ಉಯಿಲು ಬರೆಸುತ್ತಿದ್ದೀರಾ?


Team Udayavani, Sep 30, 2019, 3:04 AM IST

uyilu

ಉಯಿಲು ಬರೆಯಲೇಬೇಕೆಂದು ಕಾನೂನಿನಲ್ಲಿ ಒತ್ತಾಯವೇನಿಲ್ಲ, ಒಬ್ಬ ವ್ಯಕ್ತಿ ಉಯಿಲನ್ನು ಬರೆಯದೇ ಮೃತನಾದರೆ ಅವನ ಆಸ್ತಿ ಹೇಗೆ, ಯಾರಿಗೆ ಹಂಚಿಕೆಯಾಗಬೇಕೆಂಬುದಕ್ಕೆ ವಾರಸಾ ಎಂಬ ಕಾಯಿದೆಯೇ ಇದೆ. ಉಯಿಲನ್ನು ಬರೆದರೂ, ವ್ಯಕ್ತಿಯ ಎಲ್ಲಾ ಆಸ್ತಿಗೆ ಸಂಬಂಧಪಟ್ಟ ಹಾಗೆ ಉಯಿಲನ್ನು ಬರೆಯಬೇಕೆಂಬ ಕಡ್ಡಾಯವೇನಿಲ್ಲ. ಬೇಕಾದರೆ ಉಯಿಲು ಬರೆಯಬಹುದು, ಬೇಡವಾದರೆ ಬಿಡಬಹುದು.

ಉಯಿಲನ್ನು ಬರೆಯುವ ವ್ಯಕ್ತಿ ಪ್ರಾಪ್ತ ವಯಸ್ಕನಾಗಿದ್ದು, ಬುದ್ದಿ ಸ್ಥಿಮಿತದಲ್ಲಿ ಇರಬೇಕು. ನಾಮ ನಿರ್ದೇಶನ ಮಾಡುವ ಸಂದರ್ಭಗಳು ಯಾವುದು ಎಂದರೆ, ಇವೆರಡೂ ಅರ್ಹತೆಗಳು ಇರದಿದ್ದರೆ ನಾಮನಿರ್ದೇಶನ ಮಾಡುವ ಅವಶ್ಯಕತೆಯೇ ಬೀಳುವುದಿಲ್ಲ. ಉಯಿಲನ್ನು ಬರೆದಾತನ ಸಹಿಯನ್ನು ಇಬ್ಬರು ಸಾಕ್ಷಿಗಳು ತಮ್ಮ ಸಹಿಯನ್ನು ಹಾಕಿ ದೃಢೀಕರಿಸಲೇಬೇಕು. ನಾಮನಿರ್ದೇಶನದ ಸಹಿಗೆ ಒಬ್ಬ ಸಾಕ್ಷಿಯ ದೃಢೀಕರಣ ಮಾತ್ರ ಸಾಕು.

ಕೆಲವೊಮ್ಮೆ ಉಯಿಲನ್ನು ಪ್ರೊಬೇಟ್‌ ಮಾಡಿಸಬೇಕಾಗುತ್ತದೆ. ಉಯಿಲು ಖೊಟ್ಟಿಯಲ್ಲ, ಸಾಚಾ ಎಂದು ಸಾಬೀತು ಮಾಡುವುದಕ್ಕೆ ಪ್ರೊಬೇಟ್‌ ಎನ್ನುತ್ತಾರೆ. ನಾಮ ನಿರ್ದೇಶನದಲ್ಲಿ ಪ್ರೊಬೇಟ್‌ನ ಮಾತೇ ಇಲ್ಲ. ಸಾಚಾ ಎಂದು ಸಾಬೀತು ಮಾಡುವ ಸಂದರ್ಭ ಇಲ್ಲವೇ ಇಲ್ಲ.ಇದ್ದರೂ ಅತಿ ವಿರಳ. ಉಯಿಲಿನ ಮೂಲಕ ಆಸ್ತಿ ಪಡೆದವನು ಪರಿಪೂರ್ಣ ಹಕ್ಕುದಾರನಾಗಬಹುದು. ಆದರೆ, ನಾಮನಿರ್ದೇಶನ ಎಂಬುದು ಹಣ ಪಡೆದುಕೊಳ್ಳಲು ಇರುವ ಅಧಿಕಾರ ಮಾತ್ರ, ಮಾಲ್ಕಿ ಹಕ್ಕನ್ನು ಕೊಡುವುದಿಲ್ಲ.

