ಎರೆ ಮಣ್ಣಿನ ಕೆರೆ ಕಥೆಗಳು


Team Udayavani, Feb 3, 2020, 5:00 AM IST

kalave1-

ಒಮ್ಮೆ ಭರ್ತಿಯಾದರೆ ಮೂರು ವರ್ಷ ನೀರ ನೆಮ್ಮದಿ ನೀಡುವ ಶಕ್ತಿ ಎರೆ ಸೀಮೆಯ ಕೆರೆಗಿದೆ. ವರ್ಷಕ್ಕೊಮ್ಮೆ ನೆರೆಹಾವಳಿಯ ಸಮಸ್ಯೆ ಎದುರಿಸುವ ನಮಗೆ ನೀರು ಹಿಡಿದು ಗೆಲ್ಲಲು ಸಾಧ್ಯವಿಲ್ಲವೇ?

ದಶಕಗಳ ಹಿಂದೆ ಗದಗ ಜಿಲ್ಲೆ ಶಿರಹಟ್ಟಿಯ ಎತ್ತಿನಹಳ್ಳಿಯ ಹೊಲಗಳಲ್ಲಿ ಅಡ್ಡಾಡುತ್ತಿದ್ದೆ. ರಸ್ತೆ ಪಕ್ಕದ ಸಣ್ಣ ಪುಟ್ಟ ಹೊಂಡಗಳಲ್ಲಿ ನೀರಿತ್ತು. ಬ್ಯಾಡಗಿ ಮೆಣಸು, ಜೈದರ್‌ ಹತ್ತಿ ಬೆಳೆಯ ಆಸುಪಾಸಿನ ಕೆರೆಯಲ್ಲಿಯೂ ನೀರು ಕಾಣಿಸಿತು. ಜೊತೆಗಿದ್ದ ಸಿದ್ದರಾಮ “ಗೌಡರ, ಹಿಂದಕ ನಾವು ಹೊಲಕ ಹೋಗೋ ಮುಂದ ಕುಡಿಯೋ ನೀರು ಒಯ್ತಾ ಇರಲಿಲಿÅà. ಮಳೆ ನೀರು ಕೃಷಿ ಹೊಂಡದಾಗ ಇರತಿದುÌ. ಅದ್ನ ಕುಡಿತಿದ್ವಿ’ ಎನ್ನುತ್ತಾ ಒಂದಿಷ್ಟು ನೀರ ನೆಲೆ ತೋರಿಸಿದರು. ವರ್ಷಕ್ಕೆ 15 ಮಳೆ ಸುರಿಯುವ ಪ್ರದೇಶ, ಹೆಚ್ಚೆಂದರೆ 500 ಮಿಲಿಮೀಟರ್‌ ಮಳೆ ಬರಬಹುದು. ಎರೆ ಸೀಮೆ ಒಣಬೇಸಾಯದಲ್ಲಿ ಬದುಕಿ ಅನ್ನ ತೋರಿಸುತ್ತಿರುವುದೇ ಅದರ ಅಸಾಧ್ಯ ತಾಕತ್ತಿನಿಂದ!

