ಮೂರು ದಾರಿಗಳು


Team Udayavani, May 7, 2018, 12:45 PM IST

ppf-mugida.jpg

ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಎಫ್) ನಮ್ಮಲ್ಲಿ ಜನಪ್ರಿಯವಾಗಿರುವ ಸಣ್ಣ ಹೂಡಿಕೆಯ ವಿಧಾನ. ಈ ಯೋಜನೆಯಲ್ಲಿ ಹಣ ಹೂಡಿದರೆ ಅದಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ. 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಹಣ ಕೈಗೆ ಬರುತ್ತದೆ. ಆ ಮೊತ್ತವನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ?

ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಎಫ್) ನಮ್ಮಲ್ಲಿ ಜನಪ್ರಿಯವಾಗಿರುವ ಸಣ್ಣ ಹೂಡಿಕೆಯ ವಿಧಾನ. ಇದರ ಜನಪ್ರಿಯತೆಗೆ ಅನೇಕ ಕಾರಣಗಳಿವೆ. ಮೊದಲನೆಯದು, ಈ ಹೂಡಿಕೆಗೆ ಸರ್ಕಾರದ ಬೆಂಬಲವಿದೆ. ಹಾಗಾಗಿ ಅಸಲು ಮತ್ತು ಬಡ್ಡಿಗೆ ಮೋಸ ಆಗುವುದಿಲ್ಲ. ಎರಡನೆಯದಾಗಿ, ಬಡ್ಡಿ ಸಂಪೂರ್ಣವಾಗಿ ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ. ಇದರಿಂದಾಗಿ ಈಗಿನ ಶೇ.7.6ರಷ್ಟು ಕಡಿಮೆ ಬಡ್ಡಿ ದರದ ವೇಳೆಯಲ್ಲೂ ಪಿಪಿಎಫ್ ಮಧ್ಯಮ ವರ್ಗವನ್ನು ಆಕರ್ಷಿಸುತ್ತಿದೆ.

ಮೂರನೆಯದಾಗಿ, ಪಿಪಿಎಫ್ನಲ್ಲಿ ಹೂಡಿಕೆಯ ಮೊತ್ತವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆಯಿಂದ ವಿನಾಯ್ತಿ ಹೊಂದಿದೆ.  ಕೊನೆಯದಾಗಿ, ವಾಯಿದೆಯಾಗುವ ಮೊತ್ತವು ವಿಮೋಚನಾ ವರ್ಷದಂದು ಸಂಪೂರ್ಣವಾಗಿ ತೆರಿಗೆ ಮುಕ್ತ. ಇಷ್ಟೊಂದು ಅನುಕೂಲಗಳಿರುವ ಪಿಪಿಎಫ್ ವಾಯಿದೆ ಮುಗಿದು, ಕೈಗೆ ಸಿಗುವ ದೊಡ್ಡ ಮೊತ್ತವನ್ನು ಏನು ಮಾಡಬಹುದು? ಇಲ್ಲಿವೆ ಆಯ್ಕೆಗಳು:

1. ಹೆಚ್ಚುವರಿ ಕೊಡುಗೆಯಿಲ್ಲದೆ ಪಿಪಿಎಫ್ ಖಾತೆ ವಿಸ್ತರಿಸಬಹುದು: ಇದು ಪಿಪಿಎಫ್ನಲ್ಲಿ ಡಿಫಾಲ್ಟ್ ಆಯ್ಕೆ. ಬೇರೆ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ, ಆಗ ಡಿಫಾಲ್ಟ್ ಆಗಿ ವಾಯಿದೆಗೊಂಡ ಪಿಪಿಎಫ್ ಯಾವುದೇ ಹೆಚ್ಚುವರಿ ಕೊಡುಗೆಗಳಿಲ್ಲದೆ 5 ವರ್ಷಗಳ ಅವಧಿಗೆ ವಿಸ್ತರಣೆಗೊಳ್ಳುತ್ತದೆ. ಐದೈದು ವರ್ಷಗಳಂತೆ ಬೇಕೆನಿಸಿದಷ್ಟು ಕಾಲ ಮುಂದಕ್ಕೊಯ್ಯಬಹುದು. ಪಿಪಿಎಫ್ ಮೇಲೆ ತೆರಿಗೆ ರಹಿತ ಬಡ್ಡಿಯ ಗಳಿಕೆ ಆಗಲೂ ಮುಂದುವರಿಯಲಿದೆ. ಹೂಡಿಕೆದಾರರು ಬಯಸಿದಾಗ ಈ ಹಣವನ್ನು ವಿತ್‌ ಡ್ರಾ ಮಾಡಬಹುದು.

