ರಾಜನಿಂದ ಲಾಭ


Team Udayavani, May 7, 2018, 12:45 PM IST

rajaninda.jpg

ದೇಸೀ ತಳಿಯಾದ ಗಿರಿರಾಜ ಕೋಳಿಯನ್ನು ಸಾಕುವುದರಿಂದ ಹೆಚ್ಚು ಲಾಭವಿದೆ. ಒಂದು ಕೋಳಿಯಿಂದ, ಒಂದು ವರ್ಷದಲ್ಲಿ 150 ಮೊಟ್ಟೆಗಳು ಸಿಗುತ್ತವೆ. ನೂರು ಕೋಳಿಗಳನ್ನು ಸಾಕಿದರೆ ಮೊಟ್ಟೆ ಮಾರಾಟದಿಂದಲೇ ಲಕ್ಷ ರುಪಾಯಿ ಸಂಪಾದಿಸಬಹುದು. 

ಸಮಾಜ ಸೇವೆಗಾಗಿ ಬದುಕನ್ನು ಮೀಸಲಿಟ್ಟವರು ಈ ಸುಕನ್ಯ ಹರಿದಾಸರು. ಬೆಳ್ತಂಗಡಿ ತಾಲೂಕಿನ ಕಾಪಿನಡ್ಕದ ಬಳಿ ಇವರದು ತೋಟದ ಮನೆ ಇದೆ. ಅಡಿಕೆ, ತೆಂಗು, ಭತ್ತ, ರಬ್ಬರ್‌ ಬೆಳೆ ಇಡೀ ತೋಟವನ್ನು ಆವರಿಸಿದೆ. ಇಷ್ಟೇ ಅಲ್ಲ, ಈಗ ಗಿರಿರಾಜ ಕೋಳಿಗಳ ಸಾಕಾಣಿಕೆಗೂ ಕೈ ಹಾಕಿದ್ದಾರೆ. ಸೈ ಎನಿಸಿಕೊಂಡಿದ್ದಾರೆ. 

ಬಾಯ್ಲರ್‌ ಕೋಳಿಗಳನ್ನು ಸಾಕುವವರನ್ನು ನೋಡಿದ ಬಳಿಕ ನಮ್ಮ ದೇಸೀ ತಳಿಗಳಿಂದ ಅದಕ್ಕಿಂತಲೂ ಹೆಚ್ಚಿನ ಲಾಭ ಇದೆಯೆಂದು ತೋರಿಸುವ ಉದ್ದೇಶದಿಂದ ಗಿರಿರಾಜ ಕೋಳಿ ಸಾಕಾಣಿಕೆಯಲ್ಲಿ  ಯಶಸ್ಸಿನ ಮೆಟ್ಟಲೇರಿ ಲಾಭದ ಮುಗುಳ್ನಗೆ ಸೂಸಿದ್ದಾರೆ.

ಇದು ನಮ್ಮ ದೇಸೀ ತಳಿ. ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿಜಾnನಿಗಳು ರೈತರ ಅನುಕೂಲಕ್ಕಾಗಿಯೇ ಅಭಿವೃದ್ಧಿಪಡಿಸಿದ ಗಿರಿರಾಜ ಕೋಳಿ. ಎಲ್ಲ ರೈತರಿಗೂ, ಸಾಕಲು ಅತ್ಯಂತ ಸೂಕ್ತವಾಗಿದೆ ಎನ್ನುತ್ತಾರೆ ಅವರು. ಕೋಳಿಗಳಿಗಾಗಿ ಅತಿ ಕಡಿಮೆ ಖರ್ಚಿನಲ್ಲಿ ಮಾದರಿ ಗೂಡು ನಿರ್ಮಿಸಿದ್ದಾರೆ. ಇದಕ್ಕೆ ಕಬ್ಬಿಣದ ಬಲೆ, ಸಪೂರಾದ ಗಟ್ಟಿ ಸರಳುಗಳನ್ನಷ್ಟೇ ಬಳಸಿರುವುದರಿಂದ ಹೆಚ್ಚಿನ ಖರ್ಚು ಆಗಿಲ್ಲ.