ನೀರನ್ನು ಹಿಡಿದಿಡುವ ಎರೆ ಮಣ್ಣು
ಬಾಗಲಕೋಟೆ ಜಿಲ್ಲೆ ಜಮಖಂಡಿಯ ಹೊಲಕ್ಕೆ ಹೋದಾಗಲೂ ಬಿರು ಬೇಸಗೆಯಲ್ಲಿ ನೀರು ತುಂಬಿದ ಕೆರೆ ನೋಡಿ ಅಚ್ಚರಿ. “ಸರ್ರಾ, ಮೊನ್ನಿ ಮಳೀ ಬಂದಿತ್ತಲಿÅà. ಅದ್ಕ ಕೆರೆಯಾಗ ನೀರು ಕಾಣಾ¤ವ’ ಎಂದು ಚುಟುಕಾಗಿ ಕೃಷಿಕರು ಉತ್ತರಿಸಿದರು. ನಮ್ಮ ಭಾಷೆಯಲ್ಲಿ ಮೊನ್ನೆ ಅಂದ್ರೆ ನಿನ್ನೆಯ ಹಿಂದಿನ ದಿನವಲ್ಲವೇ? ಹೀಗಾಗಿ ಅಲ್ಲಿನ ಪರಿಸರದಲ್ಲಿ ಓಡಾಡುವಾಗೆಲ್ಲ ಈ ಮೊನ್ನಿನ ಮಳೆ ಮಣ್ಣು ರಸ್ತೆಯನ್ನು ಒದ್ದೆಯಾಗಿಸಿದ್ದು, ಹೊಲದ ನೆಲ ಹಸಿಯಾಗಿಸಿದ್ದು ಕಂಡೀತೆಂದು ಕಣ್ಣಾಡಿಸಿದೆ. ಆದರೆ ಕೆರೆಯಲ್ಲಿ ಬಿಟ್ಟು ಬೇರೆಲ್ಲಿಯೂ ನೀರು ಕಾಣಿಸಲಿಲ್ಲ. ಯಾವ ತಾರೀಖೀನಂದು ಈ ಊರಿಗೆ ಕೊನೆಯ ಮಳೆ ಬಂತೆಂದು ವಿಚಾರಿಸುತ್ತಾ ನಾಲ್ಕಾರು ಜನರನ್ನು ಕೇಳಿದಾಗ ನಾಲ್ಕು ತಿಂಗಳ ಹಿಂದೆ ಮಳೆ ಸುರಿದಿತ್ತೆಂದು ಗೊತ್ತಾಯಿತು! ಬಿಸಲ ಉರಿ ಮಧ್ಯೆ ಕೆರೆ ನೋಡಿದರೆ ಮೊನ್ನೆಯ ಮಳೆಯ ನೀರೆಂದು ನಂಬುವಂತಿತ್ತು.

ಮೂರು ವರ್ಷ ನೀರಿಗೆ ಸಮಸ್ಯೆಯಿಲ್ಲ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯದಾದ್ಯಂತ 2015-16ರಿಂದ ಕೆರೆಗಳ ಪುನರುಜ್ಜೀವನ ಕಾರ್ಯಮಾಡುತ್ತಿದೆ. ರಾಜ್ಯದ ಸುಮಾರು ಮುನ್ನೂರಕ್ಕೂ ಹೆಚ್ಚು ಕೆರೆಗಳಿಗೆ ಪುನಶ್ಚೇತನ ಮಾಡಲಾಗಿದೆ. ಜನರ ಸಹಭಾಗಿತ್ವದ ಜಲಕಾಯಕ ಕುರಿತ ಗ್ರಂಥ ರಚನೆಗೆ ಕ್ಷೇತ್ರ ಪ್ರವಾಸದಲ್ಲಿ ರೋಣ ತಾಲೂಕಿನ ಮಲ್ಲಾಪುರ, ನಿಡಗುಂದಿ, ಯಲಬುರ್ಗಾದ ಕರಮುಡಿ ಕೆರೆಗಳಿಗೆ ಹೋದಾಗ, ಉತ್ತಮ ಮಳೆಯಿಂದ ಕೆರೆ ತುಂಬಿತ್ತು. ಜನ ಕುಡಿಯುವ ನೀರಿಗಾಗಿ ಆಶ್ರಯಿಸಿದ್ದರು. ನಮಗಿನ್ನು ಮೂರು ವರ್ಷ ನೀರಿಗೆ ಸಮಸ್ಯೆಯಿಲ್ಲವೆಂದ ಹಳ್ಳಿಗರ ಮಾತು ನಂಬಲಾಗಲಿಲ್ಲ. ನಾಲ್ಕಾರು ಸಾರಿ ಕೇಳಿ ಸತ್ಯವೆಂದು ಖಚಿತಪಡಿಸಿಕೊಳ್ಳಬೇಕಾಯ್ತು! ವಿಜಯಪುರ, ಸಿಂಧನೂರಿನ ರೈತರು “ಒಂದು ತಾಸು ಮಳಿ ಸುರಿದ್ರೆ ವರ್ಷದ ರೊಟ್ಟಿàರಿ’ ಎಂದು ಬಿಳಿಜೋಳದ ಬೆಳೆ ನೆನಪಿಸಿಕೊಂಡು ಮಣ್ಣಿನ ನೀರು ಹಿಡಿಯುವ ತಾಕತ್ತು ಅನುಭವಿಸಿ ಹೇಳುತ್ತಾರೆ.

