ಕುರಿ ಸಾಕಿದರೆ ಕೈತುಂಬಾ ಕಾಂಚಾಣ


Team Udayavani, Sep 21, 2020, 8:21 PM IST

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

‌ಕುರಿ ಮತ್ತು ಮೇಕೆ ಸಾಕುವುದನ್ನು ಕೃಷಿಯೊಂದಿಗಿನ ಉಪಕಸುಬು ಎಂದು ನಂಬಿದ ದಿನಗಳೂ ಇದ್ದವು. ಈಗಕಾಲ ಬದಲಾಗಿದೆ.ಕುರಿ ಸಾಕಣೆ ಇದೀಗ ಲಾಭದಾಯಕ ಉದ್ಯಮವಾಗಿದೆ. ಅದಕ್ಕೊಂದು ವಾಣಿಜ್ಯ ಆಯಾಮವೂ ದೊರಕಿದೆ. ಈವರೆಗೂ 10-20ಕುರಿಗಳು ಅಥವಾ ಅಷ್ಟೇ ಸಂಖ್ಯೆಯ ಮೇಕೆಗಳನ್ನು ಸಾಕುವುದರಲ್ಲಿಯೇ ತೃಪ್ತಿಕಾಣುತ್ತಿದ್ದ ರೈತರು, ಇದೀಗ ಕುರಿ ಸಾಕಣೆಯನ್ನೇ ಸಂಪಾದನೆಯ ಹೊಸ ಮಾರ್ಗವಾಗಿ ಮಾಡಿಕೊಂಡಿದ್ದಾರೆ.

ಉದ್ಯೋಗ ನಿಮಿತ್ತ ಸಿಟಿಗೆ ಹೋಗುವ ಬದಲುಕುರಿ ಸಾಕಣೆಯಿಂದಲೇ ಸಾಕಷ್ಟು ಲಾಭ ಮಾಡಬಹುದು ಎಂದು ಯೋಚಿಸಿ, ಯುವಕರೂ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೊಂದು ಉದಾಹರಣೆ, ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ಪೆತ್ತನಹಳ್ಳಿ ಗ್ರಾಮದ ಪದವೀಧರ ಅರುಣ್‌ಕುಮಾರ್‌. ಮೊನ್ನೆಮೊನ್ನೆಯವರೆಗೂ ಈತಕೃಷಿಯಲ್ಲಿ ತೊಡಗಿಕೊಂಡಿದ್ದರು.ಕೃಷಿಯಲ್ಲಿ ನಷ್ಟವಾದಾಗ,ಕುರಿ ಸಾಕಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಈಗ, ಆಧುನಿಕ ರೀತಿಯಲ್ಲಿ ಶೆಡ್‌ ನಿರ್ಮಿಸಿ, 100ಕ್ಕೂ ಹೆಚ್ಚು ಕುರಿಗಳನ್ನು ಸಾಕುತ್ತಿದ್ದಾರೆ. ನಾರಿ ಸುವರ್ಣ, ಶಿರಾ , ನಾಟಿ ತಳಿಯ ಕುರಿಗಳನ್ನು ಅವರ ಫಾರ್ಮ್ ನಲ್ಲಿ ಕಾಣಬಹುದು. ನೆಲದಿಂದ5 ಅಡಿ ಎತ್ತರದಲ್ಲಿ50 ಅಡಿ ಅಗಲ ಮತ್ತು50 ಅಡಿ ಉದ್ದದ ವ್ಯವಸ್ಥಿತ ಶೆಡ್‌ ನಿರ್ಮಿಸಿದ್ದಾರೆ.

ಮೇವು ಹಾಕಲು ಪ್ಲಾಸ್ಟಿಕ್‌ ಬಾನಿ ಮಾಡಿಕೊಂಡಿದ್ದಾರೆ. ಕುರಿಸಾಕಣೆಗೆ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ ಗಳಿಂದ ಸಾಲ ಸೌಲಭ್ಯವಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ಕೆಲವೊಂದು ಬ್ಯಾಂಕ್‌ ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸದ್ಯದ ಸಂದರ್ಭದಲ್ಲಿ,ಕುರಿ ಸಾಕಲು ಯೋಚಿಸುವವರಿಗೆ ಇದೊಂದು ಕೊರತೆ ಎನ್ನಬಹುದು. ಒಂದು ಅಥವಾ ಒಂದೂವರೆ ತಿಂಗಳಕುರಿ ಮರಿಯ ಬೆಲೆ 1000 ದಿಂದ1500 ರೂಪಾಯಿಗಳು. ಅದನ್ನು ಒಂದು ವರ್ಷಕಾಲ ಉತ್ತಮ ಆಹಾರ ನೀಡಿ ಸಾಕಿದರೆ, ಆ ಕುರಿ 25 ರಿಂದ30 ಕೆ. ಜಿ ವರಗೆ ತೂಕ ಬರುತ್ತದೆ. ಈಗ, ಒಂದು ಕೆ.ಜಿ.ಕುರಿ ಮಾಂಸದ ಬೆಲೆ750 ರಿಂದ800 ರೂ. ವರೆಗೂ ಇದೆ. ಹಾಗಾಗಿ ಕುರಿ ಸಾಕಣೆಯಿಂದ ನಷ್ಟವಂತೂ ಆಗುವುದಿಲ್ಲ ಅನ್ನುವುದು ಹಲವರ ಮಾತು.

ಸಾಮಾನ್ಯವಾಗಿ ಕುರಿಗಳು ಮೇವಿನಲ್ಲಿರುವ ಎಲೆ ತಿಂದುಕಾಂಡವನ್ನು ಬಿಟ್ಟು ಬಿಡುತ್ತವೆ. ಈ ರೀತಿ ಮೇವು ವ್ಯರ್ಥವಾಗುವುದನ್ನು ತಡೆಯಲು ನಾವು ಮೇವುಕತ್ತರಿಸುವಯಂತ್ರ ಬಳಸುತ್ತೇವೆ. ಹಸಿರು ಮೇವನ್ನುಕತ್ತರಿಸಿ ಅದಕ್ಕೆ ಬೆಲ್ಲ ಹಾಗೂ ಉಪ್ಪನ್ನು ಮಿಶ್ರಣ ಮಾಡಿ, 20 ದಿನಗಳವರಗೆ ಶೇಖರಣೆ ಮಾಡಿ ನಂತರ ಕುರಿಗಳಿಗೆ ಹಾಕುತ್ತೇವೆ. ಬೆಲ್ಲ ಮತ್ತು ಉಪ್ಪು ಮಿಶ್ರಿತ ಆಹಾರ ಸೇವನೆಯಿಂದಕುರಿಗಳು ಚೆನ್ನಾಗಿ ಬೆಳೆಯುತ್ತವೆ. ಅರುಣ್‌ ಕುಮಾರ್‌, ಕೃಷಿಕ

 

-ಎನ್‌. ಮಹೇಶ್‌ ಆರಾಧ್ಯ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.