ಟಾಪ್‌ ಗೇರ್‌: ಯಾರಿಸ್‌ ಲಕ್ಸೂರಿಯಸ್‌


Team Udayavani, Mar 26, 2018, 6:18 PM IST

6.jpg

ಯುಗಾದಿ ಕಳೆದು ಈಗ ಇನ್ನಷ್ಟು ಹಬ್ಬಗಳು ಸಾಲು ಸಾಲಾಗಿ ನಿಂತಿವೆ. ಹೀಗಾಗಿ ಆಟೋಮೊಬೈಲ್‌ ಕ್ಷೇತ್ರದ ಘಟಾನುಘಟಿ ಕಂಪನಿಗಳೂ ತಮ್ಮ ಗ್ರಾಹಕರಿಗೆ ಬಂಪರ್‌ ಆಫ‌ರ್‌ಗಳನ್ನು ನೀಡುವುದು ಸರ್ವೇಸಾಮಾನ್ಯ. ಅದೇ ಪ್ರಕಾರ ಮೊನ್ನೆ ಮೊನ್ನೆಯಷ್ಟೇ
ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿದ ಸೆಡಾನ್‌ ಸೆಗೆ¾ಂಟ್‌ನ ಬಹುನಿರೀಕ್ಷಿತ ಯಾರಿಸ್‌ ಕಾರುಗಳನ್ನು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮುಂದಿನ ತಿಂಗಳ ಹೊತ್ತಿಗೆ ಅನಾವರಣಗೊಳಿಸಿ, ಮಾರುಕಟ್ಟೆಯ
ಲಾಭ ಪಡೆದುಕೊಳ್ಳುವ ನಿರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿವೆ. 

ವಿನ್ಯಾಸದಲ್ಲಿನ ವಿಶೇಷತೆ ಶಿಸಿರುವ ಸೆಡಾನ್‌ ಸೆಗೆ¾ಂಟ್‌ನ ಹೊಸ ಮಾಡೆಲ್‌ ಕಾರುಗಳಿಗೆ ಸಲೀಸಾಗಿ ಸವಾಲೊಡ್ಡುವ ರೀತಿಯಲ್ಲಿ
ಟೊಯೋಟಾ ಯಾರಿಸ್‌ಗೆ ಹೊಸ ರೂಪ ನೀಡಿದೆ. ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಸೃಷ್ಟಿಸಿಕೊಂಡಿರುವ ಮಾರುತಿ ಸುಜುಕಿ ಸಿಯಾಜ್‌, ವೋಕ್ಸ್‌ವ್ಯಾಗನ್‌ ಅವರ ವೆಂಟೋ, ಸ್ಕೋಡಾ ರ್ಯಾಪಿಡ್‌, ಹ್ಯುಂಡೈನ ವೆರ್ನಾ ಹಾಗೂ ಹೋಂಡಾ ಸಿಟಿ ಸೀರೀಸ್‌ ಕಾರುಗಳಿಗೆ ಯಾರೀಸ್‌ ಪ್ರಬಲ ಸ್ಪರ್ಧೆಯೊಡ್ಡುವ ಮಾದರಿಯಲ್ಲಿ ವಿನ್ಯಾಸಗೊಂಡಿದೆ. ಪ್ರಯಾಣಿಕರ ಸೆಮಿಲಕ್ಸುರಿ ನಿರೀಕ್ಷೆಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸುವ ಮಟ್ಟದಲ್ಲಿ ತಂತ್ರಜಾnನಗಳ ಬಳಕೆಯನ್ನೂ ಮಾಡಿಕೊಳ್ಳಲಾಗಿದೆ.

ಇವೆಲ್ಲದರ ಜತೆ ಜೊತೆಗೆ ಯಾರಿಸ್‌ ಒಟ್ಟಾರೆ ಸೌಂದರ್ಯ ಹೆಚ್ಚಿಸುವಂತಹ ಎಲ್‌ಇಡಿ ಹೆಡ್‌ಲ್ಯಾಂಪ್‌, ಎಲ್‌ಇಡಿ ಡೇ ಟೈಮ್‌ ಲೈಟ್‌, ಎಲ್‌ಇಡಿ ಟೈಲ್‌ ಲೈಟ್‌ಗಳನ್ನು ಅಳವಡಿಸಲಾಗಿದೆ. ಇನ್ನು ಫ್ರಂಟ್‌ ಬಂಪರ್‌ನ ಭಿನ್ನ ವಿನ್ಯಾಸ ಮುಂಭಾಗದ ಸೌಂದರ್ಯವನ್ನು
ಹೆಚ್ಚಿಸಿದೆ. ಅಲ್ಲದೇ, ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸಲಾದ ಟಚ್‌ ಸ್ಕ್ರಿನ್‌ ಇನ್ಫೋಟೈನ್‌ಮೆಂಟ್‌ ಹೊಸ ಲುಕ್‌ ನೀಡಿದೆ. ಈ ಎಲ್ಲಾ ಪ್ಲಸ್‌ ಪಾಯಿಂಟ್‌ಗಳಿಂದ ಯಾರಿಸ್‌ ಹೊಸ ಟ್ರೆಂಡ್‌ ಹುಟ್ಟುಹಾಕುವ ನಿರೀಕ್ಷೆಯಲ್ಲಿ ಕಂಪನಿ ಇದೆ.

