ಟಾಟಾ ಸ್ಮಾರ್ಟ್‌ ಟ್ರಕ್‌


Team Udayavani, Mar 15, 2021, 6:20 PM IST

Untitled-1

ದೇಶದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌, ಹೊಸಮಾದರಿಯ ಲಘು ವಾಣಿಜ್ಯ ವಾಹನಗಳನ್ನುಬಿಡುಗಡೆ ಮಾಡಿದೆ. ಅಲ್ಟ್ರಾ ಸ್ಲೀಕ್‌ ಟಿ ಸೀರಿಸ್‌ ನಲ್ಲಿ ಮೂರು ಮಾದರಿಯ  ವಾಹನಗಳನ್ನುಗುರುವಾರವಷ್ಟೇ ಲಾಂಚ್‌ ಮಾಡಲಾಗಿದೆ.

ಪ್ರಮುಖವಾಗಿ ನಗರಗಳಲ್ಲಿನ ಸಂಚಾರವನ್ನೇ ಗಮನದಲ್ಲಿರಿಸಿಕೊಂಡು ಈ ವಾಹನಗಳನ್ನುರೂಪಿಸಲಾಗಿದೆ. ಇದರಲ್ಲಿ ಟಿ.6, ಟಿ.7 ಮತ್ತು ಟಿ.9 ಎಂಬ ಮಾದರಿಗಳಿವೆ. 10ರಿಂದ 20 ಅಡಿ ಉದ್ದದ ಡೆಕ್‌ನಲ್ಲಿ ಈ ವಾಹನಗಳು ಸಿಗಲಿವೆ. 1900 ಎಂಎಂ ಅಗಲದ ಕ್ಯಾಬಿನ್‌ ಉತ್ತಮ ಡ್ರೈವಿಂಗ್‌ ಅನುಭವ ನೀಡಲಿದೆ. ಅಷ್ಟೇ ಅಲ್ಲ, ಇದರಲ್ಲಿನ ಸ್ಮಾರ್ಟ್‌ ಫೀಚರ್‌ಗಳು ಡ್ರೈವಿಂಗ್‌ ನ ಅನುಭವಕ್ಕೆ ಇನ್ನಷ್ಟು ಮೆರಗು ನೀಡಲಿವೆ. ಅಷ್ಟೇ ಅಲ್ಲ, ಸೇಫ್ಟಿ ವಿಚಾರದಲ್ಲೂ ಈ ವಾಹನ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪನಿಯೇ ಹೇಳಿಕೊಂಡಿದೆ.

ಅಡ್ಜಸ್ಟಬಲ್‌ ಸೀಟುಗಳು, ಪವರ್‌ ಸ್ಟೇರಿಂಗ್‌, ಡ್ಯಾಶ್‌ ಬೋರ್ಡ್‌ಗೆ ಹೊಂದಿಕೊಂಡಿರುವ ಗೇರ್‌ ಬಾಕ್ಸ್, ಇನ್‌ ಬಿಲ್ಟ್ ಮ್ಯೂಸಿಕ್‌ ಸಿಸ್ಟಮ್, ಯುಎಸ್‌ ಬಿ ಫಾಸ್ಟ್ಚಾರ್ಜಿಂಗ್‌ ಪೋರ್ಟ್‌, ವಿಶಾಲವಾದ ಸ್ಟೋರೇಜ್‌ ಸ್ಪೇಸ್‌ ಗಳ ವೈಶಿಷ್ಟ್ಯವೂ ಈ ವಾಹನಕ್ಕಿದೆ.

ಅಲ್ಲದೇ ಇದು ನಾಲ್ಕು ಮತ್ತು ಆರು ಟೈರುಗಳವೇರಿಯಂಟ್‌ನಲ್ಲೂ ಸಿಗಲಿದೆ. ಪ್ರಮುಖವಾಗಿ ಇಕಾಮರ್ಸ್‌ ವಸ್ತುಗಳ ಸಾಗಾಟ, ಸಿಲಿಂಡರ್‌ಗಳ ಸಾಗಣೆ, ಕೋವಿಡ್ ಲಸಿಕೆ, ಔಷಧಿಗಳು, ಆಹಾರ ವಸ್ತುಗಳಾದ ಮೊಟ್ಟೆ, ಹಾಲು ಮತ್ತು ಕೃಷಿ ವಸ್ತುಗಳ ಸಾಗಾಟಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ.

ಬರಲಿದೆ ಹುಂಡೈ ಅಲ್ಕಾಝಾರ್‌ : ಜಗತ್ತಿನ ಪ್ರಖ್ಯಾತ ಕಾರು ತಯಾರಕ ಸಂಸ್ಥೆ ಹುಂಡೈ, ತನ್ನ ಹೊಸ 7 ಸೀಟಿನ ಎಸ್‌ ಯುವಿಯನ್ನು ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಿದೆ. ಈ ವರ್ಷವೇ ಭಾರತವೂ ಸೇರಿದಂತೆ ಜಗತ್ತಿನ ಎಲ್ಲೆಡೆ ತನ್ನ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹುಂಡೈ ಅಲ್ಕಾಝಾರ್‌ ಎಂಬ ಹೆಸರಿನ ಈ ಎಸ್‌ ಯುವಿ ಬಗ್ಗೆ ಟೀಸರ್‌ ವಿಡಿಯೋ ಬಿಡುಗಡೆ ಮಾಡಿದ್ದು, ಈ ವರ್ಷವೇ ಬರಲಿದ್ದೇವೆ ಎಂದಿದೆ. ಅಷ್ಟೇ ಅಲ್ಲ, ತನ್ನ ಅಧಿಕೃತ ವೆಬ್‌ ಸೈಟ್‌ನಲ್ಲೂ ಹೊಸ ಎಸ್‌ ಯುವಿ ಬಗ್ಗೆ ಪಟ್ಟಿ ಮಾಡಿದೆ. ಈ ಕಾರು ಈಗಾಗಲೇ ಇರುವ ಕ್ರೀಟಾಗಿಂತ ಮೇಲಿನದ್ದಾಗಿರಬಹುದು ಎಂಬಮಾತುಗಳಿವೆ. 2021ರ ಎರಡನೇ ತ್ತೈಮಾಸಿಕದಲ್ಲಿ ಇದು ಬಿಡುಗಡೆಯಾಗಬಹುದು. ಅಂದರೆ ಮೇನಲ್ಲಿ ಲಾಂಚ್‌ ಆಗಬಹುದಾಗಿದ್ದು, ಏಪ್ರಿಲ್‌ ಮಧ್ಯಭಾಗದಿಂದಲೇ ಬುಕಿಂಗ್‌ ಶುರುವಾಗಬಹುದು ಎಂದು ಹೇಳಲಾಗುತ್ತಿದೆ.

ದರ ವಿವರ :

(ದೆಹಲಿ ಎಕ್ಸ್ ಶೋ ರೂಂ ದರ)

ಅಲ್ಟ್ರಾ ಸ್ಲೀಕ್‌ ಟಿ.6 13,99,000 ರೂ.

ಅಲ್ಟ್ರಾ ಸ್ಲೀಕ್‌ ಟಿ.7 15,29,000 ರೂ.

ಅಲ್ಟ್ರಾ ಸ್ಲೀಕ್‌ಟಿ.9 17,29,000 ರೂ.

 

-ಸೋಮಶೇಖರ ಸಿ.ಜೆ.

 

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.