ಒಗ್ಗಟ್ಟಿನಲ್ಲಿ ಹಣವಿದೆ !


Team Udayavani, Sep 17, 2018, 5:14 PM IST

aisiri-real.jpg

 ಸಂಪಾದಿಸುವುದು ಎಷ್ಟು ಕಷ್ಟವೋ ಅದನ್ನು ಕೂಡಿಡುವುದು, ನಂತರ ಕೂಡಿಟ್ಟ ಹಣವನ್ನು ಕಾಪಾಡುವುದು,  ಹೀಗೆ ಕಾಪಾಡಿದ ಹಣವನ್ನು ಬೆಳೆಸುತ್ತಾ, ಅದರಿಂದ ಲಾಭದ ಫ‌ಸಲು ತೆಗೆಯುವುದು ಇವೆಲ್ಲದಕ್ಕಿಂತ ಕಷ್ಟವೇ. 
ಇದೊಂಥರ ಕ್ರಿಕೆಟ್‌ನಲ್ಲಿ ಗುಡ್‌ಲೆಂಗ್‌ ಬಾಲ್‌ಗೆ ಸಿಕ್ಸ್‌ ಹೊಡೆದಹಾಗೆ. ಬಾಲಿನ ವೇಗ, ಅದು ಬೀಳುವ ಜಾಗ, ಬ್ಯಾಟು ಬೀಸುವ ಟೈಮಿಂಗ್‌ ಕೊನೆಗೆ ಕ್ರೀಡಾಂಗಣದ ಉದ್ದ-ಅಗಲವೂ ಸಿಕ್ಸರ್‌ ಭಾರಿಸಲು ನೆರವಾಗಬೇಕಾಗುತ್ತದೆ. 
 ಇದು ಹೇಗಪ್ಪಾ ಅನ್ನಬೇಡಿ, ನಿಮ್ಮ ಬಳಿ ಸೈಟಿದೆ. ಅದನ್ನು ಮಾರಿ ಒಳ್ಳೇ ಕಡೆ ವರ್ಷಕ್ಕೆ ನಾಲ್ಕೈದು ಲಕ್ಷ ಏರುವ ಕಡೆ ಮತ್ತೂಂದು ಸೈಟು ಕೊಳ್ಳಬೇಕು ಎಂಬ ಯೋಚನೆ ಇದೆ ಅಂದುಕೊಳ್ಳಿ. ಇಂಥ ಸಂದರ್ಭದಲ್ಲಿ, ಮೊದಲು ಕೈಯಲ್ಲಿರುವ ಸೈಟು ಮಾರಬೇಕೋ ಅಥವಾ ಕೊಳ್ಳಬೇಕಿರುವ ಸೈಟು ಹುಡುಕಬೇಕೋ?ಈ ಗೊಂದಲ ಎದುರಾಗುತ್ತದೆ. 

 ಏಕೆಂದರೆ, ಒಂದು ಪಕ್ಷ ಕೈಯಲ್ಲಿರುವ ಸೈಟು ಮಾರಿ, ಆ ಬೆಲೆಗೆ ನಿಮಗೆ ಇನ್ನೊಂದು ಕಡೆ ಸೈಟು ಸಿಗದೇ ಹೋದರೆ, ಇರುವ ಸೈಟನ್ನೂ ಕಳೆದುಕೊಂಡಾತಾಗುತ್ತದೆ. ದಿನೇ ದಿನೆ ಮಾರಿದ ಹಣದ ಬೆಲೆ ಇಳಿಯುತ್ತಾ ಹೋಗುತ್ತದೆ ಅನ್ನೋ ಆತಂಕ. ಒಂದು ಪಕ್ಷ ಮಾರುವ ಮೊದಲೇ ಕೊಳ್ಳಬೇಕಾದ ಸೈಟು ಸಿಕ್ಕಿಬಿಟ್ಟರೆ- ಇದನ್ನು ಮಾರಿ, ಅದನ್ನು ಕೊಳ್ಳುವ ಹೊತ್ತಿಗೆ ಆ ಸೈಟೂ ಕೈ ತಪ್ಪಬಹುದು. ಇಂಥ ಪ್ರಾಕ್ಟಿಕಲ್‌ ಸಮಸ್ಯೆಗಳು ಎದುರಾಗುತ್ತವೆ. ಇಂಥ ಸಂದರ್ಭದಲ್ಲಿ  “ಕ್ರಿಟಿಕಕಲ್‌’ ತೀರ್ಮಾನವೇ ತೆಗೆದು ಕೊಳ್ಳಬೇಕಾಗುತ್ತದೆ. ಮಾರುವ ಮತ್ತು ಕೊಳ್ಳುವುದರ ನಡುವೆ ಹಣವನ್ನು ಇಟ್ಟುಕೊಂಡು ತಂತಿಯ ಮೇಲಿನ ನಡಿಗೆ ಮಾಡಿ, ಹೂಡಿಕೆ ಮಾಡುವುದಕ್ಕೆ ಬರೀ ತಂತ್ರಗಾರಿಕೆ ಮಾತ್ರವಲ್ಲ, ಅದೃಷ್ಟವೂ ಇರಬೇಕು.   ಇತ್ತ ಮಾರಿ, ಅತ್ತ ಕೊಳ್ಳುವುದಕ್ಕೆ ಚಾಕಚಕ್ಯತೆ ಬೇಕಾಗುತ್ತದೆ. ಇದು ಕೇವಲ ಸೈಟಿನ ವಿಷಯ ಮಾತ್ರವಲ್ಲ. ಇದರ ಜಾಗದಲ್ಲಿ ಷೇರು, ಬಂಗಾರ ಯಾವುದನ್ನು ಬೇಕಾದರೂ ಇಟ್ಟು ನೋಡಿ. ಎಲ್ಲದರ ಸಾಮಾನ್ಯ ಗೊಂದಲ ಇದೇ. 

