ಮಹಿಳೆಯರೇ,ಹಿಂದೆ ಬೀಳದಿರಿ ನೀವೂ ಹಣ  ಹೂಡಿ


Team Udayavani, Aug 6, 2018, 6:00 AM IST

leed-2.jpg

ಉಳಿತಾಯ ಮತ್ತು ಹೂಡಿಕೆ ಎಂಬ ಎರಡು ಪದಗಳನ್ನು ಭಾರತದಲ್ಲಿ ಅರ್ಥೈಸಿಕೊಳ್ಳುವಲ್ಲಿ ಆಚೀಚೆ ಆಗುತ್ತದೆ. ಇವೆರಡರ ಮಧ್ಯೆ ವ್ಯತ್ಯಾಸವಿದೆ ಎಂಬುದನ್ನು ಹೆಚ್ಚಿನವರು ಗಮನಿಸುವುದಿಲ್ಲ. ಉಳಿತಾಯದಲ್ಲಿ ಗಳಿಕೆ ತೀರಾ ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲ. ಆದರೆ ಹೂಡಿಕೆ ಎಂಬುದು ಸಂಪತ್ತು ವರ್ಧನೆಗಾಗಿ ನಡೆಸುವ ವ್ಯವಸ್ಥಿತವಾದ ವಿಧಾನವಾಗಿದೆ. ಸಾಂಪ್ರದಾಯಿಕವಾಗಿ ಭಾರತ ಉಳಿತಾಯ ಕೇಂದ್ರಿತ ದೇಶ. 2016ರಲ್ಲಿ ದೇಶದಲ್ಲಿ ಕುಟುಂಬದ ಉಳಿತಾಯದ ದರ ಕುಟುಂಬದ ಆದಾಯದ ಶೇ.26ರಷ್ಟಿತ್ತು. ಕುಟುಂಬದ ಉಳಿತಾಯ ಎಂದರೆ, ಅದನ್ನು ಮಹಿಳೆಯೇ ನಿರ್ವಹಿಸುತ್ತಾಳೆ. ಪ್ರಾಥಮಿಕ ಉಳಿತಾಯ ಖಾತೆ, ನಗದು ಉಳಿತಾಯ ಅಥವಾ ಆರ್‌ಡಿ ಖಾತೆಗಳ ರೂಪದಲ್ಲೇ ಇದು ಬಹುತೇಕ ಇರುತ್ತದೆ.

ಸೀಮಾ ಮಧ್ಯಮ ವರ್ಗದ ಗೃಹಿಣಿ. ಪ್ರತಿವಾರ ಮನೆಯ ಗಳಿಕೆಯ ತುಸು ಹಣವನ್ನು ಬ್ಯಾಗ್‌ನಲ್ಲಿ ಇಡುವ ಮೂಲಕ ಉಳಿತಾಯ ಮಾಡುವುದು ಆಕೆಯ ಹವ್ಯಾಸ. ಕೆಲವೊಮ್ಮೆ ಈ ಹಣದ ತುಸು ಭಾಗವನ್ನು ಚಿನ್ನದಲ್ಲಿ ಹೂಡಿಕೆ ಮಾಡುತ್ತಾಳೆ. ಪ್ರತಿ ತಿಂಗಳು ಚಿಟ್‌ ಫ‌ಂಡ್‌ ರೂಪದ ಉಳಿತಾಯ ಯೋಜನೆಯಲ್ಲಿ ಪಾಲ್ಗೊಳ್ಳಲು ಕಿಟ್ಟಿ ಪಾರ್ಟಿಗೂ ಹೋಗುತ್ತಾಳೆ. ಆಕೆಯ ಗಂಡ ಮ್ಯೂಚುವಲ್‌ ಫ‌ಂಡ್‌, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಾನೆ. ಇವರಿಬ್ಬರ ಈ ಪ್ರವೃತ್ತಿಯಿಂದಾಗಿ ಇಳಿವಯಸ್ಸಿನಲ್ಲಿ, ಗಂಡ ಬಳಿಯಲ್ಲಿಲ್ಲದೇ ಹೋದರೆ ಅಂತಹ ವೇಳೆ ವೈಯಕ್ತಿಕ ಉಳಿತಾಯ ಖಾಲಿಯಾಗಿ ಸೀಮಾಗೆ ಹಣಕಾಸಿನ ನಿರ್ವಹಣೆ ಕಷ್ಟವಾಗಲಿದೆ. 

