ಮಾಸ್ತಿ ಉಡುಪಿ ಹೋಟೆಲ್‌ನ ಚಕ್ಕುಲಿ, ವಡೆ ರುಚಿ ತಿಂದವನೇ ಬಲ್ಲ


Team Udayavani, Jun 17, 2019, 5:00 AM IST

hotel-(2)

ಚಕ್ಕುಲಿ, ನಿಪ್ಪಟ್ಟು ಇವೆಲ್ಲ ಬೇಕರಿ, ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಸಿಗುವುದನ್ನು ನೋಡಿರುತ್ತೇವೆ. ಆದರೆ, ಇಲ್ಲೊಂದು ಹೋಟೆಲ್‌ ಚಕ್ಕುಲಿ, ನಿಪ್ಪಟ್ಟು, ಮಸಾಲೆ ವಡೆಯಿಂದಲೇ ಫೇಮಸ್ಸಾಗಿದೆ. ಇತರೆ ತಿಂಡಿಗಳನ್ನೂ ಮಾಡಲಾಗುತ್ತದೆಯಾದ್ರೂ

ಬಹಳಷ್ಟು ಮಂದಿ ಚಕ್ಕುಲಿ, ಮಸಾಲೆ ವಡೆ ತಿನ್ನುವುದಕ್ಕಾಗಿಯೇ ಇಲ್ಲಿಗೆ ಬರುತ್ತಾರೆ. ಇಂತಹ ಹೋಟೆಲ್‌ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಮಾಸ್ತಿಯಲ್ಲಿದೆ. ಬಸ್‌ ನಿಲ್ದಾಣಕ್ಕೆ ಬಂದು ಇಲ್ಲಿ ಉಡುಪಿ ಹೋಟೆಲ್‌ ಎಲ್ಲಿ ಅಂತ ಕೇಳಿದರೆ ತೋರಿಸುತ್ತಾರೆ.


ಮೂಲತಃ ಉಡುಪಿಯವರಾದ ಕೇಶವರಾವ್‌ ಕಾಮತ್‌, ಈ ಹೋಟೆಲ್‌ನ ಸಂಸ್ಥಾಪಕರು. ಮದುವೆಯಾದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅವರು, ನಂತರ ಪತ್ನಿ ಶಾರದಾ ಕಾಮತ್‌ರ ಸಹಕಾರದೊಂದಿಗೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಚಿಕ್ಕದಾಗಿ ಕ್ಯಾಂಟೀನ್‌ ಆರಂಭಿಸಿದ್ದರು. ಕೆಲ ವರ್ಷಗಳ ನಂತರ ಮಾಸ್ತಿಯಲ್ಲಿ ಇದ್ದ ಅಯ್ಯಂಗಾರ್‌ ಬೇಕರಿ ಮಾಲೀಕರ ಪರಿಚಯವಾಗಿ, ಅವರು ಇಲ್ಲೇ ಬಂದು ಹೋಟೆಲ್‌ ಪ್ರಾರಂಭಿಸುವಂತೆ ಹೇಳಿದ್ರಂತೆ. ಅದರಂತೆ 1956ರಲ್ಲಿ ಮಾಸ್ತಿಗೆ ಬಂದ ಕೇಶವರಾವ್‌, ಗ್ರಾಮದ ಸರ್ಕಲ್‌ನಲ್ಲಿ ಹೆಂಚಿನ ಮನೆಯನ್ನು ಬಾಡಿಗೆಗೆ ಪಡೆದು ಹೋಟೆಲ್‌ ಪ್ರಾರಂಭಿಸಿದರು. 25 ವರ್ಷಗಳ ನಂತರ ಬಸ್‌ ನಿಲ್ದಾಣದಲ್ಲಿ ಗುಡಿಸಲು ಹಾಕಿಕೊಂಡು, ಅದಕ್ಕೆ ಗೀತಾ ಹೋಟೆಲ್‌ ಎಂದು ನಾಮಕರಣ ಮಾಡಿದರು. 18 ವರ್ಷ ಗುಡಿಸಲಿನಲ್ಲೇ ಹೋಟೆಲ್‌ ನಡೆಸಿದ ನಂತರ ಪೊಲೀಸ್‌ ಠಾಣೆ ಎದುರು ಸ್ವಂತ ಮನೆ ಕಟ್ಟಿಕೊಂಡು ಅದರಲ್ಲೇ ಹೋಟೆಲ್‌ ಮುಂದುವರಿಸಿದರು. ಸದ್ಯ ಇವರ ಪುತ್ರ ಶಿವಪ್ರಸಾದ್‌ ಕಾಮತ್‌, ಪತ್ನಿ ದಿವ್ಯಾ, ತಾಯಿ ಶಾರದಾ ಕಾಮತ್‌ ಸಹಕಾರದೊಂದಿಗೆ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

