ಅರಣ್ಯ ಕೃಷಿಯಿಂದ ಆದಾಯ


Team Udayavani, Aug 6, 2018, 6:00 AM IST

rudhey-krushi-2.jpg

ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ 67 ವರ್ಷ ವಯಸ್ಸಿನ ವೃದ್ಧೆ ಲಕ್ಷ್ಮವ್ವ ರಂಗಪ್ಪ ಬೂದಿಹಾಳ, ತಮ್ಮ ನಾಲ್ಕು ಎಕರೆ ಗುಡ್ಡದಲ್ಲಿ ಕೃಷಿ ಅರಣ್ಯದಲ್ಲಿ ತೊಡಗಿದ್ದಾರೆ. ಕೃಷಿ ಭೂಮಿಯಲ್ಲಿಯೂ ಅರಣ್ಯ ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ಸಸಿಗಳನ್ನು ವಿತರಿಸುತ್ತಿದೆ. ಈ ಯೋಜನೆಯಡಿ ಲಕ್ಷ್ಮವ್ವ ಒಂದು ಸಾವಿರ ಕರಿಬೇವು, ಒಂದು ನೂರು ದೊಡ್ಡ ಬೇವು ಬೆಳೆಸಿದ್ದಾರೆ. ಸ್ವಂತ ಖರ್ಚಿನಲ್ಲಿ 1010 ತೇಗು, 170 ಮಾವು, 20 ಪೇರಲೆ, ಲಿಂಬು ಸಸಿ ಹಚ್ಚಿದ್ದು, ಪ್ರಾಯೋಗಿಕವಾಗಿ ಎರಡು ಶ್ರೀಗಂಧದ ಸಸಿ ನೆಟ್ಟಿದ್ದಾರೆ. ಗಿಡಗಳ ಮಧ್ಯೆ ಅಂತರ ಬೆಳೆಗಳಾಗಿ ಔಡಲ, ನವಣಿ ಬೆಳೆಯುತ್ತಿದ್ದು, ಕಳೆದ ವರ್ಷ 12 ಚೀಲ ನವಣಿ ಇಳುವರಿ ಪಡೆದಿದ್ದಾರೆ.

ವೃದ್ಧೆಯ ಕೃಷಿ ಆಸಕ್ತಿ
1999ರಲ್ಲಿ ಲಕ್ಷ್ಮವ್ವ ಅವರ ಪತಿ ರಂಗಪ್ಪ ನಿಧನರಾದರು.  ಲಕ್ಷ್ಮವ್ವ ಆಗ ಕುಟುಂಬದ ಜವಾಬ್ದಾರಿ ಹೊತ್ತ ಲಕ್ಷ್ಮವ್ವ ಮಗಳಿಗೆ ಶಿಕ್ಷಣ ಕೊಡಿಸಿ, ಮದುವೆ ಮಾಡಿದರು. ನಂತರ ಕೃಷಿಯತ್ತ ಮುಖ ಮಾಡಿದರು. ಪಡ (ಉಳುಮೆ ಮಾಡದ) ಬಿಟ್ಟಿದ್ದ ಜಮೀನಿನಲ್ಲಿ 2014ರಲ್ಲಿ ಉಳುಮೆಗೆ ಮುಂದಾದರು. ಸುಮಾರು 18 ವರ್ಷ ಪಡ ಬಿಟ್ಟಿದ್ದ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿಯಾ? ನಿನಗೆ ಇನ್ನಾದರೂ ಯಾರು ದಿಕ್ಕು? ಸುಮ್ನೆ ಅರಾಮವಾಗಿ ಇದ್ದು ಬಿಡು ಎಂದು ಹೇಳಿದವರೇ ಹೆಚ್ಚು. ಆದರೂ ಕೃಷಿ ಆಸಕ್ತಿ ಲಕ್ಷ್ಮವ್ವನನ್ನು ಮನೆಯಲ್ಲಿರಲು ಬಿಡಲಿಲ್ಲ. ಪತಿ ದುಡಿದ ಜಮೀನಿನಲ್ಲಿ ಕೃಷಿ ಕಾಯಕಕ್ಕೆ ಮುಂದಾದರು. ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಜಮೀನನ್ನು ಸಮತಟ್ಟು ಮಾಡಿಸಿದರು. ಜಮೀನಿಗೆ ತಂತಿ ಬೇಲಿ, ಬೋರ್‌ವೆಲ್‌ ಹಾಕಿಸಿದರು. 

