ಬ್ಯಾಂಕ್‌ ಸಾಲ ಆಗುತ್ತದಾ ಬಡ್ಡಿಮನ್ನಾ?


Team Udayavani, Oct 5, 2020, 8:34 PM IST

ಬ್ಯಾಂಕ್‌ ಸಾಲ ಆಗುತ್ತದಾ ಬಡ್ಡಿಮನ್ನಾ?

ಕೋವಿಡ್ ದಿಂದ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಲ ಮರುಪಾವತಿ ಕಂತುಗಳನ್ನು (ಇಎಂಐ) ಮುಂದೂಡಲುಕೇಂದ್ರ ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ (ಅರ್‌ಬಿಐ)6 ತಿಂಗಳುಗಳಕಾಲ ಅವಕಾಶನೀಡಿದೆ. ಮುಂದೂಡಿಕೆ ಮಾಡಿದ ಸಾಲದಕಂತುಗಳಿಗೆ ಬಡ್ಡಿ ವಿನಾಯಿತಿಯನ್ನೂ ನೀಡಬೇಕೆಂದು ಹಲವಾರು ಗ್ರಾಹಕರು ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಇದರ ವಿಚಾರಣೆ ನಡೆಸಿದನ್ಯಾಯಾಲಯ, ಬಡ್ಡಿ ವಿಧಿಸುವುದನ್ನು ಮರು ಪರಿಶೀಲಿಸುವಂತೆ ಸೂಚಿಸಿದೆ.  ಮಾತ್ರವಲ್ಲ, ಮುಂದಿನಆದೇಶದವರೆಗೆ ಈ ಸಾಲದ ಖಾತೆಗಳನ್ನುಅನುತ್ಪಾದಕ ಅಸ್ತಿ ಎಂದು ಘೋಷಿಸುವಂತಿಲ್ಲ ಎಂದೂ ಆದೇಶಿಸಿದೆ.

ಬ್ಯಾಂಕುಗಳ ವಾದವೇನು? : ತಾವು ನೀಡಿದ ಸಾಲಕ್ಕೆ ಸಿಗುವ ಬಡ್ಡಿಯೇ ಬ್ಯಾಂಕುಗಳ ಬೆನ್ನೆಲುಬು. ಬ್ಯಾಂಕುಗಳ ಅಸ್ತಿತ್ವ ಇರುವುದೇ ಈ ಬೆನ್ನೆಲುಬಿನ ಮೇಲೆ. ಬಡ್ಡಿಯನ್ನು ಮನ್ನಾ ಮಾಡುವುದು ರಿಸರ್ವ್‌ ಬ್ಯಾಂಕ್‌ ನಿಯಮಾವಳಿ ಮತ್ತುಕಾನೂನಿಗೆ ವಿರುದ್ದ. ಗ್ರಾಹಕರಕೋರಿಕೆಯಂತೆ ಬಡ್ಡಿಯನ್ನು ಮನ್ನಾ ಮಾಡಿದರೆ, ಸುಮಾರು ಒಂದು ಲಕ್ಷ ಕೋಟಿ ನಷ್ಟವನ್ನು ಭರಿಸಬೇಕಾಗುತ್ತದೆ ಎನ್ನುವುದು ಬ್ಯಾಂಕುಗಳ ವಾದ. ಈ ಮಾತಿನಲ್ಲಿ ಸತ್ಯವಿಲ್ಲದಿಲ್ಲ. ಸರ್ಕಾರದ – ಸುಸ್ತಿ ಸಾಲದ ಭಾರದಲ್ಲಿ ತತ್ತರಿಸುತ್ತಿರುವ ಬ್ಯಾಂಕುಗಳ ವಾದದಲ್ಲಿ ಸತ್ಯವಿದೆ.

ಗ್ರಾಹಕರ ನಿಲುವು ಏನು? :  ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್‌ ಗಳಿಗೆ ವಿಪರೀತ ನಷ್ಟ ಉಂಟಾಗುತ್ತದೆ ಎನ್ನುವುದನ್ನು ಗ್ರಾಹಕರು ಒಪ್ಪುತ್ತಿಲ್ಲ.ಕಳೆದ5 ವರ್ಷಗಲ್ಲಿ ಬ್ಯಾಂಕುಗಳು ಹಲವುಕಂಪನಿಗಳ5.70 ಲಕ್ಷಕೋಟಿ ಮತ್ತು10 ವರ್ಷಗಳಲ್ಲಿ ರೈತರ4.70 ಲಕ್ಷಕೋಟಿ ಸಾಲ ಮನ್ನಾ ಮಾಡಿರುವುದನ್ನು ಅವರು ಎತ್ತಿ ತೋರಿಸುತ್ತಿದ್ದಾರೆ. ಪ್ರತಿ ವರ್ಷ ರೈತರ ಸಾಲ ಮನ್ನಾ ಆಗುವುದನ್ನು ನೆನಪಿಸಿದ್ದಾರೆ. ರಿಸರ್ವ್‌ ಬ್ಯಾಂಕ್‌ಕಾನೂನು ಮತ್ತು ನಿಯಮಾವಳಿ ಬಡ್ಡಿ ಮನ್ನಾಕ್ಕೆ ಅವಕಾಶವಿಲ್ಲ ಅನ್ನುವುದಾದರೆ, ಬೇರೆ ಯಾವಕಾನೂನಿನಡಿಯಲ್ಲಿಕಂಪನಿಗಳ ಮತ್ತು ರೈತರ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ತಾವು ಸಾಲ ಮನ್ನಾಮಾಡುವಂತೆ ಖಂಡಿತಕೇಳುತ್ತಿಲ್ಲ. ಬದಲಾಗಿ ಸಾಲ ಮರುಪಾವತಿ ಮಾಡಲಾಗದ ಸಂಕಷ್ಟದ ಸಮಯದಲ್ಲಿ, ಬಡ್ಡಿ ಮನ್ನಾ ಮಾಡುವಂತೆಕೇಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

ಬ್ಯಾಂಕ್‌ ವಸೂಲಿಗಾಗಿರುವ ಇತ್ತೀಚಿನ ದಿವಾಳಿ ಕಾನೂನು ((Insolvency Bankruptcy Code& IBC) ಯಲ್ಲಿ ಬ್ಯಾಂಕುಗಳು50%ವರೆಗೆ ಕಟ್‌ ಅನುಭವಿಸುವುದನ್ನು ಉಲ್ಲೇಖೀಸಿದ್ದಾರೆ. ಈವರೆಗೆ ಮನ್ನಾ ಅದ ಸಾಲದಲ್ಲಿಕೇವಲ 10% ವಸೂಲಾಗಿರುವದರ ಬಗೆಗೆ ಸರ್ಕಾರದ ಗಮನ ಸೆಳೆದಿದ್ದಾರೆ.ಕೋರೊನಾವು ಯಾರೂ ನಿರೀಕ್ಷಿಸದ ಅರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಇಂಥ ಸಂದರ್ಭದಲ್ಲಿ ಅರ್ಥಿಕ ಪುನಃಶ್ಚೇತನಕ್ಕ ಬಡ್ಡಿ ಮನ್ನಾದಂಥ ಉತ್ತೇಜನಾ ಪ್ಯಾಕೇಜ್‌ ಘೋಷಿಸಿದರೆ ತಮ್ಮ ಉದ್ಯಮ- ವ್ಯವಹಾರವನ್ನು ಮುಂದುವರಿಸಲು ಅನುಕೂಲವಾಗುತ್ತದೆ ಎಂಬುದು ಬಹುಪಾಲು ಗ್ರಾಹಕರ ವಾದವಾಗಿದೆ.

ಈ ಬೇಡಿಕೆಯಲ್ಲಿ ಅರ್ಥವಿದೆ ಎಂದು ಭಾವಿಸಿದ ನ್ಯಾಯಾಲಯ, ಸಾಲದಕಂತುಗಳ ಮೇಲೆ ಬಡ್ಡಿ ವಿಧಿಸುವುದನ್ನು ಮರು ಪರಿಶೀಲಿಸುವಂತೆ ಆದೇಶಿಸಿದೆ. ಇನ್ನೂ ಎರಡು ವಾರ ಯಾವ ಖಾತೆಯನ್ನೂ ಅನುತ್ಪಾದಕ- ಸುಸ್ತಿ ಎಂದು ಘೋಷಿಸದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿ ಇದ್ದು, ಸಾಲ ಪಡೆದಿರುವ ಗ್ರಾಹಕರು ಮತ್ತು ಸಾಲ ನೀಡಿರುವ ಬ್ಯಾಂಕುಗಳು ಮುಂದಿನ ಬೆಳವಣಿಗೆ ಬಗೆಗೆಕಾಯುತ್ತಿವೆ.­

 

– ರಮಾನಂದ ಶರ್ಮಾ

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.