ಇಂಥ ಗೂಡುಗಳಿಂದ ಹೊರಗಿನ ಅಪಾಯ ಕಡಿಮೆ. ಸಾಕಷ್ಟು ಗಾಳಿ, ಬೆಳಕು ಸಿಗುತ್ತದೆಂಬ ಅನುಕೂಲಗಳನ್ನೂ ವಿವರಿಸುತ್ತಾರೆ. ತಲಾ ನೂರು ರೂ. ನೀಡಿ ನೂರು ಗಿರಿರಾಜ ಕೋಳಿ ಮರಿ ತಂದಿದ್ದಾರೆ. 400 ರೂ. ಬೆಲೆಗೆ ಹತ್ತು ಸ್ಥಳೀಯ ತಳಿಗೆ ಸೇರಿದ ಕೋಳಿಗಳನ್ನೂ ತಂದು ಸಾಕುತ್ತಿದ್ದಾರೆ. ಗಿರಿರಾಜ ಕೋಳಿಗಳು ಮನುಷ್ಯನಿಗೆ ಹೆಚ್ಚು ಹೊಂದಿಕೊಂಡು ಬದುಕುತ್ತವೆ. ಅವು ಕರೆದಾಗ ಬಳಿಗೆ ಬರುತ್ತವೆಯಂತೆ.

ಸುಕನ್ಯಾ ಅವರ ಅನುಭವದ ಪ್ರಕಾರ, ಗಿರಿರಾಜ ಕೋಳಿ ಸಾಕಣೆಗೆ ಹೆಚ್ಚಿನ ಕಾಳಜಿ ಅನಗತ್ಯ. ಗೂಡಿನಿಂದ ಹೊರಗೆ ಆಹಾರ ಸಂಗ್ರಹಕ್ಕೆ ಬಿಡಬಹುದು. ಕೆಲವು ಗಿಡಗಳ ಚಿಗುರುಗಳನ್ನು, ಕ್ರಿಮಿಕೀಟಗಳನ್ನು ಈ ಕೋಳಿ ಹುಡುಕಿ ತಿನ್ನುತ್ತದೆ. ತರಕಾರಿ ಬೆಳೆದವರಿಗೆ ಕೀಟನಾಶಕದ ಅಗತ್ಯವಿಲ್ಲದೆ ಗಿಡಗಳನ್ನು ಕೀಟಗಳಿಂದ ರಕ್ಷಿಸಲು ಗಿರಿರಾಜ ಕೋಳಿ ಬಲು ಸಹಕಾರಿಯಂತೆ.

ಇನ್ನು ಹಾರುವ ಮತ್ತು ಓಡುವ ಶಕ್ತಿ ಯಾವುದೇ ತಳಿಗಿಂತ ಅಧಿಕರುವ ಕಾರಣ ಅಪಾಯ ಬಂದಾಗ ತಪ್ಪಿಸಿಕೊಳ್ಳುವ ಸಾಮರ್ಥ್ಯ ಇದಕ್ಕೆ ಹೆಚ್ಚಾಗಿದೆ. ಗಿರಿರಾಜ ಕೋಳಿಗಾಗಿ ಅದರ ಸಮತೋಲಿತ ಆಹಾರವನ್ನೇ ಹಣ ಕೊಟ್ಟು ತರಬೇಕಾಗಿಲ್ಲ. ಅಕ್ಕಿ, ಗೋಧಿ ಇತ್ಯಾದಿಗಳ ನುಚ್ಚು, ಅನ್ನದಂಥ ಉಳಿಕೆ ಆಹಾರ ಪದಾರ್ಥಗಳನ್ನೂ ಕೊಡಬಹುದು.

ಹೈಡ್ರೋಪೋನಿಕ್ಸ್‌ ವಿಧಾನದ ಮೇವು ನೀಡಿದರೆ ಬೇಗನೆ ಬೆಳೆಯುತ್ತದೆ ಎನ್ನುವ ಸುಕನ್ಯಾ, ಒಂದು ಕೋಳಿಗೆ ನೂರು ಗ್ರಾಮ್‌ ಪ್ರಮಾಣದಲ್ಲಿ ಕೋಳಿ ಆಹಾರ ನೀಡಬಹುದು ಎನ್ನುತ್ತಾರೆ. ಜನಿಸಿದ ದಿನವೇ 45 ಗ್ರಾಮ್‌ ತೂಕವಿರುವ ಮರಿ, ಬಲಿತ ಎರಡೇ ತಿಂಗಳಲ್ಲಿ ಮತ್ತೆ ಮೊಟ್ಟೆ ಇಡುತ್ತದೆ. ವರ್ಷದಲ್ಲಿ 135-150 ಮೊಟ್ಟೆ ಸಿಗುತ್ತದೆ. ಇದರ ಮೊಟ್ಟೆಗೆ ಅದರದೇ ಆದ ವೈಶಿಷ್ಟ್ಯವಿದೆ.