ಹರಿಯುವ ನೀರು ನಿಲ್ಲಿಸು-ಇಂಗಿಸು
ಗುಡ್ಡದ ಜಮೀನಿನಲ್ಲಿ ಮಳೆಗಾಲದಲ್ಲಿ ಮಣ್ಣು ಕೊರತೆ ಆಗದಂತೆ ನೋಡಿಕೊಳ್ಳಲು ಮತ್ತು ಬೆಳೆಗಳ ರಕ್ಷಣೆಗಾಗಿ ಜಮೀನು ಸುತ್ತ ಕಾಲುವೆ ಮಾಡಿದ್ದಾರೆ. ಮೆಟ್ಟಿಲು ಆಕಾರದಲ್ಲಿ ಗುಡ್ಡವನ್ನು ಸಮತಟ್ಟು ಮಾಡಿವುದರಿಂದ ಮಳೆಗಾಲದಲ್ಲಿ ಹರಿಯುವ ನೀರನ್ನು ನಿಲ್ಲುವಂತೆ ಮಾಡಿದ್ದಾರೆ. ನಿಂತ ನೀರು ಜಮೀನಿನ ಸುತ್ತಲಿನ ಕಾಲುವೆಯಲ್ಲಿ ಇಂಗುತ್ತದೆ. ಇದರಿಂದ ಬೆಳೆ ಹಸಿರಿನಿಂದ ಕಂಗೊಳಿಸುತ್ತಿ¤ದೆ. ಬೇಸಿಗೆಯಲ್ಲಿ ಮಾತ್ರ ಗಿಡಗಳಿಗೆ ಬೋರ್‌ವೆಲ್‌ ನೀರು ಬಳಸುವ ಲಕ್ಷ್ಮವ್ವನ ಜಾಣತನ ಮೆಚ್ಚಲೇಬೇಕು. ಸದ್ಯ ಗಂಗಾ ಕಲ್ಯಾಣ ಯೋಜನೆಯಡಿ ಮತ್ತೂಂದು ಬೋರ್‌ವೆಲ್‌ ಹಾಕಿಸಿರುವ ಲಕ್ಷ್ಮವ್ವ, ಶ್ರೀಗಂಧದ ಸಸಿ ನೆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈಚೆಗೆ ಧಾರವಾಡದಲ್ಲಿ ನಡೆದ ವಿಭಾಗೀಯ ಕೃಷಿ ಅರಣ್ಯ ಕಾರ್ಯಾಗಾರದಲ್ಲಿ ರಾಜ್ಯ ಅರಣ್ಯ ಸಚಿವ ಆರ್‌. ಶಂಕರ, ವೃದ್ಧೆ ಲಕ್ಷ್ಮವ್ವ ಬೂದಿಹಾಳ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ.

ಸವಾಲಿಗೆ ಮರು ಸವಾಲು!
ಲಕ್ಷ್ಮವ್ವ ತನ್ನ ಗುಡ್ಡದ ಜಮೀನನ್ನು ಬುಲ್ಡೋಜರ್‌ ಮೂಲಕ ಸಮತಟ್ಟು ಮಾಡಿಸುತ್ತಿದ್ದಳು. ಜಮೀನಿನಲ್ಲಿದ್ದ ಕಲ್ಲು ಮತ್ತು ಗರ್ಸು ಮಣ್ಣು ನೋಡಿದ ಚಾಲಕ, ಇಂಥ ಭೂಮಿಯಲ್ಲಿ ಏನು ಬೆಳೆಯಲು ಸಾಧ್ಯ? ಸುಮ್ನೆ ಹಣ ಖರ್ಚು. ಅಷ್ಟಕ್ಕೂ ನಿನ್ನಂತಹ ವೃದ್ಧೆಯಿಂದ ಏನು ಬೆಳೆಯಬಹುದು ಎಂದು ಸವಾಲು ಹಾಕಿದ. ಆಗ ಲಕ್ಷ್ಮವ್ವ, ನಾಲ್ಕು ವರ್ಷದ ನಂತರ ಹೊಲಕ್ಕೆ ಬಾ. ಆಗ ಈ ಪ್ರಶ್ನೆ ಕೇಳು ಎಂದು ಮರು ಸವಾಲು ಹಾಕಿದಳು. ಅದರಂತೆ ಇಡೀ ಗ್ರಾಮಸ್ಥರು ಆಶ್ಚರ್ಯ ಪಡುವಂತೆ ಕೃಷಿ ಅರಣ್ಯದಲ್ಲಿ ತೊಡಗಿರುವ ಲಕ್ಷ್ಮವ್ವನಿಗೆ ಸದ್ಯಕ್ಕೆ ಆದಾಯ ಇಲ್ಲದಿದ್ದರೂ ಇನ್ನ 10 ವರ್ಷಕ್ಕೆ ಲಕ್ಷಾಂತರ ರೂ. ಲಾಭ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

– ಶರಣು ಹುಬ್ಬಳ್ಳಿ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.