2. ಹೆಚ್ಚುವರಿ ಕೊಡುಗೆಯೊಂದಿಗೆ ಪಿಪಿಎಫ್ ಖಾತೆ ವಿಸ್ತರಿಸಬಹುದು: ನೆನಪಿಡಿ, ನಿಮ್ಮ ಪಿಪಿಎಫ್ ಖಾತೆಯ ವಾಯಿದೆಯಾದಾಗ, ಕೊಡುಗೆ ಸಹಿತ ಪಿಪಿಎಫ್ ಖಾತೆ ವಿಸ್ತರಣೆಯಾಗಬೇಕಾದರೆ, ನಿರ್ದಿಷ್ಟವಾಗಿ ಫಾರಂ ಎಚ್‌ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ಈ ಆಯ್ಕೆಯಲ್ಲೂ ಐದೈದು ವರ್ಷಗಳ ಅವಧಿಗೆ ವಿಸ್ತರಿಸುತ್ತಾ ಹೋಗಬಹುದಾಗಿದೆ. ಆದರೆ, ನಿಮ್ಮ ಪಿಪಿಎಫ್ ವಾಯಿದೆಯಾದ 1 ವರ್ಷದೊಳಗೆ ಕೊಡುಗೆ ಸಹಿತ ಖಾತೆಯ ವಿಸ್ತರಣೆಗಾಗಿ ಫಾರಂ ಎಚ್‌ ಸಲ್ಲಿಸಬೇಕು.

ಒಂದು ವೇಳೆ ಫಾರಂ ಎಚ್‌ ಸಲ್ಲಿಸದೇ ಹೋದರೆ, ಆ ನಂತರ ನೀವು ಖಾತೆಗೆ ಜಮಾ ಮಾಡುವ ಹೆಚ್ಚುವರಿ ಠೇವಣಿಗೆ ಹಾಗೂ ಗಳಿಸುವ ಬಡ್ಡಿಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಯಾವುದೇ ಪ್ರಯೋಜನ ಸಿಗುವುದಿಲ್ಲ. ನೆನಪಿಡಿ, ಒಮ್ಮೆ ನೀವು ಕೊಡುಗೆ ಸಹಿತ ವಿಸ್ತರಣೆಗಾಗಿ ಫಾರಂ ಎಚ್‌ ಅನ್ನು  ಆಯ್ಕೆ ಮಾಡಿಕೊಂಡರೆ, ಆ ಬಳಿಕ ಹಿಂದಿನ ಆಯ್ಕೆಗೆ ಹೋಗಲು ಸಾಧ್ಯವಾಗುವುದಿಲ್ಲ. 

3. ವಾಯಿದೆಯಾದಾಗ ಪಿಪಿಎಫ್ ಖಾತೆಯನ್ನು ಮುಚ್ಚಬಹುದು: ಪಿಪಿಎಫ್ನಲ್ಲಿ ನಿಯಮಿತವಾಗಿ ನಿಮಗೆ ಬಡ್ಡಿ ಕೈಗೆ ಸಿಗುವುದಿಲ್ಲ, ಆದರೆ ಪಿಪಿಎಫ್ ಖಾತೆಯಲ್ಲಿ ಸೇರುತ್ತಾ ಹೋಗಿರುತ್ತದೆ. . ನೀವು ವಿತ್‌ಡ್ರಾ ಮಾಡುವಾಗ, ಯಾವುದೇ ತೆರಿಗೆಯ ಬಾಧ್ಯತೆಯಿಲ್ಲದೆ ಅಸಲು ಮತ್ತು ಬಡ್ಡಿಯನ್ನು ಪಡೆಯುತ್ತೀರಿ.

ವಿತ್‌ಡ್ರಾವಲ್‌ ಅನ್ನು ಆಯ್ಕೆ ಮಾಡುವಾಗ ಒಮ್ಮೆಲೇ ಪೂರ್ತಿ ಮೊತ್ತವನ್ನು ಹಿಂಪಡೆಯಬಹುದು ಅಥವಾ 12 ತಿಂಗಳ ಗರಿಷ್ಠ ಅವಧಿಯ ತನಕ ಕಂತುಗಳಲ್ಲೂ ಹಿಂಪಡೆದುಕೊಳ್ಳಬಹುದಾಗಿದೆ. ಪಿಪಿಎಫ್ ಅನ್ನು ಮುಚ್ಚುವ ಸಂಬಂಧ ನಿರ್ದಿಷ್ಟವಾಗಿ ನೀವು ಅರ್ಜಿ ಕೊಡದೇ ಹೋದರೆ ಅದು ಡಿಫಾಲ್ಟ್ ಆಗಿ ಕೊಡುಗೆ ರಹಿತವಾಗಿ 5 ವರ್ಷಗಳ ಅವಧಿಗೆ ವಿಸ್ತರಣೆಗೊಳ್ಳುತ್ತದೆ.

15 ವರ್ಷಗಳ ಕಾಲ ಹನಿ ಹನಿಯಂತೆ ಪೈಸೆಗೆ ಪೈಸೆ ಜೋಡಿಸಿ ಕೂಡಿಟ್ಟರೆ, ನಂತರ ದೊಡ್ಡ ಮೊತ್ತ ಒಟ್ಟಿಗೇ ಕೈಗೆ ಸಿಗುತ್ತಿದೆ. ಯೋಚನೆ ಮಾಡಿ ನಿಮ್ಮ ಕುಟುಂಬದ ನೆಮ್ಮದಿಗೆ, ಅನುಕೂಲಕ್ಕೆ ಅದನ್ನು ವಿನಿಯೋಗಿಸಿ. ಆಯ್ಕೆ ಸಂಪೂರ್ಣವಾಗಿ ನಿಮ್ಮದೇ! 

* ರಾಧ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.