ಕಣ ರಂಗ: ರಸ್ತೆ ಮೇಲೆ ಧಾನ್ಯ ರಾಶಿ


Team Udayavani, Mar 9, 2020, 5:57 AM IST

ಕಣ ರಂಗ: ರಸ್ತೆ ಮೇಲೆ ಧಾನ್ಯ ರಾಶಿ

ಸುಗ್ಗಿ ಬಂದರೆ ರೈತರು ಹಿರಿ ಹಿರಿ ಹಿಗ್ಗುವರು. ಮಾಗಿದ ಬೆಳೆಯನ್ನು ಕೊಯ್ದು ಗೂಡು ಹಾಕಿ, ಪೂಜೆ ಮಾಡಿ, ತೆನೆ ಮುರಿದು, ಬಂಡಿಗೆ ತೊಟ್ಟಿಲು ಕಟ್ಟಿ ತರುತ್ತಾರೆ. ಊರ ಮಗ್ಗಲ ಹೊಲದಲ್ಲಿಯ ನೆಲ ಸ್ವತ್ಛ ಮಾಡಿ, ಮುಹೂರ್ತ ನೋಡಿ ಮೇಟಿ ನೆಟ್ಟು, ನೀರು ಹಾಕಿ ದನಕರುಗಳಿಂದ ತುಳಸಿ, ಬಡಮನಿಯಿಂದ ಬಡಿದು, ರೂಲು ಹಾಕಿ ಗಟ್ಟಿ ಮಾಡಿ ಕಣ ಮಾಡುತ್ತಾರೆ. ಸೆಗಣಿಯಿಂದ ಸಾರಿಸಿ ಸಜ್ಜುಗೊಳಿಸುತ್ತಾರೆ. ಹೊಲದಿಂದ ತಂದ ತೆನೆಗಳನ್ನು ತೆಳ್ಳಗೆ ಹರವಿ ಹಂತಿ ಕಟ್ಟುತ್ತಾರೆ. ಆದರೆ… ಆಧುನೀಕರಣದ ಗಾಳಿ ಹಳ್ಳಿಗೂ ಬೀಸಿ ಕಣ ಮಾಡಿ ರಾಶಿ ಮಾಡುವುದು ಕಣ್ಮರೆಯಾಗುತ್ತಿದೆ.

ಹೊಸ ವಿಧಾನ
ಕೆಲಸ ಸುಲಭ ಮಾಡಿಕೊಳ್ಳುತ್ತಿದ್ದಾರೆ. ರಸ್ತೆ ಮೇಲೆ ರಾಶಿ ಮಾಡುವ ಹೊಸ ವಿಧಾನವನ್ನು ಅವರು ಕಂಡುಕೊಂಡಿದ್ದಾರೆ. ಇಂದು ಊರ ಮುಂದೆ ಹಾಯುವ ಟಾರು ರಸ್ತೆಗಳೇ ಅದೆಷ್ಟೋ ರೈತರಿಗೆ ಕಣಗಳಾಗಿವೆ. ಟಾರು ರಸ್ತೆಯ ದಂಡೆಗೆ ಮೇವಿನ ಇಂಡಿಗೆಯ ದಿಂಡುಗಳನ್ನು ಕಟ್ಟುತ್ತಾರೆ. ಮುರಿದು ತಂದ ತೆನೆಗಳನ್ನು ನಡುವೆ ಹರವುತ್ತಾರೆ. ಮಗ್ಗಲು ಮಕ್ಕಳು ಮರಿಗಳೊಂದಿಗೆ ಕೊಡುತ್ತಾರೆ. ಒಮ್ಮೊಮ್ಮೆ ದಂಡೆಗುಂಟ ದಿಂಡುಗಲ್ಲುಗಳನ್ನು ಚೆಲ್ಲಿರುತ್ತಾರೆ. ಅಡ್ಡಾಡುವ ಗಾಡಿಗಳು ತೆನೆಯ ಮೇಲೆ ಹಾದು ಹೋಗಲಿ ಎಂಬುದೇ ಅದರ ಉದ್ದೇಶ. ಅಕಸ್ಮಾತ್‌ ವಾಹನ ಚಾಲಕ ವೇಗ ಕಡಿಮೆ ಮಾಡಿ, ಹಾರ್ನ್ ಹಾಕಿ ಮಗ್ಗಲು ಹಾಸಿ ಹೋದರೆ ಕುಂತವರೆಲ್ಲ ಕೆಂಗಣ್ಣು ಬೀರುತ್ತಾರೆ.

