ಪಂಚಾಮೃತ ಘಳಿಗೆ!


Team Udayavani, Aug 19, 2019, 5:00 AM IST

zero-budget-daalimbe-(1)

ನಿರಂತರ ರಾಸಾಯನಿಕ ಗೊಬ್ಬರ, ಔಷಧದ ಬಳಕೆಯಿಂದ ಬರಡಾಗಿದ್ದ ಕೃಷಿ ಭೂಮಿಯಲ್ಲಿ ಪಂಚಾಮೃತ ಬಳಕೆಯಂಥ ಸಾವಯವ ಕೃಷಿ ವಿಧಾನಗಳಿಂದ ಸಮೃದ್ಧವಾಗಿ ಬೆಳೆಯುತ್ತಿದೆ ದಾಳಿಂಬೆ ಮತ್ತು ಶ್ರೀಗಂಧ.

ವರ್ಷದಲ್ಲಿ ಬಹುಕಾಲ ನೀರಿನ ಅಭಾವ ಮತ್ತು ಬರಗಾಲವನ್ನು ಎದುರಿಸುವ ಪ್ರದೇಶ, ಬಯಲುಸೀಮೆ ಬಳ್ಳಾರಿಯ ಕೊಟ್ಟೂರು. ಈ ಊರಿನಿಂದ ಸುಮಾರು 4 ಕಿ.ಮೀ ದೂರದ ಇಟ್ಟಿಗೆ ರಸ್ತೆಯಲ್ಲಿರುವ ಎಕರೆಗಟ್ಟಲೆ ಪ್ರದೇಶದಲ್ಲಿ ರೈತರೊಬ್ಬರು, ರಾಸಾಯನಿಕಮುಕ್ತ ಹಾಗೂ ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿ ದಾಳಿಂಬೆ ಮತ್ತು ಶ್ರೀಗಂಧ, ಮಹೋಗನಿ, ಜಂಬು ನೇರಳೆ ಬೆಳೆಯುತ್ತಿದ್ದಾರೆ.

ಪಂಚಾಮೃತ ಮತ್ತು ನೈಸರ್ಗಿಕ ಕೀಟನಾಶಕ
ಪಂಚಾಮೃತವನ್ನು ಸಸಿಗಳ ಮೇಲೆ ಸಿಂಪಡಣೆ ಜೊತೆಗೆ ಹನಿ ನೀರಾವರಿ (ಡ್ರಿಪ್‌) ಮೂಲಕ ಬೇರುಗಳಿಗೂ ತಲುಪಿಸುತ್ತ 17 ಎಕರೆಯಲ್ಲಿ ದಾಳಿಂಬೆ, 8 ಎಕರೆಯಲ್ಲಿ ಶ್ರೀಗಂಧ, ರಕ್ತ ಚಂದನ, ಮಹೋಗನಿ, ಜಂಬೂ ನೇರಳೆಯಂಥ ಅರಣ್ಯ ಕೃಷಿಯನ್ನೂ ನಡೆಸುತ್ತಿದ್ದಾರೆ. ಇವರು ನಡೆಸುತ್ತಿರುವ ರಾಸಾಯನಿಕ ಮುಕ್ತ, ಸಾವಯವ ಪದ್ಧತಿಯಿಂದ ಕೃಷಿಭೂಮಿಯ ಸತ್ವ ಹೆಚ್ಚಾಗಿ, ಬೆಳೆಯಲ್ಲಿಯೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಿ ಸಮೃದ್ಧವಾಗಿ ಬೆಳೆಯಬಹುದು ಎನ್ನುವುದು ರೈತ ಬರಮನಗೌಡ ಅವರ ಅಭಿಪ್ರಾಯ. ಜೊತೆಗೆ ಕಿಲಾರಿ, ಗಿರ್‌, ಮಲೆನಾಡ ಗಿಡ್ಡ ತಳಿಯ ಆಕಳು ಸಾಕಾಣಿಕೆ ನಡೆಸುತ್ತಾ ಅದರಿಂದ ಸಿಗುವ ಗಂಜಲ, ಸಗಣಿಯನ್ನು ಉಪಯೋಗಿಸುತ್ತ ಪಂಚಾಮೃತವನ್ನು ಸಹ ತಾವೇ ತಯಾರಿಸಿಕೊಂಡು, ಕೀಟ ನಿರ್ವಹಣೆಗೆ ರಾಸಾಯನಿಕಮುಕ್ತ ಸೋಲಾರ್‌ ಕೀಟನಾಶಕ ಯಂತ್ರವನ್ನು ಅಳವಡಿಸಿಕೊಂಡು, ಯಾವುದೇ ರಾಸಾಯನಿಕ ಬಳಸದೆ ಸಂಪೂರ್ಣ ಸಾವಯವ ಕೃಷಿ ನಡೆಸುವುದರ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆ.

