ಕಲ್ಲಂಗಡಿಯ ಸಿಹಿ ಬದುಕು

ಸಿದ್ಧಾಪುರ ತಾಲೂಕಿನ ಕೋಡಶಿಂಗೆಯ ರಾಮಚಂದ್ರ

Team Udayavani, Apr 8, 2019, 9:49 AM IST

watermelon

ಬಂಗಾರೇಶ್ವರ ಹೆಗಡೆ ಅವರ ಭಗೀರಥ ಪ್ರಯತ್ನದ ಫ‌ಲ ಇವತ್ತು ಕಲ್ಲಂಗಡಿ ಕೈತುಂಬ ಲಾಭ ತಂದುಕೊಡುತ್ತಿದೆ. ಶಿರಸಿ ತಾಲೂಕಿನ ಕೊಪ್ಪದಲ್ಲಿರುವ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು,ಬಾಳೆ, ಭತ್ತ, ಕಬ್ಬು, ಅನಾನಸ್‌ ಹೀಗೆ ಹತ್ತಾರು ಬೆಳೆಗಳನ್ನು ಅವರು ಬೆಳೆದರು. ಅದರಲ್ಲೇ ಅನೇಕ ಪ್ರಯೋಗಗಳನ್ನೂ ನಡೆಸಿ ಯಶಸ್ಸು ಪಡೆದರು. ಅವರ ಕೃಷಿ ದಂಡಯಾತ್ರೆಗೆ ಇದೀಗ ಹೊಸ ಸೇರ್ಪಡೆ ಕಲ್ಲಂಗಡಿ. ಸ್ವತಃ ತಾವೇ ಬೆಳೆದು ಮಾರ್ಕೆಟ್‌ ಕೂಡ ಮಾಡುವುದರಿಂದ ಒಂದು ಕಲ್ಲಂಗಡಿ ಮೇಲೆ ನಾಲ್ಕು ಐದು ರೂ. ಲಾಭವಂತೆ.
ರಾಮಚಂದ್ರ ಹೆಗಡೆಯವರು ತಮ್ಮ ಮೂರು ಎಕರೆಯಲ್ಲಿ ಏನಾದರೂ ಹೊಸ ಕೃಷಿ ಸಾಹಸ ಮಾಡಬೇಕು, ಭತ್ತದ ಕೃಷಿಯ ಬಳಿಕ ಎರಡನೇ ಬೆಳೆ ಗಳಿಸಬೇಕು ಎಂದು ಆಲೋಚಿಸಿದರು.