ರಸ್ತೆಯಲ್ಲಿ ವಾಹನಗಳ ಓಡಾಟದಿಂದಲೇ ಕಾಳುಗಳು ಬೇರ್ಪಡುತ್ತವೆ. ಆನಂತರ ಕಂಕಿಗಳನ್ನು ತೆಗೆದು ಕಾಳನ್ನು ತೂರಿದರೆ ರಾಶಿ ಮುಗಿದಂತೆಯೇ. ರಾಶಿಗಾಗಿ ರೈತರು ಕಣ ಮಾಡಬೇಕಾಗಿಲ್ಲ. ಎತ್ತು ಕಟ್ಟಬೇಕಾಗಿಲ್ಲ. ಹಂತಿ ಹೊಡೆಯಬೇಕಾಗಿಲ್ಲ. ರಸ್ತೆಗಳೇ ಕಣಗಳಾಗಿರುತ್ತವೆ. ಜೋಳ, ಸಜ್ಜೆ, ನವಣಿ, ನೆಲ್ಲು, ಕಡಲೆ, ತೊಗರಿ, ಹುರುಳಿ, ಅಗಸಿ, ಎಳ್ಳು, ಹೆಸರು, ಅಲಸಂದಿ… ಇತ್ಯಾದಿಗಳ ರಾಶಿಯನ್ನು ರಸ್ತೆಯ ಮೇಲೆಯೇ ಮಾಡುತ್ತಿದ್ದಾರೆ.

ಗಲೀಜು ನೈರ್ಮಲ್ಯ
ಹಿಂದಿನವರು ಕಣವನ್ನು ಬಹಳ ಜತನದಿಂದ ನೋಡಿಕೊಳ್ಳುತ್ತಿದ್ದರು. ಕಣದ ಸಮೀಪ ಬರುವವರು ತಮ್ಮ ಪಾದರಕ್ಷೆಗಳನ್ನು ದೂರದಲ್ಲಿಯೇ ಬಿಡುತ್ತಿದ್ದರು. ಪಾದರಕ್ಷೆಯ ಧೂಳು ಕಾಳಿನಲ್ಲಿ ಸೇರಬಾರದು ಎಂಬ ಉದ್ದೇಶವೇ ಇರಬೇಕು. ಇನ್ನೂ ಹಲವಾರು ನಿಯಮಗಳನ್ನು ಅವರು ಪಾಲಿಸುತ್ತಿದ್ದರು. ಹಂತಿ ನಡೆದಾಗ ಎತ್ತುಗಳ ಸಗಣಿ, ಮೂತ್ರ ಧಾನ್ಯದಲ್ಲಿ ಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಇಂಥ ಹಂತಿಯಿಂದ ಬಂದ ಕಾಳುಗಳು ನಿರ್ಮಲವಾಗಿರುತ್ತಿದ್ದವು. ಬಳಸಲು ಸಿದ್ಧವಾಗಿರುತ್ತಿದ್ದವು. ಇನ್ನು ರಸ್ತೆ ಮೇಲಿನ ರಾಶಿ ಸ್ಥಿತಿಯನ್ನು ನೋಡಿದರೆ ನಿರ್ಮಲವಾಗಿರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ರಸ್ತೆ ಮೇಲೆ ಅಡ್ಡಾಡುವ ಎತ್ತು, ಎಮ್ಮೆ, ಕತ್ತೆ, ಆಡು, ಕುರಿ, ಕೋಳಿ, ನಾಯಿ, ನರಿಗಳೂ ಸಹ ತಮ್ಮ ಗಂಜಲವನ್ನು ಅಲ್ಲಿ ಸುರಿದಿರುತ್ತವೆ. ವಾಹನಗಳ ಗಾಲಿಗಳ ಮೇಲಿನ ಗಲೀಜು, ರಸ್ತೆ ಮೇಲಿನ ಗಲೀಜು ಇವೆಲ್ಲದರಿಂದಾಗಿ ಆ ಕಾಳುಗಳಿಗೂ ಗಲೀಜು ಮೆತ್ತಿಕೊಳ್ಳುವುದು. ಟಯರಿನ ಸುಟ್ಟ ವಾಸನೆ, ಡಾಂಬರಿನ ದುರ್ಗಂಧ, ಸೈಲೆನ್ಸರ್‌ ಪೈಪು ಕಾರುವ ಕಪ್ಪು ಹೊಗೆಯಲ್ಲಿಯ ವಿಷ ಇವೆಲ್ಲವುಗಳ ಲೇಪನ ಕಾಳು ಕಡ್ಡಿಗಳಿಗೆ ಸಿಗುವುದು. ಅದನ್ನು ಸೇವಿಸಿದವರ ಆರೋಗ್ಯದ ಗತಿ ದೇವರೇ ಬಲ್ಲ!