ಮೂರು ವರ್ಷ ಬರ, ನಂತರದ ವರ್ಷ ಮಳೆ ಎರೆ ಸೀಮೆಯ ಸಾಮಾನ್ಯ ಲಕ್ಷಣ. ನಮಗೆ ಬರದ ಮೊದಲ ವರ್ತಮಾನ ಸಿಗುವುದೇ ಇಲ್ಲಿಂದ! ಎಕರೆಗೆ ಹತ್ತು ಹದಿನೈದು ಬೇವು, ಹೊಂಗೆ, ಕರಿಜಾಲಿ ಮರಗಳಿರುತ್ತಿದ್ದ ಹೊಲಗಳಲ್ಲಿ ಮರಗಳು ಕಡಿಮೆ. ಬದು ನಿರ್ವಹಣೆ ಸರಿಯಿಲ್ಲದ್ದರಿಂದ ಫ‌ಲವತ್ತಾದ ಮಣ್ಣು ಕೊಚ್ಚಿ ಹೋಗಿ ಕೆರೆಯಂಗಳ ಸೇರುತ್ತದೆ. ಎರೆ ಹೊಲದ ಸೀಮೆಯಲ್ಲಿ ಕೆರೆಗಳ ಸಂಖ್ಯೆ ಕಡಿಮೆಯಿದೆ. ಒಂದು ಕೆರೆ ನಿರ್ಮಿಸಿದ ಬಳಿಕ ಅದು 50 ವರ್ಷ ಬಾಳುತ್ತದೆಂದು ನೀರಾವರಿ ಇಲಾಖೆ ವರದಿ ಹೇಳುತ್ತದೆ. ಈ ಮಾತು ಎರೆ ಸೀಮೆಗೆ ಅನ್ವಯಿಸುವುದಿಲ್ಲ.

