ಬಟನ್ ಒತ್ತಿ PAY ಮಾಡಿ


Team Udayavani, Jul 29, 2019, 10:03 AM IST

mbl

ಹಾಪ್‌ಕಾಮ್ಸ್‌ಗೆ ಹೋಗಿ ತರಕಾರಿ ಕೊಂಡೆ. ಹಣ ನೀಡಲು ಜೇಬಿಗೆ ಕೈಹಾಕಿದಾಗ ಹತ್ತಿಪ್ಪತ್ತರ ಎರಡು ನೋಟು ಮಾತ್ರ ಇದ್ದವು. ಆತನಿಗೆ 73 ರೂ. ಕೊಡಬೇಕಿತ್ತು. ಜೇಬಿಗೆ ಕೈ ಹಾಕಿ ಪರದಾಡುತ್ತಿದ್ದ ನನ್ನನ್ನು ಗಮನಿಸಿದ ಅಂಗಡಿಯಾತ ಪರಿಚಯದ ಯುವಕ. ‘ಪರವಾಗಿಲ್ಲ ನಾಳೆ ಕೊಡಿ ಸಾರ್‌’ ಎಂದ. ‘ನಿನ್ನ ಬಳಿ ಗೂಗಲ್ಪೇ ಇದೆಯಾ’ ಎಂದು ಕೇಳಿದೆ. ಗೂಗಲ್ಪೇ ಇದೆ ಸಾರ್‌ ಎಂದ. ಆತನ ಮೊಬೈಲ್ ನಂ. ನನ್ನ ಮೊಬೈಲ್ನಲ್ಲಿತ್ತು. ಗೂಗಲ್ಪೇ ಗೆ ಹೋಗಿ, ಆತನ ಹೆಸರು ಆಯ್ಕೆ ಮಾಡಿಕೊಂಡು 73 ರೂ. ವರ್ಗಾವಣೆ ಮಾಡಿದೆ. ತಕ್ಷಣ 73 ರೂ. ಕ್ರೆಡಿಟ್ ಆಗಿರುವ ಸಂದೇಶ ಆತನ ಮೊಬೈಲ್ಗೆ ಬಂತು. ‘ಓಕೆ ಸರ್‌’ ಎಂದು ಆತ ಕಿರುನಗೆ ಬೀರಿದ!

ಇದೊಂದೇ ಅಲ್ಲ, ತಿಂಗಳ ಅಂಗಡಿ ಸಾಮಾನು, ವಿದ್ಯುತ್‌ ಬಿಲ್, ಮನೆ ಬಾಡಿಗೆಯನ್ನು ಫೋನ್‌ಪೇ ಅಥವಾ ಗೂಗಲ್ಪೇ ಮೂಲಕ ಕಳುಹಿಸಿಬಿಡುತ್ತೇನೆ. ಮನೆಗೆ ನಂದಿನಿ ಹಾಲು ಪೂರೈಸುವ ಯುವಕನ ಹತ್ತಿರವೂ ಫೋನ್‌ ಪೇ ಇತ್ತು. ಸಮಸ್ಯೆಯೇ ಇಲ್ಲ. 1ನೇ ತಾರೀಕು ಫೋನ್‌ಪೇ ಮೂಲಕ ಹಾಲಿನ ಹಣ ವರ್ಗಾವಣೆಯಾಗುತ್ತದೆ.

ಹೀಗೆ ಮಾಡುವುದರಿಂದ ನಮಗೆ ಆಯಾ ತಿಂಗಳು ಮಾಡಿದ ಖರ್ಚಿನ ಲೆಕ್ಕ ಸಿಗುತ್ತದೆ. ನೀವು ಯಾವತ್ತು ಕೊಟ್ಟಿರಿ? ಯಾವಾಗ ಕೊಟ್ಟಿರಿ? ಎಂಬ ಪ್ರಶ್ನೆಗಳಿರುವುದಿಲ್ಲ. ರಸೀದಿಗಳನ್ನು ಎತ್ತಿಟ್ಟುಕೊಳ್ಳುವ ಗೋಜಿಲ್ಲ. ಚಿಲ್ಲರೆ ಸಮಸ್ಯೆ ನೀಗುತ್ತದೆ. ಎಟಿಎಂಗಳಿಗೆ ಅಲೆಯುವುದು ತಪ್ಪುತ್ತದೆ. ಬಿಲ್ ಕಟ್ಟಲು ಕ್ಯೂ ನಲ್ಲಿ ನಿಲ್ಲುವ ರಗಳೆ ಇರುವುದಿಲ್ಲ.

