ದಿ ಟೇಸ್ಟ್‌ ಆಫ್ ಕನಕಪುರ


Team Udayavani, Oct 16, 2017, 11:03 AM IST

kanakapura-taste.jpg

ಕನಕಪುರದ ವಾಸು ಹೋಟೆಲನ್ನು ಚಿಕ್ಕಂದಿನಿಂದಲೂ ಬಲ್ಲೆ. ಬೆಂಗಳೂರಿನ ಜನರಿಗೆ ಗಾಂಧಿಬಜಾರಿನ ವಿದ್ಯಾರ್ಥಿಭವನ್‌ ಹೇಗೋ, ಕನಕಪುರದ ಜನರಪಾಲಿಗೆ ವಾಸು ಹೋಟೆಲ್‌ ಕೂಡ ಹಾಗೆಯೇ. ಕನಕಪುರದ ಹೃದಯ ಭಾಗದಲ್ಲಿರುವ ಈ ಹೋಟೆಲ್‌ಗೆ ಸುಮಾರು 75 ವರ್ಷಗಳ ಇತಿಹಾಸದೆ. ಶ್ರೀ ಲಕ್ಷ್ಮೀ ವಿಲಾಸ ಕಾಫಿ ಕ್ಲಬ್‌ ಎಂಬ ಹೆಸರಿದ್ದ ಈ ಹೋಟೆಲನ್ನು ಆರಂಭಿಸಿದವರು ಶೃಂಗಾರಮ್ಮ ಮತ್ತು ಅವರ ಪತಿ. ಈ ದಂಪತಿ ಹೊಟ್ಟೆಪಾಡಿಗೆಂದು ಉಡುಪಿ ಜಿಲ್ಲೆಯ ಕೋಡಿ ಗ್ರಾಮದಿಂದ ಕನಕಪುರಕ್ಕೆ ಬಂದು ನೆಲೆಸಿದ್ದರು.

ಕಾಲಕ್ರಮೇಣ ಶೃಂಗಾರಮ್ಮ ಅವರ ಮಗ ವಾಸು ಅವರು  ಈ ಹೋಟೆಲನ ಉಸ್ತುವಾರಿ ವಹಿಸಿಕೊಂಡರು. ಈ ಕಾರಣದಿಂದಲೇ ಶ್ರೀಲಕ್ಷ್ಮೀ ವಿಲಾಸ ಕಾಫಿ ಕ್ಲಬ್‌ ಮುಂದೊಮ್ಮೆ ವಾಸು ಹೋಟೆಲ್‌ ಅಂತಲೇ ಹೆಸರಾಯಿತು. ವಾಸು ಅವರ ಅಕಾಲಿಕ ಮರಣದ ನಂತರ ಶೃಂಗಾರಮ್ಮ ಅವರ ತಮ್ಮ ವೆಂಕಟರಮಣಯ್ಯ ಅವರ ಸುಪರ್ದಿಗೆ ವಾಸು ಹೋಟೆಲ್‌ ಬಂತು. 1968ರಲ್ಲಿ ವೆಂಕಟರಮಣಯ್ಯ ಅವರೂ ತೀರಿಕೊಂಡ ಕಾರಣದಿಂದ ಸ್ವಲ್ಪ ಕಾಲ ನರಸಿಂಹಯ್ಯ ಎನ್ನುವವರು ಹೋಟೆಲನ್ನು ನೋಡಿಕೊಳ್ಳುತ್ತಿದ್ದರು.

ಅವರ ನಂತರ ವಾಸು ಹೋಟೆಲ್‌ನ ಜವಾಬ್ದಾರಿ ಹೊತ್ತು ಕೊಂಡವರು ರಾಮಚಂದ್ರ ಉಪಾಧ್ಯ.1969ರಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮ  ಸಮೀಪದ ಪಾರಂಪಳ್ಳಿಯಿಂದ ಒಬ್ಬ ಸಪ್ಲೆಯರ್‌ ರೂಪದಲ್ಲಿ ವಾಸು ಹೋಟೆಲ್‌ಗೆ ಬಂದ ಉಪಾಧ್ಯ ಅವರು 1983ರಲ್ಲಿ ಹೋಟೆಲ್‌ನ ಜವಾಬ್ದಾರಿ ಹೊತ್ತುಕೊಂಡು ಪ್ರಸ್ತುತ ಇಂದಿಗೂ ಆ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇವರ ಮಗ ಜನಾರ್ಧನ ಉಪಾಧ್ಯ ಈಗ ತಂದೆಗೆ ಸಹಕಾರ ನೀಡುತ್ತಿದ್ದಾರೆ. 

