ಮನೆಯೊಳಗಿನ ವಾಸ್ತುದೋಷ ನಿವಾರಣೆಗೆ ಸರಳ ಪರಿಹಾರಗಳು ಇಲ್ಲುಂಟು


Team Udayavani, Jul 10, 2017, 1:21 PM IST

10-ISIRI-6.jpg

ಇರುವುದನ್ನು ಇದ್ದಂತೆ ಹೇಳಿದಾಗ ಕೇಳಿದವರಿಗೆ ಮನಸ್ಸು ಮುದುಡುತ್ತದೆ. ಕಟ್ಟಿದ ಮನೆಯನ್ನು ಒಡೆಯಿರಿ, ಬದಲಿಸಿರಿ ಎನ್ನುವುದು ಕಷ್ಟದ ಕೆಲಸ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ, ಮತ್ತೆ ಸಾಲ ಮಾಡಿ ಮನೆಯನ್ನು ಪುನರೂಪಿಸಲು ಬಹಳ ಜನ ಮುಂದಾಗುತ್ತಾರೆ. 

ನಿಮ್ಮ ಮನೆಯನ್ನು ಸಕಲಸೌಭಾಗ್ಯದ ಸಂಪನ್ನದ ಗಣಿಯಾಗಿಸಿಕೊಳ್ಳಲು ನಿರಂತರವಾದ ಪ್ರಯತ್ನ ನಡೆಸುತ್ತೀರಿ. ಪಂಚಭೂತಗಳನ್ನು ಸೂಕ್ತನೆಲೆಯಲ್ಲಿ ನಮ್ಮ ಮನೆಗೆ ಸಂಬಂಧಿಸಿದ ಪೂರ್ವ ಪಶ್ಚಿಮಾದಿ ಅಷ್ಟದಿಕ್ಕುಗಳನ್ನು ಜಲಯುತ ಗೊಳಿಸಲು ಆಧುನಿಕ ಕಾಲದಲ್ಲಿ ಸ್ವಲ್ಪ ಕಷ್ಟದ ವಿಷಯವೇ ಆಗಿದೆ. ಹಿಂದೆ ಸುಲಭವಾಗಿತ್ತು ಎಂದೇನಲ್ಲ. ಆದರೆ ಸರ್ವತ್ರ ಮಲಿನತೆಗೆ ಕಾರಣವಾಗುವ ಬಚ್ಚಲು, ಸಂಡಾಸು ಮನೆಯ ಹೊರಗಡೆ ಇದ್ದು ಮನೆ ಶುಚಿಯಾಗಿರಲು ಅನುಕೂಲವಾಗಿತ್ತು. ಈಗ ಆಧುನಿಕ ವಿಧಾನಗಳು ಎಲ್ಲವನ್ನೂ ಕಲಸುಮೇಲೊಗರಗೊಳಿಸಿವೆ. ಮನೆಯೊಳಗೇ ನಾಲ್ಕು ಸಂಡಾಸುಗಳು, ನಾಲ್ಕು ಬಚ್ಚಲುಮನೆಗಳು, ಮನೆಯ ಅಳತೆಗೆ ಸರಿಹೊಂದದ ದೇವರ ಮನೆ, ಎಲ್ಲೋ ಊಟ ಎಲ್ಲೋ ಅಡುಗೆ, ಎಲ್ಲೋ ಮಲಗುವ ವ್ಯವಸ್ಥೆ ಇತ್ಯಾದಿಗಳಿಂದ ಹೇಳತೀರದ ಗೊಂದಲಗಳ ನಡುವೆ ಬದುಕು ಸಾಗಿದೆ. ಮುಖ್ಯವಾಗಿ ಈ ಎಲ್ಲಾ ರೀತಿಯ ಇಕ್ಕಟ್ಟುಗಳಿಂದ ಮನಸ್ಸು ಪ್ರಫ‌ುಲ್ಲವಾಗಿರಲು ಅಸಾಧ್ಯವಾಗಿದೆ.