25ರ ಹರೆಯದ ಅಕ್ಷತಾ ಇವರಿಗಿಂತ ಭಿನ್ನ. ಈಕೆ ಮೆಟ್ರೋಪಾಲಿಟನ್‌ ಮಹಿಳೆ. ಮಾರ್ಕೆಟಿಂಗ್‌ ಕೆಲಸದಲ್ಲಿದ್ದಾಳೆ. ಮ್ಯೂಚುವಲ್‌ ಫ‌ಂಡ್‌, ವಿಮೆ ಖರೀದಿ, ಇತ್ಯಾದಿ ಹೂಡಿಕೆಯ ಬಗ್ಗೆ ತುಸು ತಿಳಿದುಕೊಂಡಿದ್ದಾಳೆ. ಆದರೆ ಯಾರ ಮೂಲಕ ಹೂಡಿಕೆ ಮಾಡಬೇಕು ಎಂಬುದರ ಅರಿವು ಹೊಂದಿಲ್ಲ. ಅದಕ್ಕೆ ತಂದೆಯನ್ನು ಅವಲಂಬಿಸುತ್ತಾಳೆ. ತಾನು ತಿಳ್ಕೊಳ್ಳುವುದು ಯಾವಾಗ ಎಂದರೆ, ಮುಂದೆ ನೋಡೋಣ ಎಂದುಕೊಳ್ಳುತ್ತಾಳೆ.

ಸೀಮಾ ಹಾಗೂ ಆಕ್ಷತಾರ ಸ್ಥಿತಿಯೇ ಭಾರತದ ಬಹುತೇಕ ಮಹಿಳೆಯರದ್ದಾಗಿದೆ. ಉದ್ಯೋಗಸ್ಥ ಮಹಿಳೆಯರಲ್ಲೂ ಶೇ.23 ಮಂದಿ ಮಾತ್ರ ಹೂಡಿಕೆ ಕುರಿತು ಸ್ವಂತ ನಿರ್ಧಾರ ಕೈಗೊಳ್ಳುತ್ತಾರೆ. ಉಳಿದ ಶೇ.77 ಮಂದಿ ತಂದೆ ಅಥವಾ ಪತಿಯನ್ನು ಅವಲಂಬಿಸುತ್ತಾರೆ. ಮಹಿಳೆಯರಲ್ಲಿ ಹಣಕಾಸು ಸಾಕ್ಷರತೆಯ ಕೊರತೆಯಿರುವುದೇ ಇದಕ್ಕೆ ಕಾರಣ. ಮಹಿಳೆಯರ ಸಬಲೀಕರಣದ ಮೊದಲ ಹೆಜ್ಜೆಯಾಗಿ ಅವರನ್ನೂ ಹೂಡಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. 
ಹಾಗಾದರೆ ಮಹಿಳೆ ಹೂಡಿಕೆಯನ್ನು ಸಕ್ರಿಯವಾಗಿ ಆರಂಭಿಸುವುದು ಹೇಗೆ? 