ಸಂಘದ ಹೂಡಿಕೆ…
ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ಹುಡುಕಿದಂತೆಯೇ  ರಿಯಲ್‌ ಎಸ್ಟೇಟ್‌ನಲ್ಲಿ ಈಗ ನಂಬಿಕೆಯನ್ನು ಹುಡುಕುವ ಪರಿಸ್ಥಿತಿ ಇದೆ. ಹೀಗಾಗಿ, ನಮ್ಮ ಹೂಡಿಕೆಯ ಹಣವನ್ನು ಯಾವುದಾದರೊಂದು ರೀತಿಯಲ್ಲಿ ಲಪಟಾಯಿಸುವವರಂ ಹೆಚ್ಚಿರುವುದರಿಂದ ಅತಿ ಎಚ್ಚರಿಕೆಯಿಂದಲೇ ಹೂಡಿಕೆ ಮಾಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ.  

ಅದಕ್ಕೆ ಒಂದು ಐಡಿಯಾ ಮಾಡಬಹುದು.  ಅದುವೇ ಗುಂಪು ಹೂಡಿಕೆ. ಹೀಗೆ ಮಾಡಿದರೆ ಲಾಭ ಹೆಚ್ಚು. ಅಂದರೆ 10 ಎಕರೆ ಜಮೀನನ್ನು ಒಟ್ಟಾರೆ ನಾಲ್ಕು ಐದು ಜನ ಸೇರಿ ಕೊಂಡರೆ ಒಬ್ಬೊಬ್ಬರಿಗೆ ತಲಾ ಎರಡೂವರೆ ಎಕರೆ ಜಾಗ ಸಿಗುತ್ತದೆ.  ಹೀಗೆ ಕೊಂಡರೆ ಬೆಲೆ ಕಡಿಮೆಯಾಗುತ್ತದೆ. ನಾಲ್ಕೂ ಜನರಲ್ಲಿ ಒಬ್ಬರು ಒಂದೊಂದು ವೀಕೆಂಡ್‌ ಹೋಗಿ ಜಮೀನು ನೋಡಿಕೊಳ್ಳಬಹುದು ಅಥವಾ ಎಲ್ಲರೂ ಸೇರಿ, ಆ ಜಾಗದಲ್ಲಿ ಸೇರಿ ಸೈಟುಗಳನ್ನು ಮಾಡಬಹುದು. 
ಒಂದು ಪಕ್ಷ ವೀಕೆಂಡ್‌ಗಾಗಿ ಜಾಗವನ್ನೇ ಇಟ್ಟುಕೊಳ್ಳುತ್ತೇವೆ. ರೇಟು ಬಂದಾಗ ಮಾರುತ್ತೇವೆ ಅಂದರೆ ಇನ್ನೂ ಒಳ್ಳೆಯದು. ನಾಲ್ಕು ಎಕರೆ ಜಾಗದಲ್ಲಿ ಅರ್ಧ ಎಕರೆಯನ್ನು ಓಡಾಡಲು ಜಾಗಬಿಟ್ಟರೆ ಎಲ್ಲರಿಗೂ ದಾರಿಸಿಕ್ಕಂತಾಗಿ ಮುಂದೆ ಹೂಡಿಕೆಯ ಲಾಭ ಹೆಚ್ಚಾಗುತ್ತದೆ. ಇದೇನೂ ಬೇಡ ಎನಿಸಿದರೆ ಪ್ರತ್ಯೇಕವಾಗಿ ಮಾರಾಟ ಮಾಡಬಹುದು.  ಹೀಗೆ, ಸಮಾನ ಮನಸ್ಕರು ಸೇರಿ ಕೊಂಡರೆ ಕಡಿಮೆ ಬೆಲೆಗೆ ಭೂಮಿ ಸಿಕ್ಕಂತಾಗುತ್ತದೆ. ಕೊಳ್ಳುವಾಗ ಎದುರಾಗುವ ದಾಖಲೆ ಪರಿಶೀಲನೆಗೂ ನೆರವಾಗುತ್ತದೆ.    ಕೃಷಿ ಭೂಮಿ ಮಾರುವ ಕಂಪೆನಿಗಳು ಮಾಡುತ್ತಿರುವುದು ಇದನ್ನೇ. ಒಂದಷ್ಟು ಎಕರೆ ಜಮೀನು ಕೊಂಡು ಮಾರುತ್ತಿವೆ. ಇದೇ ಕಾಯಕವನ್ನು ಸ್ನೇಹಿತರೋ, ಸಂಬಂಧಿಕರ ಸೇರಿ ಮಾಡಿದರೆ ಲಾಭ ಹೆಚ್ಚು.