ಕಾಳಿನಲ್ಲಿ ಕ್ಯಾನ್ಸರ್‌ಕಾರಕ ಅಂಶ
ರಸ್ತೆಯ ಡಾಂಬರು ಕಾಳುಗಳಿಗೆ ಡಾಂಬರಿನ ಲೇಪನ ಕೊಡಬಹುದು. ಅದು ಹೇಗೆಂದರೆ, ಉರಿಬಿಸಿಲಿನಲ್ಲಿ ಡಾಂಬರು ಮೆತ್ತಗಾಗಿರುತ್ತದೆ. ಆ ಸ್ಥಿತಿಯಲ್ಲಿ ವಾಹನ ಅದರ ಮೇಲೆ ಹರಿದಾಗ ಡಾಂಬರು ಕಾಳುಗಳಿಗೆ ಅಂಟಿಕೊಳ್ಳುವ ಸ್ಥಿತಿಯಲ್ಲಿ ಇರುತ್ತದೆ. ಡಾಂಬರು ಕ್ಯಾನ್ಸರ್‌ ತರುತ್ತದೆಂದು ನೂರಾರು ವರ್ಷಗಳ ಮೊದಲೇ ಖಚಿತವಾಗಿದೆ. ಹೀಗಾಗಿ ಧಾನ್ಯ ಕ್ಯಾನ್ಸರ್‌ಕಾರಕವೂ ಆಗುವ ಸಾಧ್ಯತೆ ಇರುತ್ತದೆ. ಇನ್ನಾದರೂ ರೈತರು ರಸ್ತೆಯಲ್ಲಿ ರಾಶಿ ಮಾಡುವುದನ್ನು ತಡೆದು ವಿದಾಯ ಹೇಳಿ, ಅನವಶ್ಯಕ ಅವಘಡಗಳನ್ನು ತಪ್ಪಿಸಲಿ !

ರಸ್ತೆ ಮೇಲೆ ರಾಶಿ ಮಾಡುವುದು ಕಾನೂನುಬಾಹಿರ. ರೈತರು ರಸ್ತೆಯ ಮೇಲೆ ರಾಶಿ ಮಾಡಲು ಬಳಸುವ ಯಂತ್ರೋಪಕರಣ, ಯಂತ್ರೋಪಕರಣದ ಬಿಡಿಭಾಗಗಳನ್ನು ಮತ್ತಿತರ ವಸ್ತುಗಳನ್ನು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿಟ್ಟಿರುತ್ತಾರೆ. ಇದರಿಂದ ರಾತ್ರಿ ವೇಳೆಯಲ್ಲಷ್ಟೇ ಅಲ್ಲ, ಹಗಲಿನಲ್ಲಿಯೇ ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗುತ್ತದೆ. ದ್ವಿಚಕ್ರ ವಾಹನಗಳು ಅದರ ಮೇಲೆ ಬರ್ರನೆ ಹೋದರೆ ಆಯ ತಪ್ಪಿ ಬೀಳುವ ಸಾಧ್ಯತೆ ಇರುತ್ತದೆ.

ಚಿತ್ರ ಲೇಖನ: ಡಾ. ಕರವೀರಪ್ರಭು ಕ್ಯಾಲಕೊಂಡ

ಟಾಪ್ ನ್ಯೂಸ್

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.