ಎಂಜಿನ್‌ ಸಾಮರ್ಥ್ಯ
1.5 ಲೀಟರ್‌ 4 ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ ಹೊಂದಿರಿವ ಯಾರಿಸ್‌ ವೇರಿಯಂಟ್‌ಗಳು 6 ಸ್ಪೀಡ್‌ ಮ್ಯಾನುವಲ್‌ ಹಾಗೂ 7 ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ಗಳನ್ನು ಹೊಂದಿರಲಿವೆ. ಗುಣಮಟ್ಟದ ಇಂಧನ ಕಾರ್ಯಕ್ಷಮತೆ ಎಂಜಿನ್‌ಗಳ ಬಳಕೆ ಹೊಂದಿರುವ ಯಾರಿಸ್‌ 1496ಸಿಸಿ ಶಕ್ತಿಯೊಂದಿಗೆ ಸಲೀಸಾಗಿ ಮುನ್ನುಗವ ಸಾಮರ್ಥ್ಯ ಹೊಂದಿದೆ. 

ಸುರಕ್ಷತೆಗೆ ಒತ್ತು
ಪ್ರಸ್ತುತ ಜನರೇಷನ್‌ ಬಯಸುವ ಬಹುತೇಕ ತಂತ್ರಜಾnನಗಳನ್ನು ಯಾರಿಸ್‌ನಲ್ಲಿ ಅಳವಡಿಸಲಾಗಿದೆ. ಡ್ರೆ„ವರ್‌ ಸೀಟ್‌ನಲ್ಲಿ ಮೊಣಕಾಲು ಭಾಗಕ್ಕೂ ಯಾವುದೇ ತೊಂದರೆಯಾಗದಂತೆ ಸುರಕ್ಷತೆ ದೃಷ್ಟಿಯಿಂದ ನೀಡಲಾಗುವ “ನೀ ಏರ್‌ ಬ್ಯಾಗ್‌’ ಸೇರಿ
ಒಟ್ಟು ಏಳು ಏರ್‌ಬ್ಯಾಗ್‌ಗಳನ್ನು ಹೊಂದಿವೆ ಯಾರಿಸ್‌. ಅಲ್ಲದೆ, ಪಾರ್ಕಿಂಗ್‌ ಸೆನ್ಸಾರ್‌, ಅಲಾಯ್‌ ವೀಲ್‌ ಡಿಸ್ಕ್ ಬ್ರೇಕ್‌ ಸೇರಿ ಬಹುತೇಕ ಲಾಕಿಂಗ್‌ ವ್ಯವಸ್ಥೆಗಳನ್ನು ಹೊಂದಿದೆ. ಎಬಿಎಸ್‌ + ಇಬಿಡಿ ಹಾಗೂ ಸ್ಟಾಬಿಲಿಟಿ ಪೋ› ಲ್‌ ಸ್ಟಾರ್ಟ್‌ ಅಸಿಸ್ಟ್‌, ಇಎಸ್‌ಪಿ ವ್ಯವಸ್ಥೆ ನೀಡಲಾಗಿದೆ. 

ಹೋಂಡಾ ಸಿಟಿಗೆ ನೇರ ಸ್ಪರ್ಧಿ
ಮೇಲ್ನೋಟಕ್ಕೆ ಹೋಂಡಾ ಸಿಟಿಗೆ ನೇರ ಪ್ರತಿಸ್ಪರ್ಧಿ. ತಂತ್ರಜಾnನ ಬಳಕೆ, ಸಾಮರ್ಥ್ಯ ಹಾಗೂ ವಿನ್ಯಾಸದಲ್ಲಿಯೂ ಸಾಕಷ್ಟು
ಸಾಮ್ಯತೆಯನ್ನು ಹೊಂದಿದೆ. ಬೆಲೆಯಲ್ಲಿಯೂ ಹೆಚ್ಚುಕಡಿಮೆ ಅಷ್ಟೇ ಆಗಿರಲಿದೆ. ಹೋಂಡಾ ಸಿಟಿಗಿಂತ 15ಮಿ.ಮೀ. ಉದ್ದ ಜಾಸ್ತಿ, 20ಮಿ. ಮೀ. ಎತ್ತರ ಕಡಿಮೆ, 35ಮಿ.ಮೀನಷ್ಟು ಅಗಲ ಜಾಸ್ತಿ. 

ಎಕ್ಸ್‌  ಶೋರೂಂ ಅಂದಾಜು ಬೆಲೆ
8.50 ಲಕ್ಷ ರೂ.ನಿಂದ 12 ಲಕ್ಷ ರೂ
ಮೈಲೇಜ್‌ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ

ಗಣಪತಿ ಅಗ್ನಿಹೋತಿ

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.