಗಿದೆ….
ಬಿಸಿ ಬಿಸಿ, ಗರಿಗರಿ ಮಸಾಲೆ ದೋಸೆಯ ಪರಿಮಳ ದಾರಿ ಹೋಕರ ಮೂಗಿಗೆ ಸೋಕಿದೊಡನೆ ಬಾಯಲ್ಲಿ ನೀರೂರಿ ಹೋಟೆಲ್ ಕಡೆಗೆ ದಾರಿ ತೋರುತ್ತದೆ. ಆ ವೇಳೆಗೆ ಹೊಟ್ಟೆ ಚುರುಕುಗೊಂಡು ಮೆದುಳಿಗೆ ಬುದ್ದಿ ಹೇಳಿ ಬೇಗ ನಡೆ ಚನ್ನಗಿರಿ ಹೋಟೆಲ್ಗೆ ಎಂದು ಸೂಚನೆ ನೀಡುತ್ತದೆ. ಹೋಟೆಲ್ ನ ಯಾವುದೋ ಒಂದು ಕೋಣೆಯಲ್ಲಿ ದೋಸೆಯ ಘಮ ಮೂಗಿಗೆ ಬಡಿಯುತ್ತಿರುತ್ತದೆ. ಹೋಟೆಲ್ ಗೆ ಕಾಲಿಡುವ ಪ್ರತಿಯೊಬ್ಬರೂ ಹಿಂದೆ ಮುಂದೆ ಯೋಚಿಸದೆ ಒಂದು ಮಸಾಲೆ ದೋಸೆ ಅರ್ಡರ್ ಮಾಡಿ ಇಪ್ಪತ್ತು ನಿಮಿಷದ ನಂತರ ಸಂತೃಪ್ತಿಯಿಂದ ತಿಂದು ಹೊಟ್ಟೆ ಸವರಿಕೊಂಡು ಹೊರ ನಡೆಯುತ್ತಾರೆ. ಇದು ಕಳೆದ 65 ವರ್ಷಗಳಿಂದ ಇದು ನಡೆದುಕೊಂಡು ಬಂದಿರುವ ಪರಿ.
ಚಿತ್ರದುರ್ಗ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಪೂರ್ವ ದಿಕ್ಕಿಗೆ ಬಂದರೆ ದೊಡ್ಡ ಸರ್ಕಲ್ ಗಾಂಧಿ ವೃತ್ತ ಸಿಗಲಿದೆ. ಅಲ್ಲಿಂದ ಉತ್ತರ ದಿಕ್ಕಿಗೆ ಮದೇಹಳ್ಳಿ ರಸ್ತೆ ಮೂಲಕ ಹತ್ತಾರು ಹೆಜ್ಜೆ ಇಟ್ಟರೆ ಬಲಗಡೆ ದೊಡ್ಡ ಅರಳಿ ಮರವಿದೆ. ಆ ಮರದ ಸಮೀಪವೇ ಚನ್ನಗಿರಿ ಹೋಟೆಲ್ ಇದೆ. ದೋಸೆಯ ಜೊತೆಯಲ್ಲಿ ಕೊಡುವ ಕಡ್ಲೆ ಕಾಯಿ ಮತ್ತು ಉರಿಗಡಲೆ ಚಟ್ನಿ, ಪಲ್ಯ, ದೋಸೆಯಲ್ಲಿ ವಿಶೇಷ ಸ್ವಾದ ಅಡಗಿರುತ್ತದೆ. ಬಾಯಲ್ಲಿಟ್ಟ ತಕ್ಷಣ ಮಸಾಲೆ ದೋಸೆ ಮೃದುವಾದ ಬೆಣ್ಣೆಯಂತೆ ಕರಗಿ ಹೊಟ್ಟೆ ಸೇರುತ್ತದೆ.
ಈ ಹೋಟೆಲ್ನಲ್ಲಿ ಸ್ವತ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. ಹೋಟೆಲ್ ಒಳಗೆ ಕಾಲಿಡುತ್ತಿದ್ದಂತೆಯೇ ಒಳಗಡೆ ಎಲ್ಲೂ ಕಸ ಕಾಣುವುದಿಲ್ಲ. ಪ್ಲೇಟ್, ಲೋಟ, ಚಮಚಗಳೆಲ್ಲವೂ ಶುಭಾತಿ ಶುಭ್ರ. ದೋಸೆಯ ದರವೂ ದುಬಾರಿ ಅಲ್ಲ. ಕೇವಲ 35 ರೂ.ಗೆ ಗರಿಗರಿ ಮಸಾಲೆ ದೋಸೆ ಲಭ್ಯ.
