ಮಕ್ಕಳ ಭವಿಷ್ಯ ಬಂಗಾರವಾಗಲಿ!


Team Udayavani, Apr 29, 2019, 5:02 PM IST

Isiri-Fund

ಮಕ್ಕಳ ಭವಿಷ್ಯಕ್ಕಾಗಿ ತಾವು ಯಾವಾಗ ಹೂಡಿಕೆ ಆರಂಭಿಸಬೇಕು ಎಂಬ ಗೊಂದಲದಲ್ಲೇ ಹಲವರು ಬದುಕುತ್ತಿರುತ್ತಾರೆ. ಇನ್ನು ಕೆಲವರು, ಹೂಡಿಕೆಯ ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮತ್ತೂಂದಷ್ಟು ಜನ, ತಡವಾಗಿಯಾದರೂ ಆರಂಭಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ನಿಧಾನವಾಗಿಯೇ ಬಂದಿರುತ್ತಾರೆ.

ಮಕ್ಕಳ ಭವಿಷ್ಯದ ಗುರಿಯನ್ನು ಸಾಧಿಸಲು ದೀರ್ಘಾವಧಿ ಹೂಡಿಕೆ ಅತ್ಯವಶ್ಯ. ಹಾಗಿದ್ದರೂ, ಶೇ.35ರಷ್ಟು ಹೆತ್ತವರಿಗೆ ಯಾವ ಮಾಧ್ಯಮದಲ್ಲಿ ದೀರ್ಘಾವಧಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊಂದಲ ಅಥವಾ ತಿಳಿವಳಿಕೆಯ ಕೊರತೆ ಇರುತ್ತದೆ.

ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಾವು ಯಾವಾಗ ಹೂಡಿಕೆಯನ್ನು ಆರಂಭಿಸಬೇಕು ಎಂಬ ಗೊಂದಲದಲ್ಲೇ ಕೆಲವರು ಬದುಕುತ್ತಿರುತ್ತಾರೆ. ಇನ್ನು ಹಲವರು ಹೂಡಿಕೆಯ ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮತ್ತೂಂದಷ್ಟು ಜನ, ತಡವಾಗಿಯಾದರೂ ಆರಂಭಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ನಿಧಾನವಾಗಿಯೇ ಬಂದಿರುತ್ತಾರೆ.

ಹಾಗಾದರೆ ಇದಕ್ಕೆ ಈ ಯುಲಿಪ್‌ ಯೋಜನೆ ಒಳ್ಳೆಯದೇ, ಸುಕನ್ಯಾ ಸಮೃದ್ಧಿ ಯೋಜನೆ ಆದೀತೇ, ಪಿಪಿಎಫ್ ಆದೀತೇ, ಬ್ಯಾಂಕ್‌ ನಿರಖು ಠೇವಣಿ ಒಳ್ಳೆಯದೇ, ಚಿನ್ನ ಖರೀದಿಸಿಡುವುದು ಬುದ್ಧಿವಂತಿಕೆಯಾದೀತೇ, ರಿಯಲ್ ಎಸ್ಟೇಟ್ (ಭೂ ಹೂಡಿಕೆ) ಉತ್ತಮವಾದೀತೇ ? ಎಂಬ ಪ್ರಶ್ನೆಗಳು ಕಾಡುತ್ತಿರುತ್ತವೆ. ಆದರೆ ಬಹಳಷ್ಟು ಮಂದಿ ತಪ್ಪು ಸಲಹೆಗಳಿಗೆ ಮಾರು ಹೋಗಿ ಕೈ ಸುಟ್ಟುಕೊಳ್ಳುತ್ತಾರೆ.

ಮಕ್ಕಳ ಭವಿಷ್ಯದ ಗುರಿ ಸಾಧನೆಗೆ ಹಣ ಹೂಡಿಕೆ ಆರಂಭಿಸುವ ಮೊದಲು ಸಾಧಿಸಬೇಕಾದ ಗುರಿಯ ಬಗ್ಗೆ ನಿಖರತೆ ಇರುವುದು ಒಳ್ಳೆಯದು. ಹೆತ್ತವರಲ್ಲಿ ಶೇ.35 ಮಂದಿಗೆ ತಮ್ಮ ಮಕ್ಕಳ ಶಿಕ್ಷಣವೇ ತಮ್ಮ ಬದುಕಿನ ಬಲುದೊಡ್ಡ ಸವಾಲಿನ ಪ್ರಶ್ನೆಯಾಗಿರುತ್ತದೆಯಂತೆ. ಮ್ಯೂಚುವಲ್ ಫ‌ಂಡ್‌ನ‌ಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ಪ್ಲಾನ್‌( ಸಿಪ್‌) ಮೂಲಕ ಆರಂಭಿಸ­ಲಾಗುವ ಹೂಡಿಕೆ ನಿಯಮಿತವಾಗಿ­ರುತ್ತದೆ ಎಂಬುದು ಖರೆ.

