ಬರಲಿದೆ ಬರಲಿದೆ ರೆಡ್‌ಮಿ ನೋಟ್‌ 7


Team Udayavani, Feb 25, 2019, 12:30 AM IST

redmi-note-7-press-shot-840×472.jpg

ಕೆಲವೊಂದು ಮೊಬೈಲ್‌ ಫೋನ್‌ಗಳು ಬಿಡುಗಡೆ ಆಗುವ ಮುನ್ನವೇ ಬಹಳ ಕ್ರೇಜ್‌ ಸೃಷ್ಟಿಸುತ್ತವೆ. ಫೆ. 28ರಂದು 
ಭಾರತದಲ್ಲಿ ಬಿಡುಗಡೆ ಆಗಲಿರುವ ಶಿಯೋಮಿಯವರ ರೆಡ್‌ಮಿ ನೋಟ್‌ 7 ಅಂಥದ್ದೊಂದು ಹೈಪ್‌  ಸೃಷ್ಟಿಸಿರುವ ಫೋನ್‌. ಗ್ರಾಹಕರ ಕೈಗೆಟುಕುವ ದರಕ್ಕೆ ಉತ್ತಮ ಪ್ರೊಸೆಸರ್‌, ರ್ಯಾಮ್‌, ಕ್ಯಾಮರಾ  ಇತ್ಯಾದಿ ಸ್ಪೆಸಿಫಿಕೇಷನ್‌ ನೀಡಿದ್ದರಿಂದ ಶಿಯೋಮಿ ಕಂಪೆನಿ ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಬಹುಬೇಗ ಪ್ರಸಿದ್ಧಿಯಾಗಿ, ನಂ. 1 ಸ್ಥಾನದಲ್ಲಿದ್ದ ಸ್ಯಾಮ್‌ಸಂಗ್‌ ಅನ್ನು ಹಿಂದೆ ಹಾಕಿ, ತಾನೇ ನಂ. 1 ಆಗಿದೆ. ಅದರ ಹೊಸ ಮಾಡೆಲ್‌ಗ‌ಳು ಬಿಡುಗಡೆಯಾದಾಗಲೆಲ್ಲ ಚೆನ್ನಾಗಿ ಮಾರಾಟ ಗುತ್ತವೆ. ನಾವು ದಿನನಿತ್ಯ ನೋಡುವ ಒಬ್ಬರ ಕೈಯಲ್ಲಾದರೂ ರೆಡ್‌ಮಿ ಫೋನ್‌ ಗಳಿರುತ್ತವೆ.  ರಿಂಗ್‌ಟೋನ್‌ ಮೊಳಗಿದಾಗ ಒಬ್ಬರಿಗೊಬ್ಬರಿಗೆ ಕನ್‌ಫ್ಯೂಸ್‌ ಕೂಡ ಆಗುತ್ತದೆ!

ಇಂತಿಪ್ಪ ರೆಡ್‌ಮಿ, ಗುರುವಾರ ರಿಲೀಸ್‌ ಮಾಡಲಿರುವ ಫೋನ್‌ಗಾಗಿ ಅದರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಧಿಕೃತವಾಗಿ ಕಂಪೆನಿ ರೆಡ್‌ಮಿ ನೋಟ್‌ 7 ನ ಸ್ಪೆಸಿಫಿಕೇಷನ್‌ಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಶಿಯೋಮಿಯ ತವರು ನಾಡು ಚೀನಾ ಮಾರುಕಟ್ಟೆಗೆ ಈಗಾಗಲೇ ಇದನ್ನು ಬಿಡುಗಡೆ ಮಾಡಲಾಗಿದೆ. ಅದರ ಆಧಾರದಲ್ಲಿ ಭಾರತದಲ್ಲೂ ಅದೇ ಸ್ಪೆಸಿಫಿಕೇಷನ್‌ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮಧ್ಯಮ ವರ್ಗದಲ್ಲಿ ಶಕ್ತಿಶಾಲಿಯಾದ ಸ್ನಾಪ್‌ಡ್ರಾಗನ್‌ 660 ಪ್ರೊಸೆಸರ್‌ ಇರಲಿದೆ. 6 ಜಿಬಿ ರ್ಯಾಮ್‌ 64 ಜಿಬಿ ಆಂತರಿಕ ಸಂಗ್ರಹ, 4 ಜಿಬಿ ರ್ಯಾಮ್‌, 64 ಜಿಬಿ

ಆಂತರಿಕ ಸಂಗ್ರಹ, 3 ಜಿಬಿ ರ್ಯಾಮ್‌, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರುವ ಮೂರು ಆವೃತ್ತಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. 6.3 ಇಂಚಿನ ಎಫ್ಎಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಇದೆ. ಅದಕ್ಕೆ  ನೀರಿನ ಹನಿಯಂಥ ನಾಚ್‌ ಇದೆ. ಪರದೆ ಸುಲಭವಾಗಿ ಒಡೆಯದಂತೆ ಕಾರ್ನಿಂಗ್‌ ಗೊರಿಲ್ಲಾ ಗಾಜಿನ ರಕ್ಷಣೆ ಸಹ ಇದಕ್ಕಿದೆ.