ಮೊಬೈಲ್ ಫೋನ್‌ ಎಂಬ ಮಾಯಾವಿ ಬಂದ ಬಳಿಕ, ಒಳಿತು ಕೆಡುಕು ಎರಡೂ ಆಗುತ್ತಿವೆ! ವಾಟ್ಸಪ್‌, ಫೇಸ್‌ಬುಕ್‌ ಮೂಲಕ ಸಮಯವನ್ನು ತಿನ್ನುವ ಈ ಮೊಬೈಲ್ ಫೋನನ್ನು ನಮ್ಮ ಅಡಿಯಾಳಾಗಿ ಇಟ್ಟುಕೊಂಡರೆ ಹೆಚ್ಚು ಪ್ರಯೋಜನ ಪಡೆಯಬಹುದು!

ಬೆಂಗಳೂರು, ಮುಂಬಯಿಯಂಥ ಮಹಾನಗರಗಳಲ್ಲಿರುವವರಿಗೆ ಫೋನ್‌ಪೇ, ಗೂಗಲ್ಪೇ ಇತ್ಯಾದಿಗಳ ಬಳಕೆ ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾವೇರಿ, ಕೊಪ್ಪಳ, ಶಿಡ್ಲಘಟ್ಟ, ನಂಜನಗೂಡು ಇಂಥ ಸಣ್ಣ ಪಟ್ಟಣಗಳಲ್ಲಿ ಇವುಗಳ ಬಳಕೆ ಹೆಚ್ಚಿಲ್ಲ. ಜನರು ಇವುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಂಡರೆ ಅವರ ಹಣಕಾಸಿನ ವ್ಯವಹಾರ ಬಹಳ ಸುಲಭವಾಗುತ್ತದೆ. ಮೊಬೈಲೊಂದು ನಿಮ್ಮ ಕೈಯಲ್ಲಿದ್ದರೆ ಜೇಬಲ್ಲಿ ನಗದು, ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ನ ಅಗತ್ಯ ಬೀಳುವುದಿಲ್ಲ.

ಗೂಗಲ್ಪೇ, ಫೋನ್‌ಪೇ ಯಂಥ ಆ್ಯಪ್‌ ಬಳಸಿದರೆ ನಮ್ಮ ಅಕೌಂಟಿನಿಂದ ಯಾರಾದರೂ ಹಣ ಎಗರಿಸಿಬಿಟ್ಟರೆ ಎಂಬ ಆತಂಕಗಳಿರುತ್ತವೆ. ಆದರೆ, ಕೇಂದ್ರ ಸರ್ಕಾರ ಪರಿಚಯಿಸಿರುವ ಯುಪಿಐ (ಯೂನಿಫೈಡ್‌ ಪೇಮೆಂಟ್ ಇಂಟರ್‌ಫೇಸ್‌) ವ್ಯವಸ್ಥೆ ಬಹಳ ಸುರಕ್ಷಿತವಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್‌ ಆಫ್ ಇಂಡಿಯಾ (ಇನ್‌ಪಿಸಿಐ) ಇದನ್ನು ಅಭಿವೃದ್ಧಿಪಡಿಸಿದೆ. ಯಾವುದೇ ಸಂಶಯವಿಲ್ಲದೇ ಮೊಬೈಲ್ನಲ್ಲಿ ಇದನ್ನು ಬಳಸಬಹುದು. ಈ ಯುಪಿಐ ಅನ್ನೇ ಆಧರಿಸಿ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಗಳು ತಮ್ಮ ಆ್ಯಪ್‌ ಅನ್ನು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಉತ್ತಮವಾಗಿ ಅಭಿವೃದ್ಧಿಪಡಿಸಿವೆ.

ಗೂಗಲ್ಪೇ ಬಳಕೆ ಹೇಗೆ?
ಮೊಬೈಲ್ನಲ್ಲಿ ಗೂಗಲ್ ಪೇ ಬಳಸುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿಯೋಣ. ಮೊದಲಿಗೆ ನಿಮ್ಮ ಬ್ಯಾಂಕ್‌ನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಮೊಬೈಲ್ ಬ್ಯಾಂಕ್‌ ಸೇವೆಗಾಗಿ ರಿಜಿಸ್ಟರ್‌ ಮಾಡಿಸಿರಬೇಕು. ನೀವು ಬ್ಯಾಂಕಿಗೆ ನೀಡಿರುವ ಮೊಬೈಲ್ ಸಂಖ್ಯೆಯ ಸಿಮ್‌ ಕಡ್ಡಾಯವಾಗಿ ಅದೇ ಫೋನಿನಲ್ಲಿರಬೇಕು. ಆ ಸಿಮ್‌ ಆಧಾರದ ಮೇಲೆಯೇ ಈ ಆ್ಯಪ್‌ ಕೆಲಸ ಮಾಡುವುದು. ಬಳಿಕ ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ಅಲ್ಲಿ ಗೂಗಲ್ ಪೇ ಅಥವಾ ಫೋನ್‌ಪೇ ಯನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಬಳಿಕ, ಮೊದಲಿಗೆ ಅದು ನೀವು ನಿಮ್ಮ ಬ್ಯಾಂಕ್‌ಗೆ ನೀಡಿರುವ 10 ಅಂಕಿಗಳ ಮೊಬೈಲ್ ಸಂಖ್ಯೆ ಕೇಳುತ್ತದೆ. ಅದನ್ನು ನಮೂದಿಸಿ, (ಅದೇ ನಂ. ನಿಮ್ಮ ಮೊಬೈಲ್ನಲ್ಲಿ ಇರಬೇಕು). ನಂತರ ನಿಮ್ಮ ಹೆಸರು ನಮೂದಿಸಿ, ಬಳಿಕ ಒನ್‌ ಟೈಮ್‌ ಪಾಸ್ವರ್ಡ್‌ ಬರುತ್ತದೆ. ಅದನ್ನು ಅದೇ ತೆಗೆದುಕೊಂಡು ನಮೂದಿಸಿಕೊಂಡು ಮುಂದುವರೆಯುತ್ತದೆ. ನಂತರದ ಹಂತದಲ್ಲಿ ನಿಮ್ಮ ಮೊಬೈಲ್ನಲ್ಲಿ ಬೆರಳಚ್ಚು ಸ್ಕ್ಯಾನರ್‌ ಅಥವಾ ನಾಲ್ಕು ಅಂಕೆಯ ಪಿನ್‌ ಕೇಳುತ್ತದೆ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ. ಪಿನ್‌ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಬಳಿಕ ನಾಲ್ಕು ಅಂಕಿಯ ಪಿನ್‌ ಅನ್ನು ಎರಡು ಬಾರಿ ಒತ್ತಬೇಕು. ಬಳಿಕ ಕೆಲವು ಅನುಮತಿಗಳನ್ನು ಕೇಳುತ್ತದೆ. ಅದಕ್ಕೆಲ್ಲ ಒಪ್ಪಿಗೆ ಒತ್ತಿ. ಬಳಿಕ ನಿಮ್ಮ ಬ್ಯಾಂಕ್‌ ಯಾವುದಿದೆ ಅದನ್ನು ಲಿಸ್ಟ್‌ನಲ್ಲಿ ಹುಡುಕಿ ಆಯ್ಕೆ ಮಾಡಿ, ಆಗ ನಿಮ್ಮ ಅಕೌಂಟನ್ನು ಅದೇ ತೋರಿಸುತ್ತದೆ. ಅಲ್ಲಿ ಆ ಬ್ಯಾಂಕಿನ ನಿಮ್ಮ ಡೆಬಿಟ್ ಕಾರ್ಡಿನ ಕೊನೆಯ ಆರು ಅಂಕಿ, ಮತ್ತು ವಾಯಿದೆಯ ತಿಂಗಳು ಹಾಗೂ ವರ್ಷವನ್ನು ನಮೂದಿಸಬೇಕು. ಬಳಿಕ ನೀವು ಬ್ಯಾಂಕಿನ ವ್ಯವಹಾರಕ್ಕೆ ಬಳಸಲು ಇನ್ನೊಂದು ಪಿನ್‌ ಸೃಷ್ಟಿಸಬೇಕು. ಗಮನಿಸಿ, ಮೊದಲು ಹೇಳಿದ ಪಿನ್‌, ನಿಮ್ಮ ಆ್ಯಪ್‌ ಅನ್ನು ತೆರೆಯಲು, ಈಗಿನ ಪಿನ್‌, ನೀವು ಪ್ರತಿ ಬಾರಿ ಪಾವತಿ ಮಾಡುವಾಗ ನಮೂದಿಸುವ ಪಿನ್‌. ಎರಡೂ ಪಿನ್‌ ಒಂದೇ ಇದ್ದರೆ ಗೊಂದಲವಿರುವುದಿಲ್ಲ. ಹಾಗಾಗಿ, ಮೊದಲು ನಮೂದಿಸಿದ ಪಿನ್‌ ಅನ್ನೇ ಇಲ್ಲೂ ನಮೂದಿಸಿಕೊಂಡರೆ ಒಳ್ಳೆಯದು. ಈಗ ನಿಮ್ಮ ಗೂಗಲ್ ಪೇ ಬಳಕೆಗೆ ಸಿದ್ಧ!

