ಪರಶುರಾಮರ ಪವರ್‌ಫ‌ುಲ್‌ ಚರಿತೆ


Team Udayavani, Jan 29, 2018, 12:40 PM IST

29-23.jpg

ಎಂಬಿಎ ಮುಗಿಸಿರುವ ಬಾಗಲಕೋಟೆಯ ಎಸ್‌.ಎಂ.ಪರಶುರಾಂ 12 ತಿಂಗಳ ಹಿಂದಷ್ಟೇ ತಮ್ಮ ಮನೆಗೆ ಸೋಲಾರ್‌ ಪ್ಯಾನೆಲ್‌ ಹಾಕಿದ್ದಾರೆ. 30ಕೆ ಸಾಮರ್ಥ್ಯದ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದಾರೆ. ಬೆಸ್ಕಾಂ ಜೊತೆ 25 ವರ್ಷದ ಒಪ್ಪಂದದ ಅನುಸಾರ ಯೂನಿಟ್‌ಗೆ 6.61 ರೂ. ಖರೀದಿಯೂ ಆಗುತ್ತದೆ. ಮಹಾ ಸಿಮೆಂಟ್‌ನಲ್ಲಿ ಮಾರುಕಟ್ಟೆ ವ್ಯವಸ್ಥಾಪಕರಾಗಿರುವ ಪರಶುರಾಂ,
ಊರೂರು ತಿರುಗುವವರು. ದಾವಣಗೆರೆಯ ಬಿ.ಎಂ. ಬಸಪ್ಪರೆಡ್ಡಿ, ಚಿತ್ರದುರ್ಗದ ಹಲವು ಗ್ರಾಹಕರು ಸೇರಿದಂತೆ ಹತ್ತಾರು ಜನರನ್ನು ಭೇಟಿ ಮಾಡಿದ್ದಾರೆ. ಸೋಲಾರ್‌ ರೂಫ್ ಟಾಪ್‌ ಸ್ಥಾವರಗಳನ್ನು ವೀಕ್ಷಿಸಿದ್ದಾರೆ. ಈ ಅನುಭವದ ಆಧಾರದಲ್ಲಿ ಅವರು ಯಾವುದೇ ಕಂಪನಿಗೆ ಪ್ರಾಜೆಕ್ಟ್ ಗುತ್ತಿಗೆ ಕೊಡಲಿಲ್ಲ. ನೇರವಾಗಿ ಅವರೇ ಸೋಲಾರ್‌ ಪ್ಯಾನೆಲ್‌ನಿಂದ ಹಿಡಿದು ಬೇಕಾದುದೆಲ್ಲವನ್ನು ಅಳವಡಿಸಿಕೊಂಡರು. 

ಆದ ಲಾಭ?
ಇಡೀ ಯೋಜನೆಯ ವೆಚ್ಚದಲ್ಲಿ ಬರೋಬ್ಬರಿ 5 ಲಕ್ಷ ರೂ.ಗಳ ಉಳಿತಾಯವಾಗಿದೆ! ಇದನ್ನು ಹೀಗೂ ವಿವರಿಸಬಹುದು. ಒಂದು ಕಿಲೋ
ವ್ಯಾಟ್‌ಗೆ 85 ಸಾವಿರ ರೂ.ಗಳಷ್ಟು ವೆಚ್ಚವಾಗುತ್ತದೆ. ಗುಣಮಟ್ಟದ ವಿಚಾರದಲ್ಲಿ ಕೇಂದ್ರದ ಅಸಂಪ್ರದಾಯಿಕ ಇಂಧನ ಇಲಾಖೆ ಕೆಲವು ಷರತ್ತುಗಳನ್ನು ಹಾಕಿರುತ್ತದೆ. ವಿದ್ಯುತ್‌ ಪ್ರಸರಣ ಕಂಪನಿ ತನ್ನ ಕಡೆಯಿಂದ ಶಿಫಾರಸಾದ ಕಂಪನಿಗಳ ಉತ್ಪನ್ನಗಳನ್ನೇ ಬಳಸಿ ಈ ಸ್ಥಾವರ ಸ್ಥಾಪಿಸಿದ್ದರೆ ಮಾತ್ರ “ಎಸ್‌’ ಅನ್ನುತ್ತದೆ. ಸ್ವಾರಸ್ಯ ಎಂದರೆ, ನಾವೇ ಬಿಡಿಬಿಡಿ ವಸ್ತುಗಳನ್ನು ಖರೀದಿಸಿ ಕೆಲಸ
ಮಾಡಿಸಲು ಹೋದರೆ ಖರೀದಿಯಿಂದ ಕೆಲಸ ಜಾಸ್ತಿಯಾಗಬಹುದು. ಆದರೆ ಗುಣಮಟ್ಟ ಇನ್ನಷ್ಟು ಸುಧಾರಿಸುತ್ತದೆ. ಇದೇ ಕಾಲಕ್ಕೆ ಕಿಲೋ ವ್ಯಾಟ್‌ನ ಖರ್ಚಿನಲ್ಲಿ 55ರಿಂದ 60 ಸಾವಿರದಷ್ಟು ದೊಡ್ಡ ಮೊತ್ತದ ಹಣ ಉಳಿತಾಯವಾಗುತ್ತದೆ. ಬಾಗಲಕೋಟೆಯ 63ಎ ಸೆಕ್ಟರ್‌ ಬೃಂದಾವನ ಹೊಸಮನೆಯಲ್ಲಿ ನಡೆಸಿದ ಈ ಪ್ರಯೋಗದ ಫ‌ಲ ಇತರ ಸಂಭಾವ್ಯ ಸೋಲಾರ್‌ ರೂಫ್ಟಾಪ್‌ಉತ್ಪಾದಕರಿಗೂ  ಸಿಗಬೇಕು ಎಂಬುದು ಪರಶುರಾಂ ಆಕಾಂಕ್ಷೆ.