ಗುಡಿಸಲಿನಿಂದ ಆರಂಭವಾದ ವಾಸು ಹೋಟೆಲ್‌ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಾ ಬೆಳೆದು ಇವತ್ತು ತನ್ನದೇ ಸ್ವಂತ ಕಟ್ಟಡವನ್ನು ಹೊಂದಿದೆ. ಕನಕಪುರದಲ್ಲಿ ಇನ್ನೊಂದು ಶಾಖೆ ಹೊಂದಿರುವುದರ ಜೊತೆಗೆ ಹಾರೋಹಳ್ಳಿ ಯಲ್ಲಿಯೂ ನೂತನ ಶಾಖೆಯೊಂದನ್ನು ಆರಂಭಿಸಿದೆ. ಕಾನಕಾನಹಳ್ಳಿ  ಎಂದು  ಕರೆಯಲ್ಪಡುತ್ತಿದ್ದ  ಕನಕಪುರಕ್ಕೂ ವಾಸು ಹೋಟೆಲ್‌ಗ‌ೂ ನಿಕಟವಾದ ಸಂಬಂಧವಿದೆ.

ಆಂಜನೇಯ ಸ್ವಾಮಿ ಜಾತ್ರೆ (ಹೊಳೆ ಪರಿಷೆ), ರಾಮದೇವರ ಜಾತ್ರೆ, ಕೆಂಕೇರಮ್ಮನ ಜಾತ್ರೆ, ಮಳಗಾಳು ಜಾತ್ರೆ… ಮುಂತಾದ ಜಾತ್ರೆಗಳಿಗೆ ಹಾಗೂ ಪ್ರತಿ ಗುರುವಾರ ನಡೆಯುವ ಸಂತೆಗೆ ದಶಕಗಳ ಹಿಂದಿನಿಂದಲೂ ಕನಕಪುರದ ಸುತ್ತಮುತ್ತಲ ಹಳ್ಳಿಗಳಿಂದ ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದ ಜನರ ಹಸಿವನ್ನು ನೀಗಿಸುತ್ತಿದ್ದ ಇತಿಹಾಸ ವಾಸು ಹೋಟೆಲ್‌ಗಿದೆ. ಇಡ್ಲಿ, ವಡೆ, ಮಸಾಲೆ ದೋಸೆ, ಸೆಟ್‌ದೋಸೆ, ಖಾರಾಬಾತ್‌, ಕೇಸರಿಬಾತ್‌ ಒಳಗೊಂಡಂತೆ ಉಡುಪಿ ಮಾದರಿಯ, ದಕ್ಷಿಣ ಭಾರತದ ಶೈಲಿಯ ವಿಶೇಷ ಚೌಚೌ ( ಮಿಕ್ಚರ್‌ ) … ಇನ್ನೂ ಮುಂತಾದ ತಿಂಡಿ ತಿನಿಸುಗಳು ವಾಸು ಹೋಟೆಲ್‌ನಲ್ಲಿ ಸಿಗುತ್ತವೆ.

ಈ ಹೋಟೆಲ್‌ ಬೆಳಿಗ್ಗೆ 5-30 ರಿಂದ ಸಂಜೆ 7-30 ರವರೆಗೆ ತೆರೆದಿರುತ್ತದೆ. ಬುಧವಾರ ರಜಾ ದಿನವಾಗಿರುತ್ತದೆ. ಕನಕಪುರದ ಗಾಂಧಿ ಎಂದೇ ಹೆಸರಾಗಿದ್ದ ಎಸ್‌.ಕರಿಯಪ್ಪನವರು ತಮ್ಮ ರೂರಲ್‌ ಕಾಲೇಜಿಗೆ ವಾಸು ಹೋಟೆಲ್‌ನಿಂದ ತಿಂಡಿ ತರಿಸಿಕೊಳ್ಳುತ್ತಿದ್ದರೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ರಾಮಚಂದ್ರ ಉಪಾಧ್ಯ ಅವರು, ಹಳೆಯ   ದಿನಗಳನ್ನು ಮೆಲುಕು ಹಾಕುತ್ತಾರೆ.