ವಿಶೇಷ ತಿಂಡಿ ಚಕ್ಕುಲಿ, ಮಸಾಲ್‌ ವಡೆ:
ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಚಕ್ಕುಲಿ, ನಿಪ್ಪಟ್ಟಿಗೂ ಈ ಉಡುಪಿ ಹೋಟೆಲ್‌ನಲ್ಲಿ ಮಾಡುವ ಚಕ್ಕುಲಿಗೂ ವ್ಯತ್ಯಾಸವಿದೆ. ಬೆಣ್ಣೆ, ತುಪ್ಪದಲ್ಲಿ ಹಿಟ್ಟನ್ನು ಕಲಿಸಿ ಸ್ಥಳದಲ್ಲೇ ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಮಾಡಿಕೊಡಲಾಗುತ್ತದೆ. ಮಸಾಲೆ ವಡೆಯ ರುಚಿಯೂ ಹೆಚ್ಚಿರುತ್ತದೆ. ಚಕ್ಕುಲಿ 5 ರೂ., ಮಸಾಲೆ ವಡೆಗೆ 10 ರೂ. ನಿಗದಿ ಮಾಡಲಾಗಿದೆ. ಬಿಸಿ ಬಿಸಿ ಚಕ್ಕುಲಿ, ವಡೆಯನ್ನು ಶುಂಠಿ ಟೀ, ಕಾಫಿ ಜೊತೆ ತಿನ್ನೊಂದು ಒಂದು ವಿಶೇಷ.

ಇತರೆ ತಿಂಡಿ:
ಚಕ್ಕುಲಿ, ವಡೆ, ನಿಪ್ಪಟ್ಟಿನಂತೆ ಈ ಹೋಟೆಲ್‌ನ ರವಾ ಇಡ್ಲಿಯನ್ನೂ ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ. ಇಡ್ಲಿ, ವಡೆ, ಪೂರಿ, ದೋಸೆ ಜೊತೆ ಕಡ್ಲೆ ಚಟ್ನಿ ಅಥವಾ ಪುದೀನಾ, ಕೊತ್ತಂಬರಿ ಸೊಪ್ಪಿನ ಚಟ್ನಿ, ಸಾಂಬಾರ್‌, ಸಾಗು ಕೊಡಲಾಗುತ್ತದೆ. ಮಾಸ್ತಿ ಇನ್ನೂ ಹಳ್ಳಿಯಾಗಿಯೇ ಉಳಿದಿರುವ ಕಾರಣ ದರವೂ ಕಡಿಮೆ ಇದೆ. ನಾಲ್ಕು ಇಡ್ಲಿ ಎರಡು ವಡೆಗೆ 30 ರೂ., ರೈಸ್‌ಬಾತ್‌ ಜೊತೆ ಎರಡು ವಡೆಗೆ 30 ರೂ., ಮೂರು ದೋಸೆ(ಸಟ್‌) 2 ವಡೆ ಸೇರಿ 25 ರೂ. ನಿಗದಿ ಮಾಡಲಾಗಿದೆ. ಮಧ್ಯಾಹ್ನ ಅನ್ನ ಸಾಂಬಾರ್‌, ಮೊಸರನ್ನ ಸಿಗುತ್ತದೆ. ಜೊತೆಗೆ ವಡೆ ತೆಗೆದುಕೊಂಡರೆ 30 ರೂ. ತೆಗೆದುಕೊಳ್ಳಲಾಗುತ್ತದೆ.

ಹೋಟೆಲ್‌ ಸಮಯ:
ಬೆಳಗ್ಗೆ 7.30 ರಿಂದ ಸಂಜೆ 5 ರವರೆಗೆ, ವಾರಪೂರ್ತಿ ತೆರೆದಿರುತ್ತೆ

ಹೋಟೆಲ್‌ ವಿಳಾಸ:
ದಿನ್ನಹಳ್ಳಿ ಮುಖ್ಯರಸ್ತೆ, ಪೊಲೀಸ್‌ ಸ್ಟೇಷನ್‌ ಎದುರು, ಮಾಸ್ತಿ ಬಸ್‌ ನಿಲ್ದಾಣ ಸಮೀಪ, ಮಾಸ್ತಿ.

– ಭೋಗೇಶ ಆರ್‌. ಮೇಲುಕುಂಟೆ
– ಫೋಟೋ ಕೃಪೆ: ಎಂ.ಮೂರ್ತಿ

ಟಾಪ್ ನ್ಯೂಸ್

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.