ಈ ಫೋನ್‌ 15 ಸಾವಿರ ರೂ. ಒಳಗೆ ಲಭ್ಯವಾಗಬಹುದೆಂಬ ನಿರೀಕ್ಷೆ ಇದೆ.  ಈ ಕೆಟಗರಿಯಲ್ಲಿ, ವೇಗದ ಚಾರ್ಜಿಂಗ್‌ ಸೌಲಭ್ಯ ಹಾಗೂ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ನೀಡಿರುವುದು ವಿಶೇಷ. ಆದರೆ ಬಾಕ್ಸ್‌ ಜೊತೆ ವೇಗದ ಚಾರ್ಜರ್‌ ನೀಡಲಾಗುತ್ತದೋ ಇಲ್ಲವೋ ಎಂಬುದನ್ನು ನೋಡಬೇಕು. ಅಲ್ಲದೇ ಈ ಫೋನ್‌ನ ಹಿಂಬದಿ ಆಕರ್ಷಕ ಹೊಳೆಯುವ ಗಾಜಿನ ವಿನ್ಯಾಸ ಮಾಡಲಾಗಿದೆ. ಶಿಯೋಮಿ ಫೋನ್‌ಗಳಲ್ಲಿ ಈ ರೀತಿಯ ವಿನ್ಯಾಸ ಇರಲಿಲ್ಲ. ಎಲ್ಲ ಮಾಡೆಲ್‌ಗ‌ಳು ಲೋಹದಲ್ಲಿ ಒಂದೇ ರೀತಿ ಇದ್ದವು. ಲೋಹ ಮತ್ತು ಗಾಜಿನ ದೇಹ, ಈ ಫೋನ್‌ ಅನ್ನು ಸುಂದರವಾಗಿಸಿವೆ.

ಕ್ಯಾಮರಾ ಮೆಗಾಪಿಕ್ಸಲ್‌ ಇದರ ವಿಶೇಷ: ಈ ಫೋನ್‌ ಸಂಚಲನ ಮೂಡಿಸಿರುವುದು ಮೇಲೆ ಹೇಳಲಾದ ವಿಶೇಷಣಗಳಿಗಲ್ಲ. ಇದರ ಮುಖ್ಯ ಅಂಶವಿರುವುದು, ಇದರ ಕ್ಯಾಮರಾದಲ್ಲಿ. ಇದು 48 ಮೆಗಾ ಪಿಕ್ಸಲ್‌ ಹಾಗೂ 5 ಮೆಗಾಪಿಕ್ಸಲ್‌ ಡುಯೆಲ್‌ ಲೆನ್ಸ್‌ ಹಿಂಬದಿ ಕ್ಯಾಮರಾ ಹೊಂದಿದೆ! 13 ಮೆಗಾ ಪಿಕ್ಸಲ್‌ ಸೆಲ್ಫಿà ಕ್ಯಾಮರಾ ಹೊಂದಿದೆ.

