ಅತಿಕ್ರಮ ಪ್ರವೇಶ


Team Udayavani, Sep 23, 2019, 5:27 AM IST

shutterstock_1399634222

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುವ ಹೆಚ್ಚಿನ ವ್ಯಾಜ್ಯಗಳಲ್ಲಿ ಅತಿಕ್ರಮ ಪ್ರವೇಶದ್ದೇ ಬಹುಪಾಲು ಇರುತ್ತದೆ. ಜಮೀನು ಒತ್ತುವರಿಯಾಯಿತೆಂದೋ, ಅತಿಕ್ರಮ ಪ್ರವೇಶ ಆಯಿತೆಂದೋ ಕಲಹ ಉಂಟಾಗಿ, ಕೇಸ್‌ ಆಗಬಹುದು. ಅಥವಾ ಈ ಸಂಬಂಧದ ಜಗಳ ತಾರಕಕ್ಕೇರಿ, ಕಡೆಗೆ ಹೊಡೆದಾಟ ಶುರುವಾಗಿ ಯಾರಾದರೊಬ್ಬನ ಮರಣದಲ್ಲಿ ಪರ್ಯಾವಸಾನವಾಗುವುದು ಈ ದಿನಗಳಲ್ಲಿಯೂ ಸರ್ವೆ ಸಾಮಾನ್ಯ. ಈಗ ಕೆಳಗಿನ ಉದಾಹರಣೆಗಳನ್ನು ಗಮನಿಸಿ.

ನಿಮ್ಮ ಜಮೀನು, ನೀವೇ ಸ್ವಾಧೀನದಲ್ಲಿದ್ದೀರಿ. ನಿಮ್ಮ ಜಮೀನಿನ ಮೇಲೆ ದುರುದ್ದೇಶದಿಂದ ಇನ್ನೊಬ್ಬ ಅತಿಕ್ರಮ ಪ್ರವೇಶ ಮಾಡಿ ಅದನ್ನು ಸ್ವಾಧೀನಕ್ಕೆ ಪಡೆಯಲು ಯತ್ನಿಸುತ್ತಾನೆ. ನಿಮ್ಮ ಮೇಲೆ ಹಲ್ಲೆ ಮಾಡುತ್ತಾನೆ. ಇಂಥ ಸಂದರ್ಭದಲ್ಲಿ, ನಿಮಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ.

ಇನ್ನೊಂದು ಉದಾಹರಣೆ ನೋಡಿ- ಜಮೀನು ನಿಮ್ಮದೇ ಆಗಿರಬಹುದು. ಸ್ವಾಧೀನ ನಿಮ್ಮಲ್ಲಿಲ್ಲ. ಏಕೆಂದರೆ ಇನ್ನೊಬ್ಬ ಅದನ್ನು ಅತಿಕ್ರಮ ಪ್ರವೇಶ ಮಾಡಿ ಬಹಳ ದಿವಸಗಳಿಂದ ಆಕ್ರಮಿಸಿಕೊಂಡಿದ್ದಾನೆ. ಈ ಆಕ್ರಮಣವನ್ನು ನೀವು ಕಾನೂನು ರೀತ್ಯ ತೆರವುಗೊಳಿಸಬೇಕೇ ಹೊರತು, ಜಮೀನಿಗೆ ನುಗ್ಗಿ ಅತಿಕ್ರಮ ಪ್ರವೇಶ ಮಾಡಿದವನ ಮೇಲೆ ಆಕ್ರಮಣ ನಡೆಸುವ ಹಾಗಿಲ್ಲ. ಹಾಗೆ ನೀವು ಅವನ ಮೇಲೆ ಹಲ್ಲೆ ಮಾಡಿದ್ದೇ ಆದರೆ, ಹಾಗೆ ಮಾಡಿ ಅವನಿಗೆ ಪ್ರಾಣಭಯವನ್ನು ಉಂಟುಮಾಡಿದರೆ, ಆ ವ್ಯಕ್ತಿ ತನ್ನ ರಕ್ಷಣೆಗಾಗಿ ನಿಮಗೆ ಪೆಟ್ಟು ಕೊಡಬಹುದು, ಗಾಯ ಮಾಡಬಹುದು. ಇಲ್ಲ ಮರಣವೇ ಸಂಭವಿಸಬಹುದು. ಆದರೆ ಆ ವ್ಯಕ್ತಿ ಅಪರಾಧ ಮಾಡಿದ ಹಾಗಾಗುವುದಿಲ್ಲ. ಅವನು ಏನೇ ಮಾಡಿದರೂ ಅದು ಆತ್ಮರಕ್ಷಣೆಗಾಗಿ ಎನ್ನಿಸಿಕೊಳ್ಳುತ್ತದೆ.

ಇವೆರಡೂ ಉದಾಹರಣೆಗಳಲ್ಲಿ ಎಚ್ಚರಿಕೆಯಿಂದ ಗಮನಿಸಬೇಕಾದುದು ಏನೆಂದರೆ, ಮೊದಲನೇ ಸಂದರ್ಭದಲ್ಲಿ ಜಮೀನಿನ ಮಾಲೀಕರು ನೀವು, ಜಮೀನು ನಿಮ್ಮ ಸುಪರ್ದಿಯಲ್ಲೇ ಇದೆ. ಅತಿಕ್ರಮ ಪ್ರವೇಶ ಮಾಡಿದವನ ಮೇಲೆ ನಿಮಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ಆದರೆ ಅವಶ್ಯಕತೆಗಿಂತ ಹೆಚ್ಚಾಗಿ ಪೆಟ್ಟು ಕೊಡಬೇಡಿ. ಅತಿಕ್ರಮ ಪ್ರವೇಶವನ್ನು ತಡೆಗಟ್ಟಿ, ಅವನನ್ನು ಜಮೀನಿನಿಂದ ತೆರವುಗೊಳಿಸಿದ ಮೇಲೂ ಅವನನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯಬೇಡಿ.

ಎರಡನೆಯ ಉದಾಹರಣೆಯಲ್ಲಿಯೂ ಜಮೀನು ನಿಮ್ಮದೇ. ಆದರೆ ಸ್ವಾಧೀನ ನಿಮ್ಮಲ್ಲಿಲ್ಲ. ಹೇಗೋ, ಬಹಳ ದಿವಸಗಳಿಂದ ನಿಮ್ಮ ಕೈತಪ್ಪಿಹೋಗಿದೆ. ಅತಿಕ್ರಮಣಕಾರ ತಳ ಊರಿದ್ದಾನೆ. ಇಂಥವನನ್ನು ಹೊರದಬ್ಬಬೇಕಾದರೆ ಕಾನೂನು ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ನೀವೇ ನುಗ್ಗಿ ಬಲಪ್ರಯೋಗ ಮಾಡುವ ಹಾಗಿಲ್ಲ. ಇವೆಲ್ಲಾ ಸಂಗತಿಗಳನ್ನು ನೆನಪಿಟ್ಟುಕೊಂಡು, ಕಾನೂನಿನ ಮೊರೆ ಹೋದರೆ, ಗದ್ದಲ, ಗಲಭೆ, ಹೊಡೆದಾಟ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಜಗಳ ವಿಕೋಪಕ್ಕೆ ಹೋಗಿಬಿಟ್ಟರೆ ಪರಿಣಾಮ ಏನು ಬೇಕಾದರೂ ಆಗಿಬಿಡಬಹುದು. ಅಂತ ಸಂದರ್ಭದಲ್ಲಿ ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಂಡು ಅವರ ಅತಿಥಿಗಳಾಗುವುದು ತಪ್ಪುತ್ತದೆ.

-ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.