ಪರದೇಶದ ಸವಿರುಚಿ


Team Udayavani, Dec 31, 2018, 12:30 AM IST

2.jpg

ಈ ಚಿತ್ತಾಕರ್ಷಕ ಹಣ್ಣಿನ ಮೂಲ, ಪಶ್ಚಿಮ ಆಫ್ರಿಕ. ಆದರೆ ಅದೀಗ ಈ ನೆಲದ ಹಣ್ಣು ಎಂಬಷ್ಟು ಸಹಜವಾಗಿ ಬೆಳ್ತಂಗಡಿ ತಾಲೂಕಿನ ಬಳಂಜದ ಅನಿಲಕುಮಾರರ ತೋಟದಲ್ಲೂ ಬೆಳೆಯುತ್ತಿದೆ. ಪುಟ್ಟ ಗಿಡದ ತುಂಬ ಗೆಜ್ಜೆ ಕಟ್ಟಿದಂತೆ ಕೆಂಪು ಕೆಂಪಾದ ಹಣ್ಣುಗಳು ತುಂಬಿಕೊಂಡಿವೆ. ಪರದೇಶದ ಅಪರೂಪದ ಈ ಹಣ್ಣು ತನ್ನ ವಿಸ್ಮಯದ ಗುಣದಿಂದ ಎಲ್ಲರ ನಾಲಿಗೆಗೆ ತಲುಪಿ ಅಚ್ಚರಿಯ ನೋಟ ಬೀರುವಂತೆ ಮಾಡಿದೆ.

    ಸಿ ಜೀವಸತ್ವ ವಿಪುಲವಾಗಿರುವ ಈ ಹಣ್ಣು ಕಿತ್ತಳೆ ಅಥವಾ ನಿಂಬೆಯ ಪರಿಮಳ ಹೊಂದಿದೆ. ವಿಶೇಷವೆಂದರೆ ಹಣ್ಣು ತಿನ್ನುವಾಗ ಸಿಹಿಯಿಲ್ಲ. ಇದರಲ್ಲಿ ಕಡಮೆ ಸಕ್ಕರೆಯ ಅಂಶವಿದೆ. ಇದನ್ನು ಪವಾಡದ ಹಣ್ಣು ಎಂದು ಕರೆಯೋಣ. ಅದರ ಗುಣದ ಪರಿಚಯವಾಗಲು ಹೆಚ್ಚು ಹೊತ್ತು ಬೇಡ. ಇದರ ರುಚಿಮೊಗ್ಗುಗಳು ನಾಲಿಗೆಗೆ ಅಂಟಿಕೊಳ್ಳುತ್ತವೆ.  ಈ ಹಣ್ಣು ತಿಂದ ಮೇಲೆ  ಹುಣಸೆಹಣ್ಣನ್ನೋ ಇಡೀ ಲಿಂಬೆಹಣ್ಣನ್ನೋ ತಿಂದರೆ ಅವುಗಳ ಸಹಜವಾದ ರುಚಿ ನಾಲಿಗೆಯಲ್ಲಿ ಆಗುವುದೇ ಇಲ್ಲ. ಸಕ್ಕರೆಯಲ್ಲಿ ಹೋಳುಗಳನ್ನು ಅದ್ದಿರುವ ಹಾಗೆ ಹುಳಿಯ ಬದಲಾಗಿ ಬಾಯ್ತುಂಬ ಸಿಹಿಯೋ ಸಿಹಿ! ತುಂಬ ಹೊತ್ತು, ಒಂದೆರಡು ತಾಸುಗಳ ಕಾಲ ಆ ರುಚಿ ಹಾಗೆಯೇ ಉಳಿಯುತ್ತದೆ. ಅದಕ್ಕೇ ಹೇಳಿದ್ದು ಮಿರಾಕಲ್‌ ಅಂದರೆ ಪವಾಡ!  ಯಾವುದೇ ಹುಳಿ ಹಣ್ಣನ್ನು ಇಡೀ ತಿಂದು ಮುಗಿಸಿದರೂ ಬಾಯಿ ಸಿಹಿಯಾಗಿಯೇ ಇರುತ್ತದೆ.

    ವೈಜ್ಞಾನಿಕವಾಗಿ ಸಿನ್ಸೆಪಲಂ ಡ್ಯುಸಿಫಿಕಂ ಎಂದು ಹೆಸರಿರುವ ಮಿರಾಕಲ್‌ ಕಡಮೆ ಕ್ಯಾಲೊರಿಗಳನ್ನು ಹೊಂದಿರುವ ಕಾರಣ ಮಧುಮೇಹ ರೋಗಿಗಳಿಗೂ ಅಪಥ್ಯವಲ್ಲ ಎನ್ನಲಾಗಿದೆ. ಅದಕ್ಕೆ ಕ್ಯಾನ್ಸರ್‌ ನಿರೋಧಕ ಗುಣವೂ ಇದೆಯಂತೆ. ಇದರಿಂದ ದೇಶಗಳಲ್ಲಿ ಕೇಕ್‌ ಮುಂತಾದ ಸಿಹಿಗಳನ್ನು ತಯಾರಿಸುತ್ತಾರೆ.

    ಆಮ್ಲಿಯವಲ್ಲದ, ಫ‌ಲವತ್ತಾದ ಎಲ್ಲ ಮಣ್ಣಿನಲ್ಲಿಯೂ ಮಿರಾಕಲ್‌ ಸುಲಭವಾಗಿ ಬೆಳೆಯುತ್ತದೆ. ಆದರೆ ಮೂವತ್ತು ಡಿಗ್ರಿಗಿಂತ ಹೆಚ್ಚಿನ ತಾಪ ಸದಾ ಕಾಲವಿರುವ ಉತ್ತರ ಕರ್ನಾಟಕದ ಊರುಗಳಲ್ಲಿ ಈ ಹಣ್ಣಿನ ಗಿಡವನ್ನು ಬದುಕಿಸುವುದು ಸುಲಭವಲ್ಲ. ಗಿಡದ ಬುಡ ಒಣಗದೆ ಬುಡ ತಂಪಾಗಿರಬೇಕು. ಹಾಗೆಂದು ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲಬಾರದು. ಬೀಜದಿಂದ ವಂಶಾಭಿವೃದ್ಧಿ ಸುಲಭ. ಮೂರು ವರ್ಷಗಳಲ್ಲಿ ಹಣ್ಣುಗಳಾಗಲು ಆರಂಭವಾಗುತ್ತದೆಂದು ವಿವರಿಸುತ್ತಾರೆ ಅನಿಲ ಬಳಂಜ.

ಪ,ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.