2016ರ ಫೆಬ್ರವರಿಯಲ್ಲಿ ನೋಂದಣಿ ಹಾಗೂ ಡಿಸೆಂಬರ್‌ನಲ್ಲಿ ಜಾರಿಯ ಮಧ್ಯೆ ಎಲ್ಲೂ ಲಂಚದ ಖರ್ಚಿಲ್ಲ! ಕೇಂದ್ರದ ಜಿಎನ್‌ಎಸ್‌ ಎಸ್‌ ಯೋಜನೆಯಡಿ ಶೇ. 5ರ ಬಡ್ಡಿದರದ ಸಾಲ ಪಡೆಯುವುದು ಕೂಡ ತಮಗೆ ಸಮಸ್ಯೆಯಾಗಲಿಲ್ಲ ಎನ್ನುತ್ತಾರೆ ಪರಶುರಾಂ. ಕರ್ನಾಟಕದಲ್ಲಿನ ಏಕೈಕ ಸಮಸ್ಯೆ ಎಂದರೆ ಮನೆಯ ಮಂಜೂರಾದ ಲೋಡ್‌ಗೆ ಅನುರೂಪವಾದ ಸೋಲಾರ್‌ ವಿದ್ಯುತ್‌ ಮಾರಾಟದ ಅವಕಾಶ ಸಿಗುತ್ತದೆ. ಇದರಿಂದ ಅನಿವಾರ್ಯವಾಗಿ ಹೆಚ್ಚಿನ ಲೋಡ್‌ಗೆ ಅನುಮತಿ ಪಡೆಯುವುದರಿಂದ ಮಂಜೂರಾತಿ  ಶುಲ್ಕ ಹಾಗೂ ಮಾಸಿಕ ಮೀಟರ್‌ ನಿರ್ವಹಣಾ ವೆಚ್ಚ ಅಧಿಕವಾಗುತ್ತದೆ. ಈಗಾಗಲೇ ವಿದ್ಯುತ್‌ ಬರದಿಂದ ತತ್ತರಿಸಿರುವ ರಾಜ್ಯ ಈ ನಿಯಮದಲ್ಲಿ ರಿಯಾಯಿತಿ ತೋರಿಸಿದರೆ ಗ್ರಾಹಕ ಎಸ್ಕಾಂಗೂ, ಉತ್ಪಾದಕ ನಾಗರಿಕರಿಗೂ ಲಾಭವಾಗುತ್ತದೆ. ಈ ನಡುವೆಯೇ ಪರಶುರಾಂ ಮತ್ತೂಂದು ವಿಶೇಷ ಮಾತಿನಿಂದ ನಮ್ಮ ಗಮನ ಸೆಳೆಯುತ್ತಾರೆ. ಬೇರೆ ರಾಜ್ಯದಲ್ಲಿ ಇಂತಹ ಷರತ್ತು ಇಲ್ಲ! ಇನ್ನೂ ಒಂದು ಅಂಶ ಗಮನಾರ್ಹ. 

ಪರಶುರಾಂರ ಮನೆ ನಿರ್ಮಾಣವಾದುದು 13 ವರ್ಷಗಳ ಹಿಂದೆ. ಒಂದರ್ಥದಲ್ಲಿ “ಪಾಳು’ ಬಿದ್ದಿದ್ದ ಮನೆಯ ಮಾಳಿಗೆ ಈಗಷ್ಟೇ
ಉತ್ಪಾದನಾ ಕ್ಷೇತ್ರವಾಗಿದೆ. ಪರಶುರಾಂ ಹೇಳುವುದು ಇದನ್ನೇ, ರಾಜ್ಯದಲ್ಲಿ ಸದ್ಯ ಒಂದೇ ಊರು ಕೇರಿಗಳಲ್ಲಿ ಸಾಲು ಸಾಲು ರೂಫ್
ಟಾಪ್‌ ವಿದ್ಯುತ್‌ನ್ನು ಈಗಿರುವ ಬಹುಸಂಖ್ಯಾತ ಹಳೆಯ ಮನೆಗಳಲ್ಲಿ ಉತ್ಪಾದನೆ ಮಾಡುವಂತಾದರೆ ಮತ್ತು ಸರ್ಕಾರದ ನಿರಂತರ ವಿದ್ಯುತ್‌ ಸರಬರಾಜಿನ ಪ್ರತ್ಯೇಕ ಪ್ರಸರಣ ವ್ಯವಸ್ಥೆ ಮಾಡಿದರೆ ಸೋಲಾರ್‌ ವಿದ್ಯುತ್‌ನ ಒಂದು ಯೂನಿಟ್‌ ಕೂಡ ವ್ಯರ್ಥವಾಗುವುದಿಲ್ಲ. ಅಂತಹ “ಭಾಗ್ಯ’ಗಳ ಮೂಲಕ ಸರ್ಕಾರ ಸ್ಪಂದಿಸಲಿ ಅಂತ ! 

ಮಾಹಿತಿಗೆ- ಬಸಪ್ಪ ರೆಡ್ಡಿ-9481670482 ಪರಶುರಾಂ ಮೊ: 9538823477 

ಗುರು ಸಾಗರ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.