ಜಲಸಂರಕ್ಷಣೆ ಕುರಿತು ಕಾಳಜಿ
ನೀರಾವರಿ ವ್ಯವಸ್ಥೆಗೆ 3 ಬೋರ್‌ವೆಲ್‌ ಮೂರು ಕೃಷಿಹೊಂಡವನ್ನು ಹೊಂದಿದ್ದು ಜೊತೆಗೆ ತಮ್ಮ ಜಮೀನಿನಲ್ಲಿ 2- 4 ಎಕರೆ ಪ್ರದೇಶದಲ್ಲಿ ಒಂದು ಸಣ್ಣ ಕೆರೆ ನಿರ್ಮಾಣ ಮಾಡುವ ಯೋಜನೆಯೂ ಇದೆ. ಇದರಿಂದಾಗಿ ಮಳೆನೀರು ಶೇಖರಣೆ ಮಾಡಿ ಸುತ್ತಮುತ್ತಲಿನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ರೂಪಿಸುವುದು ಒಂದು ಉಪಯೋಗ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿ ಬೋರ್‌ವೆಲ್‌ಗ‌ಳು ಸಹ ರೀಚಾರ್ಜ್‌ ಆಗಲು ಅನುಕೂಲವಾಗುವುದು. ಈ ರೀತಿಯಾಗಿ ಸಾವಯವ ಪದ್ಧತಿ ಅಳವಡಿಸಿಕೊಂಡಿರುವುದರ ಹಿಂದೆ ಭೂಮಿಯ ಸತ್ವ ಉಳಿಸಿಕೊಂಡು ಅತಿ ಹೆಚ್ಚು ಇಳುವರಿ ಪಡೆಯುವುದರ ಜೊತೆಗೆ ವಿಷಮುಕ್ತ ಆಹಾರವನ್ನು ಸಮಾಜಕ್ಕೆ ಒದಗಿಸುವ ಕಾಳಜಿಯೂ ಇದೆ.

ಗೋನಂದಜಲದ ಬಳಕೆ
ಅವರು ತಮ್ಮ ಭೂಮಿಯನ್ನು ಫ‌ಲವತ್ತಾಗಿಸಲು ಗೋನಂದಜಲವನ್ನು ಬಳಸುತ್ತಾರೆ. ಗೋನಂದ ಜಲ ಎಂದರೆ ಅಂದರೆ ಕಾರಣಾಂತರಗಳಿಂದ ಸತ್ತುಹೋದ ಗೋವನ್ನು ಗೊಬ್ಬರವಾಗಿಸುವ ಪ್ರಕ್ರಿಯೆ. ಸತ್ತ ಗೋವಿನ ದೇಹದ ಜೊತೆಗೆ ಹುಳಿ ಮಜ್ಜಿಗೆ, ಗೋಮೂತ್ರ, ಬೆಲ್ಲ , ಪಪ್ಪಾಯಿ ಕಾಯಿ ಇವೆಲ್ಲವನ್ನೂ ಒಟ್ಟಾಗಿ ಒಂದು ತೊಟ್ಟಿಯಲ್ಲಿ ಶೇಖರಿಸುವುದು. (ದೇಹ 100 kg ತೂಕವಿದ್ದರೆ, 100 ಲೀಟರ್‌ ಗೋಮೂತ್ರ, 100 ಲೀಟರ್‌ ಹುಳಿ ಮಜ್ಜಿಗೆ, 50kg ಬೆಲ್ಲ, 50kg ಪಪ್ಪಾಯಿ ಕಾಯಿ) ಆ ತೊಟ್ಟಿಯ ಬಾಯಿಯನ್ನು ಒಂದು ಬಟ್ಟೆಯಿಂದ ಮುಚ್ಚಿಟ್ಟು 5- 6 ತಿಂಗಳು ಅದ ನಂತರ ಅದನ್ನು ಕದಡಿದಾಗ ಸ್ಲರಿ (ನಂದಜಲ) ಸಿಗುತ್ತದೆ. ಇದು ದುರ್ವಾಸನೆ ಬೀರುತ್ತದೆಯೇ ಎನ್ನುವುದು ಅನೇಕರ ಪ್ರಶ್ನೆಯಾಗಿರುತ್ತದೆ. ಆದರೆ ದುರ್ವಾಸನೆಯನ್ನು ತೊಡೆದುಹಾಕಲೆಂದೇ ಪಪ್ಪಾಯಿಕಾಯಿಯನ್ನು ಬಳಸುವುದು. ಹೀಗಾಗಿ ದುರ್ವಾಸನೆ ಬೀರುದು.

ರೈತ- ಬರಮನ ಗೌಡ ಪಾಟೀಲ್‌
ಸ್ಥಳ- ಕೊಟ್ಟೂರು, ಬಳ್ಳಾರಿ
ಸಿನ್ಸ್‌- 2014

– ನಾಗರಾಜ ಗೌಡ
ಹೆಚ್ಚಿನ ಮಾಹಿತಿಗಾಗಿ 8073429771

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.