1. ಹಣಕಾಸು ಶಿಕ್ಷಣ
ಹೂಡಿಕೆ ಜಗತ್ತಿನತ್ತ ತೆರೆದುಕೊಳ್ಳಲು ಸ್ವಯಂ ಶಿಕ್ಷಣವೇ ಮೊದಲ ಮೆಟ್ಟಿಲು. ಹೂಡಿಕೆ ವಿಧಾನಗಳು ಹಾಗೂ ಯೋಜನೆಗಳ ಕುರಿತು ಸಾಧ್ಯವಾದಷ್ಟು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಮಹಿಳೆ ಸ್ವತಃ ತಾವೇ ಪ್ರಯತ್ನಿಸಬೇಕು. ಆನ್‌ಲೈನ್‌ ಮತ್ತು ಆಫ್ಲೈನ್‌ಲ್ಲಿ ಉಚಿತವಾಗಿ ಸಾಕಷ್ಟು ಸಂಪತ್ತು ನಿರ್ವಹಣಾ ಆಪ್‌ಗ್ಳು, ಕಮ್ಯುನಿಟಿಗಳು, ವೈಯಕ್ತಿಕ ಹಣಕಾಸು ಕಾರ್ಯಾಗಾರಗಳು ಮತ್ತು ಕೋರ್ಸ್‌ಗಳು ಲಭ್ಯ ಇವೆ. 

2. ಸಣ್ಣ ಮತ್ತು ಯೋಜಿತ ಹೂಡಿಕೆ ಆರಂಭ
ವಿವಿಧ ಕಡಿಮೆ ಅಪಾಯದ ಆಯ್ಕೆಗಳಾದ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಪಿ) ಮತ್ತು ಆರ್‌ಡಿ ಮೊದಲಿಗೆ ಹೂಡಿಕೆ ಆರಂಭಿಸಲು ಸೂಕ್ತ. ವರ್ಷಕ್ಕೆ ಕನಿಷ್ಠ 500 ರೂ.ನಿಂದ ಕೂಡಾ ಹೂಡಿಕೆ ಆರಂಭಿಸಬಹುದು. ಪಿಪಿಎಫ್ ಗರಿಷ್ಠ 1.5 ಲಕ್ಷ ರೂ. ತನಕ ತೆರಿಗೆ ಅನುಕೂಲವನ್ನೂ ನೀಡುತ್ತದೆ. 1 ಲಕ್ಷದಷ್ಟು ದೊಡ್ಡ ಮೊತ್ತವನ್ನು ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು. ಶೇ.5- ಶೇ.8.25ರ ತನಕ ಇದರಲ್ಲಿ ಬಡ್ಡಿ ಪಡೆದುಕೊಳ್ಳಬಹುದು.
 
3. ವಿಮೆಯ ಖಾತ್ರಿ ಮಾಡಿ
ವಿಮೆಯನ್ನು ನಿರ್ಲಕ್ಷಿಸುವುದು ಮಹಿಳೆಯರು ಮಾಡುವ ಅತಿದೊಡ್ಡ ತಪ್ಪಾಗಿದೆ. ಹಣಕಾಸು ಭದ್ರತೆಗಾಗಿ ಆರೋಗ್ಯ ಹಾಗೂ ಜೀವ ವಿಮೆ ಮಾಡಿಸಿಕೊಳ್ಳುವುದು ಉತ್ತಮ. ಇದು ತೆರಿಗೆ ಅನುಕೂಲವನ್ನೂ ಒದಗಿಸುತ್ತದೆ.

4.  ನಿಮ್ಮ ಹೂಡಿಕೆ ವರ್ಧಿಸಿ
ಆರಂಭದ ಸಣ್ಣ ಹೂಡಿಕೆಯಿಂದ ಕ್ರಮೇಣವಾಗಿ ಮುಂದುವರಿಯಿರಿ. ಎಸ್‌ಐಪಿಗಳು, ಮ್ಯೂಚುವಲ್‌ ಫ‌ಂಡ್‌ಗಳು, ಈಕ್ವಿಟಿಗಳಂತಹ ವಿವಿಧ ಹೂಡಿಕೆಗಳ ಅವಕಾಶವನ್ನು ಕಂಡುಕೊಳ್ಳಿ. ಆದರೆ ಹೂಡುವ ಮುನ್ನ ಅದರ ಲಾಭ-ಅಪಾಯ ಅರಿತುಕೊಳ್ಳಿ. ಒಮ್ಮೆ ಅರ್ಥವಾದರೆ ಅದರ ನಿರ್ವಹಣೆ ಸುಲಭವಾಗುತ್ತದೆ. 

– ರಾಧ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.