ನನ್ನಂಥಾ ಒಳ್ಳೇ ಹುಡುಗಿ ಎಲ್ಲಪ್ಪಾ ಸಿಕ್ತಾಳೆ?


Team Udayavani, Sep 25, 2018, 6:00 AM IST

letter-pallavi-x.jpg

ನೂರು ಕನಸಿನ ಹುಡುಗ, 
ಅಷ್ಟುದ್ದಕ್ಕೂ ನೆನಪಿನ ರಂಗವಲ್ಲಿ ಹಾಕಿ ನಿನಗಾಗಿ ಕಾದು ಕುಳಿತಿದ್ದೇನೆ. ಉದ್ದುದ್ದದ ಕನಸಿನ ಬಣ್ಣ ತುಂಬಿದ್ದೇನೆ. ನೀನಲ್ಲಿ ಒಲವಿನ ಗೆರೆಗಳನ್ನು ಬಿತ್ತಬೇಕು ಅಷ್ಟೇ.

ಹೂವು ಗೀವು ಕೊಟ್ಟು ಫಾರ್ಮಾಲಿಟಿಗಾಗಿ ಪ್ರಪೋಸ್‌ ಮಾಡೋದೇನೂ ಬೇಡ. ಆದ್ರೆ ವಾರಕ್ಕೊಮ್ಮೆ ಇಷ್ಟವಾಗಿರೋ ಡ್ರೆಸ್‌ ಕೊಡಿಸು, ಜೊತೆಗೆ ಮ್ಯಾಚಿಂಗ್‌ ಜ್ಯುವೆಲ್ಸ… ಒಂದಷ್ಟು ಬೇಕು. ವಾರಕ್ಕೊಮ್ಮೆ ಅಲ್ಲದಿದ್ದರೂ, ತಿಂಗಳಿಗೊಮ್ಮೆ ಪಿಕ್‌ನಿಕ್‌ ಕರ್ಕೊಂಡು ಹೋಗು. ನಮ್ಮ ಬದುಕಿಗೆ ದೊಡ್ಡ ಬಂಗಲೆ ಕಟ್ಟೋಣ. ಹ್ಹಹ್ಹಾ…  ಏನಿದು ನೈಸ್‌ ಆಗಿ ಮಾತಾಡ್ತಾನೇ ದೊಡ್ಡ ದೊಡ್ಡ ಬೇಡಿಕೆಗಳನ್ನು ಮುಂದಿಡುತ್ತಿದ್ದಾಳೆ ಅಂದುಕೊಂಡೆಯಾ? ಸುಮ್ನೆ ತಮಾಷೆಗೆ ಹೇಳೆ ಕಣೋ. 

ನಿನಗೆ ಹೇಗೆ ಹೇಳಲಿ ಅನ್ನೋದೇ ಗೊತ್ತಾಗ್ತಿಲ್ಲ. ನೀನು ನನ್ನ ಬದುಕಿಗೆ ಬಲಗಾಲಿಟ್ಟು ಬಂದಾಗಿನಿಂದಲೂ ಎಲ್ಲವೂ ಬದಲಾಗಿದೆ. ನೀನು ನನಗಾಗಿಯೇ ಹುಟ್ಟಿದ ಚೆಲುವ ಎನಿಸಿದೆ. ನಿನ್ನ ಗುಲಾಬಿಯಂಥ ಸ್ನೇಹ, ಮಲ್ಲಿಗೆಯಂಥ ನಗು, ಇಕೊÕàರಾ ಹೂಗೊಂಚಲಿನಂಥ ಗಾಢವಾದ ಕಾಳಜಿ ನನಗೆ ಹುಚ್ಚು ಹಿಡಿಸದೆ ಇರುತ್ತಾ ಹೇಳು?

