ತಂಬಾಕು ಲಾಭ ತಂದಾಕು


Team Udayavani, Jun 5, 2017, 3:50 AM IST

tambaku.jpg

ಶಿವಮೊಗ್ಗ ಜಿಲ್ಲೆ ಹೊನ್ನಾಳಿ ತಾಲ್ಲೂಕು ಹಾಗೂ ಗಡಿ ಪ್ರದೇಶದ ಕೆಲವು ಗ್ರಾಮಗಳಲ್ಲಿ ರೈತರು ಪರವಾನಿಗೆ ಪಡೆದು ತಂಬಾಕು ಕೃಷಿ ನಡೆಸುತ್ತಿದ್ದಾರೆ. ಸಂವಳಂಗ ಸಮೀಪದ ಭೈರನಕೊಪ್ಪದ ರೈತ ಕುಪ್ಪಣ್ಣ ಕೂಡ ಸುಮಾರು ವರ್ಷಗಳಿಂದ ತಂಬಾಕು ಬೆಳೆಯಿಂದ ಲಾಭ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಕುಪ್ಪಣ್ಣ ಅವರದು ಭೈರನಕೊಪ್ಪ ಗ್ರಾಮದಲ್ಲಿ ಸುಮಾರು 3 ಎಕರೆಯಷ್ಟು ಖುಷ್ಕಿ ಭೂಮಿ ಇದೆ. ಪ್ರತಿ ವರ್ಷ ಮಳೆಗಾಲದಲ್ಲಿ ತಂಬಾಕು ಬೇಸಾಯ ನಡೆಸುತ್ತಾರೆ. ವಿಶೇಷ ಎಂದರೆ ಮಳೆ ನೀರಿನಲ್ಲಿ ಮಾತ್ರ ಉತ್ತಮ ಬೆಳೆ ಬರುತ್ತದೆ. ನೀರಾವರಿ ವ್ಯವಸ್ಥೆ
ರೂಪಿಸಿಕೊಂಡು ಬೇಸಿಗೆಯಲ್ಲೂ ಬೆಳೆದರೆ ತಂಬಾಕು ಹುಳಿ ಅಂಶ ಹೊಂದಿ ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ಎಚ್ಚರಿಕೆ.

ಕೃಷಿ ಹೇಗೆ?
ಇವರು ಮಳೆಗಾಲದ ಆರಂಭದಲ್ಲಿ ಅಂದರೆ ಮೇ ಅಂತ್ಯದ ಸುಮಾರಿಗೆ ಹೊಲವನ್ನು ಟ್ರಾÂಕ್ಟರ್‌ನಿಂದ ಉಳುಮೆ ಮಾಡಿ
ಹದಗೊಳಿಸುತ್ತಾರೆ. ನಂತರ ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರ ಬರುವಂತೆ ಪಟ್ಟೆ ಸಾಲು ನಿರ್ಮಿಸಿಕೊಳ್ಳುತ್ತಾರೆ. ತಂಬಾಕು ಮಂಡಳಿಯಿಂದ ಖರೀದಿಸಿದ್ದ ಬೀಜವನ್ನು ಅಗೆ ಸಸಿಯನ್ನಾಗಿ ತಯಾರಿಸಿಕೊಳ್ಳುತ್ತಾರೆ. ಪಟ್ಟೆ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 2 ಅಡಿ ಅಂತರ ಬರುವಂತೆ ತಂಬಾಕು ಸಸಿಗಳನ್ನು ನಾಟಿ ಮಾಡುತ್ತಾರೆ.