ವಾಸ್ತು ವಿಚಾರವಾಗಿ ಪರಿಶೀಲಿಸಿ ಎಂದು ವಿನಂತಿಸುತ್ತಾರೆ. ಇರುವುದನ್ನು ಇದ್ದಂತೆ ಹೇಳಿದಾಗ ಕೇಳಿದವರಿಗೆ ಮನಸ್ಸು ಮುದುಡುತ್ತದೆ. ಕಟ್ಟಿದ ಮನೆಯನ್ನು ಒಡೆಯಿರಿ, ಬದಲಿಸಿರಿ ಎನ್ನುವುದು ಕಷ್ಟದ ಕೆಲಸ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ, ಮತ್ತೆ ಸಾಲ ಮಾಡಿ ಮನೆಯನ್ನು ಪುನರೂಪಿಸಲು ಬಹಳ ಜನ ಮುಂದಾಗುತ್ತಾರೆ. ಪಶ್ಚಿಮಕ್ಕೆ ಮುಖ ಮಾಡಿದ ದೇವರನ್ನು ಕೂಡಿಸಲು ಸಾಧ್ಯವಾಗದ ರೀತಿ ಮನೆಯ ಪೂರ್ವಭಾಗ ರೂಪುಗೊಂಡಿದ್ದರೆ ಇಕ್ಕಟ್ಟುಗಳ ನಡುವೆಯೇ ದೇವರನ್ನು ಕೂಡ್ರಿಸಿ ಎನ್ನುವುದು ತಪ್ಪಾಗುತ್ತದೆ. ಉತ್ತರದಲ್ಲಿ ಪೇರಿಸಿದ ಎನರ್ಜಿಗೆ ತೊಡೆತಟ್ಟುವ ತ್ಯಾಜ್ಯ ಅಥವಾ ಬಿಡು ಬೀಸು ತುಂಡು ಕಟ್ಟಿಗೆ, ಕಬ್ಬಿಣದ ಡಬ್ಬಿ, ಕಡತಗಳನ್ನು ರವಾನಿಸಿ ಎಂದು ಹೇಗೆ ತಿಳಿಸುವುದು? ಸೋರುವ ನೀರಿನ ಟ್ಯಾಪ್‌, ಮುಚ್ಚಲಾಗದ ಬಚ್ಚಲ ಮನೆಯ ಬಾಗಿಲು ಕಾಣದಂತೆ ಇಳಿಬಿಟ್ಟ ಪರದೆ, ಕೊಳೆವೆಗೊಂದು ಅಸಾಧ್ಯವಾದ ಅಸಮರ್ಪಕ ಕೆಡು ಅಲೆಗಳನ್ನು ಮನೆಯಲ್ಲಿ ತುಂಬಿಸಿವೆ ಎಂದು ತಿಳಿಸಿ ಹೇಳಿದರೂ, ಅವುಗಳ ಸೂಕ್ತ ಅಚ್ಚುಕಟ್ಟುತನ ಸರ್ರನೆ ಬದಲುಗೊಳ್ಳಲು ಅನೇಕ ಅಡೆ ತಡೆಗಳಿರುತ್ತವೆ. ಒಂದು ಮನೆ ಹಲವು ಕಾರಣಗಳಿಗಾಗಿ ಅಂಚಿನವರೆಗೆ ನೀರು ತುಂಬಿದ ಹರಿವಾಣವನ್ನು, ಒಂದು ಚೂರೂ ತುಳುಕಿಸದೆ, ಹತ್ತು ಅಡಿ ಎತ್ತು ಎನ್ನುವಷ್ಟೇ ಕಷ್ಟದ ವಿಚಾರವಾಗಿರುತ್ತದೆ.