ಬೇರೆಯವರಿಗೆ ಹಣ ಕಳುಹಿಸುವುದು ಹೇಗೆ?
ಗೂಗಲ್ ಪೇ ಹಾಗೂ ಫೋನ್‌ಪೇ ಮೂಲಕ ಬೇರೆಯವರಿಗೆ ಹಣ ಕಳುಹಿಸಲು ಮೂರ್ನಾಲ್ಕು ವಿಧಾನಗಳಿವೆ. ಬೇರೆಯವರ ಬ್ಯಾಂಕ್‌ ಅಕೌಂಟಿಗೆ, ಅವರ ಮೊಬೈಲ್ ಸಂಖ್ಯೆಗೆ, ಅಥವಾ ಅವರ ಭೀಮ್‌ ಯುಪಿ ಐಡಿಗೆ ಹಣ ವರ್ಗಾವಣೆ ಮಾಡಬಹುದು. ನಿಮ್ಮಂತೆ ಅವರೂ ಗೂಗಲ್ಪೇ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಅವರ ಹೆಸರು ಮೊಬೈಲ್ ನಂ. ತೋರಿಸುತ್ತದೆ. ಅದನ್ನು ಆಯ್ಕೆ ಮಾಡಿಕೊಂಡು ಹಣದ ಮೌಲ್ಯ ನಮೂದಿಸಿ, ಕಳುಹಿಸಬಹುದು. ಅಥವಾ ಹಣ ಸ್ವೀಕರಿಸುವವರ ಬ್ಯಾಂಕ್‌ ಸಂಖ್ಯೆ ಐಎಫ್ಎಸ್‌ಸಿ ಕೋಡ್‌ ಒತ್ತಿ ಅದಕ್ಕೂ ಹಣ ಕಳುಹಿಸಬಹುದು.

ಇನ್ನು ಪ್ರಾವಿಷನ್‌ ಸ್ಟೋರ್‌, ಪೆಟ್ರೋಲ್ ಬಂಕ್‌ನಂಥ ಸ್ಥಳಗಳಿಗೆ ಹೋದಾಗ ಅಲ್ಲಿ ಇಟ್ಟಿರುವ ಕ್ಯೂಆರ್‌ ಕೋಡ್‌ ಮೇಲೆ, ನಿಮ್ಮ ಗೂಗಲ್ಪೇಗೆ ಹೋಗಿ ಸ್ಕ್ಯಾನ್‌ ಕ್ಯೂಆರ್‌ ಕೋಡ್‌ ಆಯ್ಕೆ ಮಾಡಿಕೊಂಡು ಅದರ ಮೇಲೆ ಹಿಡಿದರೆ, ಅವರ ವಿವರ ಬರುತ್ತದೆ. ಅಲ್ಲಿ ಹಣದ ಮೌಲ್ಯ ನಮೂದಿಸಿ ಎಂಟರ್‌ ಕೊಟ್ಟರೆ ಆಯಿತು!

ಅಂಗಡಿಯವರು ಯಾವುದೇ ಕ್ಯೂ ಆರ್‌ ಕೋಡ್‌ ಪಡೆಯದಿದ್ದರೂ ಚಿಂತಿಸಬೇಕಾಗಿಲ್ಲ. ಅವರ ಫೋನ್‌ಪೇ ಅಥವಾ ಗೂಗಲ್ಪೇಯಲ್ಲಿರುವ ಕ್ಯೂಆರ್‌ ಕೋಡನ್ನು ಗ್ರಾಹಕರಿಗೆ ಮೊಬೈಲ್ನಲ್ಲೇ ತೋರಿಸಿದರೆ, ಗ್ರಾಹಕರು ತಮ್ಮ ಮೊಬೈಲಿನಿಂದ ಸ್ಕ್ಯಾನ್‌ ಮಾಡಿ ಹಣ ಕಳುಹಿಸಬಹುದು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.