ಆಸೆಯೊಂದೇ ಸಾಲದು


Team Udayavani, Jul 2, 2018, 1:10 PM IST

ase.jpg

ಯಾವತ್ತೂ ಅಷ್ಟೇ; ಸುರಕ್ಷಿತ ಅನ್ನಿಸಿದ ಕಡೆಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಹೀಗೆ ಹಣ ಹೂಡುವ ಮುನ್ನ ಆ ಯೋಜನೆಯ ಹಿಂದಿರುವ ಸಾಧಕ ಬಾಧಕಗಳನ್ನು ಗಮನಿಸಬೇಕು.

ಹೂಡಿಕೆಯ ಬಗೆಗೆ ಇರುವ ಯಾವುದೇ ಸೆಮಿನಾರ್‌, ಭಾಷಣಗಳನ್ನು ಕೇಳುವಾಗ ಮೊದಲು ಹೇಳುವುದೇ ಕೆಲವು ಘಟನೆಗಳು. ಹತ್ತು ವರ್ಷದ ಹಿಂದೆ ಕೇವಲ 10 ಸಾವಿರ ರುಪಾಯಿಗಳನ್ನು ಯಾವುದಾದರೂ ವ್ಯವಹಾರದಲ್ಲಿ ತೊಡಗಿಸಿದ್ದಿದ್ದರೆ- 25 ವರ್ಷಗಳ ಹಿಂದೆ ಕೇವಲ 8 ಸಾವಿರ ಹಾಕಿ ಈ ಷೇರು ಖರೀದಿಸಿದ್ದರೆ, ಈಗ ಇಷ್ಟು ಲಕ್ಷ ಆಗುತ್ತಿತ್ತು, ಇಷ್ಟು ಕೋಟಿ ಆಗುತ್ತಿತ್ತು ಎಂದೆಲ್ಲಾ ಹಲವರು ಅಂಕಿ ಅಂಶಗಳ ಸಹಿತ ಹೇಳುವುದುಂಟು. ಅವನ ಮಾತು ಸುಳ್ಳಲ್ಲ ಎನ್ನುವುದಕ್ಕೆ ಅಂಕಿ ಅಂಶಗಳೇ ಕಣ್ಮುಂದೆ ಇರುತ್ತವೆ. ಹಾಗಾದರೆ ಇದು ನಮಗೇಕೆ ಸಾಧ್ಯ ಆಗುವುದಿಲ್ಲ?  ಮಾತುಗಳನ್ನು ಕೇಳುತ್ತ ಕುಳಿತ ಎಲ್ಲರಿಗೂ ಅನ್ನಿಸುವ ವಿಷಯ.

ನಮ್ಮ ಮನಸ್ಸು, ಭರವಸೆಯೊಂದಿಗೆ ಆಸೆಯಿಂದಲೇ ಇಂಥ ಭಾಷಣಗಳನ್ನು ಕೇಳುತ್ತದೆ. ಅಷ್ಟೇ ಅಲ್ಲ, ಅಲ್ಲಿಂದ ವಾಪಸ್‌ ಬರುತ್ತಿದ್ದಂತೆ ಅಥವಾ ಅಲ್ಲಿಯೇ ಈ ಬಾರಿ ನಾವೂ ಒಂದಷ್ಟು ಹಣವನ್ನು ಯಾವುದಾದರೂ ಯೋಜನೆಯಲ್ಲಿ ಬಂಡವಾಳ ಹೂಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದು, ಒಂದು ರೀತಿಯಿಂದ ಬಾಗಿಲು ತೆರೆದ ಹಾಗೆ. ಬಾಗಿಲು ತೆರೆಯಿತು ಆದರೆ ಒಳ ಹೋಗಬೇಕಾದವರು ನಾವು. ಒಳಗೂ ಕೈ ಹಿಡಿದುಕೊಂಡೇ ಹೋಗು ಅಂದರೆ ಒಳಗಿರುವ ದೇವರ ದರ್ಶನ ಆಗಬೇಕಾದದ್ದು  ನಮಗೆ. ಇಂತಹ ಹೂಡಿಕೆಗಳ ಬಗೆಗೆ ಸ್ನೇಹಿತರ ನಡುವೆ, ಸಂಬಂಧಿಕರ ನಡುವೆ  ಮಾತನಾಡುವಾಗ ಹೂಡಿಕೆಯ ವಿಷಯ ಬಂದಾಗಲೂ ಇಂತಹುದೇ ವರ್ಣರಂಜಿತ ಮಾತುಗಳೇ ಇರುತ್ತವೆ. ಆದರೆ ನಾವು ನೆನಪಿಟ್ಟುಕೊಳ್ಳಬೇಕಾದ ಅತಿಮುಖ್ಯ ಸಂಗತಿಯೊಂದಿದೆ ಏನೆಂದರೆ: ಇಂತಹ ಎಲ್ಲ ಹೂಡಿಕೆಗೂ ಕೂಡ ಅಲ್ಪಮಟ್ಟಿಗಿನ ಪರಿಶ್ರಮ, ಆರ್ಥಿಕ ಶಿಸ್ತು ಬೇಕೇ ಬೇಕು.