ಫಾರಂ ಕೋಳಿ ಮೊಟ್ಟೆಗಿಂತ ಹೆಚ್ಚು ತೂಕ. ಅಂದರೆ 55 ಗ್ರಾಮ್‌ ವರೆಗೂ ತೂಗುತ್ತದೆ. ಚಿಪ್ಪು ಕಂದು ಬಣ್ಣವಾಗಿದ್ದು ಬಹು ದೃಢವಾಗಿರುವುದರಿಂದ ಸಾಗಿಸುವಾಗ ಫ‌ಕ್ಕನೆ ಒಡೆಯುವುದಿಲ್ಲ. ಹೆಚ್ಚು ದಿನಗಳವರೆಗೆ ಮೊಟ್ಟೆಗಳು ಉಳಿಯುತ್ತವೆ. ನೂರಕ್ಕೆ ಶೇ. 85ರಷ್ಟು ಮೊಟ್ಟೆಗಳು ಮರಿಯಾಗುವ ಅವಕಾಶವಿದೆ. ಇದು ಇತರ ತಳಿಗಳಿಗಿಂತ ಹೆಚ್ಚೇ ಎಂಬುದು ಸುಕನ್ಯಾ ಅವರು ಕೊಡುವ ವಿವರಣೆ.

ಸರಿಯಾಗಿ ಪೋಷಿಸಿದರೆ ಗಿರಿರಾಜ ಕೋಳಿ 15 ವಾರಗಳಲ್ಲಿ ಐದು ಕಿ.ಲೋ ತೂಗುತ್ತದೆ. ಕಿ.ಲೋಗೆ 200 ರೂ. ದರ ಅಂತಿಟ್ಟುಕೊಂಡರೂ ಒಂದು ಕೋಳಿಯಿಂದ ಸಾವಿರ ರೂಪಾಯಿ ಆದಾಯ ಸಿಗುತ್ತದೆ. ಇದರ ಮಾಂಸ ತುಂಬ ಸ್ವಾದಿಷ್ಟವಾದುದು. ಇದಕ್ಕೆ ಬೋಂಡಾ ಚಿಕನ್‌ ಎಂಬ ವಿಶೇಷ ಹೆಸರೂ ಇದೆ.

ಕರಿದು ತಯಾರಿಸುವ ಬೋಂಡಾಕ್ಕೆ ಅದು ಅತ್ಯಂತ ಸೂಕ್ತವೆಂಬ ಕಾರಣಕ್ಕೆ ಬೇಡಿಕೆಯೂ ಹೆಚ್ಚು. ಮೊಟ್ಟೆಗೂ ಕನಿಷ್ಠ ಐದು ರೂಪಾಯಿ ಸಿಗುವ ಕಾರಣ ಒಂದು ಕೋಳಿಯಿಂದ ವರ್ಷಕ್ಕೆ 750 ರೂಪಾಯಿ ಬರುತ್ತದೆಂದು ಲೆಕ್ಕಾಚಾರ ಹೇಳುತ್ತಾರೆ. ನೂರು ಕೋಳಿಗಳನ್ನು ಕ್ರಮಬದ್ಧವಾಗಿ ಸಾಕಿ, ಮಾಂಸಕ್ಕಾಗಿ ಮಾರಾಟ ಮಾಡಿದರೆ ಮೂರೇ ತಿಂಗಳಲ್ಲಿ ಎಂಭತ್ತು ಸಾವಿರ ಗಳಿಸಬಹುದು. ಇದರಲ್ಲಿ ಐವತ್ತು ಸಾವಿರ ನಿವ್ವಳ ಲಾಭವೆಂದೇ ಪರಿಗಣಿಸಬಹುದು ಎನ್ನುತ್ತಾರೆ ಸುಕನ್ಯಾ. 

ಮಾಹಿತಿಗೆ: 9449025674

* ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.