ಮತ್ತೆ ಬಾ ಎಂದು ಕರೆಯುತ್ತೆ ಮಧು ಒಗ್ಗರಣೆ ಮಂಡಕ್ಕಿ


Team Udayavani, Jul 15, 2019, 5:02 AM IST

hotel

ಹರಿಹರದಿಂದ ಶಿವಮೊಗ್ಗಕ್ಕೆ ಹೋಗುವಾಗ, ಮಲೆಬೆನ್ನೂರು ದಾಟಿದರೆ ಕೋಮಾರನಹಳ್ಳಿ ಸಿಗುತ್ತದೆ. ಈ ಗ್ರಾಮಕ್ಕೆ ಎಂಟ್ರಿ ಕೊಟ್ರೆ ಸಾಕು; ಅಲ್ಲಿ ಸಾಲು ಸಾಲಾಗಿ ಕಾರುಗಳು ನಿಂತಿರುವ ದೃಶ್ಯ ಕಾಣುತ್ತದೆ. ಹಾಗೇ ಮುಂದೆ ಸಾಗಿದರೆ, ಮೆಣಸಿನ ಕಾಯಿ ಬಜ್ಜಿ, ಮಂಡಕ್ಕಿ ಒಗ್ಗರಣೆಯ ವಾಸನೆ ಮೂಗಿಗೆ ಬಡಿಯುತ್ತೆ. ನಾಮಫ‌ಲಕವಿಲ್ಲದ ಜಂಗ್‌ಶೀಟ್‌ ಹಾಕಿದ ಒಂದು ಪುಟ್ಟ ಮಳಿಗೆ ಮುಂದೆ ಜನ ನಿಂತಿರುವುದು, ಮತ್ತಷ್ಟು ಜನ ಕೂತು ಮಿರ್ಚಿ ಮಂಡಕ್ಕಿ ಸೇವಿಸುತ್ತಿರುವುದು ಕಾಣುತ್ತೆ. ಅಲ್ಲಿ ಒಬ್ರು ಟೀ ಶರ್ಟ್‌ ಲುಂಗಿ ಕಟ್ಟಿಕೊಂಡು ಜನರಿಗೆ ಬಿಸಿ ಬಿಸಿ ಒಗ್ಗರಣೆ ಮಂಡಕ್ಕಿ ವಿತರಿಸುತ್ತಿರುತ್ತಾರೆ. ಅವರೇ ಮಧು, ಈ ಹೋಟೆಲ್‌ನ ಮಾಲೀಕರು.

ಕೋಮಾರನಹಳ್ಳಿಯವರೇ ಆದ ಸೀತಾರಾಮಾಚಾರ್‌, 35 ವರ್ಷಗಳ ಹಿಂದೆ ಈ ಹೋಟೆಲ್‌ ಆರಂಭಿಸಿದ್ರು. ಈಗ ಅವರ ಮಗ ಕೆ.ಎಸ್‌.ಮಧುಸೂದನ್‌ ಈ ಹೋಟೆಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಹೋಟೆಲ್‌ಗೆ ನಾಮಫ‌ಲಕವಿಲ್ಲದ ಕಾರಣ, ಹೊಸದಾಗಿ ಹೋಗುವವರು ಮಧು ಮಂಡಕ್ಕಿ ಹೋಟೆಲ್‌ ಯಾವುದು ಎಂದು ಕೇಳಿದರೆ ತೋರಿಸುತ್ತಾರೆ. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಆಗ್ಗಾಗ್ಗೆ ಓಡಾಡುವವರು ಮಧು ಹೋಟೆಲ್‌ನಲ್ಲಿ ಒಂದು ಮಿರ್ಚಿನಾದ್ರೂ ತಿಂದು ಹೋಗುವುದನ್ನು ಮರೆಯಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ ಹೀಗೆ ಹಲವು ರಾಜಕಾರಣಿಗಳು, ಸಿನಿಮಾ ನಟರು, ಪತ್ರಕರ್ತರು, ನೌಕರರು, ಪ್ರವಾಸಿಗರು ಮಧು ಮಂಡಕ್ಕಿಯ ರುಚಿಗೆ ಮನಸೋತಿದ್ದಾರೆ.