ತಿಂಗಳ ನಿರ್ದಿಷ್ಟ ಕಂತಿನ ಸಿಪ್‌ ಮೂಲಕ ಹಣ ಹೂಡುವ ಸೌಕರ್ಯ ಮ್ಯೂಚುವಲ್ ಫ‌ಂಡ್‌ ಹೂಡಿಕೆಯಲ್ಲಿ ಇರುತ್ತದೆ. ಆದರೆ ನಮ್ಮ ಗುರಿ ಕಿರು ಅವಧಿಯದ್ದೇ, ಮಧ್ಯಮಾ­ವಧಿ­ಯದ್ದೇ ಅಥವಾ ದೀರ್ಘಾವಧಿ­ಯದ್ದೇ ಎಂಬುದನ್ನು ಮೊದಲು ತೀರ್ಮಾನಿಸಬೇಕಿರುತ್ತದೆ.

ಎಂಟರಿಂದ ಹತ್ತು ವರ್ಷಗಳ ದೀರ್ಘಾವಧಿಯ ಗುರಿ ಸಾಧನೆಯ ಉದ್ದೇಶವಿದ್ದರೆ ಈಕ್ವಿಟಿ ಫ‌ಂಡ್‌ ಅಥವಾ ಡೈವರ್ಸಿಫೈಡ್‌ ಈಕ್ವಿಟಿ ಫ‌ಂಡ್‌ಗಳಲ್ಲಿ ಹೂಡಿಕೆ ಆಕರ್ಷಕವಾಗಿರುತ್ತದೆ. ಏಕೆಂದರೆ ಇದರಲ್ಲಿ ಶೇ.12ರ ಗರಿಷ್ಠ ಇಳುವರಿ, ಹೂಡಿಕೆ ರಿಸ್ಕ್ ಎಂಬುದು ನಗಣ್ಯವಾಗಿರುತ್ತದೆ. ಹಾಗಿದ್ದರೂ, ಹೂಡಿಕೆಯ ವಿಷಯದಲ್ಲಿ ಲಾರ್ಜ್‌ ಮತ್ತು ಮಿಡ್‌ ಕ್ಯಾಪ್‌ ಫ‌ಂಡ್‌ಗಳ ಮಿಶ್ರಣವನ್ನು ಆಯ್ಕೆ ಮಾಡುವುದೇ ಲೇಸು.

ಇ.ಎಲ್.ಎಸ್‌.ಎಸ್‌. ಮೂಲಕದ ಹೂಡಿಕೆಯಲ್ಲಿ , ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್‌ ಸ್ಕೀಮ್ ಮೂಲಕದ ಹೂಡಿಕೆಯಲ್ಲಿ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುತ್ತದೆ ಮತ್ತು ಹೂಡಿಕೆಯ ಲಾಕ್‌ ಇನ್‌ ಪೀರಿಯಡ್‌ ಕೇವಲ ಮೂರು ವರ್ಷಗಳ ಅವಧಿಗಿರುತ್ತದೆ. ಮ್ಯೂಚುವಲ್ ಫ‌ಂಡ್‌ ಹೂಡಿಕೆಯ ಇಳುವರಿಯು ಮಾರುಕಟ್ಟೆಗೆ ಅನುಗುಣವಾಗಿ ಅತ್ಯುತ್ತಮ ಇಳುವರಿಯನ್ನು ಕೊಡುವುದರಿಂದ ಇವು ಆಕರ್ಷಕ ಹೂಡಿಕೆಯ ಮಾಧ್ಯಮಗಳಾಗಿರುತ್ತವೆ.

ಸಾಮಾನ್ಯವಾಗಿ ಮ್ಯೂಚುವಲ್ ಫ‌ಂಡ್‌ಗಳಲ್ಲಿ ಮಕ್ಕಳ ಭವಿಷ್ಯದ ಗುರಿಯನ್ನು ನಿರ್ಧರಿಸಿ ಈ ಕೆಳಗಿನ ರೀತಿಯಲ್ಲಿ ಹೂಡಿಕೆಗೆ ತೊಡಗುವುದು ಸಮಂಜಸವಾಗಿರುತ್ತದೆ: ಲಾಂಗ್‌ ಟರ್ಮ್: ಎಂಟಕ್ಕಿಂತ ಹೆಚ್ಚು ವರ್ಷದ ಅವಧಿ : ಈಕ್ವಿಟಿ ಅಥವಾ ಈಕ್ವಿಟಿ ಓರಿಯೆಂಟೆಡ್‌ ಫ‌ಂಡ್‌, ಇಎಲ್.ಎಸ್‌.ಎಸ್‌. – ಈಕ್ವಿಟಿ : ಶೇ.80-85, ಡೆಟ್ : ಶೇ.15-20. ಮಧ್ಯಮಾವಧಿ: 5ರಿಂದ 7 ವರ್ಷ : ಬ್ಯಾಲೆನ್ಸ್‌ ಅಥವಾ ಹೈಬ್ರಿಡ್‌ ಫ‌ಂಡ್‌ ಹೂಡಿಕೆ ಹಂಚಿಕೆ : ಈಕ್ವಿಟಿ ಶೇ.60-65; ಡೆಟ್‌ : ಶೇ.35-40 ಕಿರು ಅವಧಿ : 2 ರಿಂದ 3 ವರ್ಷ ಅವಧಿ : ಹೂಡಿಕೆ ಹಂಚಿಕೆ : ಈಕ್ವಿಟಿ : ಶೇ.25 ರಿಂದ ಶೇ.30; ಡೆಟ್ : ಶೇ.70-75.

— ಸತೀಶ್‌ ಮಲ್ಯ

ಟಾಪ್ ನ್ಯೂಸ್

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.