ಹೇಳುವವರಿಗೇನಂತೆ? ಅವರು ಎಲ್ಲವನ್ನೂ ಬಲ್ಲವರಂತೆ ಹೇಳಿಬಿಡುತ್ತಾರೆ: ನೋಡಿ, ಈ ಯೋಜನೆಯಲ್ಲಿ ಹಣ ತೊಡಗಿಸಿದರೆ ಸಾಕು. ಆನಂತರ ನೀವು ಏನೂ ಮಾಡಬೇಕಾಗಿಲ್ಲ. ವರ್ಷ ಕಳೆಯುತ್ತಾ ಹೋದಂತೆ ಅದು ತಂತಾನೇ ಹೆಚ್ಚಾಗುತ್ತಾ ಹೋಗುತ್ತದೆ ! ಇಂಥ ಮಾತನ್ನು ಕಣ್ಮುಚ್ಚಿ ನಂಬುವವರಿಗೆ ಕೊರತೆ ಇಲ್ಲ.  ಹೂಡಿದ ಹಣ ಇಷ್ಟು ವರ್ಷಕ್ಕೆ ಇಷ್ಟಾಗುತ್ತದೆ ಎನ್ನುವ ಅಂಕಿ ಅಂಶ ನೋಡಿ ಬೆರಗಾಗುವ ನಾವು ಯಾವುದೇ ತಾರ್ಕಿಕ ಆಲೋಚನೆಯೂ ಇಲ್ಲದೆ, ಏನೂ ಕೆಲಸ ಮಾಡುವ ಹಾಗಿಲ್ಲ ಬಿಡು ಎಂದು ಸಂತೋಷಿಸುತ್ತೇವೆ.

ನಾವು ಹಾಕಿದ ಹಣ ಹಾಗೇ ಸುಮ್ಮನೆ ಬೆಳೆಯುತ್ತಾ ಹೋಗುತ್ತದೆ ಎನ್ನುವ ಭರವಸೆಯೊ ಭ್ರಮೆಯೋ ನಮ್ಮದಾಗುತ್ತದೆ. ಕೇವಲ ಗಿಡ ನೆಟ್ಟರೆ ಸಾಕಾಗುವುದಿಲ್ಲ ಅದಕ್ಕೆ ಕಾಲ ಕಾಲಕ್ಕೆ ಕಳೆ ತೆಗೆದು ಗೊಬ್ಬರ ನೀರು ಹಾಕಬೇಕು.  ಹಾಗೇ ನಮ್ಮ ಹಣವನ್ನು ಉಳಿಸಿದ ನಂತರ ಅದನ್ನು ಹೇಗೆ ಬೆಳೆಸಬೇಕು ಎಂದು ಯೋಚಿಸುವಿರಾದರೆ, ಅದನ್ನು ಹೇಗೆ ಎಂದು ಅರಿಯುವ  ಪ್ರಯತ್ನ ಮಾಡಲೇ ಬೇಕು. ಅದು ಸ್ಪಷ್ಟ ಆಗದಿದ್ದರೆ ಸ್ಪಷ್ಟ ಆಗುವರೆಗೆ ಅದನ್ನು ಸುರಕ್ಷಿತವಾದ ಕಡೆಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಹಣ ಮಾಡಬೇಕು ಎನ್ನುವ ಆಸೆ ಒಂದೇ ಸಾಲದು ಅದಕ್ಕೆ ಶ್ರಮಿಸುವುದೂ ಆಗಬೇಕು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.