ಬೆಳೆ ಗೆಲ್ಲುವ ತಂತ್ರ
ತೀವ್ರ ಬರಗಾಲ ಬಂದ ನಾಲ್ಕು ವರ್ಷಗಳ ಹಿಂದೆ ಬರ ಪ್ರವಾಸ ಕೈಗೊಂಡಿದ್ದೆ. ರಾಯಚೂರಿನ ಮಾನ್ವಿ ತಾಲೂಕಿನ ಸಿಂಗಡದಿನ್ನಿ, ಲಿಂಗಸೂರಿನ ಬಸಾಪುರ ಪ್ರದೇಶಗಳಲ್ಲಿ ಅಂಥ ತೀವ್ರ ಬರದಲ್ಲಿಯೂ ನೀರಿನ ಸಮಸ್ಯೆಯಿಲ್ಲವೆಂದು ಕೆಲವು ರೈತರು ಹೇಳಿದ್ದರು. ಎರೆ ಹೊಲದಲ್ಲಿ ನಿರ್ಮಿಸಿದ ಕೆರೆಗಳಲ್ಲಿ ಕೋಟ್ಯಂತರ ಲೀಟರ್‌ ನೀರು ನಿಂತಿತ್ತು. ಹೊಲದಲ್ಲಿ ಜಾಸ್ತಿ ನೀರು ನಿಂತರೆ ಬೆಳೆಯ ಬೇರು ಕೊಳೆತು ಸಸಿಗಳು ಸಾಯುತ್ತವೆ. 300- 500 ಮಿಲಿಮೀಟರ್‌ ಮಳೆ ವರ್ಷದಲ್ಲಿ ಸೂಕ್ತ ಸಮಯಕ್ಕೆ ಸುರಿದರೆ ಪರವಾಗಿಲ್ಲ. ಜಾಸ್ತಿ ಬಂದರೆ ಕಷ್ಟ. ಹೀಗಾಗಿ ಹೊಲವನ್ನು ಬೆಳೆಯೋಗ್ಯವಾಗಿಸಲು ಒಳಗಟ್ಟಿ, ಗೂಂಡಾವರ್ತಿ ನಿರ್ಮಿಸುವ ಪಾರಂಪರಿಕ ತಂತ್ರಗಳು ಶತಮಾನಗಳಿಂದ ಬಳಕೆಯಲ್ಲಿವೆ. “ಉಣತೀದಿ ದೊಡ್ಡೆಮ್ಮೆ ಹಾಲು ಹೈನ, ಕರಿ ಮಣ್ಣಿನ ಎರಿ ಭೂಮಿಯಲ್ಲಿ ಸಿರಿ ಅಡಗಿದೆ ನೋಡ’ ಎಂದು ಇಂದಿಗೆ 180 ವರ್ಷಗಳ ಹಿಂದೆಯೇ ಎರೆ ಹೊಲದಲ್ಲಿ ಬೆಳೆ ಗೆಲ್ಲುವ ತಂತ್ರಗಳನ್ನು ರಾಯಚೂರಿನ ಸಂತೆಕಲ್ಲೂರಿನ ಘನಮಠ ಶಿವಯೋಗಿಗಳು “ಕೃಷಿ ಜ್ಞಾನ ಪ್ರದೀಪಿಕೆ’ ಪುಸ್ತಕದಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ.

ದಾಖಲೆಯಲ್ಲಿ ಮಾತ್ರ ಉಳಿಯುತ್ತೆ ಕೆರೆ
ಇವತ್ತು ನಿರ್ಮಿಸಿದ ಹತ್ತಾರು ಎಕರೆ ವಿಸ್ತೀರ್ಣದ ಐದಡಿ ಆಳದ ಕೆರೆ ಒಮ್ಮೆ ಮಳೆ ನೀರು ಜೋರಾಗಿ ಹರಿದು ಬಂದರೂ ಒಂದೇ ವರ್ಷದಲ್ಲಿ ಆಟದ ಬಯಲಾಗಿ ಬದಲಾಗಬಹುದು! ಅತ್ಯಂತ ಹಗುರವಾದ ಎರೆ ಮಣ್ಣು, ನೀರಿನ ಜೊತೆಗೆ ಬೆರೆತು ಕೆರೆ ದಂಡೆ, ತೂಬಿನ ಸುತ್ತ ಮೊದಲು ಶೇಖರಣೆಯಾಗುತ್ತದೆ. ನಂತರ ಕಳೆಗಿಡಗಳು ವ್ಯಾಪಿಸುತ್ತಾ ಸೂಕ್ತ ನಿರ್ವಹಣೆ ಮಾಡದಿದ್ದರೆ ನೀರು ನಿಲ್ಲಿಸುವ ಸಾಮರ್ಥ್ಯ ಕಳೆದುಕೊಂಡು, ದಾಖಲೆಯಲ್ಲಿ ಮಾತ್ರ ಕೆರೆಯಾಗಿ ಉಳಿಯುತ್ತದೆ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಚೊಂಬಿನ ಆಕಾರ ಮಾಯವಾಗಿ ಸಮತಟ್ಟಾದ ತಟ್ಟೆಯ ರೂಪ ಪಡೆಯುತ್ತದೆ.

– ಶಿವಾನಂದ ಕಳವೆ

ಮುಂದಿನ ಭಾಗ
ಕರುನಾಡ ಕೆರೆಯಾತ್ರೆ-13. ಸರಕಾರೀ ಕುರುಡರು ಹಾಗೂ ಕೆರೆಯ ಹೂಳು

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.