ಶ್ರೀಧರ ಸಂಭ್ರಮ


Team Udayavani, Jan 21, 2019, 12:30 AM IST

tonde4-copy-copy.jpg

ಶಿರಸಿಯ ಕಬ್ಬೆ ಗ್ರಾಮದ ಶ್ರೀಧರ ಗಂಗೇಮತ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಾಗಿ ಹಳ್ಳಿ ಹಳ್ಳಿಗೆ ಓಡಾಡುತ್ತಿದ್ದರು. ಅಲ್ಲಿನ ಕೃಷಿ, ರೈತರ ಪಾಡು, ಮಾರುಕಟ್ಟೆಯ ಸ್ಥಿತಿಗತಿ ಎಲ್ಲವನ್ನೂ ಗಮನಿಸಿ, ನಾನೂ ಏಕೆ ಕೃಷಿಕನಾಗಬಾರದು ಅಂತ ಕೃಷಿ ಕೆಲಸಕ್ಕೆ ಇಳಿದೇ ಬಿಟ್ಟರು.  ಈಗ ನೋಡಿ, ಪ್ರತಿವಾರ ತರಕಾರಿ ಬೆಳೆ ತೆಗೆಯುತ್ತಾ ಖುಷಿಯಾಗಿದ್ದಾರೆ. 

ಶಿರಸಿಯಿಂದ ಎಂಟು ಕಿ.ಮೀ ದೂರದಲ್ಲಿ  ಕಬ್ಬೆ ಅನ್ನೋ ಊರು ಇದೆ. ಅಲ್ಲಿರುವ ಒಂದೂವರೆ ಎಕರೆ ಜಮೀನಿನಲ್ಲಿ ಇವರು ತೊಂಡೆ ಕೃಷಿ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೇ ಸೊಪ್ಪು, ಇತರೆ ತರಕಾರಿಗಳೂ ಇವೆ. 

ಇವರಲ್ಲಿ 54 ತೊಂಡೆ ಬಳ್ಳಿಗಳಿವೆ. ಇದರಿಂದ ವಾರಕ್ಕೆ  ನಾಲ್ಕು ಸಾವಿರ ಸಿಗುತ್ತಿದೆ. ಬೆಂಡೆ ಕಾಯನ್ನು ಕೊಯ್ದು, ಎಳೆಯದರಲ್ಲೇ ಅದನ್ನು ಮಾರಾಟ ಮಾಡುತ್ತಾರೆ. 

ಶ್ರೀಧರ ತರಕಾರಿ ಬೆಳೆಯಲು ಭೂಮಿ ಸಿದ್ಧಗೊಳಿಸಿದ ಬಗೆಯೂ ವಿಶಿಷ್ಟವಾಗಿತ್ತು. ಮೊದಲು ಅದು ಹೇಗೆಂದರೆ,  ಎರಡೂವರೆ ಅಡಿ ಆಳದ ಗುಂಡಿ ತೋಡಿ, ಗೊಬ್ಬರ, ಸೊಪ್ಪು ಹಾಕಿ ತೊಂಡೆ ಬೆಳೆಯಲು ಆರಂಭಿಸಿದರು. ತಿಂಗಳಲ್ಲೇ ವಾರಕ್ಕೆ ಕೆ.ಜಿ ತೊಂಡೆ ಕಾಯಿ ಕೋಯ್ದ ಇವರೀಗ ಈಗ ತೊಂಡೆ ಶ್ರೀಧರ ಅಂತಲೇ ಹೆಸರಾಗಿದ್ದಾರೆ.  ವಾರಕ್ಕೆ ಮೂವತ್ತರಿಂದ ನಲವತ್ತು ಕೆಜಿ ತೊಂಡೆಕಾಯಿ ದೊರೆಯುತ್ತಿದೆ. ಒಂದು ಕೆ.ಜಿ ತೊಂಡೆಕಾಯಿಗೆ ನಲವತ್ತು ರೂಪಾಯಿ ಸಿಗುತ್ತಿದೆ. ಇದಕ್ಕಾಗಿ ನಿರ್ವಹಣೆ, ಹನಿ ನೀರಾವರಿ, ಗೊಬ್ಬರ ಸೇರಿ 3 ಸಾವಿರ ರೂ. ಖರ್ಚು. ಉಳಿದ ಮೂರು ವಾರದ ಆದಾಯ ಲಾಭ ಎನ್ನುತ್ತಾರೆ ಶ್ರೀಧರ.

ತರಕಾರಿ ಬೆಳೆಯ ವಿಸ್ತಾರದ ಕನಸು ಹೊತ್ತು ಕೆಲಸ ಮಾಡುತ್ತಿರುವ ಶ್ರೀಧರ, ಮನೆಯ ಹಿಂಭಾಗದಲ್ಲಿಯೇ ಮಲ್ಲಿಗೆ ಗಿಡವನ್ನು ನೆಟ್ಟಿದ್ದು, ಅವರಲ್ಲಿ ಕೂಡಾ ಹೂ ಅರಳಿ ನಿಂತಿದೆ. ಮಲ್ಲಿಗೆ ಕೊಯ್ಲು ಮಾಡಿ ದಿನವೂ  ಹತ್ತು ಮಾರು ಮಾರಾಟ ಮಾಡುತ್ತಿದ್ದಾರೆ. ಒಂದು ಮಾರು ಹೂವಿಗೆ ಹದಿನೈದು ರೂಪಾಯಿ  ಸಿಗುತ್ತಿದೆ.  ಪತ್ನಿ ನಿರ್ಮಲಾ, ಮನೆ ಮಕ್ಕಳು ಮಲ್ಲಿಗೆ ಮಾಲೆ ಮಾಡಲು ಸಹಕಾರ ನೀಡುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಗಂಡ ಹೆಂಡತಿ ಶ್ರಮವಹಿಸಿ ದುಡಿಯುವದಲ್ಲದೇ ಮಾರಾಟಕ್ಕೆ ಶಿರಸಿ ಪೇಟೆಗೆ ಬಂದು ಗ್ರಾಹಕ ಇದ್ದಲ್ಲೇ ಕೊಟ್ಟು ಹೋಗುತ್ತಾರೆ. ವಾರಕ್ಕೆ ಎರಡು, ಮೂರು ದಿನ 

ವ್ಯಾಟ್ಸ್‌ ಅಪ್‌ ಗಳಲ್ಲಿ ಮೆಸೇಜ್‌ ಹಾಕಿ, ಅಗತ್ಯವುಳ್ಳವರ ಬೇಡಿಕೆಯನ್ನು ಪೂರೈಸುತ್ತಾರೆ.ಕುಟುಂಬಕ್ಕೆ ತರಕಾರಿ ಹೂವು ಬದುಕು ಅರಳಿಸಿದೆ. ಶಿರಸಿ ಸೀಮೆ ಗ್ರಾಹಕರ ಮನೆಗೇ ತಲುಪಿಸಲು 9731550279 ಮೆಸೇಜ್‌ ಮಾಡಿದರೂ ತರಕಾರಿ ಜೊತೆ ಶ್ರೀಧರ ಹಾಜರ್‌ ಆಗುತ್ತಾರೆ.

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.