ಕಿರಾಣಿ ಅಂಗಡಿಗಳ ಪುನಶ್ಚೇತನ


Team Udayavani, Nov 4, 2019, 4:09 AM IST

kirani

ಭಾರತದ ಕಿರಾಣಿ ಮಳಿಗೆಗಳು, ಅಥವಾ ಸ್ಥಳೀಯ ಡಬ್ಬಿ ಅಂಗಡಿಗಳು ದೇಶದ ಕಿರಾಣಿ ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ. 90ರಷ್ಟು ಪಾಲನ್ನು ಹೊಂದಿವೆ. ಜಾಗತಿಕ ರೀಟೇಲ್‌ ಮಾರಾಟಗಾರರು ಮತ್ತು ದೇಶೀಯ ಕಿರಾಣಿ ವ್ಯಾಪಾರಸ್ಥರ ನಡುವೆ ಸ್ಪರ್ಧೆ ಇಲ್ಲಿಯತನಕವೂ ನಡೆದೇ ಇದೆ.

ಕಳೆದ ಎರಡು ದಶಕಗಳಿಂದ, 58 ವರ್ಷದ ಶೆಟ್ಟರು ಮುಂಜಾನೆ ಜನರು ಏಳುವ ಮೊದಲೇ ತಮ್ಮ ಕಿರಾಣಿ ಅಂಗಡಿಯನ್ನು ತೆರೆಯುತ್ತಾರೆ. ತಮ್ಮ ಪ್ರತಿಯೊಬ್ಬ ಗ್ರಾಹಕರ ಬಗ್ಗೆ ಮತ್ತು ಅವರ ಬಳಕೆಯ ಅಭ್ಯಾಸದ ಸಂಕೀರ್ಣ ವಿವರಗಳೂ ಅವರಿಗೆ ಗೊತ್ತು! ಯಾರಿಗೆ ಏನು ಇಷ್ಟ, ಯಾವ ಯಾವ ಬ್ರ್ಯಾಂಡಿನ ಪದಾರ್ಥಗಳನ್ನು ಆಯಾ ಗ್ರಾಹಕರು ಖರೀದಿಸುತ್ತಾರೆ ಎಲ್ಲವನ್ನೂ ಗ್ರಾಹಕರು ಹೇಳದೆಯೂ ತಾವಾಗಿಯೇ ಕಳುಹಿಸಿ ಕೊಡುತ್ತಾರೆ.

ಇನ್ನೂ ಹೇಳಬೇಕೆಂದರೆ ಶೆಟ್ಟರ ಅಂಗಡಿ ಕಿರಾಣಿ ಅಂಗಡಿ ಮಾತ್ರವೇ ಅಲ್ಲ. ಸುತ್ತಮುತ್ತಲ ನಾಗರಿಕರಿಗೆ ಒಟ್ಟು ಸೇರಲು, ಪಾರ್ಸೆಲ್‌ ಮತ್ತು ಅಂಚೆಯ ಕಾಗದ ಪತ್ರಗಳನ್ನು ಕಲೆಕ್ಟ್ ಮಾಡಲು ಕೇಂದ್ರವೂ ಹೌದು. ಅಷ್ಟಕ್ಕೇ ನಿಲ್ಲದೆ ಶೆಟ್ಟರು ರಿಯಲ್‌ ಎಸ್ಟೇಟ್‌ ಏಜೆಂಟರ ಪಾತ್ರವನ್ನೂ ನಿರ್ವಹಿಸುವುದುಂಟು. ಸುತ್ತಮುತ್ತಲ ಮನೆಗಳ ಪರಿಚಯ ಅವರಿಗಿರುವುದರಿಂದ ಯಾವ ಮನೆ ಖಾಲಿ ಇದೆ, ಬಾಡಿಗೆ ಎಷ್ಟು ಎಂಬಿತ್ಯಾದಿ ಮಾಹಿತಿ ಅವರ ನಾಲಗೆ ತುದಿಯಲ್ಲೇ ಇರುತ್ತದೆ. ಇದು ಕಿರಾಣಿ ಅಂಗಡಿ ಮತ್ತು ಸ್ಥಳೀಯರ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.