48 ಮೆಗಾಪಿಕ್ಸಲ್‌ ಎಂದರೆ ಅದು ಸಂಪೂರ್ಣ ನೈಜ 48 ಮೆಗಾ ಪಿಕ್ಸಲ್‌ ಅಲ್ಲ. ಈ ಕ್ಯಾಮರಾದಲ್ಲಿರುವುದು ಸ್ಯಾಮ್‌ಸಂಗ್‌ ಐಸೋಸೆಲ್‌ ಜಿಎಂ1 ಎಂಬ ಸೆನ್ಸರ್‌. ಇದು 48 ಮೆಗಾಪಿಕ್ಸಲರ್‌ ಉಳ್ಳ ಸೋನಿ ಐಎಂಎಕ್ಸ್‌ 586 ಸೆನ್ಸರ್‌ಗೆ ಸರಿ ಸಮವಲ್ಲ. ಸೋನಿ ಐಎಂಎಕ್ಸ್‌ 586 ಸೆನ್ಸರ್‌ನಲ್ಲಿ ಪಿಕ್ಸೆಲ್‌Yಳು ನೈಜ 48 ಮೆಗಾಪಿಕ್ಸಲ್‌ ರೆಸಲೂಶನ್‌ ಹೊಂದಿವೆ. ರೆಡ್‌ಮಿ ನೋಟ್‌ 7 ನಲ್ಲಿರುವ ಸ್ಯಾಮ್‌ಸಂಗ್‌ ಜಿಎಂ1 ಸೆನ್ಸರ್‌ನಲ್ಲಿ 12 ಮೆಗಾಪಿಕ್ಸಲ್‌ ಇದ್ದು, ಇದು ಚಿತ್ರಗಳನ್ನು 48 ಮೆಗಾಪಿಕ್ಸಲ್‌ ಅಗಿ ಪರಿವರ್ತಿಸುತ್ತದೆ ಎಂದು 91 ಮೊಬೈಲ್ಸ್‌ನ ಪ್ರಸಿದ್ಧ ವಿಮರ್ಶಕ ಅಭಿಮಾನ್‌ ಬಿಸ್ವಾಸ್‌ ಹೇಳುತ್ತಾರೆ. ಅಲ್ಲದೇ 48 ಮೆಗಾಪಿಕ್ಸಲ್‌ ಚಿತ್ರದ ರೆಸಲೂಷನ್‌ ಬರಬೇಕಾದರೆ ಕ್ಯಾಮರಾ ಇಂಟರ್‌ಫೇಸ್‌ನಲ್ಲಿ ಪ್ರೊ ಮೋಡ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಈಗ ಮೊಬೈಲ್‌ಗ‌ಳಲ್ಲಿ 48 ಮೆಗಾಪಿಕ್ಸಲ್‌ ರೇಸ್‌ ಆರಂಭವಾಗಿದೆ. ಸಾಮಾನ್ಯ ಜನರು ಹೆಚ್ಚು ಮೆಗಾಪಿಕ್ಸಲ್‌ ಇದ್ದಷ್ಟೂ ಫೋಟೋಗಳು ಹೆಚ್ಚು ಚೆನ್ನಾಗಿ ಬರುತ್ತವೆ ಎಂದು ನಂಬಿರುವುದರಿಂದ, ರೇಸ್‌ಗೆ ಬಿದ್ದ ಶಿಯೋಮಿ ತಾನೂ 48 ಮೆಗಾಪಿಕ್ಸಲ್‌ ಅನ್ನುತಾಂತ್ರಿಕವಾಗಿ ತೋರಿಸಿದೆ!

15 ಸಾವಿರದೊಳಗಿನ ಫೋನ್‌ನಲ್ಲಿ ಈ ಥರದ್ದೊಂದು ಪ್ರಯತ್ನಕ್ಕೆ ಶಿಯೋಮಿ ಮುಂದಾಗಿರುವುದು ಸ್ವಾಗತಾರ್ಹವೇ. ಈ ದರಕ್ಕೆ ಇದು ಒಳ್ಳೆಯ ಕ್ಯಾಮರಾ ಫೋನ್‌ ಆಗುವುದರಲ್ಲಿ ಸಂದೇಹವಿಲ್ಲ. 4000 ಎಂಎಎಚ್‌ ಬ್ಯಾಟರಿ, ಲೋಹ ಮತ್ತು ಗಾಜಿನ ಆಕರ್ಷಕ ವಿನ್ಯಾಸ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ವೇಗದ ಚಾರ್ಜಿಂಗ್‌, ಸ್ನಾಪ್‌ಡ್ರಾಗನ್‌ 660 ಪ್ರೊಸೆಸರ್‌, ಉತ್ತಮ ಕ್ಯಾಮರಾ, 15 ಸಾವಿರ ರೂ. ದರ ವಲಯದಲ್ಲಿರುವುದರಿಂದ ಈ ಫೋನ್‌ ಗ್ರಾಹಕರ ಮನ ಸೆಳೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ದೊರಕಲಿದ್ದು, ಫೋನ್‌ ಕೊಳ್ಳಲು ಸಾಮಾನ್ಯ ಗ್ರಾಹಕರು ಬಹಳ ಕಷ್ಟಪಡಬೇಕಾಗುತ್ತದೆ. ವಾರಕ್ಕೊಮ್ಮೆ ಫ್ಲಾಶ್‌ ಸೇಲ್‌ಗ‌ಳಿಗೆ ಕಾದು ಕೊಳ್ಳುವುದೆಂದರೆ ಅದೊಂದು ದೊಡ್ಡ ರಗಳೆ. ಮೊದಲ ಸೇಲ್‌ನಲ್ಲಿ 30 ಸೆಕೆಂಡಿನೊಳಗೆ ರೆಡ್‌ಮಿ 7, ಇಷ್ಟು ಲಕ್ಷ ಫೋನ್‌ ಖಾಲಿಯಾಯಿತೆಂದು ಶಿಯೋಮಿಯ ಭಾರತದ ಮುಖ್ಯಸ್ಥ ಮನುಕುಮಾರ್‌ ಜೈನ್‌ ಫೇಸ್‌ಬುಕ್‌ನಲ್ಲಿ, ಟ್ವಿಟರ್‌ನಲ್ಲಿ ಹಾಕಿಕೊಳ್ಳುವುದಂತೂ ಖಚಿತ!

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.