ಲಾಕ್‌ಡೌನ್‌ ತಂದ ಲಕ್‌


Team Udayavani, Nov 23, 2020, 9:37 PM IST

ಲಾಕ್‌ಡೌನ್‌ ತಂದ ಲಕ್‌

ಈ ಕೋವಿಡ್ ಬ್ಯಾನಿ ಬಂದ್ಮೇಲೆ ಎಲ್ಲಾ ದಂಧೆ ಬಂದ್‌ ಆಗ್ಯಾವ್‌ ಸರ್‌, ಆಗ ಕೆಲ್ಸವಿಲ್ಲಾಂತ ಎಲ್ಲಾ ಮನ್ಯಾಗ್‌ ಲಾಕ್‌ ಆಗಿ ಕುಂತಿದ್ದರು. ಆದ್ರೆ ನಾ ಮಾತ್ರ ಮನ್ಯಾಗ್‌ ಸುಮ್ಮನೆಕುಂತಿಲ್ಲ ನೋಡ್ರಿ. ಏಪ್ರಿಲ್‌ನಿಂದ ಆಗಸ್ಟ್ ತನಕ ನಾಕೆಲ್ಸಾ ಮಸ್ತ್ ಮಾಡಿದಾ, ಬ್ಯಾಸಕಿದಾಗ ಹಾಳಾಗಿದ್ದು ಲಾಕ್‌ಡೌನ್‌ದಾಗ ಭರ್ತಿ ಆಗ್ಯಾದ್‌, ಮನ್ಯಾಗ್‌ ಕುಂತೇ ಇಷ್ಟುಕೆಲ್ಸ ಮಾಡಿದ್ದೇನೆ ಎನ್ನುತ್ತಾರೆ, ಈರಪ್ಪಾಕುಂಬಾರ.

ಈರಪ್ಪಾ ಅವರು ಬೀದರ್‌ ಜಿಲ್ಲೆಯ ಔರಾದ ಪಟ್ಟಣದ ನಿವಾಸಿ, ಇವರ ವೃತ್ತಿಕುಂಬಾರಿಕೆ. ಮಣ್ಣಿನ ಉತ್ಪನ್ನಗಳನ್ನು ಸಿದ್ಧಪಡಿಸುವುದು, ಅವುಗಳನ್ನುಚಿಲ್ಲರೆ ಅಥವಾ ಸಗಟು ವ್ಯಾಪಾರಿಗಳಿಗೆ ತಕ್ಕಬೆಲೆಗೆ ಮಾರಾಟ ಮಾಡುವುದು ಅವರಕಸುಬು.ಪ್ರತಿ ವರ್ಷ ಬೇಸಿಗೆಕಾಲದಲ್ಲಿ ಅಗತ್ಯವಾಗಿ ಬೇಕಾಗುವ ತಂಪು ನೀರಿಗಾಗಿ ಮಣ್ಣಿನ ಮಡಿಕೆಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ ಈ ಸಲ ಕೋವಿಡ್‌ ಲಾಕ್‌ಡೌನ್‌ನಿಂದ, ಮಣ್ಣಿನ ಪರಿಕರಗಳು ಮಾರಾಟವಾಗದೆ ಹಾಗೇ ಉಳಿದುಕೊಂಡಿದ್ದವು. “ಲಾಕ್‌ಡೌನ್‌ ಸಂದರ್ಭದಲ್ಲಿ ಬಹುತೇಕ ಜನರುಕೆಲಸ ಕಳೆದುಕೊಂಡಿದ್ದರು.ಕೈಗಾರಿಕೆ,ಕಂಪನಿ, ಹೋಟೆಲ್‌ ಸೇರಿದಂತೆ ಎಲ್ಲವೂ ಬಂದ್‌ ಆಗಿದ್ದವು. ಇದನ್ನೆಲ್ಲಾ ಗಮನಿಸಿದಾಗ ನನಗೂ ಒಮ್ಮೆ ಭಯವಾಗಿದ್ದು ನಿಜ. ಆದರೆ ನಾನು ಮಡಿಕೆ ತಯಾರಿಸುವುದನ್ನು ನಿಲ್ಲಿಸಲಿಲ್ಲ.ಕಾಲಕ್ರಮೇಣ ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆ ಬರತೊಡಗಿತು.ಕಳೆದ ಏಪ್ರಿಲ್‌ ನಿಂದ ಸೆಪ್ಟೆಂಬರ್‌ವರೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ರೂಪಾಯಿಗಳ ಸಂಪಾದನೆ ಮಾಡಿದ್ದೇನೆ’ ಅನ್ನುತ್ತಾರೆ ಈರಪ್ಪ.

ಪ್ಲಾಸ್ಟಿಕ್‌, ಅಲ್ಯುಮಿನಿಯಂ, ಸ್ಟೀಲ್‌ ಬಳಕೆಯೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಮಣ್ಣಿನಕಲಾಕೃತಿಗಳ ಬಳಕೆ ತೀರಾಕಡಿಮೆಯಾಗಿದೆ. ಆದರೆ ಮದುವೆ, ಮುಂಜಿ, ಹಬ್ಬ, ಹುಣ್ಣಿಮೆ ಸೇರಿ ಇತರೆಕಾರ್ಯಗಳಿಗೆ ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆಯಿದೆ. ಬೆವರು ಸುರಿಸಿ ದುಡಿದರೆ ಹೀಗೂ ಲಾಭ ಗಳಿಸಬಹುದು ಎನ್ನುವುದಕ್ಕೆ ಈರಪ್ಪಾಕುಂಬಾರ ಅವರ ವೃತ್ತಿ ಒಂದು ತಾಜಾ ಉದಾಹರಣೆ. ಇವತ್ತಿನ ದಿನಗಳಲ್ಲಿ ಕುಂಬಾರಿಕೆ ಅನ್ನುವುದು ಲಾಭದಾಯಕ ಉದ್ಯೋಗ ಅಲ್ಲದೆ ಇದ್ರೂ ಜೀವನ ನಿರ್ವಹಣೆಗೆ ಸಹಕಾರಿ ಎಂಬುದಂತೂ ನಿಜ.

 

-ಬಾಲಾಜಿ ಕುಂಬಾರ, ಚಟ್ನಾಳ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.