ನಾವು ಮರೆತ ಆಟ: ಗಜ್ಜುಗದ ಕಾಯಿ ತನ್ನಿ, ಗುಡ್ನಾ ಆಡೋಣ..


Team Udayavani, Jul 28, 2020, 3:28 PM IST

ನಾವು ಮರೆತ ಆಟ: ಗಜ್ಜುಗದ ಕಾಯಿ ತನ್ನಿ, ಗುಡ್ನಾ ಆಡೋಣ..

ಸಾಂದರ್ಭಿಕ ಚಿತ್ರ

ಗ್ರಾಮೀಣ ಕ್ರೀಡೆಗಳೆಂದರೆ ಅತೀ ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿಗಳನ್ನು ಬಳಸಿಕೊಂಡು ಆಟವಾಡಿ, ನೆರೆದವರನ್ನು ರಂಜಿಸುವುದು. ಈ ಆಟಗಳು ಎಳೆಯರ ಸತ್ವಪೂರ್ಣ ಬೆಳವಣಿಗೆಗೆ ಸಹಕಾರಿಯಾಗಬಲ್ಲವು.

ಹೆಣ್ಣುಮಕ್ಕಳು ಆಡುವ ಒಳಾಂಗಣ ಆಟವಾದ ಗುಡ್ನಾ ಕುರಿತು ನೋಡೋಣ. ಗಜ್ಜುಗದ ಗಾತ್ರ ಇರುವ ದುಂಡನೆಯ ಐದು ಕಲ್ಲುಗಳಿಂದ ಎಷ್ಟು ಜನರಾದರೂ ಈ
ಆಟವನ್ನು ಆಡಬಹುದು. ಎರಡು ಕಲ್ಲುಗಳಿಗೆ ಒಂದು “ಅಚ್ಚು’ ಎಂದು ಕರೆಯುವುದರಿಂದ, ಈ ಆಟಕ್ಕೆ ಅಚ್ಚ ಕಲ್ಲಾಟ ಎಂಬ ಹೆಸರೂ ಇದೆ. ಆಟ ಆರಂಭಿಸುವ ಆಟಗಾರ್ತಿ, ಮೊದಲು ಐದು ಕಲ್ಲುಗಳನ್ನು ಕೈಯೊಳಗಿನ ಮುಷ್ಟಿಯಲ್ಲಿ ಹಿಡಿದು ಕುಲುಕಿ ನೆಲದ ಮೇಲೆ ಎಸೆಯುತ್ತಾಳೆ.

ನಂತರ ಐದರಲ್ಲಿ ಒಂದು ಕಲ್ಲನ್ನು ಮೇಲಕ್ಕೆಸೆದು ಅದು ಕೆಳಗೆ ಬೀಳುವಷ್ಟರಲ್ಲಿ, ನೆಲದ ಮೇಲಿನ ಉಳಿದ ನಾಲ್ಕರಿಂದ ಒಂದು ಕಲ್ಲನ್ನು ಎತ್ತಿಕೊಂಡು ಬೀಳುತ್ತಿರುವ ಕಲ್ಲನ್ನು ಹಿಡಿದುಕೊಳ್ಳುತ್ತಾಳೆ. ಮೇಲಿಂದ ಬೀಳುವ ಕಲ್ಲು ಕೈ ತಪ್ಪಿದರೆ ಆಟ ಸೋತಂತೆ. ಇದೇ ರೀತಿ ಐದು ಸಲ ಆಡುವುದಕ್ಕೆ ಒಂದು ಗುಚ್ಚಿ ಆಟ ಎನ್ನುತ್ತಾರೆ. ಇಂತಹ ಐದು ಗುಚ್ಚಿ ಆಟಗಳನ್ನು ಆಡುವರು. ಇದಾದ ನಂತರ ಎರಡು ಕಲ್ಲು, ಮೂರು ಕಲ್ಲು, ನಾಲ್ಕು ಕಲ್ಲುಗಳನ್ನು ಒಟ್ಟೊಟ್ಟಿಗೆ ಎತ್ತಿಕೊಳ್ಳುವರು. ಕೊನೆಯಲ್ಲಿ ಐದು ಕಲ್ಲುಗಳನ್ನು ಮೇಲೆಸೆದು ಬೊಗಸೆಯಲ್ಲಿ ಹಿಡಿದುಕೊಳ್ಳುವರು.

ಅಣ್ಣ ಕಲ್ಲಾಟ (ಬಯಲು ಸೀಮೆಯಲ್ಲಿ ಇದಕ್ಕೆ ಅಣ್ಣೆ ಕಲ್ಲಿನ ಆಟ ಎಂಬ ಹೆಸರಿದೆ) ಆಡುವಾಗ ಕಲ್ಲಿಗೆ ಕಲ್ಲು, ಕೈಗೆ ಕೈ ತಾಗಬಾರದು. ಮೇಲೆ ಎಸೆಯುವ ಕಲ್ಲು ಕೆಳಗೆ ಬೀಳಬಾರದು. ಹಸ್ತ ಮತ್ತು ಬೆರಳುಗಳಿಗೆ ಅತ್ಯುತ್ತಮವಾಗಿ ವ್ಯಾಯಾಮವನ್ನು ಒದಗಿಸುವ ಈ ಆಟದಲ್ಲಿ, ಗುದ್ದಿನ ಆಟ, ಗೆದಿಯುವ ಆಟ, ಸೆಣೆಯುವ ಆಟ, ಗಿಚ್ಚಿಯಾಟ, ಐದು ಗುಂಜು ಆಟ ಮೊದಲಾದ ಬಗೆಗಳಿವೆ. ಗುಡ್ನಾ, ಗುಟ್ಟೆ, ಪಚೆಟಾ ಇತ್ಯಾದಿ ಹೆಸರುಗಳು ಈ ಆಟಕ್ಕೆ ಇವೆ. ಗಜ್ಜುಗಕ್ಕೆ ಇರುವ ಔಷಧಿಯ ಗುಣಗಳನ್ನು ಗಮನಿಸಿ, ಗಜ್ಜುಗದ ಕಾಯಿಗಳನ್ನು ಈ ಆಟದಲ್ಲಿ ಉಪಯೋಗಿ ಸುವ ಅಭ್ಯಾಸವೂ ಕೆಲವೆಡೆ ಇದೆ. ಗಜ್ಜುಗದ ಕಾಯಿ ಸಿಗದೇ ಹೋದಾಗ, ಸಣ್ಣಕಲ್ಲುಗಳನ್ನು ಬಳಸಿಯೂ ಈ ಆಟವನ್ನು ಆಡಬಹುದು. ಮನೆಯಲ್ಲಿ ಆರಾಮವಾಗಿ ಕುಳಿತು, ಮಕ್ಕಳೊಂದಿಗೆ ಸಣ್ಣವರು, ದೊಡ್ಡವರು ಎಂಬ ಬೇಧವಿಲ್ಲದೇ ಆಡಬಹುದಾದ ಆಟವಿದು. ಒಮ್ಮೆ ಆಡಿ ನೋಡಿ.

ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.