ಈ ಎಲ್ಲಾ ಕ್ಲಿಷ್ಟತೆಗಳಿಂದಾಗಿ ಮನೆಯೊಳಗಿನ ಸಕಾರಾತ್ಮಕ ಅಲೆಗಳನ್ನು ಗಟ್ಟಿಗೊಳಿಸಲು ನಮಗೆ ಸಹಕಾರಿಯಾಗಬೇಕಾದ ಸೂರ್ಯ, ಚಂದ್ರ, ಮಂಗಳ ಇತ್ಯಾದಿ ನವಗ್ರಹಗಳನ್ನು ಸಂತೃಪ್ತಿ ಪಡಿಸುವುದೇ ಸೂಕ್ತ ವಿಧಾನವಾಗಿದೆ. ದೇವರ ಮನೆಯಲ್ಲಿ ಒಂದು ಅಗಲವಾದ ಹರಿವಾಣವಿರಿಸಿ, ದೇವರೆದುರಿಗೆ ಇರುವ ದಿಕ್ಕನ್ನು ಅನುಸರಿಸಿ, ಪೂರ್ವ ಪಶ್ಚಿಮ, ಉತ್ತರ ದಕ್ಷಿಣ, ಈಶಾನ್ಯ ನೈಋತ್ಯ, ಆಗ್ನೇಯ ಹಾಗೂ ವಾಯುವ್ಯ ದಿಕ್ಕುಗಳನ್ನು ಗುರುತಿಸಿಕೊಳ್ಳಿ. ಎಂಟು ಸುಮಾರು ನೂರು ಗ್ರಾಂ. ಅಥವಾ ಅದಕ್ಕಿಂತ ಜಾಸ್ತಿ ಸ್ಥಳಾವಕಾಶವಿರುವ ಪುಟ್ಟ ತಟ್ಟೆಗಳನ್ನಿರಿಸಿ ಇದೆಲ್ಲದರ ನಡುವೆ ಮಧ್ಯದಲ್ಲಿ ಒಂಭತ್ತನೆಯ ತಟ್ಟೆಯನ್ನಿಡಿ. ಸೋಮವಾರದಿಂದ ಶುರು ಮಾಡಿ, ಭಾನುವಾರದವರೆಗೂ ಪೂರ್ವಭಾಗದ ತಟ್ಟೆಗೆ ಪ್ರತಿದಿನ ಒಂದು ಸಲಕ್ಕೆ ಐದು ಗ್ರಾಂನಂತೆ ಅಕ್ಕಿಯನ್ನು, ಆಗ್ನೇ¿åಭಾಗದ ತಟ್ಟೆಗೆ ತೊಗರಿ ಬೇಳೆಯನ್ನು, ದಕ್ಷಿಣ ದಿಕ್ಕಿನ ತಟ್ಟೆಗೆ ಹೆಸರು ಕಾಳು, ನೈಋತ್ಯ ದಿಕ್ಕಿನ ತಟ್ಟೆಗೆ ಎಳ್ಳು, ಪಶ್ಚಿಮ ದಿಕ್ಕಿಗೆ ಅವರೆಕಾಳು ಮಧ್ಯಭಾಗದ ತಟ್ಟೆಗೆ ಗೋಧಿಯನ್ನು ಪ್ರತಿದಿನ ಪೌರ್ಣಿಮೆಯ ದಿನ ಇವನ್ನೆಲ್ಲಾ ಒಂದು ಪಾತ್ರೆಗೆ ಸುರಿದು ಆ ರಾತ್ರಿ ಅವುಗಳನ್ನು ನೀರಲ್ಲಿ ನೆನೆಸಿ ಮಾರನೆ ದಿನ ಶುದ್ಧ ನೀರಲ್ಲಿ ನೆನೆಸಿದ ನವಧಾನ್ಯಗಳನ್ನು ಬೆಲ್ಲದೊಂದಿಗೆ ಹಸುವಿಗೆ ಗ್ರಾಸ ನೀಡಿ ಮಾರನೇ ದಿನದಿಂದ ಮತ್ತೆ ನವಧಾನ್ಯಗಳ ಸಂಗ್ರಹ ಮತ್ತೆ ಮಾಡಿ. ಇದು ನಿರಂತರವಾಗಿ ನಡೆಯಲಿ ತುಂಬುತ್ತಿರುವ ಧಾನ್ಯದ ತಟ್ಟೆಗಳನ್ನು ಮುಚ್ಚಳದಿಂದ ಮುಚ್ಚಿರಿ, ಇದರಿಂದ ದೋಷ ಪರಿಹಾರ ಆಗುತ್ತದೆ. 

ಅನಂತಶಾಸ್ತ್ರಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.