ಉಯಿಲನ್ನು ಎಷ್ಟು ಸಾರಿ ಬೇಕಾದರೂ ಬರೆಯಬಹುದು.ಬದಲಾಯಿಸಬಹುದು. ನಾಮನಿರ್ದೇಶನವನ್ನೂ ಸಹ ಹಾಗೆಯೇ ಬದಲಾಯಿಸಬಹುದು. ಉಯಿಲು ಮತ್ತು ನಾಮನಿರ್ದೇಶನ ಎರಡೂ, ವ್ಯಕ್ತಿಯ ಮರಣಾನಂತರ ಮಾತ್ರ ಜಾರಿಗೆ ಬರುತ್ತವೆ. ಇಲ್ಲಿ ಒಂದು ಮಾತು ಬ್ಯಾಂಕಿಂಗ್‌ ವಿನಿಮಯ ಕಾಯಿದೆ ಪ್ರಕಾರ, ಈಗ ಬ್ಯಾಂಕ್‌ ಠೇವಣಿಗಳಿಗೆ, ಉಳಿತಾಯ ಖಾತೆಗಳಿಗೆ, ಲಾಕರ್‌ಗಳಿಗೆ, ನಾಮನಿರ್ದೇಶನ ಮಾಡಬಹುದು. ಆದರೆ ನಾಮನಿರ್ದೇಶನ ಮಾಡಲೇಬೇಕೆಂಬ ಕಡ್ಡಾಯವಿಲ್ಲ.

ಕಡ್ಡಾಯವಿಲ್ಲದಿದ್ದರೂ ನಾಮನಿರ್ದೇಶನ ಮಾಡುವುದು ಜಾಣತನ. ನಾಮನಿರ್ದೇಶನವಿಲ್ಲದೆ, ನಿಮ್ಮ ವಾರಸುದಾರರಿಗೆ ಹಣ ಪಡೆಯಲು ಕಷ್ಟವಾಗಬಹುದು, ವಿಳಂಬವಾಗಬಹುದು. ಅದರ ಜೊತೆಗೆ, ವಾರಸಾ ಸಮರ್ಥನ ಪತ್ರ (ಅಥವಾ ಉತ್ತರಾಧಿಕಾರ ಪತ್ರ ಅಥವಾ succession certificate) ಹಾಜರುಪಡಿಸಬೇಕೆಂದು ಬ್ಯಾಂಕಿನವರು ಒತ್ತಾಯ ಮಾಡಬಹುದು. ಹಾಗೆ ಅವರು ಒತ್ತಾಯ ಮಾಡಿದರೆ, ನಿಮ್ಮ ವಾರಸುದಾರರು ಮುಖ್ಯ ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಹಾಕಿದ ಸಂಗತಿಯನ್ನು ರಾಜ್ಯ ಪತ್ರದಲ್ಲೋ ಅಥವಾ ವರ್ತಮಾನ ಪತ್ರದಲ್ಲೋ ಜಾಹೀರು ಮಾಡಬೇಕು.

ಆಮೇಲೆ ಯಾವ ತಕರಾರುಗಳೂ ಬರದೇ ಇದ್ದರೆ, ವಾರಸುದಾರರ ವಿಚಾರಣೆಯ ನಂತರ, ವಾರಸ ಸಮರ್ಥನ ಪತ್ರ ಕೊಡಬಹುದೆಂದು ನ್ಯಾಯಾಲಯ ಆಜ್ಞೆ ಮಾಡುತ್ತದೆ.ಅದಕ್ಕೆ ಕೊಡಬೇಕಾದ ಶುಲ್ಕ ರೂ. ಮೂರು ಲಕ್ಷದವರೆಗೆ ಶೇಕಡಾ 5; ಮೂರು ಲಕ್ಷಕ್ಕೆ ಮೇಲ್ಪಟ್ಟು ಶೇಕಡಾ 10; ಆಮೇಲೆ ಲಾಯರ್‌ ಫೀ; ಕೋರ್ಟ್‌ ಖರ್ಚು ಎಲ್ಲವೂ ಇರುತ್ತದೆ. ಉಯಿಲಿದ್ದರೆ ಅದನ್ನು ಪ್ರೊಬೇಟ್‌ ಮಾಡಿಸಲು ಇದೇ ಕ್ರಮ, ಇಷ್ಟೇ ಖರ್ಚು

* ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

ಟಾಪ್ ನ್ಯೂಸ್

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.