ಎಲ್ಲವೂ ಬಿಸಿಬಿಸಿ:
ಒಂದು ತಪ್ಪಲೆಯಲ್ಲಿ ಒಗ್ಗರಣೆ ಮಂಡಕ್ಕಿ ಮಾಡಿದ್ರೆ ಒಂದು ಗಂಟೆಯಲ್ಲಿ ಖಾಲಿಯಾಗಿರುತ್ತದೆ. ಯಾವುದನ್ನೂ ಮೊದಲೇ ಸಿದ್ಧಪಡಿಸಿ ಇಟ್ಟಿರುವುದಿಲ್ಲ. ಗ್ರಾಹಕರನ್ನು ನೋಡಿಕೊಂಡು ಆಗಲೇ ಸಿದ್ಧಪಡಿಸಿಕೊಡುತ್ತಾರೆ. ದಿನಕ್ಕೆ ಎಷ್ಟು ಮಂಡಕ್ಕಿ ಖಾಲಿ ಯಾಗುತ್ತೆ ಎಂಬುದನ್ನು ಇವರು ಈವರೆಗೂ ಲೆಕ್ಕ ಇಟ್ಟಿಲ್ಲ. ವಾರ ಪೂರ್ತಿ ಹೋಟೆಲ್‌ ತೆರೆದೇ ಇರುವುದರಿಂದ ತಿಂಡಿ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಮೇಲೆ ಜನ ಬರುತ್ತಾರೆ. ಮಂಡಕ್ಕಿ ಒಗ್ಗರಣೆ, ಅವಲಕ್ಕಿ ಒಗ್ಗರಣೆ ಜೊತೆ ಮೆಣಸಿನಕಾಯಿ ಬಜ್ಜಿ ಅಥವಾ ಪಕೋಡಾ ತಿಂದು ಒಂದು ಕಪ್‌ ಟೀ ಕುಡಿದ್ರೆ ಅಲ್ಲಿಗೆ ಒಂದೊತ್ತಿನ ಊಟ ಮುಗಿದಂತೆ. ನರ್ಗೀಸ್‌, ಚೌಚೌ(ಸೇವ್‌) ಕೂಡ ಇಲ್ಲಿ ಸಿಗುತ್ತೆ. ಮಂಡಕ್ಕಿ-ಅವಲಕ್ಕಿ ಒಗ್ಗರಣೆಯನ್ನು ಮೊಸರಿನೊಂದಿಗೆ ತಿಂದರೆ ಅದರ ರುಚಿಯೇ ಬೇರೆ. ಮಧು ಅವರೊಂದಿಗೆ ನಾಲ್ಕೈದು ಮಂದಿ ಕೆಲಸ ಮಾಡುತ್ತಾರೆ. ಬಜ್ಜಿ ಕರಿಯುವುದು, ಮಂಡಕ್ಕಿ ಒಗ್ಗರಣೆ ಹಾಕುವುದು ಹೀಗೆ ಎಲ್ಲರೂ ಒಂದೊಂದು ಕೆಲಸ ಮಾಡುತ್ತಾರೆ. ಸಾಮಾನ್ಯ ಹೋಟೆಲ್‌ಗ‌ಳಂತೆ ಕುರ್ಚಿ, ಟೇಬಲ್‌ಗ‌ಳಿಲ್ಲದ ಮಧು ಹೋಟೆಲ್‌, ಮಂಡಕ್ಕಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಹೋಟೆಲ್‌ನ ಸಮಯ:
ಬೆಳಗ್ಗೆ 5.30ಕ್ಕೆ ಪ್ರಾರಂಭವಾದ್ರೆ ರಾತ್ರಿ 9 ಗಂಟೆವರೆಗೆ ತೆರೆದಿರುತ್ತದೆ. ಊರ ಹಬ್ಬ ಇದ್ರೆ ಮಾತ್ರ ರಜೆ.

ಹೋಟೆಲ್‌ ವಿಳಾಸ:
ಕೋಮಾರನಹಳ್ಳಿ ಗ್ರಾಮ, ಹರಿಹರ ತಾಲೂಕು, ಶಿವಮೊಗ್ಗ ಮುಖ್ಯರಸ್ತೆಯಲ್ಲಿ ಮಲೇಬೆನ್ನೂರು ಹೋಬಳಿ ಕೇಂದ್ರದಿಂದ 2 ಕಿ.ಮೀ. ಸಾಗಿದರೆ ಬಲಭಾಗದಲ್ಲಿ ಇದೆ.

ದೊರೆಯುವ ತಿಂಡಿಗಳು:
ಖಾರಾ (ಸೇವ್‌), ಮಂಡಕ್ಕಿ ಖಾರಾ, ಒಗ್ಗರಣೆ ಮಂಡಕ್ಕಿ, ಒಗ್ಗರಣೆ ಅವಲಕ್ಕಿ, ಮೆಣಸಿನ ಕಾಯಿ (ಮಿರ್ಚಿ), ಈರುಳ್ಳಿ ಬಜ್ಜಿ, ಟೀ… ಹೀಗೆ ಮೂರು ನಾಲ್ಕು ಬಗೆಯ ತಿಂಡಿ ಸಿಗುತ್ತದೆ. ಮಂಡಕ್ಕಿ ಒಗ್ಗರಣೆ, ಮಿರ್ಚಿ, ಟೀ ಮೂರೂ ಸೇರಿ 30 ರೂ., ಮಂಡಕ್ಕಿ ಒಗ್ಗರಣೆ, ಅವಲಕ್ಕಿ ಒಗ್ಗರಣೆ ಪ್ಲೇಟ್‌ಗೆ ದರ 20 ರೂ.. ಸಿಂಗಲ್‌ ಬಜ್ಜಿ, ಟೀಗೆ ತಲಾ 5 ರೂ.

– ಭೋಗೇಶ ಆರ್‌.ಮೇಲುಕುಂಟೆ

– ಫೋಟೋ ಕೃಪೆ: ಕೆ.ಎಂ.ಶ್ರೀವತ್ಸಾ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.