ೋಟೆಲ್ ಮುಂದಾಗಲಿ, ತಿಂಡಿ ತಿಂದಾಗ ನೀಡುವ ಬಿಲ್ ನಲ್ಲಾಗಲಿ ಎಲ್ಲೂ ಚನ್ನಗಿರಿ ಹೋಟೆಲ್ ಎಂದು ನಮೂದಾಗಿಲ್ಲ. ಆದರೂ ಚಿತ್ರದುರ್ಗದ ಜನರಿಗೆ ಚನ್ನಗಿರಿ ಹೋಟೆಲ್ ಎಂದರೆ ಮಾತ್ರ ತಿಳಿಯುತ್ತದೆ. ಸ್ವರಸ್ಯವೇನು ಗೊತ್ತೆ? “ಚನ್ನಗಿರಿ ಹೋಟೆಲ್’ ಎಂದು ಮಾಲೀಕರು ಇಟ್ಟ ಹೆಸರಲ್ಲ. ಹಳ್ಳಿಯ ಜನತೆ 65 ವರ್ಷಗಳ ಹಿಂದೆಯೇ ಪ್ರೀತಿಯಿಂದ ಇಟ್ಟ ಹೆಸರು ಇದು. ಆ ಹೆಸರಿನಿಂದಲೇ ಹೋಟೆಲನ್ನು ಈಗಲೂ ಗುರುತಿಸಲಾಗುತ್ತದೆ.
ಹೋಟೆಲ್ ಮಾಲೀಕರು ಕುಂದಾಪುರದವರು. ಅಲ್ಲಿಂದ ಚನ್ನಗಿರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದರು. ಆಗ ಇಲ್ಲಿನವರಿಗೆ ಕುಂದಾಪುರ ಎನ್ನುವ ಹೆಸರಿನ ಉಚ್ಚಾರ ಕಷ್ಟವಾಗುತ್ತಿದ್ದರಿಂದ ಹೋಟೆಲ್ ಮಾಲಿಕರು ಚನ್ನಗಿರಿ ಮಾರ್ಗವಾಗಿ ಬರುತ್ತಿದ್ದುದರಿಂದ ಅದನ್ನು ಚನ್ನಗಿರಿ ಹೋಟೆಲ್ ಎಂದು ಕರೆದರು. ಮುಂದೆ ಆ ಹೆಸರೇ ಕಾಯಂ ಆಯಿತು. ಆ ಹೋಟೆಲ್ನ ಮೂಲ ಹೆಸರು ಶ್ರೀಕೃಷ್ಣ ಭವನ.
ಆನಂದರಾವ್ ಮುಳ್ಳೂರು ಈ ಹೋಟೆಲಿನ ಮೂಲ ಮಾಲೀಕರು. ಇವರು 1952ರಲ್ಲಿ ಚಿತ್ರದುರ್ಗಕ್ಕೆ ಆಗಮಿಸಿ 60*25 ಅಳತೆಯ ಕಟ್ಟಡ ಬಾಡಿಗೆ ಪಡೆದು ಶ್ರೀಕೃಷ್ಣ ಭವನ ಆರಂಭಿಸಿದರು. ಇವರ ನಂತರ ಇವರ ಬಂಧುಗಳಾದ ಕೃಷ್ಣಮೂರ್ತಿ ಐತಾಳ್ ನಿರ್ವಹಿಸಿದರು. ಇವರ ನಂತರ ಇವರ ಬಂಧು ಯು.ಪರಮೇಶ್ವರ್ ಅವರು ಈಗ ಈ ಹೋಟೆಲ್ ನೆಡೆಸುತ್ತಿದ್ದಾರೆ. ಕಳೆದ 42 ವರ್ಷಗಳಿಂದ ಇದೇ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಪರಮೇಶ್ವರ್ಗೆ ಒಮ್ಮೆ ಒಂದು ದಿನ ಕೃಷ್ಣಮೂರ್ತಿ ಐತಾಳ್ ಅವರು ಈ ಹೋಟೆಲ್ ಅನ್ನುವಹಿಸಿಕೊಟ್ಟರು. ಅಲ್ಲಿಂದ ಇವರು ಈ ಹೋಟೆಲ್ ನಡೆಸುತ್ತಿದ್ದಾರೆ.
ಹರಿಯಬ್ಬೆ ಹೆಂಜಾರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು