ಜಿಕ್ಸರ್‌ ಇಂಡಿಯಾ ಡಬಲ್‌ ಸೆಂಚುರಿ ಹೊಡೆದ ಸುಝುಕಿ!


Team Udayavani, Aug 19, 2019, 5:00 AM IST

top-main-(2)

ದಿನನಿತ್ಯದ ಬಳಕೆಗೆ ಮತ್ತು ರೇಸಿಂಗ್‌ ಎರಡಕ್ಕೂ ಹೊಂದುವಂತಿತ್ತು ಸುಝುಕಿಯ ನೇಕೆಡ್‌ ಸ್ಪೋರ್ಟ್ಸ್ ಬೈಕಾದ ಜಿಕ್ಸರ್‌ 150. ಬಹಳ ಸಮಯದಿಂದ ದ್ವಿಚಕ್ರವಾಹನ ಪ್ರೇಮಿಗಳು ಸುಝುಕಿಯಿಂದ 250 ಸಿಸಿ ರೇಂಜಿನ ಬೈಕನ್ನು ಎದುರು ನೋಡುತ್ತಿದ್ದರು. ಇದೀಗ ಜಿಕ್ಸರ್‌ 250 ಭಾರತದಲ್ಲಿ ಬಿಡುಗಡೆಯಾಗಿದೆ.

ಭಾರತದಲ್ಲಿ ವರ್ಷಗಳ ಹಿಂದೆ ಜಿಕ್ಸರ್‌ 150 ಸಿಸಿ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಮೂಲಕ ಸುಝುಕಿ ತನ್ನ ಅಧಿಪತ್ಯವನ್ನು ಮರು ಸಂಪಾದಿಸಿತ್ತು. ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಜಿಕ್ಸರ್‌ ರೇಸ್‌ ಬೈಕುಗಳಿಂದ ಪ್ರೇರಣೆ ಪಡೆದು ಭಾರತದ ಮಾರುಕಟ್ಟೆಗೆ ತಕ್ಕಂತೆ ವಿನ್ಯಾಸ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿತ್ತು. ನೇಕೆಡ್‌ ಸ್ಪೋರ್ಟ್ಸ್ ಮಾದರಿಯ ಈ ಬೈಕು, ಕಾಲೇಜು ತರುಣರನ್ನು ಮನದಲ್ಲಿರಿಸಿಕೊಂಡು ತಯಾರಾದ ಬೈಕ್‌ ಆಗಿತ್ತು. ದಿನನಿತ್ಯದ ಬಳಕೆಗೆ ಮತ್ತು ರೇಸಿಂಗ್‌ ಎರಡಕ್ಕೂ ಹೊಂದುವಂತಿತ್ತು ಆ ಬೈಕು. ಬಹಳ ಸಮಯದಿಂದ ದ್ವಿಚಕ್ರವಾಹನ ಪ್ರೇಮಿಗಳು ಸುಝುಕಿಯಿಂದ 250 ಸಿಸಿ ರೇಂಜಿನ ಬೈಕನ್ನು ಎದುರು ನೋಡುತ್ತಿದ್ದರು. ಇದೀಗ ಜಿಕ್ಸರ್‌ 150ಯ ಹಿರಿಯ ಸಹೋದರ ಜಿಕ್ಸರ್‌ 250 ಬಿಡುಗಡೆಯಾಗಿದೆ.

ಮಾಡೆಲ್‌ ಮತ್ತು ಬೆಲೆ
ಪ್ಲಾಟಿನಂ ಸಿಲ್ವರ್‌ ಮತ್ತು ಕಪ್ಪು ಬಣ್ಣಗಳ ಆಯ್ಕೆಯನ್ನು ಸಂಸ್ಥೆ ನೀಡುತ್ತಿದೆ. ಎರಡು ಟೈರ್‌ಗಳಲ್ಲೂ ಡಿಸ್ಕ್ ಬ್ರೇಕುಗಳನ್ನು ನೀಡಲಾಗಿದೆ. ಇನ್ನು ಎಬಿಎಸ್‌(ಅÂಂಟಿ ಲಾಕ್‌ ಬ್ರೇಕ್‌ ಸಿಸ್ಟಮ್‌) ಸವಲತ್ತನ್ನು ಒದಗಿಸಲಾಗಿದೆ. ಇದು ಸವಾರರಿಗೆ ಸುರಕ್ಷಿತ ಬ್ರೇಕಿಂಗ್‌ ವ್ಯವಸ್ಥೆಯನ್ನು ಒದಗಿಸುತ್ತದೆ. ಅಂದಹಾಗೆ, ಜಿಕ್ಸರ್‌ 150ಯಲ್ಲಿ ಇದ್ದಂತೆಯೇ 250 ಸಿ.ಸಿ ಯಲ್ಲೂ ಎಸ್‌ಎಫ್ ಮಾಡೆಲ್‌ ಲಭ್ಯವಿದೆ. ಜಿಕ್ಸರ್‌ 250ಯ ಬೆಲೆ 1.60 ಲಕ್ಷ ರು. ನಿಗದಿ ಪಡಿಸಿದ್ದರೆ, 250 ಸಿಸಿಯ ಜಿಕ್ಸರ್‌ ಎಸ್‌ ಎಫ್ ಮಾಡೆಲ್‌ಗೆ 1.70 ಲಕ್ಷ ರು. ನಿಗದಿ ಪಡಿಸಲಾಗಿದೆ. ಅಂದರೆ ಜಿಕ್ಸರ್‌ 150ಗೆ ಹೋಲಿಸಿದರೆ ಜಿಕ್ಸರ್‌ 250ಗೆ, 60,000 ರು. ಹೆಚ್ಚಿನ ಬೆಲೆ ಕಡಬೇಕಾಗುತ್ತದೆ.

ವ್ಯತ್ಯಾಸಗಳೇನು?
ವಿನ್ಯಾಸದ ಬಗ್ಗೆ ಹೇಳುವುದಾದರೆ ಜಿಕ್ಸರ್‌ 250 ಬಹುತೇಕ ಜಿಕ್ಸರ್‌ 150ಅನ್ನೇ ಹೋಲುತ್ತದೆ. ಹೆಚ್ಚಿನ ವ್ಯತ್ಯಾಸ ಕಂಡುಬರುವುದು ಹೆಡ್‌ಲೈಟಿನಲ್ಲಿ. ಯಾವ ಕೋನದಿಂದಲೂ 250ರ ಹೆಡ್‌ಲೈಟ್‌ 150ಅನ್ನು ಹೋಲುವುದಿಲ್ಲ. ಆದುನಿಕ ಬೈಕ್‌ಗಳಲ್ಲಿ ಟ್ರೆಂಡ್‌ ಎನ್ನಿಸಿಕೊಂಡಿರುವ ಟ್ರಾಪೆಝಾಯಿಡ್‌ ಆಕಾರವನ್ನು ಇದು ಹೊಂದಿದೆ. ಕೆ.ಟಿ.ಎಂ ಡ್ನೂಕ್‌ 250 ಮತ್ತು ಯಮಹಾ ಎಫ್ಝೀ25 ಬೈಕುಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ ಸುಝುಕಿ ಜಿಕ್ಸರ್‌ 250. ಅಲ್ಲದೆ ಬಜಾಜ್‌ ಡಾಮಿನಾರ್‌ 400 ಬೈಕಿಗೂ ಇದು ಸ್ಪರ್ಧೆ ಒಡ್ಡಲಿದೆ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

ಎಕ್ಸ್‌ಟ್ರಾ ಸಲಕರಣೆಗಳು

ಜಿಕ್ಸರ್‌ 250 ಸವಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಕೊಳ್ಳಬಹುದಾದ ಎಕ್ಸ್‌ಟ್ರಾ ಅÂಕ್ಸೆಸರಿಗಳನ್ನು ಸಂಸ್ಥೆಯೇ ಕೊಡಮಾಡುತ್ತಿದೆ. (ಇವುಗಳಿಗೆ ಬೆಲೆ ಪ್ರತ್ಯೇಕ.)
1. ಸ್ಯಾಡೆಲ್‌ ಬ್ಯಾಗ್‌- ದೂರ ಪ್ರಯಾಣ ಹೊರಡುವಾಗ ಇದು ಸಹಾಯಕ್ಕೆ ಬರಲಿದೆ.
2. ನಕಲ್‌ ಗಾರ್ಡ್‌- ರೈಡ್‌ ಮಾಡುವಾಗ ಕೈಗೆ ಏಟಾಗದಂತೆ ರಕ್ಷಿಸುವ ಗಾರ್ಡ್‌ ಇದು.
3. ಬಂಪರ್‌ ಬ್ರಾಕೆಟ್‌- ಲೆಗ್‌ ಗಾರ್ಡ್‌ ಎಂದೇ ಹೆಸರಾಗಿರುವ ಈ ಸಲಕರಣೆ, ಸವಾರರ ಕಾಲುಗಳಿಗೆ ರಕ್ಷಣೆ ಒದಗಿಸುತ್ತದೆ
4. ಸ್ಕಿಡ್‌ ಪ್ಲೇಟ್‌- ಎಂಜಿನ್‌ನ ತಳಭಾಗದಲ್ಲಿ ಅಳವಡಿಸಲ್ಪಡುವ ಸ್ಕಿಡ್‌ಪ್ಲೇಟ್‌ ರಸ್ತೆಯ ಕಲ್ಲುಗಳು, ಎತ್ತರದ ಸ್ಪೀಡ್‌ ಬ್ರೇಕರ್‌ಗಳಿಂದ ಎಂಜಿನ್‌ಅನ್ನು ರಕ್ಷಿಸುವುದು
5. ಡಿ.ಸಿ. ಸಾಕೆಟ್‌- ಹ್ಯಾಂಡಲ್‌ಬಾರ್‌ನಲ್ಲಿ ಅಳವಡಿಸಲಾಗುವ ಡಿ.ಸಿ ಸಾಕೆಟ್‌ನಿಂದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಚಾರ್ಜ್‌ ಮಾಡಬಹುದಾಗಿದೆ.

38 ಕಿ.ಮೀ. ಮೈಲೇಜ್‌
6 ಸ್ಪೀಡ್‌ ಗೇರ್‌
12 ಲೀಟರ್‌ ಟ್ಯಾಂಕ್‌
ಆಯಿಲ್‌ಕೂಲ್ಡ್‌ ಎಂಜಿನ್‌
ಎಬಿಎಸ್‌ ಸವಲತ್ತು

-ಹವನ

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.