ಬಿ2ಬಿ ಮಾದರಿಯಿಂದ ಪುನಶ್ಚೇತನ: ಆದರೆ ಶೆಟ್ಟರ ಅಂಗಡಿ ಆಗಲೇ ಜನಮಾನಸದಿಂದ ದೂರವಾಗಿರುವುದು ಸುಳ್ಳಲ್ಲ. ಅದಕ್ಕೆ ಕಾರಣವಾಗಿರುವುದು ರೀಟೇಲ್‌ ಮಳಿಗೆಗಳು, ಇ ಕಾಮರ್ಸ್‌ ಕ್ಷೇತ್ರ. ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ರೀಟೇಲ್‌ ಮಳಿಗೆಗಳಿಗೆ ಕೋಟ್ಯಂತರ ರೂಪಾಯಿ ಮೊತ್ತದ ಬಂಡವಾಳ ಹೂಡಿರುವ, ಜಾಗತಿಕ ಮಟ್ಟದಲ್ಲೇ ಹೆಸರು ಮಾಡಿರುವ ದೊಡ್ಡ ದೊಡ್ಡ ಸಂಸ್ಥೆಗಳ ಬೆಂಬಲವಿದೆ.

ಆದ್ದರಿಂದಲೇ ಹೆಚ್ಚು ಹೆಚ್ಚು ದರ ಕಡಿತ ಘೋಷಣೆ, ಹೋಮ್‌ ಡೆಲಿವರಿ ಮುಂತಾದ ಅತ್ಯಾಕರ್ಷಕ ಸವಲತ್ತುಗಳನ್ನು ನೀಡಲು ಸಾಧ್ಯವಾಗಿರುವುದು. ಅದರ ಹೊರತಾಗಿಯೂ ಕಿರಾಣಿ ಅಂಗಡಿಗಳು ಉಳಿದುಕೊಳ್ಳುವುದಕ್ಕೆ ಶೆಟ್ಟರು ತಮ್ಮ ಗ್ರಾಹಕರಿಗೆ ಒದಗಿಸುವ ವಿನೂತನ ಅನುಭವವೇ ಕಾರಣ. ಅಚ್ಚರಿಯೆಂದರೆ ದೊಡ್ಡ ಮಟ್ಟದ ರೀಟೇಲ್‌ ಸರಣಿಗಳಿಂದ ಕಿರಾಣಿ ಅಂಗಡಿಗಳಿಗೆ ಹೊಡೆತ ಬೀಳುತ್ತದೆ ಎಂದೇ ನಂಬಲಾಗಿತ್ತು.

ಒಂದೋ ಕಿರಾಣಿ ಅಂಗಡಿ ಇರುತ್ತದೆ ಇಲ್ಲವೇ ರೀಟೇಲ್‌ ಮಾಲ್‌ಗ‌ಳು ಇರುತ್ತವೆ ಎಂಬ ಅಭಿಪ್ರಾಯ ಎಲ್ಲರಲ್ಲಿತ್ತು. ಆದರೀಗ ರೀಟೇಲ್‌ ಮಳಿಗೆಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಕಿರಾಣಿ ಅಂಗಡಿಗಳ ಸಹಕಾರವನ್ನು ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಶೆಟ್ಟರ ಅಂಗಡಿಗಳಿಗೂ ಬೆಳೆಯುವ ಅವಕಾಶ ಸಿಕ್ಕಂತಾಗಿದೆ. ಇದಕ್ಕೆ ಉದಾಹರಣೆಯೆಂದರೆ ಮೆಟ್ರೊ ಕ್ಯಾಶ್‌ ಅ್ಯಂಡ್‌ ಕ್ಯಾರಿ.

ಅದು ಬಿ2ಬಿ (ಬಿಝಿನೆಸ್‌ ಟು ಬಿಝಿನೆಸ್‌) ಮಾದರಿಯಲ್ಲಿ ಕಾರ್ಯಚರಿಸುತ್ತದೆ. ಆನ್‌ಲೈನ್‌ ಇ ಕಾಮರ್ಸ್‌ ತಾಣಗಳು ಈಗಾಗಲೇ ಈ ಮಾದರಿಯನ್ನು ಅಳವಡಿಸಿಕೊಂಡಿವೆ. ಕಿರಾಣಿ ಅಂಗಡಿಗಳು ತಮ್ಮಲ್ಲಿನ ಉತ್ಪನ್ನಗಳನ್ನು ಮಾರಲು ಮೆಟ್ರೋ ವೇದಿಕೆ ಕಲ್ಪಿಸಿಕೊಡುತ್ತದೆ. ಈ ರೀತಿಯ ಯೋಜನೆಗಳು, ಕಿರಾಣಿ ಅಂಗಡಿಗಳು ಅಳಿವಿನಂಚಿಗೆ ತಲುಪುವುದನ್ನು ತಡೆಯಬಲ್ಲವು.

* ವಿಜಯಕುಮಾರ್‌ ಎಸ್‌. ಅಂಟೀನ

ಟಾಪ್ ನ್ಯೂಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.