ನನಗೆ ನಾಟಕೀಯವಾಗಿ ಹೇಳ್ಳೋಕೆ ಬರಲ್ಲ. ಆದ್ರೂ ಸಿಂಪಲ್‌ ಆಗಿ ಹೇಳ್ತೀನಿ ಕೇಳು; ನಮ್ಮದೇ ಹೊಸ ಬದುಕು ಶುರುವಾಗ್ತದಲ್ಲ; ಆಗ, ಬೆಳಗ್ಗೆ ಬೇಗ ಎದ್ದು ಒಬ್ಬರಿಗೊಬ್ಬರು ಗುಡ್‌ ಮಾರ್ನಿಂಗ್‌ ಹೇಳ್ಕೊಳ್ಳೋಣ. ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳೋಣ. ಪೀಕಲಾಟಕ್ಕೆ ಸಿಕ್ಕಿ ಒದ್ದಾಡುವಾಗ, ತಪ್ಪಿದ್ದರೂ ಒಪ್ಪಿಕೊಳ್ಳದೆ ಪರಸ್ಪರರ ಮೇಲೆ ಎತ್ತಾಕಿ, ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ಲೈಟಾಗಿ ಜಗಳ ಆಡೋಣ. ನಂತರ ನೀನೇ ಸಾರಿ ಕೇಳಿಬಿಡು. ಎರಡೇ ನಿಮಿಷದಲ್ಲಿ ರಾಜಿಯಾಗಿ ನಗುವಿನೊಂದಿಗೆ ಜಗಳ ಸಮಾಪ್ತಿಗೊಳಿಸೋಣ. ಹಾಳಾದ ಮೊಬೈಲ್‌ ಬಳಸದೆ, ಅಗತ್ಯಕ್ಕಿಂತ ಹೆಚ್ಚು ತಂತ್ರಜ್ಞಾನ ಬಳಸದೆ ಸ್ವತ್ಛಂದವಾಗಿರೋಣ. ಆರಂಕಿ ಆದಾಯದ ಕೆಲಸ ಅಪೇಕ್ಷಿಸದೆ, ಮೂರಕ್ಷರದ ನೆಮ್ಮದಿ, ಸಂತೃಪ್ತಿ ಹೊಂದೋಣ. ಮುಸ್ಸಂಜೆಯ ಹೊತ್ತಲ್ಲಿ ಬಾನಾಡಿಗಳ ಹಾಗೆ ಹಾರಾಡುತ್ತಾ ನಮ್ಮ ಗೂಡುಗಳಿಗೆ ಮರಳ್ಳೋಣ. ಲೈಫ್ ಟೈಂ ಎಮರ್ಜೆನ್ಸಿಗೆ ಅಂತ ಸ್ವಲ್ಪ ಕೂಡಿಡೋಣ. ಒಬ್ಬರಿಗೊಬ್ಬರು ಬೇಸರವಾದವರಂತೆ, ಐಷಾರಾಮಿ ಹೋಟೆನಲ್ಲಿ ಅಪರಿಚಿತರಂತೆ ಊಟ ಮಾಡೋದೆಲ್ಲ ಬೇಡ. ಸಹಜವಾಗಿ ಜೀವಿಸೋಣ. ನಂಬಿಕೆಯ ಕಟ್ಟಿಗೆ ಇಟ್ಟು, ಪ್ರೀತಿಯ-ತಾಳ್ಮೆಯ ಅಗ್ಗಿಷ್ಟಿಕೆ ಹೊತ್ತಿಸಿ ಅಪ್ಪ-ಅಮ್ಮನಂಥ ಒಲವನ್ನು ನಮ್ಮಿಬ್ಬರ ಎದೆಯಲ್ಲಿ   ಎಂದೆಂದಿಗೂ ಬೆಚ್ಚಗಿರಿಸೋಣ. ಇಷ್ಟು ಸಾದಾ ಸೀದಾ ಸಿಂಪಲ್‌ ಹುಡುಗಿ ನಿನಗೆ ಯಾರು ಸಿಕ್ತಾರೆ ಹೇಳು? ನಾನಂತೂ ಹೇಳಿದ್ದೇನೆ. ನಾನು ಹೇಳಿದ್ದಕ್ಕೆಲ್ಲ ಓಕೆ ಅನ್ನಬೇಕಿರೋದು ನೀನು! ವೇಯಿxಂಗ್‌ ಫಾರ್‌ ಯುವರ್‌ ಸ್ಪೀಡ್‌ ರಿಪ್ಲೆ„.. 
ಇಂತಿ ನಿನ್ನ 
ಪಲ್ಲವಿ  

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.