ಕೊಳ್ಳುವಾಗ ಇವೆಲ್ಲ ತಿಳಿದಿರಲಿ
– ನೀವು ಕೊಳ್ಳುವ ಸೈಟು, ಜಮೀನಿನ ದಾಖಲೆ ಸರಿ ಇದೆಯೇ ನೋಡಿಕೊಳ್ಳಿ. ಆಮೇಲೆ ಮುಂಗಡ ಹಣ ಕೊಡುವುದು ಲೇಸು.
– ಕನಿಷ್ಠ 30 ವರ್ಷ, ಗರಿಷ್ಠ 50 ವರ್ಷದ ದಾಖಲೆಗಳನ್ನು ಪರಿಶೀಲಿಸಿ. 
– ಆದಷ್ಟು ಕಡಿಮೆ ವಹಿವಾಟು ಅಂದರೆ, ಮೂರು ಅಥವಾ ನಾಲ್ಕು ಕೈ ಬದಲಾಗಿರುವ ಭೂಮಿ ಕೊಳ್ಳಿ.
 ಹೆಚ್ಚೆಚ್ಚೆ ಜನ ಕೊಂಡಿದ್ದರೆ ದಾಖಲೆ ಪರಿಶೀಲನೆ ಕೂಡ ಕಷ್ಟವಾಗುತ್ತದೆ. 
– ಸೈಟು, ಜಮೀನಿನ ಮೂಲ ದಾಖಲೆ ಅಂದರೆ ಅದನ್ನು ಮಾಲೀಕರು ಯಾವ ರೀತಿ ಪಡೆದರು, ಜಮೀನಿನ ಮೂಲ ವಾರಸುದಾರರು ಯಾರು ಎಂಬುದನ್ನು ವಿವರಿಸುವ ಮದರ್‌ಡೀಡ್‌ ಖಂಡಿತ ಇರಬೇಕು. 
– ಪ್ರಸ್ತುತ ಮಾಲೀಕರಿಗೆ ಎಷ್ಟು ಜನ ಮಕ್ಕಳು, ನೀವು ಖರೀದಿಸುತ್ತಿರುವ ಜಮೀನು ಅವರ ಪಿತ್ರಾರ್ಜಿತವೋ, ಸ್ವಯಾರ್ಜಿತ ಆಸ್ತಿಯೋ ಖಚಿತಮಾಡಿಕೊಳ್ಳಿ. 
 – ಭೂಮಿ ಕೊಂಡಾಕ್ಷಣ ಅದರಲ್ಲಿ ಕೃಷಿ ಮಾಡುವ ಹವ್ಯಾಸ ರೂಢಿಸಿಕೊಳ್ಳಿ. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಬೆಳೆಗಳನ್ನು ಹಾಕಿ. ಕಾಫಿ, ಅಡಿಕೆ ಬೆಳೆದರೆ ಲಾಭ ಸಿಗುತ್ತದೆ. ಅಡಿಕೆಯಿಂದ ವರ್ಷಕ್ಕೆ ಎಕರೆಗೆ ಕನಿಷ್ಠ ಒಂದು ಲಕ್ಷ ಲಾಭ ಸಿಗಬಹುದು. ಹೀಗೆ ಹೂಡಿಕೆ ಮಾಡುವುದರಿಂದ ಉಪಆದಾಯಕ್ಕೆ ದಾರಿ ಮಾಡಿಕೊಳ್ಳಬಹುದು.  ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಭೂಮಿಯ ಬೆಲೆ ಕೂಡ ಹೆಚ್ಚಾಗುತ್ತದೆ. 

ಕಟ್ಟೆ 

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.