ಆಗ ಹೊಳೆದದ್ದು ಕಲ್ಲಂಗಡಿ ಬೇಸಾಯ. ಇದು ಹೊಸತಾಗಿದ್ದರಿಂದ ಏನು ಮಾಡಬೇಕು, ಏನು ಮಾಡಬಾರದು ಎಂದೆಲ್ಲ ಕೃಷಿ ವಿಜಾನಿಗಳಾದ ಶಿವಾನಂದ ಹೊಂಗಲ್‌, ಸತೀಶ ಹೆಗಡೆ, ಗಣೇಶ ಹೆಗಡೆ, ಸುಜಯ್‌ ಹೊಸಳ್ಳಿ ಅವರುಗಳು ಸಲಹೆ ಕೊಟ್ಟರು. ಪೂನಾದಿಂದ ಸಿಂಜೆಂಟಾ ಕಂಪನಿಯ ಕಲ್ಲಂಗಡಿ ಬೀಜಗಳನ್ನು ತರಿಸಿ, ವ್ಯವಸ್ಥಿತವಾಗಿ ಮಡಿ ಮಾಡಿ, ಪ್ಲಾಸ್ಟಿಕ್‌ ಹಾಸು ಹಾಕಿ ನಾಟಿ ಮಾಡಿದರು. ಹನಿ ನೀರಾವರಿ ವ್ಯವಸ್ಥೆಯನ್ನೂ ಮಾಡಿದರು. ಮೂರು ಎಕರೆಯಲ್ಲಿ ಕಲ್ಲಂಗಡಿಯ 15 ಪ್ಯಾಕೆಟ್‌ ಗಳಿಂದ 17ಸಾವಿರ ಸಸಿಗಳು ಕುಳಿತವು. ಕುಳಿ ತೆಗಸಿ, ಜೋಡಿಯಾಗಿ 3-2ರ,ಅಂತರದಲ್ಲಿ ನೆಟ್ಟರು. ದಡ್ಡಿ ಗೊಬ್ಬರ, ಬೇವಿನ ಹಿಂಡಿ, ಗೊಬ್ಬರ, ಕ್ಯಾಲಿÒಯಂ, ರಂಜಕ, ಔಷಧಗಳು ಸೇರಿದ ಕಷಾಯ ಸಿಂಪರಣೆ ಮಾಡಿದರು. ಹಂತ ಹಂತವಾಗಿ ನಾಟಿ ಆರಂಭಿಸಿದ್ದರಿಂದ ಈಗ 65-70ನೇ ದಿನಕ್ಕೆ ಕಲ್ಲಂಗಡಿ ಕೊಯ್ಲಿಗೆ ಬಂದಿದೆ. 80 ದಿನಗಳಲ್ಲಿ ಕೊಯ್ಲು ಮುಗಿಸಿದರೆ ಇಳುವರಿ ಕೂಡ ಹೆಚ್ಚು. ಇನ್ನೂ ಏಪ್ರಿಲ್‌ ಕೊನೆ ತನಕವೂ ಇಲ್ಲಿ ನಿರಂತರ ಕೊಯ್ಲು ನಡೆಯಲಿವೆ. ಈ ಬಾರಿ ಆಲೀಕಲ್ಲು ಮಳೆ ಬೀಳದೇ ಇರುವುದು ತುಸು ನೆಮ್ಮದಿ ಕೊಟ್ಟಿದೆ. ಈಗಾಗಲೇ 7 ಟನ್‌ ಕೊಯ್ಲು ಮಾಡಿರುವ ರಾಮಚಂದ್ರ ಹೆಗಡೆ ಅವರ ಕಲ್ಲಂಗಡಿಗೆ ಸಕ್ಕರೆಯ ಸಿಹಿ ಇದೆ. ಹೀಗಾಗಿ, ಎಲ್ಲ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಿದೆ. “ಕಲ್ಲಂಗಡಿ ಕೃಷಿಯ ಯಶಸ್ವಿಗೆ ನನ್ನ ಪತ್ನಿ ಲಕ್ಷ್ಮಿ, ಮಗ ಪ್ರಮಥನ ಆಸಕ್ತಿ ಕೂಡ ಕಾರಣ’ ಎನ್ನುತ್ತಾರೆ ರೈತ ರಾಮಚಂದ್ರ.

ಆರಂಭದಲ್ಲಿ ವರ್ತಕರಿಗೆ ಕೊಡುತ್ತಿದ್ದವರು, ಈಗ ಸ್ವತಃ ಇವರೇ ಸಹಕಾರಿ ಸಂಘಗಳಿಗೆ, ಹಾಪ್‌ಕಾಮ್ಸ್‌, ಮೋರ್‌ ನಂಥ ಶಾಪಿಂಗ್‌ ಮಾಲ್‌ಗ‌ಳಿಗೂ ಕೊಡುತ್ತಿರುವುದರಿಂದ ಒಂದು ಕಲ್ಲಂಗಡಿ ಮೇಲೆ 3-4 ರೂ. ಹೆಚ್ಚು ಲಾಭ ಸಿಗುತ್ತಿದೆಯಂತೆ. ಅಂದರೆ, ಪ್ರತಿ ಕೆ.ಜಿಗೆ ಈಗ 12-14 ರೂ. ಸಿಗುತ್ತಿದೆ. mಈ ಸಲ ಹೆಗಡೆಯವರು ಹೆಚ್ಚು ಕಮ್ಮಿ 15 ಟನ್‌ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಎರಡೂವರೆ ಲಕ್ಷ ರೂ. ಖರ್ಚಾಗಿದೆ. ಅಷ್ಟೂ ಕಲ್ಲಂಗಡಿ ಮಾರಾಟವಾದರೆ 2-3 ಲಕ್ಷ ರೂ. ಲಾಭವಾಗುವ ನಿರೀಕ್ಷೆ ಇದೆಯಂತೆ.

ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.