ಚಿತ್ರೀಕರಣದ ನಿಮಿತ್ತ ಅಂದೊಮ್ಮೆ ಕನಕಪುರಕ್ಕೆ ಆಗಮಿಸಿದ್ದ ತೆಲುಗಿನ ಪ್ರಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್‌ ಅವರು ಕೂಡ ವಾಸು ಹೋಟೆಲ್‌ಗೆ ಭೇಟಿ ನೀಡಿ ಅಲ್ಲಿಯ ತಿಂಡಿ ತಿನಿಸುಗಳನ್ನು ಸವಿದುದ್ದುಂಟು. ಅದೇ ರೀತಿ ಖ್ಯಾತ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌, ರಾಜಕಾರಣಿಗಳಾದ ಡಿ.ಕೆ. ಶಿವಕುಮಾರ್‌, ಪಿ.ಜಿ.ಆರ್‌.ಸಿಂಧ್ಯಾ ಮುಂತಾದ ಗಣ್ಯರು ವಾಸು ಹೋಟೆಲಿನ ರುಚಿಗೆ ಮಾರು ಹೋದವರೇ. 

ಅಂದಹಾಗೆ, ಇವತ್ತಿನ ಫಾಸ್ಟ್‌ ಫ‌ುಡ್‌ ಜಮಾನದಲ್ಲೂ ವಾಸು ಹೋಟೆಲ್‌ ಇನ್ನೂ ಜನಮಾನಸದಲ್ಲಿ ಉಳಿದಿರುವುದರ ಹಿಂದೆ ಅಲ್ಲಿಯ ರುಚಿ, ಶುಚಿ, ಗುಣಮಟ್ಟ ಹಾಗೂ ವೃತ್ತಿಪರತೆ ಎದ್ದುಕಾಣುತ್ತಿದೆ.  

ಸೌದೆ ಒಲೆಯ ದೋಸೆ…
ವಾಸು ಹೋಟೆಲಿನಲ್ಲಿ ಈಗಲೂ ಸೌದೆ ಒಲೆಯಿಂದಲೇ ತಿಂಡಿಗಳನ್ನು ತಯಾರಿಸಲಾಗುತ್ತದೆ. ಇಲ್ಲಿನ ಮಸಾಲೆ ದೋಸೆಯ ರುಚಿ ಹೆಚ್ಚಲು ಸೌದೆ ಒಲೆಯೂ ಕಾರಣವಿರಬಹುದು ಎನ್ನುತ್ತಾರೆ ಗ್ರಾಹಕರು. ಕನಕಪುರದ ಸುತ್ತಮುತ್ತ ಇರುವ ಸಂಗ, ಮೇಕೆದಾಟು, ಚುಂಚಿ ಫಾಲ್ಸ್‌, ಮುತ್ತತ್ತಿ, ಭೀಮೇಶ್ವರಿ, ಗೋವಿನಕಲ್ಲು ಬೆಟ್ಟ, ಹಾರೋಬೆಲೆ ಡ್ಯಾಂ, ಚೀಲಂದವಾಡಿ ಶಿವಾಲ್ದಪ್ಪನ ಬೆಟ್ಟ ಮುಂತಾದ ಸ್ಥಳಗಳಿಗೆ ಭೇಟಿ ನೀಡಲೆಂದು ಕನಕಪುರಕ್ಕೆ ಬರುವ ಪ್ರವಾಸಿಗರಲ್ಲಿ ಹಲವು ವಾಸು ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿಂದರೇ ತಮ್ಮ ಪ್ರವಾಸ ಪರಿಪೂರ್ಣವಾಗೋದು ಎಂದು ಹೇಳವುದೂ ಇದೆ. 

* ಹೃದಯಶಿವ
ಮಾಹಿತಿಗೆ: 9845069752

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.