ಗಿಡ ಚಿಗುರಿ ಮೂರು ಎಲೆ ಕಾಣಿಸಿಕೊಳ್ಳುತ್ತಿದ್ದಂತೆ ಕಾಂಪ್ಲೆಕ್ಸ್‌ ಗೊಬ್ಬರ ಸರಾಸರಿ 10 ಗ್ರಾಂ. ನಷ್ಟು ನೀಡುತ್ತಾರೆ. ನಂತರ 25 ದಿನ ಕಳೆಯುತ್ತಿದ್ದಂತೆ ಕಾಂಡ ಬಲಿಷ್ಠಗೊಳ್ಳಲು ಯೂರಿಯಾ ಮತ್ತು ಪೊಟ್ಯಾಷ್‌ ಮಿಶ್ರಣ ಗೊಬ್ಬರ
ನೀಡುತ್ತಾರೆ. ಪ್ರತಿ 15 ದಿನಕ್ಕೆ ಒಮ್ಮೆಯಂತೆ ತಂಬಾಕು ಸಸ್ಯದ ಎಲೆಗಳಿಗೆ ಕೀಟ ಬಾಧೆ ಬರದಂತೆ ಔಷಧ ಸಿಂಪಡಣೆ ನಡೆಸುತ್ತಾರೆ. ಒಟ್ಟು ಮೂರು ಸಲ ಗೊಬ್ಬರ, ಮೂರು ಸಲ ಔಷಧ ಸಿಂಪಡಣೆ ನಡೆಸುತ್ತಾರೆ. ಗಿಡ ನಾಟಿ ಮಾಡಿದ 50
ದಿನದಿಂದ ಗಿಡದ ಎಲೆಗಳು ಬಲಿತು ಕಟಾವಿಗೆ ಸಿಗುತ್ತವೆ. ಗಿಡದ ಮುಂಭಾಗದಿಂದ 12 ಎಲೆಗಳವರೆಗೆ ಎಲೆ ಕೊಯ್ಲು ಮಾಡುತ್ತಾರೆ. ಈ ಫ‌ಸಲು ಪಡೆಯಲು 5 ತಿಂಗಳು ಅಂದರೆ ನವೆಂಬರ್‌ ಮೊದಲ ವಾರದ ವರೆಗೆ ಫ‌ಸಲು ಸಿಗುತ್ತದೆ. ಕಿತ್ತ
ಎಲೆಗಳನ್ನು ಬೆಂಕಿಯ ಗೂಡಿನ ಕಟ್ಟಡದಲ್ಲಿ ಇಟ್ಟು ಬೇಯಿಸಿ ಒಣಗಿಸುತ್ತಾರೆ.

ಲಾಭ ಹೇಗೆ ?
3 ಎಕರೆ ವಿಸ್ತೀರ್ಣದಲ್ಲಿ ಒಟ್ಟು 24 ಸಾವಿರ ಸಸಿಗಳನ್ನು ಬೆಳೆಸಿದ್ದರು. ನವೆಂಬರ್‌ ನಲ್ಲಿ ಕಟಾವು ಪೂರ್ಣಗೊಂಡಿದೆ. ಈ ವರ್ಷ ಮಳೆ ಪ್ರಮಾಣ ಕಡಿಮೆಯಾದ ಕಾರಣ ಕಳೆದ ವರ್ಷಗಳಿಗಿಂತ ಇಳುವರಿ ಕಡಿಮೆ ದೊರೆತಿದೆ. ಉತ್ತಮ
ಮಳೆಯಾದ ವರ್ಷ ಈ ಹೊಲದಲ್ಲಿ ಸುಮಾರು 10 ಕ್ವಿಂಟಾಲ್‌ ತಂಬಾಕು ಫ‌ಸಲು ದೊರೆಯುತ್ತಿತ್ತು. ಈ ವರ್ಷ ಕೇವಲ 6 ಕ್ವಿಂಟಾಲ್‌ ಇಳುವರಿ ದೊರೆತಿದೆ. ಕ್ವಿಂಟಾಲ್‌ ಗೆ ರೂ.11 ಸಾವಿರ ದರದಂತೆ 66 ಸಾವಿರ ಆದಾಯ ದೊರೆತಿದೆ. ಕೃಷಿ ವೆಚ್ಚ, ಬೀಜ ಖರೀದಿ, ಗೊಬ್ಬರ, ಔಷಧ, ತಂಬಾಕು ಸಂಸ್ಕರಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.30
ಸಾವಿರ ಖರ್ಚಾದರೂ 36 ಸಾವಿರ ಲಾಭ.

– ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.